Karnataka Air Quality: ಗಾಳಿಯ ಗುಣಮಟ್ಟದಲ್ಲಿ ಬೆಂಗಳೂರು ಉತ್ತಮ, ಮಂಗಳೂರು, ಉಡುಪಿ ಕಳಪೆ – Kannada News | Bengaluru Air Quality Update Jan 31: Moderate AQI, Hot Day, Chilly Night Forecast

ಬೆಂಗಳೂರು, ಜ.31: ಕರ್ನಾಟಕದಾದ್ಯಂತ ಇಂದು (ಜನವರಿ 31, 2026) ವಾಯು ಗುಣಮಟ್ಟವು (AQI) ಸಾಧಾರಣ ಮಟ್ಟದಲ್ಲಿದ್ದರೂ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಅಲ್ಪ ಸುಧಾರಣೆ ಕಂಡುಬಂದಿದೆ. ಮುಂಜಾನೆಯ ಮಂಜಿನ ಪ್ರಮಾಣ ಕಡಿಮೆಯಾಗಿರುವುದರಿಂದ ಮಾಲಿನ್ಯಕರ ಗಾಳಿಗಳು ಹಾಗೂ ಕಣಗಳು ಹತೋಟಿಗೆ ಬಂದಿದೆ. ನಗರದ ಸಿಲ್ಕ್ ಬೋರ್ಡ್, ಪೀಣ್ಯ ಮತ್ತು ವೈಟ್‌ಫೀಲ್ಡ್ ಭಾಗಗಳಲ್ಲಿ ಮಾಲಿನ್ಯವು ಇನ್ನೂ 160-170 ರ ಆಸುಪಾಸಿನಲ್ಲಿದೆ. ಆದರೆ ಜಯನಗರ ಮತ್ತು ಪದ್ಮನಾಭನಗರದಂತಹ ಏರಿಯಾಗಳಲ್ಲಿ ಗಾಳಿ ತುಸು ಶುದ್ಧವಾಗಿದೆ. ಮಂಗಳೂರು ಮತ್ತು ಉಡುಪಿ ಭಾಗದಲ್ಲಿ ವಾಯು ಗುಣಮಟ್ಟವು ‘ಕಳಪೆ’ ಹಂತದಲ್ಲೇ ಮುಂದುವರಿದಿದೆ. ಉಸಿರಾಟದ ಸಮಸ್ಯೆ ಇರುವವರು ಹೊರಗಡೆ ಸಂಚರಿಸುವಾಗ ಜಾಗರೂಕರಾಗಿರುವುದು ಒಳಿತು.

ಮಧ್ಯಾಹ್ನ ಬಿಸಿಲು ಹೆಚ್ಚಾಗುತ್ತಿದ್ದಂತೆ ಗಾಳಿಯ ವೇಗ ಹೆಚ್ಚಾಗಿ AQI ಮಟ್ಟ ಇನ್ನೂ 10-15 ಪಾಯಿಂಟ್‌ಗಳಷ್ಟು ಇಳಿಕೆಯಾಗುವ ಸಾಧ್ಯತೆಯಿದೆ. ವೈಟ್‌ಫೀಲ್ಡ್ ಮತ್ತು ಮಹದೇವಪುರದಲ್ಲಿ ಮೆಟ್ರೋ ಕಾಮಗಾರಿ ಮತ್ತು ವಾಹನ ದಟ್ಟಣೆಯಿಂದಾಗಿ AQI 180+ (ಕಳಪೆ) ಇದೆ. ಪೀಣ್ಯದಲ್ಲಿ ಕೈಗಾರಿಕಾ ಪ್ರದೇಶವಾಗಿರುವುದರಿಂದ ಇಲ್ಲಿ ಮಾಲಿನ್ಯ ಮಟ್ಟ 195 ರಷ್ಟಿದೆ. ಜಯನಗರ ಮತ್ತು ಮಲ್ಲೇಶ್ವರಂದಲ್ಲಿ ಹಸಿರು ಹೆಚ್ಚಿರುವುದರಿಂದ ಗಾಳಿಯ ಗುಣಮಟ್ಟ ತುಸು ಉತ್ತಮವಾಗಿದ್ದು, AQI 110 – 125 (ಸಾಧಾರಣ) ಇದೆ. ಮೆಜೆಸ್ಟಿಕ್ ಮತ್ತು ಸಿಲ್ಕ್ ಬೋರ್ಡ್ ನಲ್ಲಿ ವಾಹನ ದಟ್ಟಣೆ ಇರುವುದರಿಂದ AQI 175 ದಾಟಿದೆ.

ಇಂದು ಮಧ್ಯಾಹ್ನದ ಅವಧಿಯಲ್ಲಿ ರಾಜ್ಯಾದ್ಯಂತ ಬಿಸಿಲಿನ ತೀವ್ರತೆ ಹೆಚ್ಚಾಗಲಿದೆ. ಮಧ್ಯಾಹ್ನ 1:00 ರಿಂದ 3:30 ರವರೆಗೆ ತಾಪಮಾನವು 30°C ನಿಂದ 31°C ವರೆಗೆ ಏರಿಕೆಯಾಗಲಿದೆ. ಶುಷ್ಕ ಗಾಳಿ ಬೀಸುವುದರಿಂದ ಬಿಸಿಲಿನ ತಾಪ ತುಸು ಹೆಚ್ಚೆನಿಸಬಹುದು.ಬೆಳಗಾವಿ, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮಧ್ಯಾಹ್ನದ ತಾಪಮಾನವು 34°C ದಾಟುವ ಸಾಧ್ಯತೆಯಿದೆ. ಇಲ್ಲಿ ಬಿಸಿಲು ತೀವ್ರವಾಗಿರಲಿದೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿ AQI ಮಟ್ಟವು 10-20 ಪಾಯಿಂಟ್‌ಗಳಷ್ಟು ಸುಧಾರಿಸಲಿದೆ. ಅಂದರೆ, ಉಸಿರಾಟಕ್ಕೆ ಬೆಳಗಿನ ಅವಧಿಗಿಂತ ಮಧ್ಯಾಹ್ನದ ವಾತಾವರಣವು ಹೆಚ್ಚು ಸುರಕ್ಷಿತವಾಗಿರಲಿದೆ. ದಕ್ಷಿಣ ಕರ್ನಾಟಕದ ಕೆಲವು ಭಾಗಗಳಲ್ಲಿ ಮಧ್ಯಾಹ್ನದ ನಂತರ ಭಾಗಶಃ ಮೋಡ ಕವಿದ ವಾತಾವರಣ (Partly Cloudy) ನಿರ್ಮಾಣವಾಗಬಹುದು. ಆದರೆ ಮಳೆಯಾಗುವ ಯಾವುದೇ ಲಕ್ಷಣಗಳಿಲ್ಲ. ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಬಿಸಿಲು ನೇರವಾಗಿ ಇರುವುದರಿಂದ ನಿರ್ಜಲೀಕರಣ (Dehydration) ತಪ್ಪಿಸಲು ಹೆಚ್ಚು ನೀರು ಕುಡಿಯಿರಿ ಎಂದು ತಜ್ಞರು ಹೇಳಿದ್ದಾರೆ.

ಮಧ್ಯಾಹ್ನದ ಬಿಸಿಲಿಗೆ ವಿರುದ್ಧವಾಗಿ, ಸಂಜೆಯಾಗುತ್ತಿದ್ದಂತೆ ಕರ್ನಾಟಕದಾದ್ಯಂತ ವಾತಾವರಣವು ತಂಪಾಗಲಿದೆ. ಸಂಜೆ 6:30ರ ನಂತರ ತಾಪಮಾನವು ವೇಗವಾಗಿ ಕುಸಿಯಲಿದ್ದು, ರಾತ್ರಿ 10 ಗಂಟೆಯ ವೇಳೆಗೆ 20°C ತಲುಪಲಿದೆ. ಮುಂಜಾನೆಯ ವೇಳೆಗೆ ಚಳಿ ಹೆಚ್ಚಾಗಲಿದ್ದು, ಕನಿಷ್ಠ ತಾಪಮಾನ 15°C ನಿಂದ 17°C ಆಸುಪಾಸಿನಲ್ಲಿರಲಿದೆ. ಇಲ್ಲಿ ಹಗಲು ಬಿಸಿಲು ಹೆಚ್ಚಿದ್ದರೂ, ರಾತ್ರಿ ವೇಳೆ ಚಳಿ ತೀವ್ರವಾಗಿರಲಿದೆ. ಬೆಳಗಾವಿ ಮತ್ತು ಧಾರವಾಡ ಭಾಗದಲ್ಲಿ ಕನಿಷ್ಠ ತಾಪಮಾನ 14°C ವರೆಗೆ ಇಳಿಕೆಯಾಗುವ ಸಾಧ್ಯತೆಯಿದೆ. ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗಿನಲ್ಲಿ ಚಳಿಯ ಪ್ರಭಾವ ಹೆಚ್ಚಿರಲಿದ್ದು, ರಾತ್ರಿ ಹಿತಕರವಾದ ತಂಪು ವಾತಾವರಣವಿರಲಿದೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಇಂದೂ ಮುಂದುವರೆದ ಶುಷ್ಕ ವಾತಾವರಣ

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *