
ದರ್ಶನ್ (Darshan) ನಟನೆಯ ‘ಡೆವಿಲ್’ ಸಿನಿಮಾದ ಎದುರೇ ತಮ್ಮ ‘ಕರ್ನಾಟಕದ ಅಳಿಯ’ ಚಿತ್ರವನ್ನು ರಿಲೀಸ್ ಮಾಡುವುದಾಗಿ ಪ್ರಥಮ್ ಅವರು ಈ ಮೊದಲು ಸವಾಲು ಹಾಕಿದ್ದರು. ಆದರೆ ಆ ಸಿನಿಮಾ ರಿಲೀಸ್ ಆಗಲೇ ಇಲ್ಲ. ಯಾಕೆ ಎಂಬ ಪ್ರಶ್ನೆ ಇದೆ. ಅದಕ್ಕೆ ಪ್ರಥಮ್ ಅವರು ಉತ್ತರ ನೀಡಿದ್ದಾರೆ. ನಿಜವಾಗಿ ನಡೆದಿದ್ದು ಏನು ಎಂಬುದನ್ನು ಅವರು ವಿವರಿಸಿದ್ದಾರೆ. ‘ನೇರವಾಗಿ ಹೇಳುತ್ತೇನೆ, ಬಿಸ್ನೆಸ್ ಇನ್ನೂ ಆಗಿಲ್ಲ. ಚಿತ್ರೀಕರಣ ಆಗಿತ್ತು. ಕ್ಯಾಮೆರಾಮ್ಯಾನ್ ಮೆಮೋರಿ ಕಾರ್ಡ್ ಹಾಳು ಮಾಡಿದ್ದಾನೆ. ಬೇರೆಯವರಾಗಿದ್ದರೆ ದೊಡ್ಡ ಕಾಂಟ್ರವರ್ಸಿ ಆಗಿರುತ್ತಿತ್ತು. ರಮೇಶ್ ಭಟ್ ಅವರು ಸಮಾಧಾನದಿಂದ ಮಾತನಾಡಿದರು. ಹೊಸದಾಗಿ ಚಿತ್ರೀಕರಣ ಮಾಡಲಾಯಿತು. ಈ ಎಲ್ಲ ಕಾರಣಕ್ಕಾಗಿ ಕರ್ನಾಟಕದ ಅಳಿಯ ಸಿನಿಮಾ ಬಿಡುಗಡೆ ಆಗುವುದು ತಡವಾಯಿತು’ ಎಂದು ಪ್ರಥಮ್ (Pratham) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.