ಬೆಂಗಳೂರು, ಜುಲೈ 08: ಜಿಬಿಎ ನಿರ್ಲಕ್ಷ್ಯದಿಂದ ಉಂಟಾಗುತ್ತಿದ್ದ ಭಾರೀ ಅನಾಹುತದಿಂದ ಕಾರು ಚಾಲಕ ಪಾರಾಗಿರುವ ಘಟನೆ ಬೆಂಗಳೂರಿನ ಓಕಳಿಪುರಂನಲ್ಲಿ ನಡೆದಿದೆ. ರಾಜೀವ್ ಗಾಂಧಿ ಅಷ್ಟ ಪಥ ರೈಲ್ವೆ ಬ್ರಿಡ್ಜ್ ಕೆಳಗಿರುವ ಗುಂಡಿಯಲ್ಲಿ ಕಾರಿನ ಚಕ್ರ ಸಿಲುಕಿದ್ದು, ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೂನ್ 1ರಂದು ಇದೇ ಗುಂಡಿಯ ಬಗ್ಗೆ TV9ನಲ್ಲಿ ಸುದ್ದಿ ಪ್ರಸಾರವಾಗಿತ್ತು. ಆದರೆ ಗುಂಡಿ ಬಗ್ಗೆ ನಿರ್ಲಕ್ಷ್ಯವನ್ನು ಜಿಬಿಎ ಮುಂದುವರಿಸಿದ ಪರಿಣಾಮ, ಅನಾಹುತಗಳು ನಡೆಯುತ್ತಲೇ ಇವೆ. ಇನ್ನೆಷ್ಟು ಅನಾಹುತಗಳಾದ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದು, ತಕ್ಷಣ ರಸ್ತೆ ದುರಸ್ತಿಗೆ ಒತ್ತಾಯಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.