Headlines

ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ಸಿಎಂ ವಿಜಯ್ – Kannada News | Tamil Nadu CM Vijay meets rebel AIADMK leaders who are Supporting TVK ahead of floor test

ಚೆನ್ನೈ, ಮೇ 12: ತಮಿಳುನಾಡು ವಿಧಾನಸಭೆಯಲ್ಲಿ ನಾಳೆ ನಡೆಯಲಿರುವ ನಿರ್ಣಾಯಕವಾದ ಬಹುಮತ ಸಾಬೀತಿಗೂ ಮುನ್ನ ತಮಿಳುನಾಡಿನ ಮುಖ್ಯಮಂತ್ರಿ ಮತ್ತು ಟಿವಿಕೆ ಮುಖ್ಯಸ್ಥ ವಿಜಯ್ (CM Vijay) ಇಂದು ಎಐಎಡಿಎಂಕೆ ಬಂಡಾಯ ನಾಯಕರಾದ ಸಿ.ವಿ ಷಣ್ಮುಗಂ ಮತ್ತು ಎಸ್‌.ಪಿ ವೇಲುಮಣಿ ಅವರನ್ನು ಭೇಟಿ ಮಾಡಿದ್ದಾರೆ. ಈ ಬಣವು 30 ಶಾಸಕರ ಬೆಂಬಲವನ್ನು ಹೊಂದಿದ್ದು, ಇವರು ನಾಳೆಯ ವಿಶ್ವಾಸಮತಯಾಚನೆ ವೇಳೆ ಟಿವಿಕೆಗೆ ತನ್ನ ಬೆಂಬಲವನ್ನು ನೀಡುವುದಾಗಿ ಘೋಷಿಸಿರುವುದರಿಂದ ಈ ಭೇಟಿ ಹೆಚ್ಚಿನ ರಾಜಕೀಯ ಮಹತ್ವವನ್ನು ಪಡೆದುಕೊಂಡಿದೆ.

ಇಂದು ಮೊದಲ ಬಾರಿಗೆ ವಿಧಾನಸಭಾ ಅಧಿವೇಶನ ನಡೆದ ನಂತರ, ಟಿವಿಕೆ ನೇತೃತ್ವದ ಸರ್ಕಾರಕ್ಕೆ ತಮ್ಮ ಬೆಂಬಲವನ್ನು ನೀಡಿದ ಹಲವಾರು ಪಕ್ಷಗಳ ಕಚೇರಿಗಳಿಗೆ ಸಿಎಂ ವಿಜಯ್ ಭೇಟಿ ನೀಡಿದರು. ಕಪ್ಪು ಸೂಟ್ ಮತ್ತು ಬಿಳಿ ಶರ್ಟ್ ಧರಿಸಿ ವಿಜಯ್ ಎಐಎಡಿಎಂಕೆಯ ಸ್ಥಳೀಯ ಪಕ್ಷದ ಕಚೇರಿಗೆ ತೆರಳಿದರು. ಅಲ್ಲಿ ಷಣ್ಮುಗಂ ಮತ್ತು ವೇಲುಮಣಿ ಇಬ್ಬರೂ ಹಲವಾರು ಎಐಎಡಿಎಂಕೆ ನಾಯಕರೊಂದಿಗೆ ಹಾಜರಿದ್ದರು. ವಿಜಯ್ ಕಾರಿನಿಂದ ಇಳಿದ ತಕ್ಷಣ ಎಐಎಡಿಎಂಕೆ ನಾಯಕರು ಅವರನ್ನು ಹೂವಿನ ಹೂಗುಚ್ಛಗಳೊಂದಿಗೆ ಸ್ವಾಗತಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *