ಪ್ರತಿ ಶುಕ್ರವಾರ ಕನ್ನಡದ ಹಲವು ಸಿನಿಮಾಗಳು (Cinema) ಬಿಡುಗಡೆ ಆಗುತ್ತಲೇ ಇದೆ. ಆದರೆ ಗೆಲುವು ಕಾಣುತ್ತಿರುವುದು ಮಾತ್ರ ವರ್ಷಕ್ಕೆ ಬೆರಳೆಣಿಕೆಯಷ್ಟು ಸಿನಿಮಾಗಳು. ಸಿನಿಮಾ ಸೋತಾಗ ತೀವ್ರ ಬಾಧೆಗೆ ಗುರಿ ಆಗುವುದು ನಿರ್ಮಾಪಕರು. ಚಕ್ರವರ್ತಿ ಚಂದ್ರಚೂಡ್ ನೀಡಿರುವ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ನಿರ್ಮಾಪಕ ಕೆ ಮಂಜು, ಮಾಧ್ಯಮಗಳ ಜೊತೆಗೆ ಈ ಬಗ್ಗೆ ಮಾತನಾಡಿದ್ದು, ಕಳೆದ ನವೆಂಬರ್ನಿಂದ ಜನವರಿ ವರೆಗೆ ಕೇವಲ ಮೂರೇ ತಿಂಗಳಲ್ಲಿ ಕನ್ನಡ ಚಿತ್ರರಂಗದ ನಿರ್ಮಾಪಕರು 250 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ’ ಎಂದಿದ್ದಾರೆ. ನಿರ್ಮಾಪಕರ ಇಂದಿನ ಸ್ಥಿತಿ ಚಿಂತಾಜನಕವಾಗಿದೆ. ಹೀಗಿರುವಾಗ ನಿರ್ಮಾಪಕರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