ಎಲ್ಲರೂ ಆಡಿದ ನಾಟಕಕ್ಕೆ ಮೂರ್ಖನಾದ ಜೆಡಿ; ಫೈನಲ್ ಜಡ್ಜ್​​ಮೆಂಟ್ ಕೊಡೋ ಎಚ್ಚರಿಕೆ

ಎಲ್ಲರೂ ಆಡಿದ ನಾಟಕಕ್ಕೆ ಮೂರ್ಖನಾದ ಜೆಡಿ; ಫೈನಲ್ ಜಡ್ಜ್​​ಮೆಂಟ್ ಕೊಡೋ ಎಚ್ಚರಿಕೆ

‘ಅಮೃತಧಾರೆ’ ಧಾರಾವಾಹಿಯಲ್ಲಿ (Amruthadhare Serial) ಈಗ ಮಹಾ ತಿರುವು ಎದುರಾಗಿದೆ. ಮಲ್ಲಿಯನ್ನು ಜಯದೇವ್ ಫೂಲ್ ಮಾಡಬೇಕು ಎಂದುಕೊಂಡಿದ್ದ. ಆದರೆ, ಅದು ಸಾಧ್ಯವಾಗಲೇ ಇಲ್ಲ. ಅಲ್ಲಿ ಆಗಿದ್ದೇ ಬೇರೆ. ಮೂರ್ಖರನ್ನಾಗಿ ಮಾಡುತ್ತೇನೆ, ಮೂರ್ಖರನ್ನಾಗಿ ಮಾಡುತ್ತೇನೆ ಎನ್ನುತ್ತಲೇ ಜೆಡಿಯೇ ದೊಡ್ಡ ಫೂಲ್ ಆಗಿದ್ದಾನೆ. ಈ ಸಂದರ್ಭದ ಪ್ರೋಮೋನ ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ. ಮುಂದೇನಾಗುತ್ತದೆ ಎಂಬ ಕುತೂಹಲ ಮೂಡಿದೆ.

‘ಅಮೃತಧಾರೆ’ ಧಾರಾವಾಹಿಯಲ್ಲಿ ತನ್ನ ಬಂಟನಾದ ಸುನಿಯನ್ನು ಜೆಡಿಯು ಮಲ್ಲಿ ಹಿಂದೆ ಬಿಟ್ಟಿದ್ದನು. ಪ್ರೀತಿಯ ನಾಟಕ ಆಡುವಂತೆ ಸೂಚನೆ ಕೊಟ್ಟಿದ್ದನು. ಇದನ್ನು ಸುನಿಲ್ ಗಂಭೀರವಾಗಿ ಸ್ವೀಕರಿಸಿದ್ದ. ಆದರೆ, ಅಲ್ಲಾಗಿದ್ದೇ ಬೇರೆ. ಈತ ಆರಂಭದಲ್ಲಿ ಜೆಡಿ ಹೇಳಿದಂತೆ ಕೇಳುತ್ತಿದ್ದ. ಮದುವೆ ಮಂಟಪದಿಂದ ಕೊನೆಯ ಕ್ಷಣದಲ್ಲಿ ಎದ್ದು ಬರೋದಾಗಿ ಸುನಿಗೆ ಜೆಡಿ ಸೂಚನೆ ನೀಡಿದ್ದ. ಇದಕ್ಕೆ ಸುನಿ ಒಪ್ಪಿಗೆ ಕೂಡ ಕೊಟ್ಟಿದ್ದ.

 

View this post on Instagram

 

A post shared by Zee Kannada (@zeekannada)

ಆದರೆ, ಕೊನೆಗೆ ಅಲ್ಲಾಗಿದ್ದೇ ಬೇರೆ. ಜೆಡಿಯ ಪ್ಲ್ಯಾನ್ ಸಂಪೂರ್ಣವಾಗಿ ಬದಲಾಗಿದೆ. ಸುನಿಯು ಮಲ್ಲಿಯನ್ನು ಮದುವೆ ಆಗಿ ಬಿಟ್ಟಿದ್ದಾನೆ. ಮಲ್ಲಿ ಎಲ್ಲರಿಂದಲೂ ಅವಮಾನ ಅನುಭವಿಸಬೇಕು ಎಂಬುದು ಜೆಡಿಯ ಪ್ಲ್ಯಾನ್ ಆಗಿತ್ತು. ಆದರೆ, ಈಗ ದೊಡ್ಡ ಪ್ಲ್ಯಾನ್ ಉಲ್ಟಾ ಆದಂತೆ ಆಗಿದೆ. ಇನ್ನು, ಇಷ್ಟಕ್ಕೆ ನಿಂತಿಲ್ಲ. ಜಯದೇವ್, ಗೌತಮ್​​ನಿಂದ ಎಚ್ಚರಿಕೆ ಎದುರಿಸಿದ್ದಾನೆ.

ಇದನ್ನೂ ಓದಿ: ಅಮೃತಧಾರೆ: ಹೆಣ್ಣಿನ ಕಣ್ಣೀರು ಯುದ್ಧದ ಆರಂಭ; ಜೆಡಿಗೆ ಮಲ್ಲಿಯ ಎಚ್ಚರಿಕೆ

ಮಲ್ಲಿ ಎಂದರೆ ಗೌತಮ್​​ಗೆ ಎಲ್ಲಿಲ್ಲದ ಪ್ರೀತಿ. ಆಕೆಯ ಜೀವನ ಸರಿಯಾದ ರೀತಿಯಲ್ಲಿ ಇರಬೇಕು ಎಂದು ಗೌತಮ್ ಹಾಗೂ ಭೂಮಿಕಾ ಕನಸು ಕಾಣುತ್ತಾ ಬರುತ್ತಿದ್ದರು. ಆ ಕನಸು ಈಡೇರಿದೆ. ಮಲ್ಲಿಯನ್ನು ಸುನಿ ವಿವಾಹ ಆಗಿರುವುದು ಧಾರಾವಾಹಿಗೆ ದೊಡ್ಡ ಟ್ವಿಸ್ಟ್ ಆಗಿದೆ. ಇನ್ನು, ಮಲ್ಲಿ ಬಾಳಿಗೆ ಕಲ್ಲು ಬಿದ್ದರೆ ವಾರ್ನಿಂಗ್ ಅಲ್ಲ, ನೇರವಾಗಿ ಜಡ್​ಜ್​​ಮೆಂಟ್ ಕೊಡೋದಾಗಿಯೂ ಜಯದೇವ್ ಅವನಿಗೆ ವಾರ್ನ್ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *