Headlines

ಅಪಘಾತಕ್ಕೆ 2 ವರ್ಷದ ಮಗು ಬಲಿ: ರಸ್ತೆ ದುಃಸ್ಥಿತಿ ಖಂಡಿಸಿ ಸ್ಥಳೀಯರಿಂದ ಪ್ರತಿಭಟನೆ – Kannada News | Mahadevapura Road Accident: Two Year Old Child Dies, Locals Protest Against Poor Infrastructure

ಬೆಂಗಳೂರು, ಫೆಬ್ರವರಿ 16: ಮಹದೇವಪುರದ ಕಿತ್ತಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೇಹಳ್ಳಿ ಮುಖ್ಯ ರಸ್ತೆಯಲ್ಲಿ ನಿನ್ನೆ ಸಂಜೆ ನಡೆದ ಅಪಘಾತದಲ್ಲಿ ಎರಡು ವರ್ಷದ ಮಗು ತ್ರಿಶೂಲ್ ಸಾವನ್ನಪ್ಪಿದೆ. ರಸ್ತೆಯ ದುಸ್ಥಿತಿಯೇ ಮಗುವಿನ ಸಾವಿಗೆ ಕಾರಣವೆಂದು ಆರೋಪಿಸಿ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಕಾಮಗಾರಿಯ ನಿರ್ಲಕ್ಷ್ಯವನ್ನು ಖಂಡಿಸಿ, ಗ್ರಾಮಸ್ಥರು ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದು, ಕಳೆದ ಐದಾರು ವರ್ಷಗಳಿಂದಲೂ ರಸ್ತೆಯ ಸ್ಥಿತಿ ಹೀಗೇ ಇದೆ. ಇದು ಈ ರಸ್ತೆಯಲ್ಲಿ ನಡೆದ ಐದನೇ ಸಾವು ಎಂದು ದೂರಿದ್ದಾರೆ. ಸ್ಥಳಕ್ಕೆ ಯಾವುದೇ ಜನಪ್ರತಿನಿಧಿಗಳು ಅಥವಾ ಪಿಡಿಒ ಭೇಟಿ ನೀಡದಿರುವುದು ಅವರ ಸಿಟ್ಟಿಗೆ ಮತ್ತಷ್ಟು ಕಾರಣವಾಗಿದೆ. ರಸ್ತೆ ಸರಿಪಡಿಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *