ಬೋನು ಇಟ್ಟಿದ್ದು ಹುಲಿಗೆ, ಬಂದು ಬಿದ್ದಿದ್ದು ಚಿರತೆ: ಮುಂದೇನಾಯ್ತು?

ಬೋನು ಇಟ್ಟಿದ್ದು ಹುಲಿಗೆ, ಬಂದು ಬಿದ್ದಿದ್ದು ಚಿರತೆ: ಮುಂದೇನಾಯ್ತು?

ಚಾಮರಾಜನಗರ, (ಏಪ್ರಿಲ್ 08): ಹುಲಿ (Tiger) ಸೆರೆಗೆ ಇಟ್ಟಿದ್ದ ಬೋನ್​ನಲ್ಲಿ ಚಿರತೆ ಬಂದು ಲಾಕ್ ಆಗಿದೆ. ಚಾಮರಾಜನಗರ (Chamarajnagar) ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದ ಬಳಿ ಇತ್ತೀಚೆಗೆ ಹುಲಿ ಕಾಣಿಸಿಕೊಂಡಿತ್ತು. ಹೀಗಾಗಿ ಸುತ್ತಮುತ್ತಲಿನ ಜನ ಆತಂಕಗೊಂಡಿದ್ದು, ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಹೀಗಾಗಿ ಅರಣ್ಯ ಇಲಾಖೆಯವರು ಬಂದು ಗ್ರಾಮದ ಬಳಿ ಹುಲಿ ಸರೆ ಹಿಡಿಯಲು ಬೋನು ಇಟ್ಟಿದ್ದರು. ಆದ್ರೆ, ಅಚ್ಚರಿ ಎಂಬಂತೆ ಈ ಬೋನಿಗೆ ನಾಲ್ಕು ವರ್ಷದ ಚಿರತೆ ಬಂದು ಬಿದ್ದಿದೆ. ಇದನ್ನು ಕಂಡು ಸ್ಥಳೀಯರು ಅಚ್ಚರಿಗೊಂಡಿದ್ದಾರೆ. ಇನ್ನು ಚಿರತೆ ಬೋನಿಗೆ ಬಿದ್ದರೂ ಸಹ ಗ್ರಾಮಸ್ಥರಲ್ಲಿ ಹುಲಿ ಆತಂಕ ಮನೆ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *