
ಟೀಂ ಇಂಡಿಯಾದ ಸ್ಟಾರ್ ಆಟಗಾರರಾದ ಜಸ್ಪ್ರೀತ್ ಬುಮ್ರಾ (Jasprit Bumrah) ಮತ್ತು ಅಕ್ಷರ್ ಪಟೇಲ್ಗೆ ( Axar Patel) ಬಿಸಿಸಿಐನಿಂದ (BCCI) ಯುಗಾದಿ ಗಿಫ್ಟ್ ಸಿಗಲಿದೆ ಎಂದು ವರದಿಯಾಗಿದೆ. ವಾಸ್ತವವಾಗಿ ಈ ಇಬ್ಬರು ಆಟಗಾರರು ಐಸಿಸಿಯ ಪ್ರತಿಯೊಂದು ಈವೆಂಟ್ಗಳಲ್ಲೂ ಟೀಂ ಇಂಡಿಯಾ ಪರ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ತಂಡವನ್ನು ಚಾಂಪಿಯನ್ ಮಾಡುವಲ್ಲಿಯೂ ಶ್ರಮಿಸಿದ್ದಾರೆ. ಹೀಗಾಗಿ ಇವರಿಬ್ಬರ ವಾರ್ಷಿಕ ವೇತನವನ್ನು ಹೆಚ್ಚಿಸಲು ಬಿಸಿಸಿಐ ಯೋಚಿಸಿದೆ ಎಂದು ಹೇಳಲಾಗುತ್ತಿದೆ. ಕೆಲವೇ ದಿನಗಳ ಹಿಂದೆ ಬಿಸಿಸಿಐ ಹೊಸ ಕೇಂದ್ರ ಒಪ್ಪಂದವನ್ನು ಪ್ರಕಟಿಸಿತ್ತು. ಆ ಪಟ್ಟಿಯಲ್ಲಿ ಎ+ ಗ್ರೇಡ್ ಅನ್ನು ತೆಗೆದುಹಾಕಿ ಉಳಿದ ಮೂರು ಗ್ರೇಡ್ಗಳನ್ನು ಮುಂದುವರೆಸಿತ್ತು. ಎ+ ಗ್ರೇಡ್ ತೆಗೆದ ಕಾರಣ ಕೆಲವು ಆಟಗಾರರ ವಾರ್ಷಿಕ ವೇತನವೂ ಕಡಿಮೆ ಆಯಿತು.
ಪ್ರಸ್ತುತ ಬಿಸಿಸಿಐನ ಕೇಂದ್ರ ಒಪ್ಪಂದ ಪ್ರಕಾರ, ಎ ಗ್ರೇಡ್ ಆಟಗಾರರಿಗೆ 5 ಕೋಟಿ ರೂ. ಬಿ ಗ್ರೇಡ್ ಆಟಗಾರರಿಗೆ 3 ಕೋಟಿ ರೂ. ಹಾಗೂ ಸಿ ಗ್ರೇಡ್ ಆಟಗಾರರಿಗೆ 1 ಕೋಟಿ ರೂ. ವೇತನ ಸಿಗಲಿದೆ. ಅದರಂತೆ ಈ ಹಿಂದೆ ಎ+ ಗ್ರೇಡ್ನಲ್ಲಿ ಸ್ಥಾನ ಪಡೆದಿದ್ದ ಜಸ್ಪ್ರೀತ್ ಬುಮ್ರಾ ವರ್ಷಕ್ಕೆ 7 ಕೋಟಿ ರೂ. ವೇತನ ಪಡೆಯುತ್ತಿದ್ದರು. ಆದರೆ ಎ+ ಗ್ರೇಡ್ ಅನ್ನು ರದ್ದುಗೊಳಿಸಿದ ಬಳಿಕ ಎ ಗ್ರೇಡ್ನಲ್ಲಿ ಸ್ಥಾನ ಪಡೆದಿರುವ ಬುಮ್ರಾಗೆ 5 ಕೋಟಿ ರೂ. ವೇತನ ಸಿಗುತ್ತಿದೆ. ಅಂದರೆ ಬುಮ್ರಾ ವರ್ಷಕ್ಕೆ 2 ಕೋಟಿ ರೂ. ವೇತನ ಕಡಿಮೆ ಪಡೆಯಲಿದ್ದಾರೆ.
ಅಕ್ಷರ್, ಬುಮ್ರಾ ವೇತನ ಹೆಚ್ಚಳ
ಹೀಗಾಗಿ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಬುಮ್ರಾಗೆ ವಾರ್ಷಿಕವಾಗಿ ನೀಡುತ್ತಿರುವ ವೇತನವನ್ನು ಹೆಚ್ಚಿಸುವ ಬಗ್ಗೆ ಬಿಸಿಸಿಐ ಪರಿಶೀಲಿಸುತ್ತಿದೆ . ಬುಮ್ರಾ ಜೊತೆಗೆ ಟಿ20 ತಂಡದ ಉಪನಾಯಕ ಅಕ್ಷರ್ ಪಟೇಲ್ಗೂ ವೇತನ ಹೆಚ್ಚಿಸುವ ಸಾಧ್ಯತೆಗಳಿವೆ. ಪ್ರಸ್ತುತ ಅಕ್ಷರ್ ಪಟೇಲ್ ಗ್ರೇಡ್ ಸಿ ವಿಭಾಗದಲ್ಲಿದ್ದು, ಕೇವಲ 1 ಕೋಟಿ ರೂಪಾಯಿ ವೇತನ ಪಡೆಯುತ್ತಾರೆ. ಎರಡು ಟಿ20 ವಿಶ್ವಕಪ್ಗಳು ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡದ ಗೆಲುವಿನಲ್ಲಿ ಪಟೇಲ್ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ ಅವರ ಸಂಬಳ ಕಡಿಮೆಯಾಗಿರುವ ಬಗ್ಗೆ ಅನೇಕ ಕ್ರಿಕೆಟ್ ತಜ್ಞರು ಕಳವಳ ವ್ಯಕ್ತಪಡಿಸಿದ್ದರು, ಆದರೆ ಈಗ ಬಿಸಿಸಿಐ ಅವರ ಸಂಬಳವನ್ನು ಹೆಚ್ಚಿಸಬಹುದು.
IND vs SA: ಭಾರತೀಯ ಕ್ರಿಕೆಟ್ನಲ್ಲಿ ಈ ದಾಖಲೆ ಬರೆದ ಮೊದಲ ವೇಗಿ ಜಸ್ಪ್ರೀತ್ ಬುಮ್ರಾ
ಬಿಸಿಸಿಐ ನೂತನ ಕೇಂದ್ರ ಒಪ್ಪಂದ
- ‘ಎ’ ಗ್ರೇಡ್ನಲ್ಲಿ ಶುಭಮನ್ ಗಿಲ್, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಇದ್ದಾರೆ.
- ಬಿ ಗ್ರೇಡ್ನಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್, ಕುಲದೀಪ್ ಯಾದವ್, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಸಿರಾಜ್ ಮತ್ತು ವಾಷಿಂಗ್ಟನ್ ಸುಂದರ್ ಇದ್ದಾರೆ.
- ಗ್ರೇಡ್ ಸಿ ಯಲ್ಲಿ ಅಕ್ಷರ್ ಪಟೇಲ್, ರಿಂಕು ಸಿಂಗ್, ತಿಲಕ್ ವರ್ಮಾ, ಶಿವಂ ದುಬೆ, ಅರ್ಷದೀಪ್ ಸಿಂಗ್, ಸಂಜು ಸ್ಯಾಮ್ಸನ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಧ್ರುವ್ ಜುರೆಲ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ನಿತೀಶ್ ಕುಮಾರ್ ರೆಡ್ಡಿ, ಅಭಿಷೇಕ್ ಶರ್ಮಾ, ಸಾಯಿ ಸುದರ್ಶನ್, ರವಿ ಬಿಷ್ಣೋಯ್ ಮತ್ತು ರುತುರಾಜ್ ಗಾಯಕ್ವಾಡ್.