Sanju Samson: ನೀವು ನನ್ನ ‘ಅದೃಷ್ಟ’, ಪ್ರತಿ ಪಂದ್ಯಕ್ಕೂ ನೀವೇ ಬನ್ನಿ!

Sanju Samson: ನೀವು ನನ್ನ ‘ಅದೃಷ್ಟ’, ಪ್ರತಿ ಪಂದ್ಯಕ್ಕೂ ನೀವೇ ಬನ್ನಿ!

IPL 2026: ಐಪಿಎಲ್ 2026ರ ಕಣದಲ್ಲಿ ರನ್ ಬರ ಎದುರಿಸುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಸ್ಫೋಟಕ ಬ್ಯಾಟರ್ ಸಂಜು ಸ್ಯಾಮ್ಸನ್, ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ್ದಾರೆ. ಈ ಅಮೋಘ ಶತಕದ ಬೆನ್ನಲ್ಲೇ ಸಂಜು ಸ್ಯಾಮ್ಸನ್ ಮಾಜಿ ಕೋಚ್ ರವಿಶಾಸ್ತ್ರಿ ಅವರಲ್ಲಿ ವಿಶೇಷ ಮನವಿಯನ್ನು ಸಹ ಮಾಡಿದ್ದಾರೆ.

ಏಪ್ರಿಲ್ 11ರಂದು ಚೆಪಾಕ್​ನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಪಂದ್ಯದಲ್ಲಿ ಸಂಜು ಸ್ಯಾಮ್ಸನ್​ ಕೇವಲ 56 ಎಸೆತಗಳಲ್ಲಿ ಅಜೇಯ 115 ರನ್ ಸಿಡಿಸಿದ್ದರು.  ಈ ಇನಿಂಗ್ಸ್​ ನಂತರ ಸಂದರ್ಶನದಲ್ಲಿ ಕಾಮೆಂಟೇಟರ್ ರವಿಶಾಸ್ತ್ರಿ ಜೊತೆ ಮಾತನಾಡಿದ ಸಂಜು “ಸರ್, ನೀವು ನನಗೆ ಲಕ್ಕಿ ಚಾರ್ಮ್ ಇದ್ದಂತೆ. ದಯವಿಟ್ಟು ನನ್ನ ಪ್ರತಿ ಪಂದ್ಯಕ್ಕೂ ನೀವೇ ಬನ್ನಿ,” ಎಂದು ತಮಾಷೆಯಾಗಿ ವಿನಂತಿಸಿಕೊಂಡಿದ್ದಾರೆ. ಇಂತಹದೊಂದು ವಿನಂತಿಗೆ ಕಾರಣ ಸಂಜು ಸ್ಯಾಮ್ಸನ್​ ಅಬ್ಬರಿದಾಗ ರವಿ ಶಾಸ್ತ್ರಿ ಕಾಮೆಂಟ್ರಿ ಪ್ಯಾನೆಲ್​ನಲ್ಲಿರುವುದು.

ಸಂಜು ಸ್ಯಾಮ್ಸನ್ ಸತತ ಎರಡು ಟಿ20 ಅಂತರಾಷ್ಟ್ರೀಯ ಶತಕಗಳನ್ನು ಸಿಡಿಸಿದಾಗ ರವಿಶಾಸ್ತ್ರಿ ಅವರು ಕಾಮೆಂಟರಿ ತಂಡದ ಭಾಗವಾಗಿದ್ದರು. ವಿಶೇಷವೆಂದರೆ, ಹೈದರಾಬಾದ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಮೊದಲು ರವಿಶಾಸ್ತ್ರಿ ಅವರು ಸಂಜುಗೆ, “ನಿನಗೆ ಕೇವಲ ಒಂದು ದೊಡ್ಡ ಶತಕದ ಅಗತ್ಯವಿದೆ, ನಂತರ ಎಲ್ಲವೂ ಸರಿಹೋಗುತ್ತದೆ” ಎಂದು ಧೈರ್ಯ ತುಂಬಿದ್ದರು. ಅದರಂತೆ ಸಂಜು ಆ ಪಂದ್ಯದಲ್ಲಿ 111 ರನ್ ಸಿಡಿಸಿದ್ದರು.

ಇನ್ನು 2026ರ ವಿಶ್ವಕಪ್‌ನ ಈ ನಿರ್ಣಾಯಕ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅಜೇಯ 97 ರನ್​ಗಳಿಸಿ ತಂಡಕ್ಕೆ ಜಯ ತಂದುಕೊಟ್ಟಾಗ ರವಿಶಾಸ್ತ್ರಿ ಅವರು ಮೈದಾನದಲ್ಲಿದ್ದರು. ಸಂಜು ಅವರ ಈ ‘ಸ್ಪೆಷಲ್’ ಇನಿಂಗ್ಸ್ ಅನ್ನು ಶಾಸ್ತ್ರಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದರು.

ಇದೀಗ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಂಚುರಿ ಸಿಡಿಸಿದಾಗಲೂ ರವಿ ಶಾಸ್ತ್ರಿ ಕಾಮೆಂಟ್ರಿ ಮಾಡುತ್ತಿದ್ದರು. ಹೀಗಾಗಿಯೇ ಸಂಜು ಸ್ಯಾಮ್ಸನ್ ರವಿ ಶಾಸ್ತ್ರಿ ಅವರನ್ನು ಲಕ್ಕಿ ಚಾರ್ಮ್​ ಎಂದು ಕರೆದಿದ್ದಾರೆ. ಅಲ್ಲದೆ ನನ್ನ ಪ್ರತಿ ಪಂದ್ಯಕ್ಕೂ ನೀವೇ ಬನ್ನಿ ಎಂದು ತಮಾಷೆಯಾಗಿ ವಿನಂತಿಸಿಕೊಂಡಿದ್ದಾರೆ.

ಅಂದರೆ ಕಾಮೆಂಟ್ರಿ ಪ್ಯಾನೆಲ್​ನಲ್ಲಿ ನೀವಿದ್ದಾಗ ನನ್ನಿಂದ ದೊಡ್ಡ ಇನಿಂಗ್ಸ್ ಬರುತ್ತಿದೆ. ಹೀಗಾಗಿ ನೀವು ನಮ್ಮ ಪಂದ್ಯದ ವೇಳೆ ಕಾಮೆಂಟ್ರಿ ಮಾಡಿ, ನನ್ನಿಂದ ದೊಡ್ಡ ಇನಿಂಗ್ಸ್​ ಬರಬಹುದು ಎಂದು ಸಂಜು ಸ್ಯಾಮ್ಸನ್ ತಮಾಷೆ ಮಾಡಿದ್ದಾರೆ.

ಸಂಜು ಬಗ್ಗೆ ರವಿಶಾಸ್ತ್ರಿ ಮೆಚ್ಚುಗೆ:

ಕೇವಲ ಅದೃಷ್ಟವಷ್ಟೇ ಅಲ್ಲದೆ, ಸಂಜು ಸ್ಯಾಮ್ಸನ್ ಅವರ ಆಟದ ಶೈಲಿಯಲ್ಲೂ ದೊಡ್ಡ ಬದಲಾವಣೆ ಕಂಡಿದೆ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. “ಸಂಜು ಈಗ ಮಾನಸಿಕವಾಗಿ ಹೆಚ್ಚು ಬಲಿಷ್ಠರಾಗಿದ್ದಾರೆ. 2026ರ ಟಿ20 ವಿಶ್ವಕಪ್ ಯಶಸ್ಸಿನ ನಂತರ ಅವರ ಆಟದಲ್ಲಿ ಪ್ರಬುದ್ಧತೆ ಎದ್ದು ಕಾಣುತ್ತಿದೆ,” ಎಂದು ಶಾಸ್ತ್ರಿ ಇತ್ತೀಚಿನ ಐಸಿಸಿ ರಿವ್ಯೂ ಶೋನಲ್ಲಿ ಶ್ಲಾಘಿಸಿದ್ದರು.

ಇದನ್ನೂ ಓದಿ: VIDEO: ಚೆನ್ನೈನಲ್ಲಿ ಹೈಡ್ರಾಮಾ: ಅಂಪೈರ್​ ಜೊತೆ ನಿತೀಶ್ ರಾಣಾ ವಾಗ್ವಾದ!

ಇದೀಗ ರವಿ ಶಾಸ್ತ್ರಿ ಅವರ ಮುಂದೆಯೇ ಮತ್ತೊಂದು ಭರ್ಜರಿ ಶತಕ ಸಿಡಿಸುವ ಮೂಲಕ ಸಂಜು ಸ್ಯಾಮ್ಸನ್ ಮತ್ತೊಮ್ಮೆ ಮುಕ್ತಕಂಠದಿಂದ ಹೊಗಳಿಸಿಕೊಂಡಿರುವುದು ವಿಶೇಷ.

 

 

Source link

Leave a Reply

Your email address will not be published. Required fields are marked *