Headlines

ಧರ್ಮಶಾಲಾದಲ್ಲಿ ನಿಲ್ಲದ ಮಳೆ; ಫಲಿತಾಂಶ ನಿರ್ಧರಿಸಲು ಕನಿಷ್ಠ ಎಷ್ಟು ಓವರ್​ಗಳನ್ನು ಆಡಬೇಕು? – Kannada News | India vs Afghanistan ODI: Rain Delays Dharamshala Match; Check Rules for Minimum Overs, Refunds

ಭಾರತ ಹಾಗೂ ಅಫ್ಘಾನಿಸ್ತಾನ (India vs Afghanistan) ನಡುವಿನ ಏಕದಿನ ಸರಣಿ ಇಂದಿನಿಂದ ಆರಂಭವಾಗಿದೆ. ಸರಣಿಯ ಮೊದಲ ಪಂದ್ಯ ಧರ್ಮಶಾಲಾದಲ್ಲಿ ನಡೆಯಬೇಕಿತ್ತು. ಆದರೆ ಮಳೆಯಿಂದಾಗಿ ಪಂದ್ಯವನ್ನು ಇದುವರೆಗೂ ಆರಂಭಿಸಲು ಸಾಧ್ಯವಾಗಿಲ್ಲ.ಈ ಮೊದಲೇ ನಿಗದಿಪಡಿಸಿದಂತೆ ಪಂದ್ಯದ ಟಾಸ್ ಮಧ್ಯಾಹ್ನ 1ಗಂಟೆಗೆ ನಡೆಯಬೇಕಿತ್ತು. ನಂತರ ಪಂದ್ಯ 1:30ಕ್ಕೆ ಆರಂಭವಾಗಬೇಕಿತ್ತು. ಆದರೆ ಮಳೆ ಟಾಸ್​ ನಡೆಸುವುದಕ್ಕೂ ಅವಕಾಶ ಮಾಡಿಕೊಟ್ಟಿಲ್ಲ. ಹೀಗಾಗಿ ಆಟಗಾರರು ಮತ್ತು ಅಭಿಮಾನಿಗಳು ಮಳೆ ನಿಲ್ಲುವುದಕ್ಕಾಗಿ ದೇವರಲ್ಲಿ ಮೊರೆ ಇಡುತ್ತಿದ್ದಾರೆ. ಅದೃಷ್ಟವಶಾತ್ ಮಳೆ ನಿಂತು ಪಂದ್ಯ ತಡವಾಗಿ ಆರಂಭವಾದರೆ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲು ಉಭಯ ತಂಡಗಳು ಕನಿಷ್ಠ ಎಷ್ಟು ಓವರ್‌ಗಳನ್ನು ಆಡಬೇಕು?. ಒಂದು ವೇಳೆ ಮಳೆಯಿಂದ ಪಂದ್ಯ ನಡೆಯದೆ ಹೋದರೆ ಟಿಕೆಟ್ ಖರೀದಿಸಿದವರಿಗೆ ಹಣ ವಾಪಸ್ ಸಿಗುತ್ತದೆಯೇ? ಈ ಬಗ್ಗೆ ನಿಯಮ ಏನು ಹೇಳುತ್ತದೆ ಎಂಬುದನ್ನು ನೋಡುವುದಾದರೆ..

ಕನಿಷ್ಠ ಎಷ್ಟು ಓವರ್‌ಗಳನ್ನು ಆಡಬೇಕು?

ಈ ಪಂದ್ಯಕ್ಕೆ ಕಟ್-ಆಫ್ ಸಮಯ ಸರಿಸುಮಾರು ಸಂಜೆ 6:30. ಇದರರ್ಥ ಸಂಜೆ 6:30 ರ ನಂತರ ಮಳೆ ನಿಂತರೆ, ಪಂದ್ಯವನ್ನು ಪ್ರಾರಂಭಿಸಲಾಗುವುದಿಲ್ಲ. ಈ ಸಮಯದೊಳಗೆ ಮಳೆ ನಿಂತು ಪಂದ್ಯ ಆರಂಭಕ್ಕೆ ಮೈದಾನ ಸಿದ್ಧವಾದರೆ ಪಂದ್ಯ ಆರಂಭವಾಗಲಿದೆ. ಸಂಜೆ 6:30 ರೊಳಗೆ ಪಂದ್ಯ ಆರಂಭವಾದರೆ ಉಭಯ ತಂಡಗಳಿಗೆ ತಲಾ ಎಷ್ಟು ಓವರ್ ಸಿಗುತ್ತದೆ ಎಂಬುದನ್ನು ನೋಡುವುದಾದರೆ..

ನಿಯಮಗಳ ಪ್ರಕಾರ, ಮಳೆ ಅಥವಾ ಇನ್ನಾವುದೇ ಕಾರಣದಿಂದಾಗಿ ಪಂದ್ಯಕ್ಕೆ ಅಡ್ಡಿ ಉಂಟಾದರೆ, ಫಲಿತಾಂಶ ನಿರ್ಧಾರವಾಗಬೇಕೆಂದರೆ ಉಭಯ ತಂಡಗಳ ನಡುವೆ ಕನಿಷ್ಠ 20 ಓವರ್‌ಗಳ ಆಟವಾದರೂ ನಡೆಯಬೇಕು. ಇದರರ್ಥ ಸಂಜೆ 6:30 ಕ್ಕಿಂತ ಮೊದಲು ಪಂದ್ಯ ಶುರುವಾದರೆ, ಉಭಯ ತಂಡಗಳು ತಲಾ 20 ಓವರ್‌ಗಳ ಪಂದ್ಯವನ್ನು ಆಡಲಿವೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಅಂಪೈರ್‌ಗಳು ಪಂದ್ಯವನ್ನು ರದ್ದುಗೊಳಿಸುವ ತೀರ್ಮಾನಕ್ಕೆ ಬರಲಿದ್ದಾರೆ. ಇದರರ್ಥ ಸಂಜೆ 6:30 ರಷ್ಟರಲ್ಲಿ ಪಂದ್ಯ ಆರಂಭವಾಗದಿದ್ದರೆ, ಪಂದ್ಯ ರದ್ದಾಗಲಿದೆ.

ಸೂಪರ್ ಓವರ್ ಆಡಿಸಲಾಗುತ್ತದೆಯೇ?

ವಾಸ್ತವವಾಗಿ ಏಕದಿನ ಸ್ವರೂಪಕ್ಕೆ ಈ ನಿಯಮ ಅನ್ವಯವಾಗುವುದಿಲ್ಲ. ನಿರ್ದಿಷ್ಟವಾಗಿ ಹೇಳುವುದಾದರೆ, ದ್ವಿಪಕ್ಷೀಯ ಸರಣಿಯಲ್ಲಿ ಪಂದ್ಯ ರದ್ದಾದರೆ ಸೂಪರ್ ಓವರ್ ಇರುವುದಿಲ್ಲ. ಐಸಿಸಿ ಈವೆಂಟ್‌ಗಳಲ್ಲಿ ನಾಕೌಟ್ ಪಂದ್ಯಗಳಲ್ಲಿ ಮಾತ್ರ ಈ ನಿಯಮವನ್ನು ಬಳಸಲಾಗುತ್ತದೆ. ಏಕದಿನ ಪಂದ್ಯಗಳಲ್ಲಿ, ಪಂದ್ಯ ಟೈ ಆದಾಗ ಮಾತ್ರ ಸೂಪರ್ ಓವರ್ ನಿಯಮನ್ನು ಬಳಸಲಾಗುತ್ತದೆ. ಇದರರ್ಥ ಧರ್ಮಶಾಲಾದಲ್ಲಿ ಮಳೆ ನಿಂತರೂ ಒಂದೇ ಒಂದು ಚೆಂಡು ಆಡದಿದ್ದರೆ, ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ.

IND vs AFG: ಭಾರತ- ಅಫ್ಘನ್ ನಡುವಿನ ಮೊದಲ ಏಕದಿನ ಪಂದ್ಯ ಎಲ್ಲಿ, ಎಷ್ಟು ಗಂಟೆಗೆ ಆರಂಭ?

ಟಿಕೆಟ್ ಖರೀದಿಸಿದವರಿಗೆ ಹಣ ವಾಪಸ್ ಆಗುತ್ತಾ?

ಧರ್ಮಶಾಲಾದಲ್ಲಿ ಮಳೆ ನಿಂತು ಪಂದ್ಯ ಆರಂಭವಾಗಿ ಒಂದು ಓವರ್ ಅಥವಾ ಒಂದು ಎಸೆತವನ್ನು ಬೌಲ್ ಮಾಡಿದ ಬಳಿಕ ಮತ್ತೆ ಮಳೆಬಂದು ಪಂದ್ಯ ರದ್ದಾದರೆ, ಟಿಕೆಟ್ ಖರೀದಿಸಿ ಪಂದ್ಯ ನೋಡಲು ಬಂದವರಿಗೆ ಟಿಕೆಟ್ ಹಣ ಸಿಗುವುದಿಲ್ಲ. ಇದರರ್ಥ ಅಭಿಮಾನಿಗಳು ಖಾಲಿ ಕೈಯಲ್ಲಿ ವಾಪಸ್ ಹೋಗಬೇಕಾಗುತ್ತದೆ. ಒಂದು ವೇಳೆ ಮಳೆ ನಿಂತರೂ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ ಆಗ ಪೂರ ಟಿಕೆಟ್ ಹಣ ವಾಪಸ್ ಸಿಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:59 pm, Sat, 13 June 26

Source link

Leave a Reply

Your email address will not be published. Required fields are marked *