
ರಾಧಾ ಭಗವತಿ ಹಾಗೂ ರಾಣವ್ ಗೌಡ (Ranav Gowda) ಅವರು ವಿವಾಹ ಆಗಲು ರೆಡಿ ಆಗಿರುವುದು ಗೊತ್ತೇ ಇದೆ. ಇತ್ತೀಚೆಗೆ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡರು ಮತ್ತು ಆ ಫೋಟೋ ವೈರಲ್ ಆಗಿ ಗಮನ ಸೆಳೆಯಿತು. ರಾಣವ್ ಬಗ್ಗೆ ಇತ್ತೀಚೆಗೆ ರಾಧಾ ಭಗವತಿ ಅವರು ಮಾತನಾಡಿದರು. ಸಿನಿಮಾ ಒಂದರ ಶೋಗೆ ಬಂದಾಗ ರಾಧಾ ಅವರು ರಾಣವ್ ಬಗ್ಗೆ ಮಾತನಾಡಿದ್ದಾರೆ. ಆ ವಿಷಯ ಇಲ್ಲಿದೆ.
ರಾಧಾ ಹಾಗೂ ರಾಣವ್ ಅವರು ‘ಅಮೃತಧಾರೆ’ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದು ಗೊತ್ತೇ ಇದೆ. ರಾಣವ್ ಅವರು ಜೆಡಿ ಪಾತ್ರದಲ್ಲಿ ಕಾಣಿಸಿಕೊಂಡರೆ ರಾಧಾ ಅವರು ಆ ಸಂದರ್ಭದಲ್ಲಿ ಮಲ್ಲಿ ಪಾತ್ರ ಮಾಡುತ್ತಿದ್ದರು. ಆ ಬಳಿಕ ‘ಭಾರ್ಗವಿ ಎಲ್ಎಲ್ಬಿ’ ಧಾರಾವಾಹಿ ಆಫರ್ ಸಿಕ್ಕ ಬಳಿಕ ಅವರು ಈ ಸೀರಿಯಲ್ ತೊರೆದರು ಮತ್ತು ಭಾರ್ಗವಿ ಎಲ್ಎಲ್ಬಿಯ ಭಾಗ ಆದರು. ಈಗ ರಾಧಾ ಹಾಗೂ ರಾಣವ್ ನಿಶ್ಚಿತಾರ್ಥ ಮಾಡಿಕೊಂಡರು.
ರಾಣವ್ ಅವರು ಮೊದಲು ಮಾತನಾಡಿದರು. ‘ಅವಳನ್ನು ಇಷ್ಟಪಡ್ತೀನಿ, ಮದುವೆ ಆಗುತ್ತೇನೆ ಎಂದು ಅಂದುಕೊಂಡಿರಲಿಲ್ಲ. ನನ್ನ ಅರ್ಥ ಮಾಡಿಕೊಳ್ಳಯವವರು ಸ್ಟ್ರಾಂಗ್ ಆಗಿರಬೇಕು. ಇವರು ಮೇಲಿನಿಂದ ಸಾಫ್ಟ್ ಅನಿಸಿದರೂ, ಒಳಗಿನಿಂದ ಸ್ಟ್ರಾಂಗ್. ಮೈನಸ್ ಇದ್ರೆ ಬಿಟ್ಟು ಹೋಗುವವರು ಬೇರೆ. ಆದರೆ, ಅದನ್ನು ಅರ್ಥ ಮಾಡಿಕೊಂಡು, ತಿದ್ದಿ ಇರುವವರು ಬೇರೆ’ ಎಂದಿದ್ದಾರೆ ಅವರು.
‘ನಾನೇ ಅವರಿಗೆ ಪ್ರಪೋಸ್ ಮಾಡಿದ್ದು. ಅವರ ಅಭಿಮಾನಿ ನಾನು’ ಎಂದು ರಾಧಾ ಭಗವತಿ ಹೇಳಿದರು. ಇನ್ನು ಮದುವೆ ಯಾವಾಗ ಎಂಬ ಪ್ರಶ್ನೆಗೆ ಅವರು ಉತ್ತರ ನೀಡಿದರು. ‘ಅಧಿಕ ಮಾಸ ಇದೆ, ಆಶಾಢ ಇದೆ.. ಆ ಬಳಿಕ ಶ್ರಾವಣ. ಹೀಗಾಗಿ ಮದುವೆ ಮುಂದಕ್ಕೆ ಹೋಗಿದೆ’ ಯಾರ ಕಣ್ಣು ಬಿದ್ದಿದೆಯೋ ಏನೋ’ ಎಂದು ಅವರು ಹೇಳಿದರು. ಆ ವಿಡಿಯೋ ಕೂಡ ಗಮನ ಸೆಳೆದಿದೆ.
ಇದನ್ನೂ ಓದಿ: ‘ಅಮೃತಧಾರೆ’: ದೊಡ್ಡ ಸಾಧನೆ ಮಾಡಿದ ಮಲ್ಲಿ; ಜಯದೇವ್ ಬಾಳಲ್ಲಿ ಕತ್ತಲು
‘ಅಮೃತಧಾರೆ’ ಧಾರಾವಾಹಿಯಲ್ಲಿ ರಾಣವ್ ಮಾಡುತ್ತಿರುವ ವಿಲನ್ ಪಾತ್ರ ಗಮನ ಸೆಳೆದಿದೆ. ಅವರ ಪಾಥ್ರವನ್ನು ಮೆಚ್ಚುಗೆ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.