ಕಾರಿನಲ್ಲೇ ಪ್ರಿಯಕರನಿಂದ ತಾಳಿಕಟ್ಟಿಸಿಕೊಂಡ ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ಬಿಟ್ಟ ಮಹಿಳೆ ಹೇಳಿದ್ದೇನು?

ಕಾರಿನಲ್ಲೇ ಪ್ರಿಯಕರನಿಂದ ತಾಳಿಕಟ್ಟಿಸಿಕೊಂಡ ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ಬಿಟ್ಟ ಮಹಿಳೆ ಹೇಳಿದ್ದೇನು?

ಹಾಸನ, (ಏಪ್ರಿಲ್ 13): 8 ವರ್ಷಗಳ ಹಿಂದೆಯೇ ಮದುವೆಯಾಗಿದ್ದ ಮಹಿಳೆ (Women) ತನ್ನ ಗಂಡ ಹಾಗೂ ಮಗಳನ್ನು ಬಿಟ್ಟು ರಾತ್ರೋ ರಾತ್ರಿ ಲವರ್ ಜೊತೆ ಪರಾರಿಯಾಗಿರೋ ಘಟನೆ ಹಾಸನ (Hassan) ಗೆರೂರು ಪೊಲೀಸ್​ ಠಾಣಾ (Police Station) ವ್ಯಾಪ್ತಿಯಲ್ಲಿ ನಡೆದಿದೆ. ಓಡಿ ಹೋಗಿದ್ದಷ್ಟೇ ಅಲ್ಲ ಕಾರಿನಲ್ಲಿ ಪ್ರಿಯಕರನ ಕೈಯಿಂದ ತಾಳಿ ಕಟ್ಟಿಸಿಕೊಂಡಿದ್ದು, ಸದ್ಯ ಈ ವಿಡಿಯೋ (Video) ಇದೀಗ ವೈರಲ್ ಅಗಿದೆ. ಆದ್ರೆ, ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ತಾಳಿ ಕಟ್ಟಿಸಿಕೊಂಡ ಬಳಿಕ ಪತಿ ಪ್ರಕಾಶ್ ನೊಂದಿಗೆ ಫೋನ್​ನಲ್ಲಿ ಮಾತನಾಡಿದ್ದ ಹರ್ಷಿತಾ, ತಪ್ಪಾಯ್ತು ತನ್ನ ಕರೆದುಕೊಂಡು ಹೋಗಿ ಎಂದು ಬೇಡಿಕೊಂಡಿದ್ದಳು. ಆದ್ರೆ, ಇದಕ್ಕೆ ಪ್ರಕಾಶ್ ಒಪ್ಪದಿದ್ದಾಗ ಹರ್ಷಿತಾ ಸಹ ರೊಚ್ಚಿಗೆದ್ದಿದ್ದು, ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾಳೆ.

ಪತಿ ಪ್ರಕಾಶ್ ಹೇಳಿದ್ದೇನು?

ಪತ್ನಿ ಪ್ರಿಯಕರನೊಂದಿಗೆ ಪರಾರಿಯಾಗಿರುವ ಬಗ್ಗೆ ಪತಿ ಪ್ರಕಾಶ್ ಟಿವಿ9 ಜೊತೆ ಮಾತನಾಡಿದ್ದು, 15 ಹಸು ಇತ್ತು ನಿತ್ಯ 100 ಲೀಟರ್ ಹಾಲು ಹಾಕ್ತಿದ್ದೆ. ಟ್ರ್ಯಾಕ್ಟರ್ ಆಸ್ತಿ ಮನೆ‌ ಎಲ್ಲವೂ ಇತ್ತು. ತಿಂಗಳಿಗೆ ಕನಿಷ್ಠ 80 ಸಾವಿರ ರೂಪಾಯಿ ಆದಾಯ ಇತ್ತು. ಎಲ್ಲಾ ವ್ಯವಹಾರ ಪತ್ನಿಗೆ ಕೊಟ್ಟಿದ್ದೆ. ನನ್ನೇ ಮದುವೆ ಆಗಬೇಕು ಎಂದು ಹಠಕ್ಕೆ ಬಿದ್ದು ಮದವೆ ಆಗಿದ್ದಳು. ಸ್ವಂತ ಸೋದರ ಮಾವನ ಮಗಳನ್ನ ನಾನೂ ಇಷ್ಟಪಟ್ಟು ಮದುವೆ ಆಗಿದ್ದೆ. ಎಂದೂ ಅನುಮಾನ ಬರದಂತೆ ಇದ್ದು ಹೀಗೆ ಮೋಸ ಮಾಡಿದಾಳೆ. ಆಸ್ಪತ್ರೆಗೆ ಹೋಗ್ತಿನಿ ಎಂದು ವಾಪಸ್ ಬರ್ಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಲವರ್​​ ಜೊತೆ ಕಾರಿನಲ್ಲೇ ಮದುವೆ ಪ್ರಕರಣಕ್ಕೆ ಟ್ವಿಸ್​​​: ಗಂಡ ಹೆಂಡ್ತಿ ಸಂಭಾಷಣೆ ಆಡಿಯೋ ವೈರಲ್

ಗಂಡನೊಂದಿಗೆ ಇರ್ತೀನಿ ಅಂತ ನಾಟಕ

ಲೋ ಬಿಪಿ ಇರೋ ಪತ್ನಿ ಎಲ್ಲಿ ಅನಾರೋಗ್ಯದಿಂದ ಬಿದ್ದು ಹೋದಲು ಎಂದು ಹುಡುಕಾಡಿದ್ದೆ. ಆದರೆ ಗೆಳತಿ ಮನೆಯಲ್ಲಿ ಇರೋದಾಗಿ ಹೇಳಿ ಕಡೆಗೆ ನೀನು ನಂಗೆ ಇಷ್ಟ ಇಲ್ಲ ಎಂದು ಮೆಸೇಜ್ ಮಾಡಿದ್ದಳು. ಬಳಿಕ ಪೊಲೀಸರಿಗೆ ದೂರು ನೀಡಿದಾಗ ಗೊರೂರು ಠಾಣೆಗೆ ಬಂದಿದ್ದಳು. ಈ ವೇಳೆ ನನಗೆ ಪತಿ ಇಷ್ಟ ಇಲ್ಲ ಎಂದು ಹೇಳಿದ್ದ ಹರ್ಷಿತಾಳನ್ನು ಕಡೆಗೆ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳಿಸಲಾಗಿತ್ತು. ಅಲ್ಲಿಂದ‌ ಫೋನ್‌ಮಾಡಿ ತಪ್ಪಾಯ್ತು ಬಂದು ಕರ್ಕೊಂಡ್ ಹೋಗಿ ಅಂದಿದ್ದಳು. ಹೋದಾಗ ಕಾಲು ಹಿಡಿದು ಕಣ್ಣೀರು ಹಾಕಿದ್ದಳು. ಮಗನಿಗಾಗಿ ಕ್ಷಮಿಸಿ ಕರೆದೊಯ್ದರೆ ಏಪ್ರಿಲ್ 10 ರ ರಾತ್ರಿ ನನಗೆ ನಿದ್ರೆ ಮಾತ್ರೆ ಹಾಕಿ ಎಸ್ಕೇಪ್ ಆಗಿದ್ದಾಳೆ. ಮನೆಯಿಂದ 200 ಗ್ರಾಂ ಚಿನ್ನ ಏಳು ಲಕ್ಷ ಹಣ ತೆಗೆದುಕೊಂಡು ಹೋಗಿದ್ದಾಳೆ. ನಮಗೆ ಅಗಿರುವ ಅನ್ಯಾಯ ಬೇರೆ ಯಾರಿಗೂ ಆಗಬಾರದು. ಆಕೆ ವಾಪಸ್ ಬಂದ್ರೆ ಯಾವುದೇ ಕಾರಣದಿಂದ‌ ಮತ್ತೆ ಕ್ಷಮಿಸಲ್ಲ.
ಅವಳು ವಾಪಸ್ ಬಂದರೆ ನಮ್ಮನ್ನೆ ಉಳಿಸಲ್ಲ. ಅವಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಅಜ್ಞಾತ ಸ್ಥಳದಿಂದ ವಿಡಿಯೋ ಬಿಟ್ಟ ಹರ್ಷಿತಾ

ಯಾವಾಗ ಪತಿ ಕ್ಷಮಿಸಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿದ್ದಂತೆಯೇ ಪತ್ನ ಹರ್ಷಿತಾ ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಗಂಡನ ಆರೋಪವನ್ನು ಅಲ್ಲಗೆಳೆದಿದ್ದಾಳೆ. ಅಲ್ಲದೇ ಕೆಲವೊಂದಿಷ್ಟು ಆರೋಪ ಮಾಡಿದ್ದು, ಡಿವೋರ್ಸ್ ಬೇಕೆಂದಿದ್ದಾಳೆ.

ಇದನ್ನೂ ಓದಿ: ಹಾಸನ: ಪತಿ, 7 ವರ್ಷದ ಮಗನನ್ನು ಬಿಟ್ಟು ಪ್ರಿಯಕರನ ಜೊತೆ ಕಾರಿನಲ್ಲೇ ಮದುವೆಯಾದ ಮಹಿಳೆ!

ನಂಗೆ ಡಿವೋರ್ಸ್ ಬೇಕು ಅಷ್ಟೇ

ನನ್ನ ಯಾರೂ ಕಿಡ್ನಾಪ್‌ ಮಾಡಿಲ್ಲ. ಪ್ರಕಾಶ್ ಜೊತೆ ಜೀವನ ಮಾಡಲು ನಂಗೆ ಇಷ್ಟ ಇಲ್ಲ. ಹಾಗಾಗಿ ನಾನೇ ‌ಸ್ವ ಇಚ್ಚೆಯಿಂದ ಹೊರಗೆ ಬಂದಿದ್ದೇನೆ. ಮಹೇಶ್ ಹೇಮಂತ್, ಪ್ರಕಾಶ್ ಮೆಂಟಲಿ ಟಾರ್ಚರ್ ಮಾಡಿದಾರೆ. ಮಾದ್ಯಮದ ಮುಂದೆ ಹೋಗಿ ಮಾನ ಮರ್ಯಾದೆ‌ ಕಳೆದಿದಾರೆ. ಅವರ ಜೊತೆ ಜೀವನ ಮಾಡಲು ಇಷ್ಟ ಇಲ್ಲ
ನಂಗೆ ಡಿವೋರ್ಸ್ ಬೇಕು ಅಷ್ಟೇ. ಹೀಗೆ ಬಲವಂತ ಮಾಡಿದ್ರೆ ಅವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ತಿನಿ ‌ಎಂದು ಎಚ್ಚರಿಕೆ ನೀಡಿದ್ದಾಳೆ.

