
ಮಾರ್ಚ್ 2026ರಲ್ಲಿ ಧನು ರಾಶಿಯವರಿಗೆ ಗ್ರಹಗತಿಗಳ ಸಂಚಾರವು ಜೀವನದ ವಿವಿಧ ಆಯಾಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರಲಿದೆ. ಧನು ರಾಶಿಯ ಅಧಿಪತಿ ಗುರುವು ಈ ಸಮಯದಲ್ಲಿ ಮಿಥುನ ರಾಶಿಯಲ್ಲಿ ಸಂಚರಿಸುತ್ತಿರುವುದು ನಿಮಗೆ ವಿಶೇಷ ಶಕ್ತಿಯನ್ನು ನೀಡುತ್ತದೆ.
ಧನು ರಾಶಿ:
ಮಾರ್ಚ್ 2026ರ ದಶಫಲಗಳ ಸಮೀಕ್ಷೆಯಲ್ಲಿ
ಧನು ರಾಶಿಯವರಿಗೆ ಈ ತಿಂಗಳು ಸಾಮಾಜಿಕ ಗೌರವ ಮತ್ತು ವೃತ್ತಿಜೀವನದಲ್ಲಿ ಪ್ರಗತಿ ಕಂಡುಬರುವ ಲಕ್ಷಣಗಳಿವೆ. ಆದರೆ, ನಾಲ್ಕನೇ ಮನೆಯಲ್ಲಿರುವ ಶನಿಯ ಪ್ರಭಾವವು ಸ್ವಲ್ಪ ಎಚ್ಚರಿಕೆಯನ್ನು ಬಯಸುತ್ತದೆ.
ಉತ್ತಮ ಫಲ ನೀಡುವ ದಶೆಗಳು
ಈ ದಶೆಗಳು ನಡೆಯುತ್ತಿದ್ದರೆ ನಿಮಗೆ ಅದೃಷ್ಟ ಮತ್ತು ಯಶಸ್ಸು ಒದಗಿ ಬರಲಿದೆ.
ಗುರು ದಶೆ :
ಧನು ರಾಶಿಯವರಿಗೆ ಗುರುವು ಲಗ್ನಾಧಿಪತಿಯಾಗಿದ್ದು, ಈ ಸಮಯದಲ್ಲಿ ಏಳನೇ ಮನೆಯಲ್ಲಿ ಇರುತ್ತಾನೆ. ಈ ದಶೆ ನಡೆಯುತ್ತಿದ್ದರೆ ಅವಿವಾಹಿತರಿಗೆ ವಿವಾಹ ಯೋಗ, ವ್ಯಾಪಾರದಲ್ಲಿ ಪಾಲುದಾರಿಕೆಯಿಂದ ಲಾಭ ಮತ್ತು ಸಮಾಜದಲ್ಲಿ ದೊಡ್ಡ ಮಟ್ಟದ ಹೆಸರು ಸಿಗಲಿದೆ.
ಸೂರ್ಯ ದಶೆ :
ಮಾರ್ಚ್ ಮಧ್ಯಭಾಗದವರೆಗೆ ಸೂರ್ಯನು ಅನುಕೂಲಕರ ಸ್ಥಾನದಲ್ಲಿರುವುದರಿಂದ ಸರ್ಕಾರಿ ಕೆಲಸಗಳಲ್ಲಿ ಜಯ ಮತ್ತು ತಂದೆಯ ಕಡೆಯಿಂದ ಆರ್ಥಿಕ ಸಹಾಯ ದೊರೆಯಲಿದೆ. ಉದ್ಯೋಗದಲ್ಲಿ ಬಡ್ತಿಗಾಗಿ ಕಾಯುತ್ತಿರುವವರಿಗೆ ಇದು ಸುವರ್ಣ ಕಾಲ.
ಮಧ್ಯಮ ಫಲ ನೀಡುವ ದಶೆಗಳು
ಈ ದಶೆಗಳು ನಡೆಯುತ್ತಿದ್ದರೆ ಫಲಿತಾಂಶಗಳು ಮಿಶ್ರಿತವಾಗಿರುತ್ತವೆ. ಕೆಲಸಗಳು ಸ್ವಲ್ಪ ವಿಳಂಬವಾಗಿ ಪೂರ್ಣಗೊಳ್ಳುತ್ತವೆ.
ಬುಧ ದಶೆ :
ಬುಧನು ನಿಮ್ಮ ಹತ್ತನೇ ಮನೆಯ ಅಧಿಪತಿಯಾಗಿದ್ದರೂ, ಮಾರ್ಚ್ ಆರಂಭದಲ್ಲಿ ವಕ್ರಗತಿಯಲ್ಲಿರುವುದರಿಂದ ವೃತ್ತಿ ಕ್ಷೇತ್ರದಲ್ಲಿ ಗೊಂದಲಗಳು ಉಂಟಾಗಬಹುದು. ಮಾತಿನ ಮೇಲೆ ಸಂಯಮವಿದ್ದರೆ ವ್ಯಾಪಾರದಲ್ಲಿ ಸಾಧಾರಣ ಲಾಭ ಗಳಿಸಬಹುದು.
ಶುಕ್ರ ದಶೆ :
ಐಷಾರಾಮಿ ಜೀವನದ ಮೇಲೆ ಆಸೆ ಹೆಚ್ಚಾಗಲಿದೆ. ಶುಕ್ರನ ದಶೆಯು ಹಣಕಾಸಿನ ಹರಿವನ್ನು ನೀಡಿದರೂ, ಅನಗತ್ಯ ಖರ್ಚುಗಳನ್ನು ಸಮತೋಲನ ಮಾಡುವುದು ಸವಾಲಾಗಬಹುದು. ಪ್ರೇಮ ಜೀವನದಲ್ಲಿ ಮಿಶ್ರ ಪ್ರತಿಕ್ರಿಯೆ ಇರುತ್ತದೆ.
ಅಧಮ ಅಥವಾ ಎಚ್ಚರಿಕೆಯ ದಶೆಗಳು
ಈ ದಶೆಗಳು ನಡೆಯುತ್ತಿರುವಾಗ ಮಾನಸಿಕ ಮತ್ತು ದೈಹಿಕ ಜಾಗರೂಕತೆ ಅತ್ಯಗತ್ಯ.
ಶನಿ ದಶೆ :
ಧನು ರಾಶಿಯವರಿಗೆ ಶನಿಯು ಪ್ರಸ್ತುತ ನಾಲ್ಕನೇ ಮನೆಯಲ್ಲಿ ಸಂಚರಿಸುತ್ತಿದ್ದಾನೆ. ಇದನ್ನು ಅರ್ಧಾಷ್ಟಮ ಶನಿ ಎನ್ನಲಾಗುತ್ತದೆ. ಶನಿ ದಶೆ ಅಥವಾ ಅಂತರ್ದಶೆ ನಡೆಯುತ್ತಿದ್ದರೆ ಮನೆಯಲ್ಲಿ ಅಶಾಂತಿ, ತಾಯಿಯ ಆರೋಗ್ಯದಲ್ಲಿ ಏರುಪೇರು ಅಥವಾ ಆಸ್ತಿ ವಿಚಾರದಲ್ಲಿ ವಿವಾದಗಳು ಉಂಟಾಗಬಹುದು.
ರಾಹು ದಶೆ :
ರಾಹುವು ನಾಲ್ಕನೇ ಮನೆಯಲ್ಲಿ ಶನಿಯೊಂದಿಗೆ ಸೇರುವುದರಿಂದ ಮಾನಸಿಕ ನೆಮ್ಮದಿಗೆ ಭಂಗ ಬರಬಹುದು. ವಿನಾಕಾರಣ ಭಯ ಅಥವಾ ಗಾಬರಿ ಉಂಟಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ಹೊಸ ಮನೆ ಖರೀದಿಸುವ ನಿರ್ಧಾರವನ್ನು ಮುಂದೂಡುವುದು ಉತ್ತಮ.
ಗುರುವು ನಿಮ್ಮ ರಾಶ್ಯಾಧಿಪತಿಯಾಗಿರುವುದರಿಂದ ವಿಷ್ಣುವಿನ ಆರಾಧನೆ ನಿಮಗೆ ಆರ್ಥಿಕ ಮತ್ತು ಮಾನಸಿಕ ಇನ್ನಷ್ಟು ಸ್ಥಿರತೆ ನೀಡುತ್ತದೆ. ಪ್ರತಿ ಶನಿವಾರ ಹನುಮಂತನಿಗೆ ಅಥವಾ ಶನಿದೇವನಿಗೆ ಎಳ್ಳೆಣ್ಣೆ ದೀಪ ಹಚ್ಚಿ. ಇದು ಅರ್ಧಾಷ್ಟಮ ಶನಿಯ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಬಡ ವಿದ್ಯಾರ್ಥಿಗಳಿಗೆ ಪುಸ್ತಕ ಅಥವಾ ಹಳದಿ ಬಣ್ಣದ ಬಟ್ಟೆಗಳನ್ನು ದಾನ ಮಾಡುವುದರಿಂದ ಗುರುವಿನ ಕೃಪೆಗೂ ಪಾತ್ರರಾಗಲು ಸಾಧ್ಯ.
– ಲೋಹಿತ ಹೆಬ್ಬಾರ್
–