Headlines

ವೃದ್ಧೆ ಅನುಮಾಸ್ಪದ ಸಾವು: ಇನ್ನೇನು ಅಂತ್ಯಕ್ರಿಯೆ ಮಾಡ್ಬೇಕು ಎನ್ನುವಷ್ಟರಲ್ಲೇ ಸಾವಿನ ರಹಸ್ಯ ಬಯಲು – Kannada News | A Man Kills 64 Year Old Woman for money In Davanagere

ದಾವಣಗೆರೆ, (ಫೆಬ್ರವರಿ 23): ಜಿಲ್ಲೆ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ಇದೇ ತಿಂಗಳ 2ರಂದು ಗ್ರಾಮಸ್ಥರೆಲ್ಲ ಊರ ಹಬ್ಬದ ಖುಷಿಯಲ್ಲಿದ್ದರು. ಆದ್ರೆ ಮಾರನೇ ದಿನವೇ ಗ್ರಾಮದ 64 ವರ್ಷದ ಕಮಲಮ್ಮ ಮೃತಪಟ್ಟಿದ್ಳು. ಒಂಟಿ ಮಹಿಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಅಂದುಕೊಂಡಿದ್ದರು. ಆದ್ರೆ, ಅಂತ್ಯಕ್ರಿಯೆ ಹೊತ್ತಲ್ಲಿ ವೃದ್ಧೆಯ ಮೈಮೇಲಿದ್ದ ಒಡವೆ ಕಾಣೆಯಾಗಿರುವುದು ಸಂಬಂಧಿಯೊಬ್ಬರಿಗೆ ಸಂಶಯ ಬಂದಿದೆ. ಈ ವಿಷಯ ತಿಳಿದು ಅಖಾಡಕ್ಕಿಳಿದ ಪೊಲೀಸರು ವೃದ್ಧೆಯ ಸಾವಿನ ರಹಸ್ಯ ಬಯಲಿಗೆ ಬಂದಿದ್ದು, ವೃದ್ಧೆ ಹೃದಯಾಘಾತದಿಂದ ಮೃತಪಟ್ಟಿಲ್ಲ. ಬದಲಾಗಿ ಅಭಿಷೇಕ್ ಎನ್ನುವಾತನೇ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಹಂತಕ ಶಿವಮೊಗ್ಗ ಮೂಲದ ಅಭಿಷೇಕ್ Msc ಓದಿದ್ದ. ಆನ್​ಲೈನ್ ಗೇಮ್ ಚಟಕ್ಕೆ ಬಿದ್ದು 20ರಿಂದ 25 ಲಕ್ಷ ಸಾಲ ಮಾಡಿಕೊಂಡಿದ್ದ. ಸಾಲಕೊಟ್ಟವರ ಕಾಟ ಜಾಸ್ತಿ ಆಗ್ತಿದ್ದಂತೆ ಊರು ಬಿಟ್ಟೋನು 2 ತಿಂಗಳ ಕಾಲ ಅಲ್ಲಿ ಇಲ್ಲಿ ಸುತ್ತಾಡಿ ಫೆಬ್ರವರಿ 2ರಂದು ದಾವಣಗೆರೆಯ ಆರುಂಡಿ ಗ್ರಾಮಕ್ಕೆ ಎಂಟ್ರಿಕೊಟ್ಟಿದ್ದ. ಈ ವೇಳೆ ವೃದ್ಧೆ ಕಮಲಮ್ಮನ ನೋಡ್ತಿದ್ದಂತೆ ಪಾಪಿಯ ಕಣ್ಣು ಒಡವೆ ಮೇಲೆ ಬಿದ್ದಿತ್ತು.

ಇದನ್ನೂ ಒದಿ: ಸಾಕು ಮಗ-ತಂಗಿಯಿಂದಲೇ ಮಹಿಳೆಯ ಹತ್ಯೆ: ಓರ್ವ ವ್ಯಕ್ತಿಯಿಂದ ಬಯಲಾಯ್ತು ಕೊಲೆ ರಹಸ್ಯ

ಎಲ್ಲರೂ ಊರ ಹಬ್ಬದ ಖುಷಿಯಲ್ಲಿದ್ರೆ, ಇವನು ಸದ್ದಿಲ್ಲದೆ ವೃದ್ಧೆಯನ್ನು ಉಸಿರುಗಟ್ಟಿಸಿ ಕೊಂದು
8 ಲಕ್ಷ 44 ಸಾವಿರ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಬಳಿಕ ಅದೇ ಒಡವೆ ಅಡವಿಟ್ಟು ಮತ್ತೆ ಆನ್​ಲೈನ್ ಗೇಮ್ ಆಡಿದ್ದ. ಸದ್ಯ ಪೊಲೀಸರು ಅಭಿಷೇಕ್​ಗೆ ಜೈಲು ದಾರಿ ತೋರಿಸಿದ್ದಾರೆ. ಚೆನ್ನಾಗಿ ಓದಿರುವ ವಿದ್ಯಾವಂತರೇ ಹೀಗೆ ದುಶ್ಚಟಗಳಿಗೆ ಬಿದ್ದು ಕೊಲೆ, ಸುಲಿಗೆ ಮಾಡ್ತಿರೋದು ಜನರನ್ನ ಬೆಚ್ಚಿ ಬೀಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್  ಮಾಡಿ

Source link

Leave a Reply

Your email address will not be published. Required fields are marked *