
ಶಿವಮೊಗ್ಗ, ಫೆಬ್ರವರಿ 10: ಸಿದ್ದಾಪುರದ ವಸಂತ್ ನಾಯಕ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಸುಚಿತ್ರಾ ಅಲಿಯಾಸ್ ಸುರೇಖಾಳ ಹಲವು ರಂಗಿನಾಟಗಳು ಇದೀಗ ಬಯಲಾಗುತ್ತಿವೆ. ಜ್ಯೋತಿಷಿ ಕಮಲಾಕರ ಭಟ್ ಹಾಗೂ ಜಮೀನ್ದಾರ್ ಶರಣಬಸಪ್ಪ ಜೊತೆಗಿನ ಈಕೆಯ ಸಂಬಂಧಗಳ ಬಗ್ಗೆ ಈಗಾಗಲೇ ಮಾಹಿತಿ ಹೊರಬಿದ್ದಿತ್ತು. ಇದೀಗ ಜೆಸಿಬಿ ಪ್ರಕಾಶ್ ಎಂದು ಗುರುತಿಸಲ್ಪಟ್ಟ ಸಿದ್ದಾಪುರದ ಯುವಕನೊಂದಿಗೆ ಆಕೆ ರೀಲ್ಸ್ ಮತ್ತು ಫೋಟೋಶೂಟ್ ಮಾಡಿಸಿಕೊಂಡಿರೋದು ಬಹಿರಂಗವಾಗಿದೆ. ಮಹೇಶ್ ನಾಯಕ್ ಅವರೊಂದಿಗೆ ವಿವಾಹವಾದ ನಂತರವೂ ಸುಚಿತ್ರಾ ಪ್ರಕಾಶ್ ಜೊತೆ ಸ್ನೇಹ ಮುಂದುವರಿಸಿದ್ದಳು. ಪ್ರಕಾಶ್ಗೆ ಜೆಸಿಬಿ ಖರೀದಿಸಲು ಆರ್ಥಿಕವಾಗಿ ಸಹಾಯ ಕೂಡ ಮಾಡಿದ್ದಳು ಎನ್ನಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.