Headlines

ಮಹಿಳೆಯರ ಕಷ್ಟ ಕೇಳೋಕೆ ಎಲ್ಲರೂ ಇರ್ತಾರೆ, ಆದ್ರೆ ಪುರುಷರ ನೋವು ಕೇಳೋರ ಯಾರು? – Kannada News | “Men Also Face Cruelty”: Karnataka Witnessing Formation of a National Mens Rights Protection Committee.

ಮಂಡ್ಯ, ಜು.4: ಜಿಲ್ಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಪುರುಷರ ಹಿತರಕ್ಷಣಾ ಸಮಿತಿ ಎಂಬ ಹೊಸ ಸಂಸ್ಥೆ ರಚನೆಯಾಗಿದೆ. ಮಹಿಳೆಯರಿಗೆ ಯಾವುದೇ ರೀತಿಯ ತೊಂದರೆಯಾದಾಗ ಮಾಧ್ಯಮ, ಪೊಲೀಸ್ ಮತ್ತು ಸಾರ್ವಜನಿಕರ ಗಮನ ತಕ್ಷಣವೇ ಸೆಳೆಯುತ್ತದೆ. ಆದರೆ, ಪುರುಷರ ಮೇಲೆ ನಡೆಯುವ ದೌರ್ಜನ್ಯ ಅಥವಾ ಕಿರುಕುಳಕ್ಕೆ ಅಷ್ಟೊಂದು ಗಮನ ಸಿಗುತ್ತಿಲ್ಲ ಎಂದು ಈ ಸಮಿತಿಯ ಸದಸ್ಯರು ಮತ್ತು ಮಾಜಿ ಎಂಎಲ್ಸಿ ಹೆಚ್. ವಿಶ್ವನಾಥ್ ವಿಷಾದ ವ್ಯಕ್ತಪಡಿಸಿದ್ದಾರೆ. ರಜಿನಿ ರಾಜ್ ಅವರು ಈ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಪುರುಷರ ಹಕ್ಕುಗಳನ್ನು ರಕ್ಷಿಸುವುದು ಮತ್ತು ಅವರಿಗೆ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವುದು ಈ ಸಮಿತಿಯ ಮುಖ್ಯ ಧ್ಯೇಯವಾಗಿದೆ. ಮಹಿಳೆಯರಿಂದ ಪುರುಷರ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಇತ್ತೀಚೆಗೆ ಮೈಸೂರು, ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ವರದಿಯಾದ ಕೆಲವು ಘಟನೆಗಳನ್ನು ಉಲ್ಲೇಖಿಸಿ, ಪೊಲೀಸರು ಪುರುಷರ ದೂರುಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆರೋಪಿಸಲಾಗಿದೆ. ಈ ಸಮಿತಿಯು ಪುರುಷರಿಗೆ ಆಗುವ ಅನ್ಯಾಯವನ್ನು ಎತ್ತಿ ಹಿಡಿದು, ಅದಕ್ಕೆ ಪರಿಹಾರ ಒದಗಿಸಲು ಶ್ರಮಿಸಲಿದೆ. ಮಾಧ್ಯಮಗಳು ಈ ಪ್ರಯತ್ನಕ್ಕೆ ಬೆಂಬಲ ನೀಡುವಂತೆ ಸಮಿತಿ ಮನವಿ ಮಾಡಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *