ಬೆಂಗಳೂರಿನ ಬನಶಂಕರಿ ದೇವಸ್ಥಾನಕ್ಕೂ ತಟ್ಟಿದ ಯುದ್ಧದ ಬಿಸಿ: ಭಕ್ತರ ಗಮನಕ್ಕೆ ಇಂದಿನಿಂದ ಈ ಸೇವೆ ಸ್ಥಗಿತ

ಬೆಂಗಳೂರಿನ ಬನಶಂಕರಿ ದೇವಸ್ಥಾನಕ್ಕೂ ತಟ್ಟಿದ ಯುದ್ಧದ ಬಿಸಿ: ಭಕ್ತರ ಗಮನಕ್ಕೆ ಇಂದಿನಿಂದ ಈ ಸೇವೆ ಸ್ಥಗಿತ

ಬೆಂಗಳೂರು, ಮಾ.11: ಇರಾನ್ ಇಸ್ರೇಲ್​​​, ಅಮೆರಿಕ ಯುದ್ಧ ಪರಿಣಾಮ ಇಡೀ ಜಗತ್ತಿಗೆ ಉಂಟಾಗಿದೆ. ಇದೀಗ ಭಾರತ ಕೂಡ ಇದರ ಎಫೆಕ್ಟ್​​​ನ್ನು ಅನುಭವಿಸುತ್ತಿದೆ, ಎಲ್​​​ಪಿಜಿ ಗ್ಯಾಸ್​​​ಗಳ ಬೆಲೆ ಕೂಡ ಹೆಚ್ಚಾಗಿದೆ. ಜತೆಗೆ ಕೊರತೆ ಕೂಡ ಉಂಟಾಗಿದೆ. ಈಗಾಗಲೇ ಬೆಂಗಳೂರಿನ ಹೊಟೇಲ್​​ಗಳಲ್ಲೂ ಕೂಡ ಇದರ ಪರಿಣಾ ಎದ್ದು ಕಾಣುತ್ತಿದೆ. ಇದರ ಪರಿಣಾಮ ರಾಜಧಾನಿಯ ಅತ್ಯಂತ ಪ್ರಸಿದ್ಧ ಮತ್ತು ಭಕ್ತರ ನೆಚ್ಚಿನ ಧಾರ್ಮಿಕ ಕೇಂದ್ರವಾದ ಬನಶಂಕರಿ ದೇವಸ್ಥಾನದಲ್ಲಿ ಇಂದಿನಿಂದ (ಮಾರ್ಚ್ 11) ಉಚಿತ ಅನ್ನ ಪ್ರಸಾದ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ವಾಣಿಜ್ಯ ಎಲ್‌ಪಿಜಿ (LPG) ಸಿಲಿಂಡರ್‌ಗಳ ತೀವ್ರ ಅಭಾವವೇ ಈ ನಿರ್ಧಾರಕ್ಕೆ ಮುಖ್ಯ ಕಾರಣವಾಗಿದೆ.

ದೇವಸ್ಥಾನದಲ್ಲಿ ನಿತ್ಯ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಭಕ್ತರಿಗೆ ಅನ್ನ ಪ್ರಸಾದ ಸಿದ್ಧಪಡಿಸಲು ಪ್ರತಿದಿನ 5 ರಿಂದ 6 ಕಮರ್ಷಿಯಲ್ ಸಿಲಿಂಡರ್‌ಗಳ ಅಗತ್ಯವಿರುತ್ತದೆ. ಸದ್ಯ ದೇವಸ್ಥಾನದಲ್ಲಿ ಕೇವಲ 4 ಸಿಲಿಂಡರ್‌ಗಳು ಮಾತ್ರ ಲಭ್ಯವಿದ್ದು, ಅವು ಇಂದಿನ ಅಡುಗೆಗೆ ಸಾಕಾಗುವುದಿಲ್ಲ. ಗ್ಯಾಸ್ ಪೂರೈಕೆಯಾಗದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಪ್ರಸಾದ ಸೇವೆ ಬಂದ್ ಮಾಡಲಾಗಿದೆ.

ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದ್ದ ಈ ಅನ್ನದಾಸೋಹಕ್ಕೆ ಇದೀಗ ಎಲ್‌ಪಿಜಿ ಅಭಾವದಿಂದಾಗಿ ಅಡ್ಡಿ ಉಂಟಾಗಿದೆ. ಮುಂಜಾನೆ ನೀಡಲಾಗುವ ರೈಸ್ ಬಾತ್ ಮತ್ತು ಸಿಹಿ ಪ್ರಸಾದ ಹಾಗೂ ಮಧ್ಯಾಹ್ನದ ಊಟಕ್ಕೆ ಭಕ್ತರು ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: ಇಂದು ಈ ರಾಶಿಯವರ ಸಂಬಳ ಹೆಚ್ಚಾಗುತ್ತದೆ

ದೇವಸ್ಥಾನದಲ್ಲಿ ಪ್ರಸಾದ ಸೇವೆಯನ್ನು ನೆಚ್ಚಿಕೊಂಡಿರುವ ಸಾವಿರಾರು ಭಕ್ತರು ಮತ್ತು ಬಡವರು ಈ ನಿರ್ಧಾರದಿಂದ ತೀವ್ರ ಬೇಸರಗೊಂಡಿದ್ದಾರೆ. “ಸರ್ಕಾರವು ಇಂತಹ ದೊಡ್ಡ ದೇವಸ್ಥಾನಗಳಿಗೆ ಸಿಲಿಂಡರ್ ಪೂರೈಕೆಯಲ್ಲಿ ಆದ್ಯತೆ ನೀಡಬೇಕು ಅಥವಾ ಪರ್ಯಾಯ ವ್ಯವಸ್ಥೆ ಮಾಡಬೇಕು” ಎಂದು ಭಕ್ತರು ಆಗ್ರಹಿಸಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *