ಮೈಸೂರು, ಡಿಸೆಂಬರ್ 19: ಮರ್ಯಾದೆ ಕೊಡದಿದ್ದಕ್ಕೆ ಪತ್ನಿ ಕೊಲೆಗೆ ಪತಿ ಸುಪಾರಿ ಕೊಟ್ಟಿದ್ದ ಘಟನೆ ಮೈಸೂರಿನ ಬಿಎಂಶ್ರೀ ನಗರದಲ್ಲಿ ನಡೆದಿದೆ. ಗಂಡನಿಗೆ ಕಿಂಚಿತ್ತು ಮರ್ಯಾದೆ ಕೊಡದ ಹಿನ್ನೆಲೆ ಪತ್ನಿ ಕೊಲೆಗೆ ಪತಿ ಸ್ಕೆಚ್ ಹಾಕಿದ್ದ. ಆದರೆ ಆ ಪ್ಲ್ಯಾನ್ ಉಲ್ಟಾ ಹೊಡೆದಿದ್ದು, ಸದ್ಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಬಗ್ಗೆ ಪೊಲೀಸ್ ಕಮಿಷನರ್ ಮೈಸೂರು ಸೀಮಾ ಲಾಟ್ಕರ್ ಮಾತನಾಡಿದ್ದು, ಮದುವೆ ಆಗಿ 10 ವರ್ಷವಾದರೂ ದಂಪತಿಗೆ ಮಕ್ಕಳಾಗಿರಲಿಲ್ಲ. ಇವಳು ಸತ್ತರೆ ನಾನು ಅವಳನ್ನ ಮನೆಗೆ ಕರೆದುಕೊಂಡು ಬರ್ತೀನಿ ಅಂತಾ ಮಹೇಶ್ ಫೋನ್ನಲ್ಲಿ ಮಾತನಾಡಿರುವುದು ಗೊತ್ತಾಗಿದೆ ಎಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.