Headlines

ಹತ್ಯೆ ಯತ್ನವೋ ಅಥವಾ ರಾಜಕೀಯ ಸ್ಕಿಟ್? ಅಮೆರಿಕ ಘಟನೆಯ ಸುತ್ತ ಹರಿದಾಡುತ್ತಿದೆ ಆಧಾರರಹಿತ ಊಹೆಗಳ ಮಹಾಪೂರ – Kannada News | White House Incident: Assassination Attempt or Political Stunt? Washington Rumors Explored

ವಾಷಿಂಗ್ಟನ್, ಏಪ್ರಿಲ್ 27: ಅಮೆರಿಕದ ಶ್ವೇತಭವನ(WhiteHouse)ದಲ್ಲಿ ನಡೆದ ವರದಿಗಾರರ ಔತಣಕೂಟದ ಹೊರಗೆ ಗುಂಡಿನ ಸದ್ದು ಕೇಳಿಬಂದ ಎರಡನೇ ನಿಮಿಷಗಳಲ್ಲಿ ಅಮೆರಿಕದಲ್ಲಿ ಎರಡು ವಿಧವಾದ ಚರ್ಚೆ ಆರಂಭಗೊಂಡಿತ್ತು. ಒಂದು ಕಡೆ ಭದ್ರತಾ ಲೋಪದ ಬಗ್ಗೆ ಆತಂಕ ವ್ಯಕ್ತವಾದರೆ, ಮತ್ತೊಂದು ಕಡೆ ಇದು ಅವರೇ ಸೃಷ್ಟಿಸಿದ ನಾಟಕ ಎಂಬ ಮಾತುಗಳು ಕೇಳಿಬಂದಿತ್ತು. ಸಾಮಾಜಿಕ ಮಾಧ್ಯಮದ ಬಳಕೆದಾರರು ಪ್ರತಿಯೊಂದು ಚಲನವಲನವನ್ನೂ ಸೂಕ್ಷ್ಮವಾಗಿ ಗಮನಿಸಲು ಆರಂಭಿಸಿದರು. ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರ ಮುಖಭಾವದಿಂದ ಹಿಡಿದು, ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರನ್ನು ಅಧ್ಯಕ್ಷರಿಗಿಂತ ಮೊದಲು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದರ ಬಗ್ಗೆ ತೀವ್ರ ಚರ್ಚೆಗಳು ನಡೆದವು.

ಘಟನೆಗೆ ಕೆಲವೇ ಕ್ಷಣಗಳ ಮೊದಲು ಅಧ್ಯಕ್ಷರ ಜೊತೆಗಿದ್ದ ಪ್ರಸಿದ್ಧ ಮಾನಸಿಕ ತಜ್ಞ ಓಜ್ ಪರ್ಲ್‌ಮನ್ ಅವರ ಉಪಸ್ಥಿತಿಯೂ ಅನುಮಾನದ ಸುಳಿಗೆ ಸಿಲುಕಿತು. ಅವರು ಹಿಡಿದಿದ್ದ ಕಾಗದದ ತುಣುಕು ಏನೋ ರಹಸ್ಯ ಸಂಕೇತವಾಗಿತ್ತು ಎಂಬ ಸುಳ್ಳು ಸುದ್ದಿಗಳು ಹರಿದಾಡಿದವು.

ಆರೋಪಿ ಅಲೆನ್‌ನನ್ನು ಗುಂಡು ಹಾರಿಸದೆ ಜೀವಂತವಾಗಿ ಸೆರೆಹಿಡಿದಿದ್ದು ಹೇಗೆ ಎಂಬ ಪ್ರಶ್ನೆ ಆನ್‌ಲೈನ್‌ನಲ್ಲಿ ಕೇಳಿಬಂತು. ಆತನನ್ನು ಶರ್ಟ್ ಇಲ್ಲದ ಸ್ಥಿತಿಯಲ್ಲಿ ಬಂಧಿಸಿರುವ ಚಿತ್ರಗಳು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟವು. ಆತ ಕಮಲಾ ಹ್ಯಾರಿಸ್ ಅವರ ಪ್ರಚಾರಕ್ಕೆ ಸಣ್ಣ ದೇಣಿಗೆ ನೀಡಿದ್ದ ಎಂಬ ವರದಿಗಳು ರಿಪಬ್ಲಿಕನ್ ಬೆಂಬಲಿಗರಿಗೆ ಅಸ್ತ್ರವಾದರೆ, ಆತ ಯಾವ ಪಕ್ಷಕ್ಕೂ ಸೇರಿಲ್ಲ ಎಂಬ ಅಧಿಕೃತ ದಾಖಲೆಗಳು ಗೊಂದಲವನ್ನು ಮತ್ತಷ್ಟು ಹೆಚ್ಚಿಸಿದವು.

