ಡಿಕೆ ಶಿವಕುಮಾರ್ ಸಂಪುಟಕ್ಕೆ ಹೈಕಮಾಂಡ್‌ನಿಂದ ‘ಏಜ್ ಬೇಸ್ಡ್ ಫಾರ್ಮುಲಾ’: ಸಚಿವಾಕಾಂಕ್ಷಿಗಳಲ್ಲಿ ಢವಢವ – Kannada News

ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್Image Credit source: tv9

ನವದೆಹಲಿ, ಜೂನ್ 2: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ (DK Shivakumar) ಅಧಿಕಾರ ಸ್ವೀಕರಿಸಲಿರುವ ಬೆನ್ನಲ್ಲೇ, ದೆಹಲಿಯಲ್ಲಿ ಸಚಿವ ಸಂಪುಟ ರಚನೆಯ ಕಸರತ್ತು ಅಂತಿಮ ಹಂತಕ್ಕೆ ತಲುಪಿದೆ. ನಿರ್ಗಮಿತ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ತಂತಮ್ಮ ಬೆಂಬಲಿಗರನ್ನು ಸಂಪುಟಕ್ಕೆ ಸೇರಿಸಲು ಪ್ರತ್ಯೇಕ ಪಟ್ಟಿ ನೀಡಿ ಕಸರತ್ತು ನಡೆಸುತ್ತಿರುವ ಬೆನ್ನಲ್ಲೇ, ಆಕಾಂಕ್ಷಿಗಳಿಗೆ ಕಾಂಗ್ರೆಸ್ ಹೈಕಮಾಂಡ್ ದಿಢೀರ್ ಬಿಗ್ ಶಾಕ್ ನೀಡಿದೆ. ಸಂಪುಟದಲ್ಲಿ ಯುವಕರು ಮತ್ತು ಹಿರಿಯ ನಾಯಕರ ನಡುವೆ ಸಮತೋಲನ ಕಾಯ್ದುಕೊಳ್ಳಲು ದೆಹಲಿ ನಾಯಕರು ಈ ಬಾರಿ ‘ಏಜ್ ಬೇಸ್ಡ್ ಫಾರ್ಮುಲಾ (ವಯೋಮಿತಿ ಆಧಾರಿತ ಸೂತ್ರ)’ ಎಂಬ ಹೊಸ ಸೂತ್ರವನ್ನು ಜಾರಿಗೆ ತಂದಿದ್ದಾರೆ.

ಮುಖ್ಯಾಂಶಗಳು

  • ಸಂಪುಟದಲ್ಲಿ ಯುವಕರು ಹಾಗೂ ಹಿರಿಯ ನಾಯಕರ ಬ್ಯಾಲೆನ್ಸ್​ಗೆ ಪ್ಲಾನ್.
  • ಹೈಕಮಾಂಡ್‌ನಿಂದ ಹೊಸ ವಯೋಮಿತಿ ಸೂತ್ರ.
  • 40 ವರ್ಷದೊಳಗಿನ ಯುವ ಶಾಸಕರಿಗೆ ಒಟ್ಟು 10 ಸಂಪುಟ ಸ್ಥಾನಗಳು ಹಾಗೂ ಹಿರಿಯರಿಗೆ 20 ಸ್ಥಾನಗಳನ್ನು ಮೀಸಲಿಡಲು ಪ್ಲ್ಯಾನ್.

ನಾಯಕರಲ್ಲಿ ಶುರುವಾದ ನಡುಕ, ಬಿರುಸಾದ ಲೆಕ್ಕಾಚಾರ

ಹೈಕಮಾಂಡ್‌ನ ಈ ಹೊಸ ಲೆಕ್ಕಾಚಾರದ ಪ್ರಕಾರ, 40 ವರ್ಷದೊಳಗಿನ ಯುವ ಶಾಸಕರಿಗೆ ಸಂಪುಟದಲ್ಲಿ 10 ಸ್ಥಾನಗಳನ್ನು ಮೀಸಲಿಡಲು ನಿರ್ಧರಿಸಲಾಗಿದೆ. ಇನ್ನು 50 ರಿಂದ 70 ವರ್ಷದೊಳಗಿನ ಹಿರಿಯ ಮತ್ತು ಅನುಭವಿ ಶಾಸಕರಿಗೆ 20 ಸ್ಥಾನಗಳನ್ನು ನೀಡಲು ವರಿಷ್ಠರು ಮುಂದಾಗಿದ್ದಾರೆ. ಈ ದಿಢೀರ್ ಸೂತ್ರದಿಂದಾಗಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ದೆಹಲಿಗೆ ದಂಡಯಾತ್ರೆ ನಡೆಸಿ ಬೀಡುಬಿಟ್ಟಿರುವ ಅನೇಕ ಮಧ್ಯ ವಯಸ್ಕ ಹಾಗೂ ಹಿರಿಯ ಆಕಾಂಕ್ಷಿಗಳಲ್ಲಿ ತೀವ್ರ ಆತಂಕ ಶುರುವಾಗಿದೆ.

ಇದನ್ನೂ ಓದಿ: ಸಚಿವ ಸಂಪುಟ ರಚನೆಗೆ ಕಾಂಗ್ರೆಸ್ ಹೈಕಮಾಂಡ್ ಕಸರತ್ತು: ವರಿಷ್ಠರಿಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪ್ರತ್ಯೇಕ ಪಟ್ಟಿ!

ಪ್ರಭಾವಿ ನಾಯಕರಾದ ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್, ಡಾ. ಜಿ. ಪರಮೇಶ್ವರ್ ಅವರಂತಹ ಹಿರಿಯರ ಹೆಸರಿನ ಜೊತೆಗೆ ಯುವ ಶಾಸಕರಾದ ಪ್ರದೀಪ್ ಈಶ್ವರ್, ಯತೀಂದ್ರ ಸಿದ್ದರಾಮಯ್ಯ ಮುಂತಾದವರಿಗೂ ಮಂತ್ರಿಭಾಗ್ಯ ಒಲಿಯುವ ಸಾಧ್ಯತೆ ದಟ್ಟವಾಗಿದೆ. ಸದ್ಯ ಈ ಹೊಸ ಸೂತ್ರದ ಬೆನ್ನಲ್ಲೇ ಯಾರಿಗೆ ಸ್ಥಾನ ಸಿಗಲಿದೆ, ಯಾರು ಕೈಬಿಡಲಿದ್ದಾರೆ ಎಂಬ ಹೊಸ ಲೆಕ್ಕಾಚಾರ ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *