ಕನ್ನಡದ ಯುವ ನಟ ಸುಮುಖ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆರ್ಕಿಟೆಕ್ಟ್ ಮೈತ್ರಿ ಉಕಾ ಎಂಬುವವರ ಜೊತೆ ಸುಮುಖ್ ವಿವಾಹ ನಡೆದಿದೆ ಎಂಬುದು ವಿಶೇಷ.
ಸೆಲೆಬ್ರಿಟಿಗಳು, ಉದ್ಯಮಿಗಳು ಸಾಮಾನ್ಯವಾಗಿ ಡೆಸ್ಟಿನೇಷನ್ ವಿವಾಹ ಆಗೋಕೆ ಇಷ್ಟಪಡುತ್ತಾರೆ. ಇದಕ್ಕೆ ಸುಮುಖ್ ಕೂಡ ಹೊರತಾಗಿಲ್ಲ. ಅವರು ತಮ್ಮ ಕನಸಿನಂತೆ ಮದುವೆ ಆಗಿದ್ದಾರೆ.
ಸಾಮಾನ್ಯವಾಗಿ ಸೆಲೆಬ್ರಿಟಿ ವಿವಾಹ ಎಂದಾಗ ನೆನಪಾಗೋದು ರಾಜಸ್ಥಾನ. ಉದಯಪುರದಲ್ಲಿ ಸೆಲೆಬ್ರಿಟಿಗಳು ಮದುವೆ ಆಗುತ್ತಾರೆ. ಆದರೆ, ಇವರು ಮದುವೆ ಆಗಿದ್ದು ರಿಷಿಕೇಷದಲ್ಲಿ ಎಂಬುದು ವಿಶೇಷ.
ರಿಷಿಕೇಷದಲ್ಲಿ ಗಂಗಾ ನದಿ ಹರಿದು ಹೋಗಿದೆ. ಈ ನದಿಯ ತಟದಲ್ಲಿ ಅದ್ದೂರಿ ಮಂಟಪ ಹಾಕಲಾಗಿದೆ. ಅಲ್ಲಿ ಸುಮುಖ್ ಹಾಗೂಮೈತ್ರಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸುಮುಖ್ ಅವರ ವಿವಾಹದಲ್ಲಿ ಆಪ್ತರು ಹಾಗೂ ಕುಟುಂಬದವರು ಮಾತ್ರ ಭಾಗವಹಿಸಿದ್ದರು. ಇದೊಂದು ಅಪರೂಪದ ಮದುವೆ ಎಂದು ಅನಿಸಿಕೊಂಡಿದೆ. ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.
ಸುಮುಖ್ ಅವರು ‘ಮನದ ಕಡಲು’ ಸಿನಿಮಾದಲ್ಲಿ ನಟಿಸಿದರು. ಈ ಚಿತ್ರ ಕಳೆದ ವರ್ಷ ಮಾರ್ಚ್ 28ರಂದು ರಿಲೀಸ್ ಆಯಿತು. ಯೋಗರಾಜ್ ಭಟ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು.