ಮತ್ತಷ್ಟು ಓದಿ: ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಭಾಷಣ ನಿಲ್ಲಿಸಿ ಬಂಕರ್‌ನತ್ತ ಓಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಕೆಲವು ರಾಜಕೀಯ ವಿಮರ್ಶಕರು ಈ ಘಟನೆಯನ್ನು ಬೇರೆ ಆಯಾಮದಲ್ಲಿ ನೋಡಿದರು. ಇರಾನ್ ಜೊತೆಗಿನ ಉದ್ವಿಗ್ನತೆಯಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಈ ನಾಟಕವಾಡಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದವು. ಇನ್ನು ಕೆಲವರು, ಹಳೆಯ ಹಿಲ್ಟನ್ ಹೋಟೆಲ್ ಬದಲಿಗೆ ಶ್ವೇತಭವನದಲ್ಲಿ ಹೊಸದಾದ, ಸುರಕ್ಷಿತವಾದ ‘ಬಾಲ್ ರೂಂ’ ನಿರ್ಮಿಸುವ ಟ್ರಂಪ್ ಅವರ ದೀರ್ಘಕಾಲದ ಹಠಕ್ಕೆ ಈ ಘಟನೆ ಬಲ ನೀಡಲಿದೆ ಎಂದು ವಿಶ್ಲೇಷಿಸಿದರು.

ಅಧಿಕೃತ ಸಂಸ್ಥೆಗಳು ಮತ್ತು ಸುದ್ದಿಗಳಿಗಿಂತ ಸೋಶಿಯಲ್ ಮೀಡಿಯಾ ಊಹೆಗಳಿಗೆ ಜನ ಮಾರುಹೋಗುತ್ತಿದ್ದಾರೆ.ಒಂದೇ ಘಟನೆಯನ್ನು ಎರಡು ಪಕ್ಷಗಳು ತಮ್ಮ ಲಾಭಕ್ಕೆ ತಕ್ಕಂತೆ ವಿಶ್ಲೇಷಿಸುತ್ತಿವೆ. ಸತ್ಯಾಂಶಗಳು ದೃಢೀಕರಣಗೊಳ್ಳುವ ಮೊದಲೇ ಸುಳ್ಳು ಸುದ್ದಿಗಳು ಜಾಗತಿಕ ಮಟ್ಟದಲ್ಲಿ ತಲುಪುತ್ತಿವೆ.

ವಾಷಿಂಗ್ಟನ್‌ನ ಈ ಘಟನೆಯು ಕೇವಲ ಒಬ್ಬ ವ್ಯಕ್ತಿಯ ಹತ್ಯೆ ಯತ್ನವಾಗಿ ಉಳಿಯದೆ, ಆಧುನಿಕ ಜಗತ್ತಿನಲ್ಲಿ ಮಾಹಿತಿ ಮತ್ತು ಸಂವಹನವು ಎದುರಿಸುತ್ತಿರುವ ಅತಿದೊಡ್ಡ ಸವಾಲಾಗಿ ಪರಿಣಮಿಸಿದೆ. ಸತ್ಯಾಂಶಗಳಿಗಿಂತ ಸಿದ್ಧಾಂತಗಳೇ ಮೇಲುಗೈ ಸಾಧಿಸುತ್ತಿರುವ ಈ ಕಾಲದಲ್ಲಿ ಜಾಗರೂಕತೆ ಅತ್ಯಗತ್ಯ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *