ಹಣ್ಣು ತರಕಾರಿಗಳಲ್ಲಿ ಅಂಟಿಕೊಂಡಿರುವ ಕೀಟನಾಶಕಗಳನ್ನು ತೆಗೆದು ಹಾಕಲು ಈ ಸರಳ ವಿಧಾನ ಅನುಸರಿಸಿ

ಹಣ್ಣು ತರಕಾರಿಗಳಲ್ಲಿ ಅಂಟಿಕೊಂಡಿರುವ ಕೀಟನಾಶಕಗಳನ್ನು  ತೆಗೆದು ಹಾಕಲು  ಈ ಸರಳ ವಿಧಾನ ಅನುಸರಿಸಿ

ಇಂದಿನ ಈ ಕಾಲಘಟ್ಟದಲ್ಲಿ ಕೃಷಿಯಲ್ಲಿ ಕೀಟನಾಶಕಗಳನ್ನು (pesticides) ವ್ಯಾಪಕವಾಗಿ ಬಳಸಲಾಗುತ್ತಿದೆ. ಈ ಕೀಟನಾಶಕಗಳು ಬೆಳೆಗಳನ್ನು ರೋಗಗಳು ಮತ್ತು ಕೀಟಗಳಿಂದ ರಕ್ಷಿಸುತ್ತವೆ ನಿಜ. ಆದರೆ ಈ ರಾಸಾಯನಿಕಗಳ ಅವಶೇಷಗಳು ಹಣ್ಣು, ತರಕಾರಿಗಳ ಮೇಲ್ಮೈನಲ್ಲಿ ಹಾಗೆಯೇ ಉಳಿದು ಬಿಡುತ್ತದೆ. ಹೀಗಿರುವಾಗ ಮಾರುಕಟ್ಟೆಯಿಂದ ತಂದಂತಹ ಹಣ್ಣು-ತರಕಾರಿಗಳನ್ನು ಬರೀ ನೀರಿನಿಂದ ತೊಳೆದರೆ ರಾಸಾಯನಿಕ ಶೇಷ ಹಾಗೆಯೇ ಉಳಿದು ಬಿಡುತ್ತದೆ. ಇದು ನಮ್ಮ ದೇಹವನ್ನು ತಲುಪಿ ಕ್ರಮೇಣ ಆರೋಗ್ಯಕ್ಕೆ ಹಾನಿಯನ್ನುಂಟುಮಾಡುತ್ತದೆ. ಈ ರಾಸಾಯನಿಕಗಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಹಾರ್ಮೋನು ಅಸಮತೋಲನ, ಅಲರ್ಜಿ ಮತ್ತು ಕ್ಯಾನ್ಸರ್‌ನಂತಹ ಗಂಭೀರ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ, ತರಕಾರಿಗಳನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಅದಕ್ಕಾಗಿ‌ ಹಣ್ಣು ತರಕಾರಿಗಳನ್ನು ತೊಳೆಯಲು  ನೀವು ಈ ಕ್ಲೀನಿಂಗ್ ಟಿಪ್ಸ್‌ ಫಾಲೋ ಮಾಡಿ.

ಹಣ್ಣು- ತರಕಾರಿಗಳಿಂದ ಕೀಟನಾಶಕಗಳನ್ನು ತೆಗೆದುಹಾಕುವ ಸರಳ ವಿಧಾನ:

ಹರಿಯುವ ನೀರಿನ ಅಡಿಯಲ್ಲಿ ಚೆನ್ನಾಗಿ ತೊಳೆಯಿರಿ: ತರಕಾರಿಗಳು ಮತ್ತು ಹಣ್ಣುಗಳನ್ನು ತೊಳೆಯಲು ದೊಡ್ಡ ಪಾತ್ರೆಯನ್ನು ಬಳಸಿ. ನೀರನ್ನು ಸೇರಿಸಿ ಮತ್ತು ಹಣ್ಣುಗಳು ಮತ್ತು ತರಕಾರಿಗಳನ್ನು ಎರಡರಿಂದ ಐದು ನಿಮಿಷಗಳ ಕಾಲ ಅದರಲ್ಲಿ ಬಿಡಿ. ತೊಳೆಯುವ ಮೊದಲು ಹಣ್ಣುಗಳು ಮತ್ತು ತರಕಾರಿಗಳನ್ನು ನೆನೆಸುವುದರಿಂದ ಅವುಗಳಲ್ಲಿರುವ ಬ್ಯಾಕ್ಟೀರಿಯಾಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ನಂತರ ನಲ್ಲಿಯನ್ನು ಆನ್ ಮಾಡಿ ಹಣ್ಣು ತರಕಾರಿಗಳನ್ನು ಉಜ್ಜುವ ಮೂಲಕ ಚೆನ್ನಾಗಿ ಸ್ವಚ್ಛಗೊಳಿಸಿ. ಹಣ್ಣುಗಳು ಮತ್ತು ತರಕಾರಿಗಳ ಮೇಲ್ಮೈಯಲ್ಲಿ ಸಿಲುಕಿರುವ ಕೀಟನಾಶಕಗಳು, ಧೂಳು ಮತ್ತು ಬ್ಯಾಕ್ಟೀರಿಯಾಗಳನ್ನು ತೆಗೆದುಹಾಕಲು ಕನಿಷ್ಠ 2-3 ನಿಮಿಷಗಳ ಕಾಲ ಅವುಗಳನ್ನು ಚೆನ್ನಾಗಿ ಸ್ಕ್ರಬ್ ಮಾಡಬೇಕು.

ಉಪ್ಪು ನೀರಿನಲ್ಲಿ ನೆನೆಸಿ: ಕೀಟನಾಶಕಗಳನ್ನು ತೆಗೆದುಹಾಕಲು ಉಪ್ಪುನೀರು ತುಂಬಾ ಸಹಾಯಕವಾಗಿದೆ. ನೀರಿಗೆ 1-2 ಟೀ ಚಮಚ ಉಪ್ಪನ್ನು ಸೇರಿಸಿ ಮತ್ತು ಹಣ್ಣುಗಳು ಮತ್ತು ತರಕಾರಿಗಳನ್ನು ಅದರಲ್ಲಿ 10-15 ನಿಮಿಷಗಳ ಕಾಲ ನೆನೆಸಿಡಿ. ಉಪ್ಪಿನ ದ್ರಾವಣವು ಹಣ್ಣುಗಳು ಮತ್ತು ತರಕಾರಿಗಳ ಮೇಲ್ಮೈಯಲ್ಲಿರುವ ರಾಸಾಯನಿಕಗಳನ್ನು ಸಡಿಲಗೊಳಿಸುತ್ತದೆ, ಇದರಿಂದ ಅವುಗಳನ್ನು ಸ್ವಚ್ಛಗೊಳಿಸಲು ಸುಲಭವಾಗುತ್ತದೆ. ಈ ವಿಧಾನವು ಬದನೆಕಾಯಿ, ಬೆಂಡೆಕಾಯಿ ಮತ್ತು ಎಲೆಕೋಸು ಮುಂತಾದ ತರಕಾರಿಗಳಿಗೆ ವಿಶೇಷವಾಗಿ ಪರಿಣಾಮಕಾರಿಯಾಗಿದೆ. ನೆನೆಸಿದ ನಂತರ, ಅವುಗಳನ್ನು ಮತ್ತೆ ಶುದ್ಧ ನೀರಿನಿಂದ ತೊಳೆಯಬೇಕು.

ಅಡಿಗೆ ಸೋಡಾ ಬಳಸಿ: ಅರ್ಧ ಟೀಚಮಚ ಅಡಿಗೆ ಸೋಡಾವನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಅದರಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು 10-15 ನಿಮಿಷಗಳ ಕಾಲ ನೆನೆಸಿಡಿ. ಅಡಿಗೆ ಸೋಡಾ ಹಣ್ಣು, ತರಕಾರಿಗಳ ಮೇಲಿನ ರಾಸಾಯನಿಕಗಳು ಮತ್ತು ಅವುಗಳ ಪರಿಣಾಮಕಾರಿತ್ವವನ್ನು ಕಡಿಮೆ ಮಾಡುತ್ತದೆ. ಈ ವಿಧಾನವು ಸೇಬು, ಟೊಮೆಟೊ ಮತ್ತು ಕ್ಯಾಪ್ಸಿಕಂನಂತಹ ಹಣ್ಣುಗಳು ಮತ್ತು ತರಕಾರಿಗಳನ್ನು ಶುಚಿಗೊಳಿಸಲು  ಉಪಯುಕ್ತವಾಗಿದೆ.

ಇದನ್ನೂ ಓದಿ: ಮನೆಯಲ್ಲಿ ಪದೇ ಪದೇ ಕಾಡುವ ಜೇಡರ ಬಲೆಗಳ ಸಮಸ್ಯೆಯಿಂದ ಮುಕ್ತಿ ಪಡೆಯಲು ಮನೆಮದ್ದುಗಳು ಬೆಸ್ಟ್‌

ವಿನೆಗರ್‌ನಿಂದ ಸ್ವಚ್ಛಗೊಳಿಸಿ: ವಿನೆಗರ್ ನೈಸರ್ಗಿಕ ಶುಚಿಗೊಳಿಸುವ ಏಜೆಂಟ್ ಆಗಿದ್ದು, ಅದು ಬ್ಯಾಕ್ಟೀರಿಯಾ ಮತ್ತು ಸ್ವಲ್ಪ ಮಟ್ಟಿಗೆ ಕೀಟನಾಶಕಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಒಂದು ಪಾತ್ರೆಯಲ್ಲಿ ನೀರನ್ನು ತುಂಬಿಸಿ 1-2 ಚಮಚ ವಿನೆಗರ್ ಸೇರಿಸಿ, ನಂತರ ಅದರಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು 10 ನಿಮಿಷಗಳ ಕಾಲ ನೆನೆಸಿಡಿ. ಈ ವಿಧಾನವು ಟೊಮೆಟೊ ಅಥವಾ ಸೌತೆಕಾಯಿಯಂತಹ ತರಕಾರಿಗಳನ್ನು ಕ್ಲೀನ್‌ ಮಾಡಲು ಒಳ್ಳೆಯದು. ಆದ್ರೆ ಹೆಚ್ಚು ವಿನೆಗರ್ ಬಳಸುವುದನ್ನು ತಪ್ಪಿಸಿ, ಏಕೆಂದರೆ ಇದು ರುಚಿ ಮತ್ತು ವಾಸನೆಯ ಮೇಲೆ ಪರಿಣಾಮ ಬೀರುತ್ತದೆ.

ಉಗುರು ಬೆಚ್ಚಗಿನ ನೀರು: ತರಕಾರಿಗಳು ಮತ್ತು ಹಣ್ಣುಗಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ಅದಕ್ಕೆ ಬೇಕಾದರೆ ಉಪ್ಪನ್ನು ಕೂಡ ಸೇರಿಸಬಹುದು. ಇದು ಹಣ್ಣು ತರಕಾರಿಗಳ ಮೇಲ್ಮೈನಲ್ಲಿ ಅಂಟಿರುವ ರಾಸಾಯನಿಕ ಶೇಷಗಳನ್ನು ತೆಗೆದು ಹಾಕುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *