Headlines

ಒಡಿಶಾದಲ್ಲಿ ಆಸಿಡ್ ದಾಳಿ ನಡೆಸಿ ಪತ್ನಿಯನ್ನು ಕೊಂದ ವ್ಯಕ್ತಿಗೆ ಗಲ್ಲು ಶಿಕ್ಷೆ – Kannada News | Man gets Death sentence in Odisha for killing wife in acid attack

ಬಾಲಸೋರ್, ಫೆಬ್ರವರಿ 13: ಒಡಿಶಾದ ಬಾಲಸೋರ್ ಜಿಲ್ಲೆಯ ನ್ಯಾಯಾಲಯವು ಆಸಿಡ್ ದಾಳಿ ನಡೆಸಿ ಪತ್ನಿಯನ್ನು ಕೊಂದ ವ್ಯಕ್ತಿಗೆ ಮರಣದಂಡನೆ (Death Sentence) ವಿಧಿಸಿದೆ. ನ್ಯಾಯಾಧೀಶ ಅಬ್ದುಲ್ ಸಮೀಮ್ ಅಖ್ತರ್ ಆರೋಪಿ ಚಂದನ್ ಕುಮಾರ್ ರಾಣಾಗೆ ಮರಣದಂಡನೆ ವಿಧಿಸುವುದರ ಜೊತೆಗೆ 50,000 ರೂ. ದಂಡ ವಿಧಿಸಿದ್ದಾರೆ. ನೀಲಗಿರಿ ಪೊಲೀಸ್ ಠಾಣೆ ಪ್ರದೇಶದ ಸಂತ್ರಗಾಡಿಯಾ ನಿವಾಸಿಯಾದ ರಾಣಾ ತನ್ನ ಪತ್ನಿ ಬನಿತಾ ಸಿಂಗ್, ಆಕೆಯ ಅಕ್ಕ ಮತ್ತು ಸಹೋದರಿಯ ಇಬ್ಬರು ಮಕ್ಕಳ ಮೇಲೆ ಆಸಿಡ್ ಎರಚಿದ್ದ.

ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಬನಿತಾ ಸಾವನ್ನಪ್ಪಿದ್ದರು. ವಿವಾಹವಾದ ಒಂದೂವರೆ ತಿಂಗಳೊಳಗೆ ರಾಣಾ ಈಗಾಗಲೇ ಮದುವೆಯಾಗಿದ್ದಾನೆ ಮತ್ತು ಇಬ್ಬರು ಮಕ್ಕಳನ್ನು ಹೊಂದಿದ್ದಾನೆ ಎಂದು ಬನಿತಾಗೆ ಗೊತ್ತಾಗಿತ್ತು. ನಂತರ, ಆಕೆ ಗಂಡನ ಮನೆಯನ್ನು ತೊರೆದು ತನ್ನ ಹೆತ್ತವರೊಂದಿಗೆ ವಾಸಿಸಲು ಪ್ರಾರಂಭಿಸಿದರು.

ಇದನ್ನೂ ಓದಿ: ಅಪ್ರಾಪ್ತ ಹುಡುಗರಿಂದ ದೆಹಲಿಯಲ್ಲಿ 17 ವರ್ಷದ ಬಾಲಕನ ಕಗ್ಗೊಲೆ

ಇದರಿಂದ ಕೋಪಗೊಂಡ ರಾಣಾ, ಫೆಬ್ರವರಿ 20, 2023ರಂದು ಆಕೆಯ ಮೇಲೆ ಮತ್ತು ಆಕೆಯ ಕುಟುಂಬದ ಸದಸ್ಯರ ಮೇಲೆ ಆಸಿಡ್ ದಾಳಿ ನಡೆಸಿದ್ದ. ನ್ಯಾಯಾಲಯವು ಫೆಬ್ರವರಿ 4ರಂದು ರಾಣಾನನ್ನು ತಪ್ಪಿತಸ್ಥನೆಂದು ಘೋಷಿಸಿತ್ತು.

ನ್ಯಾಯಾಲಯವು 34 ಸಾಕ್ಷಿಗಳು, 110 ಸಾಕ್ಷ್ಯಗಳು ಮತ್ತು 33 ವಸ್ತು ವಸ್ತುಗಳನ್ನು ಪರಿಶೀಲಿಸಿದ ನಂತರ ಈ ತೀರ್ಪು ನೀಡಿತು. ಈ ಪ್ರಕರಣದ ಇತರ 6 ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *