ವಾಣಿಜ್ಯ ಬಳಕೆ ಸಿಲಿಂಡರ್​ ಅಭಾವ: ಬೆಂಗಳೂರು ಹೋಟೆಲ್​​ಗಳಿಗೆ 150 ಕೋಟಿ ರೂ ನಷ್ಟ

ವಾಣಿಜ್ಯ ಬಳಕೆ ಸಿಲಿಂಡರ್​ ಅಭಾವ: ಬೆಂಗಳೂರು ಹೋಟೆಲ್​​ಗಳಿಗೆ 150 ಕೋಟಿ ರೂ ನಷ್ಟ

ಬೆಂಗಳೂರು, ಮಾರ್ಚ್​ 21: ಗಲ್ಫ್ ಯುದ್ಧದಿಂದ ಇರಾನ್ ಹೊರ್ಮುಝ್ ಜಲಸಂಧಿ ಮುಚ್ಚಿದೆ. ಭಾರತಕ್ಕೆ ಅಡುಗೆ ಅನಿಲ, ತೈಲ ಹೊತ್ತು ಬರ್ತಿದ್ದ 22 ಹಡಗುಗಳು ಇರಾನ್ ಹಿಡಿತದಲ್ಲಿವೆ. ಇದರಿಂದ ಕರ್ನಾಟಕ ಸೇರಿದಂತೆ ದೇಶದಾದ್ಯಂತೆ ಗ್ಯಾಸ್​ ಸಿಲಿಂಡರ್ ಕೊರತೆ ತಾಂಡವವಾಡುತ್ತಿದೆ. ವಾಣಿಜ್ಯ ಬಳಕೆ ಸಿಲಿಂಡರ್​ (Commercial Gas) ಅಭಾವದಿಂದ ಬೆಂಗಳೂರಿನ ಹೋಟೆಲ್‌ಗಳಿಗೆ 150 ಕೋಟಿ ರೂ ನಷ್ಟವಾಗಿದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಕಮರ್ಷಿಯಲ್ ಗ್ಯಾಸ್​ ಸಿಲಿಂಡರ್​​​ಗಳ ಸಮಸ್ಯೆಯಿಂದ ಎದುರಾಗಿರುವ ಸಂಕಷ್ಟ ಅಷ್ಟಿಷ್ಟಲ್ಲ. ಹೋಟೆಲ್​ ಸೇರಿದಂತೆ ಹಲವು ವಲಯಗಳ ಮೇಲೆ ಇದರ ಬಿಸಿ ತಟ್ಟಿದೆ. ಹೋಟೆಲ್​​ ಮಾಲೀಕರು ಗ್ಯಾಸ್​ ಸಿಲಿಂಡರ್​​ ಸಿಗದೇ ವಿಲ ವಿಲ ಎನ್ನುತ್ತಿದ್ದಾರೆ. ಹೋಟೆಲ್​​ ಮಾಲೀಕರು ಸೌದೆ ಒಲೆ ಮೊರೆ ಹೋಗಿದ್ದಾರೆ. ಜನರು ಕೂಡ ಇದರಿಂದಾಗಿ ಕಂಗಾಲಾಗಿದ್ದಾರೆ.

ಬೆಂಗಳೂರು ಹೋಟೆಲ್​​ಗಳಿಗೆ 150 ಕೋಟಿ ರೂ ನಷ್ಟ

ಈ ಬಗ್ಗೆ ಹೋಟೆಲ್​ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್​​ ಹೇಳಿಕೆ ನೀಡಿದ್ದು, ಗ್ಯಾಸ್​ ಅಭಾವದಿಂದ ಬೆಂಗಳೂರಲ್ಲಿ ನೂರಾರು ಹೋಟೆಲ್​​ಗಳು ಬಂದ್​ ಆಗಿವೆ. ಇದರಿಂದಾಗಿ ಕಳೆದ ವಾರವೇ ಹೋಟೆಲ್​​ಗಳಿಗೆ 100 ಕೋಟಿ ರೂ ನಷ್ಟವಾಗಿತ್ತು. ಈ ವಾರ 50 ಕೋಟಿ ರೂ ನಷ್ಟವಾಗಿದೆ. ಕಳೆದೆರಡು ವಾರದಲ್ಲಿ 150 ಕೋಟಿ ರೂ ನಷ್ಟವಾಗಿದೆ ಎಂದು ಹೇಳಿದ್ದಾರೆ.

ಒಂದು ಕೆಜಿ ಸೌದೆಗೆ 9 ರೂಪಾಯಿ

ಕಮರ್ಷಿಯಲ್ ಗ್ಯಾಸ್​ ಸಿಲಿಂಡರ್​​​ಗಳ ಅಭಾವದಿಂದಾಗಿ ಬೆಳಗಾವಿಯಲ್ಲಿ ಹೋಟೆಲ್​​ ಮಾಲೀಕರು ಸೌದೆ ಒಲೆ ಮೊರೆ ಹೋಗಿದ್ದಾರೆ. ಬಡಕಲ್ ಗಲ್ಲಿಯ ದುರ್ಗಾದೇವಿ ಖಾನಾವಳಿಯವರು ಸೌದೆ ಬಳಸಿ ಅಡುಗೆ ಮಾಡುತ್ತಿದ್ದಾರೆ. ಆದರೆ ಕೆಜಿ ಕಟ್ಟಿಗೆಗೆ 9 ರೂಪಾಯಿ ನೀಡ್ತಿದ್ದು, ದಿನಕ್ಕೆ 25 ಕೆಜಿ ಕಟ್ಟಿಗೆ ಬಳಕೆ ಆಗುತ್ತಿದೆ. ಅದು ಕೂಡ ನಮಗೆ ಲಾಸ್​​ ಅಂತ ಹೋಟೆಲ್ ಮಾಲೀಕರು ಅಳಲು ತೋಡಿಕೊಂಡಿದಿದ್ದಾರೆ.

ಇದನ್ನೂ ಓದಿ: ಹೋಟೆಲ್, ರೆಸ್ಟೋರೆಂಟ್​​ಗಳಿಗೆ ಗುಡ್​​ ನ್ಯೂಸ್​​ ನೀಡಿದ ಕೇಂದ್ರ: ಸೋಮವಾರದಿಂದ ರಾಜ್ಯಗಳಿಗೆ ಹೆಚ್ಚುವರಿ ಸಿಲಿಂಡರ್ ಪೂರೈಕೆ

ಕಳೆದ ವಾರವೂ ಶಿವಾಲಿಕ್ ಹಾಗೂ ನಂದಾದೇವಿ ಹೆಸರಿನ ಹಡುಗುಗಳು ಭಾರತಕ್ಕೆ ಬಂದಿದ್ವು. ಸುಮಾರು 92 ಸಾವಿರ ಮೆಟ್ರಿಕ್ ಟನ್ LPG ಹೊತ್ತು ತಂದಿದ್ವು. ಇಷ್ಟಾದ್ರೂ ಕರ್ನಾಟಕ ಸೇರಿದಂತೆ ದೇಶದಾದ್ಯಂತ ಗ್ಯಾಸ್ ಸಿಲಿಂಡರ್ ಅಭಾವ ಸೃಷ್ಟಿಯಾಗಿದೆ.

ವರದಿ: ನಟರಾಜ್​​ ಟಿವಿ9

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *