
ಬೆಂಗಳೂರು, ಜನವರಿ 29: ವಿಧಾನಸಭೆಯಲ್ಲಿ ಬಳ್ಳಾರಿ ಬ್ಯಾನರ್ ಗಲಾಟೆ ಬಗ್ಗೆ ಪ್ರಸ್ತಾಪಿಸಿದ ವಿಪಕ್ಷ ನಾಯಕ ಅಶೋಕ್, ಶಾಸಕರೊಬ್ಬರ ಗಂಭೀರ ಹೇಳಿಕೆಯನ್ನು ಉಲ್ಲೇಖಿಸಿದರು. ಅಷ್ಟೇ ಅಲ್ಲದೆ ಆ ಕುರಿತ ಆಡಿಯೋ, ವಿಡಿಯೋ ಸಾಕ್ಷಿಗಳಿರುವ ಪೆನ್ ಡ್ರೈವ್ ತೋರಿಸಿದರು. “ಕೊಲ್ಲಲು ಸಾವಿರಾರು ದಾರಿಗಳಿವೆ, ನಾನು ಅಂದುಕೊಂಡರೆ ಐದು ನಿಮಿಷದಲ್ಲಿ ಬಳ್ಳಾರಿಯನ್ನು ಭಸ್ಮ ಮಾಡಬಲ್ಲೆ” ಎಂದು ಆ ಶಾಸಕರು ಹೇಳಿರುವ ಹೇಳಿಕ ಉಲ್ಲೇಸಿದರು. ಈ ವಿಚಾರದಲ್ಲಿ ಗೃಹಸಚಿವರು ಸುಳ್ಳು ಎಂದು ಸಾಬೀತುಪಡಿಸಿದರೆ ಕ್ಷಮಾಪಣೆ ಕೇಳಲು ಸಿದ್ಧ ಎಂದು ಆರ್. ಅಶೋಕ್ ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.