Headlines

ವಿಪಕ್ಷ ಬಿಜೆಪಿಯ ಸಮೀಕರಣ ಬದಲಿಸಲಿದ್ಯಾ ಸಿದ್ದರಾಮಯ್ಯ ರಾಜೀನಾಮೆ?: ಹೀಗೊಂದು ಲೆಕ್ಕಾಚಾರ

ವಿಪಕ್ಷ ಬಿಜೆಪಿಯ ಸಮೀಕರಣ ಬದಲಿಸಲಿದ್ಯಾ ಸಿದ್ಧರಾಮಯ್ಯ ರಾಜೀನಾಮೆ?Image Credit source: PTI

ಬೆಂಗಳೂರು, ಮೇ 29: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ (Siddaramaiah) ರಾಜೀನಾಮೆ ನೀಡಿರೋದು ರಾಜ್ಯ ರಾಜಕಾರಣದಲ್ಲಿ ಹತ್ತು ಹಲವು ಬದಲಾವಣೆಗಳಿಗೆ ನಾಂದಿ ಹಾಡಿದೆ. ನೂತನ ಮುಖ್ಯಮಂತ್ರಿಯ ಆಯ್ಕೆ, ಸಚಿವ ಸಂಪುಟ ಹೀಗೆ ನಾನಾ ಚರ್ಚೆಗಳಲ್ಲಿ ಕಾಂಗ್ರೆಸ್​​ ಹೈಕಮಾಂಡ್​​ ಇದ್ದರೆ ಇತ್ತ ಬಿಜೆಪಿ ಕೂಡ ತನ್ನದೇ ಆದ ತಂತ್ರ ಹೆಣೆಯಲು ಸಿದ್ಧತೆ ನಡೆಸಿದೆ. ಸಿದ್ದರಾಮಯ್ಯ ರಾಜೀನಾಮೆ ರಾಜ್ಯ ಬಿಜೆಪಿಯಲ್ಲಿನ ರಾಜಕೀಯ ಲೆಕ್ಕಾಚಾರ ಬದಲು ಮಾಡುವ ಸಾಧ್ಯತೆ ಇದ್ದು, ಜಾತಿ ಸಮೀಕರಣದ ಆಧಾರದಲ್ಲಿ ಕೆಲ ನಿರ್ಧಾರಗಳು ಹೊರಬರುವ ಸಾಧ್ಯತೆ ಬಗ್ಗೆ ಅಂದಾಜಿಸಲಾಗಿದೆ.

ಮುಖ್ಯಾಂಶಗಳು

  • ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಬಿಜೆಪಿ ಅಲರ್ಟ್​​
  • ಡಿಕೆಶಿ ಸಿಎಂ ಆದ್ರೆ ಭಾಜಪಾದಲ್ಲಿಯೂ ಬದಲಾವಣೆ ಫಿಕ್ಸ್​​?
  • ಜಾತಿ ಸಮೀಕರಣದಲ್ಲಿ ನಾಯಕತ್ವ ಹಂಚಿಕೆ ಬಗ್ಗೆ ಚಿಂತನೆ

ಇನ್ನು ಸಿದ್ದರಾಮಯ್ಯನವರ ರಾಜೀನಾಮೆ ಹಿನ್ನೆಲೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್​​ ನೇಮಕ ಬಹುತೇಕ ಕನ್ಫರ್ಮ್​​ ಆಗಿದೆ. ಹೀಗಾದಲ್ಲಿ ಸಿಎಂ ಮತ್ತು ವಿಪಕ್ಷ ನಾಯಕ ಇಬ್ಬರೂ ಒಂದೇ ಸಮುದಾಯದವರಾಗಲಿದ್ದಾರೆ. ಡಿ.ಕೆ.ಶಿವಕುಮಾರ್ ಮತ್ತು ಆರ್​​.ಅಶೋಕ್ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಕಾರಣ, ಕಾಂಗ್ರೆಸ್​ನಲ್ಲಿ ಅಧಿಕಾರ ಬದಲಾಗುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ಜಾತಿ ಸಮೀಕರಣ ನಡೆಯುವ ಸಾಧ್ಯತೆ ಇದೆ. ಲಿಂಗಾಯತ, ಒಕ್ಕಲಿಗ, ದಲಿತ ಸಮೀಕರಣದಲ್ಲಿ ನಾಯಕತ್ವ ಹಂಚಿಕೆ ಆಗಬಹುದೆಂಬ ಸುಳಿವು ಸಿಕ್ಕಿದೆ.

ಇದನ್ನೂ ಓದಿ:

ಒಬಿಸಿ, ಕುರುಬ ಸಮುದಾಯ ಫೋಕಸ್​​

ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ನಾಯಕರ ಕೊರತೆ ಎದುರಿಸುತ್ತಿರವ ಕಾರಣ ಒಬಿಸಿ ಮತ್ತು ಕುರುಬ ಸಮುದಾಯ ಫೋಕಸ್​ಗೆ ಬಿಜೆಪಿ ಮುಂದಾಗುವ ಸಾಧ್ಯತೆ ಇದೆ. 63 ಬಿಜೆಪಿ ಶಾಸಕರಲ್ಲಿ ಕೇವಲ 13 ಮಂದಿ ಒಬಿಸಿ ಸಮುದಾಯದವರಿದ್ದರೆ, 36 ಶಾಸಕರು ಮೇಲ್ವರ್ಗಕ್ಕೆ ಸೇರಿದವರು. ಆ ಪೈಕಿ 19 ಲಿಂಗಾಯತ, 11 ಒಕ್ಕಲಿಗ, 6 ಬ್ರಾಹ್ಮಣ ಶಾಸಕರನ್ನು ಬಿಜೆಪಿ ಹೊಂದಿದೆ. ರಾಜ್ಯದಲ್ಲಿ ಕುರುಬ ಸಮುದಾಯ ಮತಗಳು ಶೇ.7ರಿಂದ ಶೇ.8ರಷ್ಟಿದ್ದು, ಈಶ್ವರಪ್ಪ ಪಕ್ಷ ತ್ಯಜಿಸಿದ ಬಳಿಕ ಬಿಜೆಪಿಯಲ್ಲಿ ಕುರುಬ ನಾಯಕರ ಕೊರತೆ ಎದುರಾಗಿದೆ. ಭೈರತಿರನ್ನು ಲಾಂಚ್ ಮಾಡುವ ಪ್ರಯತ್ನದಲ್ಲಿ ಬಿಜೆಪಿ ಇತ್ತಾದರೂ ಆ ಕಾರ್ಯಕದಲ್ಲಿ ಬಿಜೆಪಿ ವಿಫಲವಾಗಿದೆ. ಹೀಗಾಗಿ ಸದ್ಯ ಲಿಂಗಾಯತ, ಒಕ್ಕಲಿಗ ಮತ್ತು ದಲಿತ ಸಮೀಕರಣದಲ್ಲಿ ನಾಯಕತ್ವ ಹಂಚಿಕೆ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:17 pm, Fri, 29 May 26

Source link

Leave a Reply

Your email address will not be published. Required fields are marked *