ನನ್ನ ಯಾರೂ ಬಲವಂತವಾಗಿ ಕರೆತಂದಿಲ್ಲ

ಅವರು 200 ಗ್ರಾಂ ಚಿನ್ನ ಹಣ ತಂದಿರುವುದಾಗಿ ಹೇಳಿರುವುದ ಸುಳ್ಳು. ನನ್ನ ಯಾರೂ ಬಲವಂತವಾಗಿ ಕರೆತಂದಿಲ್ಲ ಯಾರೂ ಟಾರ್ಚರ್ ಮಾಡಿಲ್ಲ ನಾನೇ ಸ್ವಾ ಇಚ್ಚೆಯಿಂದ ಬಂದಿದ್ದೇನೆ. ಅವರು ಬೇಡಾ ಎಂದು ದೂರು ಕೊಟ್ಟಿದ್ದೆ. ಹಾಗಾಗಿ ಸಾಂತ್ವನ ಕೇಂದ್ರಕ್ಕೆ ಬಿಟ್ಟಿದ್ದರು. ನಂತರ ಮನೆಗೆ ಕರ್ಕೊಂಡ್ ಹೋಗಿದ್ರು. ಪ್ರಕಾಶ್ ಚಿಕ್ಕಪ್ಪನ‌ಮಗ ಹೇಮಂತ್ ನನ್ನ ಕತ್ತರಿಸಿ ಹಾಕ್ತಿನಿ ಎಂದು ಹೆದರಿಸಿದ್ದ. ಪ್ರಕಾಶ್ ಕೂಡ ಹಾಗೇ ಹೇಳಿದ್ದರು ಹಕ್ಕು ಖುಲಾಸೆಗೆ ಸಹಿ ಹಾಕಿಸಿಕೊಂಡು ಹಿಂಸೆ ನೀಡಿದ್ರು. ನನಗೆ ಹೊರಗಿನ ಪ್ರಪಂಚ ನೋಡದ ಹಾಗೆ ಮಾಡುತ್ತೇನೆ. ಮನೆ ಕೆಲಸ ಮಾಡಿಕೊಂಡು ಬಿದ್ದಿರು ಅಂದ್ರು. ಊಟ ಕೊಡುತ್ತಿರಲಿಲ್ಲ, ಬಾಯಿಗೆ ಬಂದಂಗೆ ಬೈಯ್ದರು. ಹಾಗಾಗಿ ಇರಲಾಗಲಿಲ್ಲ ಎಂದಿದ್ದಾಳೆ.

ಅವರ ಜೊತೆ ಜೀವನ ಮಾಡಲು ಇಷ್ಟ ಇಲ್ಲ‌

ನಾನು ಮನೆ ಬಿಟ್ಟು ಬರಲು ಸಹಾಯ ಮಾಡಿದ್ದು ಹೇಮಂತ್. ಒಂದು ಊರಿಗೆ ಬಂದು ಯಾರ ಸಹಾಯ ಇಲ್ಲದೆ ಹುಡುಗಿನ ಕರ್ಕೊಂಡ್ ಹೋಗಲು ಆಗಲ್ಲ. ನಮಗೆ ಸಹಾಯ ಮಾಡಿದ್ದು ಹೇಮಂತ್. ನನಗೆ ಪಾಪು ಬೇಡ ಎಂದು ಹೇಳಿಲ್ಲ. ನಾನು ಪ್ರಕಾಶ್ ಗೆ ಡಿವೋರ್ಸ್ ಕೊಟ್ಟು ಹೇಗೊ ಮಗು ಸಾಕುತ್ತೇನೆ. ಯಾರೋ ಬಲವಂತ ಮಾಡಿದ್ರು ಎಂದು ಈ ಹೇಳಿಕೆ ನೀಡುತ್ತಿಲ್ಲ. ನಾನೇ ಇಷ್ಟಪಟ್ಟು ಮನೆಯಿಂದ ಹೊರಗೆ ಬಂದಿದ್ದೇನೆ. ಅವರು ಕುಡಿದು ಬಂದು ಹೊಡೆದಿದ್ದಾರೆ. ಹಾಗಾಗಿ ಅವರ ಜೊತೆ ಜೀವನ ಮಾಡಲು ಇಷ್ಟ ಇಲ್ಲ‌ಎಂದು ಸ್ಪಷ್ಟಪಡಿಸಿದ್ದಾಳೆ.

Source link

Leave a Reply

Your email address will not be published. Required fields are marked *