Headlines

Prasada in Hinduism: ಪೂಜೆಯ ನಂತರ ಪ್ರಸಾದ ವಿತರಿಸುವುದು ಏಕೆ ಮುಖ್ಯ? ಇಲ್ಲಿದೆ ಭಗವದ್ಗೀತೆ ಸಾರುವ ಅಸಲಿ ಮಹತ್ವ! – Kannada News | Prasada in Hinduism: Spiritual Significance and Benefits of Divine Offerings

ಪೂಜೆಯ ನಂತರ ಪ್ರಸಾದ ವಿತರಿಸುವುದು ಏಕೆ ಮುಖ್ಯ?Image Credit source: Getty Images

ಹಿಂದೂ ಧರ್ಮದಲ್ಲಿ ಪೂಜೆ-ಪುನಸ್ಕಾರಗಳಿಗೆ ತನ್ನದೇ ಆದ ಕಟ್ಟುನಿಟ್ಟಿನ ನಿಯಮಗಳಿವೆ. ಅವುಗಳಲ್ಲಿ ಅತ್ಯಂತ ಪ್ರಮುಖವಾದದ್ದು ಪೂಜೆಯ ಕೊನೆಯಲ್ಲಿ ದೇವರಿಗೆ ನೈವೇದ್ಯವನ್ನು ಅರ್ಪಿಸುವುದು ಮತ್ತು ನಂತರ ಅದನ್ನು ‘ಪ್ರಸಾದ’ದ ರೂಪದಲ್ಲಿ ಎಲ್ಲರಿಗೂ ವಿತರಿಸುವುದು. ಪೂಜೆ ಮುಗಿದ ನಂತರ ಪ್ರಸಾದವನ್ನು ಇತರರಿಗೆ ಹಂಚಿ, ತಾವೂ ಸೇವಿಸಿದಾಗ ಮಾತ್ರ ಆ ಪೂಜೆಯು ಸಂಪೂರ್ಣ ಫಲವನ್ನು ನೀಡುತ್ತದೆ ಎಂದು ನಂಬಲಾಗಿದೆ. ಪ್ರಸಾದದ ಸ್ವೀಕಾರದಿಂದ ಮಾನಸಿಕ ಶಾಂತಿ ಮಾತ್ರವಲ್ಲದೆ, ದೈಹಿಕ ಕಾಯಿಲೆಗಳೂ ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ. ಶ್ರೀಮದ್ ಭಗವದ್ಗೀತೆಯಲ್ಲೂ ಪ್ರಸಾದದ ಮಹತ್ವವನ್ನು ವಿಶೇಷವಾಗಿ ಒತ್ತಿಹೇಳಲಾಗಿದೆ. ಅಷ್ಟಕ್ಕೂ ಪ್ರಸಾದ ಎಂದರೇನು? ಅದರ ಆಧ್ಯಾತ್ಮಿಕ ಹಿನ್ನೆಲೆ ಏನು? ಎಂಬ ಸಂಪೂರ್ಣ ವಿವರ ಇಲ್ಲಿದೆ.

ಹಿಂದೂ ಸಂಪ್ರದಾಯದಲ್ಲಿ ‘ಪ್ರಸಾದ’ ಎಂದರೇನು?

ಸನಾತನ ಸಂಪ್ರದಾಯದಲ್ಲಿ, ಭಕ್ತರು ದೇವರಿಗೆ ಸಂಪೂರ್ಣ ಭಕ್ತಿ, ಪ್ರೀತಿ ಮತ್ತು ಶುದ್ಧತೆಯಿಂದ ಅರ್ಪಿಸುವ ಪವಿತ್ರ ಆಹಾರವನ್ನು ‘ನೈವೇದ್ಯ’ ಎನ್ನಲಾಗುತ್ತದೆ. ದೇವರಿಗೆ ಅರ್ಪಿಸಿದ ನಂತರ ಅದೇ ಆಹಾರವು ದೇವರ ಆಶೀರ್ವಾದವಾಗಿ ಬದಲಾಗುತ್ತದೆ, ಅದನ್ನೇ ‘ಪ್ರಸಾದ’ ಎನ್ನಲಾಗುತ್ತದೆ. ಧಾರ್ಮಿಕ ನಿಯಮಗಳನ್ನು ಪಾಲಿಸಿ ಅತ್ಯಂತ ಮಡಿ ಹಾಗೂ ಭಕ್ತಿಯಿಂದ ಸಿದ್ಧಪಡಿಸಿದ ನೈವೇದ್ಯವನ್ನು ಮಾತ್ರ ದೇವರು ಪ್ರೀತಿಯಿಂದ ಸ್ವೀಕರಿಸುತ್ತಾನೆ.

ಮಾನಸಿಕ ಶಾಂತಿ ಮತ್ತು ಆಧ್ಯಾತ್ಮಿಕ ಶಕ್ತಿಯ ಮೂಲ:

ಪೂಜೆಯ ಸಮಯದಲ್ಲಿ ದೇವರಿಗೆ ನೈವೇದ್ಯ ಅರ್ಪಿಸುವಾಗ ಪಠಿಸುವ ಮಂತ್ರಗಳು ಆ ಆಹಾರದಲ್ಲಿ ಸಕಾರಾತ್ಮಕ ಕಂಪನಗಳನ್ನು ತುಂಬುತ್ತವೆ. ಇದರಿಂದಾಗಿ ಪ್ರಸಾದವು ಕೇವಲ ಸಾಮಾನ್ಯ ಆಹಾರವಾಗಿರದೆ, ಆಧ್ಯಾತ್ಮಿಕ ಶಕ್ತಿಯ ಕೇಂದ್ರವಾಗುತ್ತದೆ. ಇದನ್ನು ಸ್ವೀಕರಿಸುವುದರಿಂದ ಮನಸ್ಸಿನಲ್ಲಿರುವ ನಕಾರಾತ್ಮಕ ಆಲೋಚನೆಗಳು ದೂರವಾಗಿ, ಅಪಾರ ಮಾನಸಿಕ ಶಾಂತಿ ದೊರೆಯುತ್ತದೆ ಹಾಗೂ ವ್ಯಕ್ತಿಯ ಆಧ್ಯಾತ್ಮಿಕ ಬೆಳವಣಿಗೆಗೆ ದಾರಿಯಾಗುತ್ತದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಭಗವದ್ಗೀತೆ ಸಾರುವ ಪ್ರಸಾದದ ಮಹಿಮೆ:

ಶ್ರೀಮದ್ ಭಗವದ್ಗೀತೆಯ ಮೂರನೇ ಅಧ್ಯಾಯದ ೧೩ನೇ ಶ್ಲೋಕದಲ್ಲಿ ಭಗವಾನ್ ಶ್ರೀಕೃಷ್ಣನು ಪ್ರಸಾದದ ಮಹತ್ವವನ್ನು ಹೀಗೆ ವಿವರಿಸಿದ್ದಾನೆ:

“ಯಜ್ಞಶಿಷ್ಟಾಶಿನಃ ಸಂತೋ ಮುಚ್ಯಂತೇ ಸರ್ವಕಿಲ್ಬಿಷೈಃ |
ಭುಂಜತೇ ತೇ ತ್ವಘಂ ಪಾಪ ಯೇ ಪಚಂತ್ಯಾತ್ಮಕಾರಣಾತ್ ||”

ಈ ಶ್ಲೋಕದ ಅರ್ಥ: ಯಜ್ಞ ಅಥವಾ ಪೂಜೆಯ ಮೂಲಕ ದೇವರಿಗೆ ಮೊದಲು ಅರ್ಪಿಸಿ, ನಂತರ ಉಳಿದ ಆಹಾರವನ್ನು (ಪ್ರಸಾದ) ಸೇವಿಸುವ ಸಜ್ಜನರು ಎಲ್ಲಾ ರೀತಿಯ ಪಾಪಗಳಿಂದ ಮುಕ್ತರಾಗುತ್ತಾರೆ. ಆದರೆ, ಯಾರು ದೇವರಿಗೆ ಅರ್ಪಿಸದೆ ಕೇವಲ ತಮ್ಮ ಸ್ವಾರ್ಥಕ್ಕಾಗಿ ಅಥವಾ ತಮಗೋಸ್ಕರ ಮಾತ್ರ ಆಹಾರವನ್ನು ಬೇಯಿಸಿ ತಿನ್ನುತ್ತಾರೋ, ಅವರು ಪಾಪವನ್ನೇ ಉಣ್ಣುತ್ತಾರೆ ಎಂದರ್ಥ.

ಪ್ರಸಾದ ವಿತರಣೆಯು ನಮ್ಮಲ್ಲಿರುವ ಸ್ವಾರ್ಥವನ್ನು ದೂರ ಮಾಡಿ, ಹಂಚಿ ಉಣ್ಣುವ ಉದಾತ್ತ ಗುಣವನ್ನು ಕಲಿಸುತ್ತದೆ. ಆದ್ದರಿಂದಲೇ, ಯಾವುದೇ ಪೂಜೆಯ ನಂತರ ಪ್ರಸಾದವನ್ನು ಮರೆಯದೇ ಇತರರಿಗೆ ವಿತರಿಸಿ, ತಾವೂ ಭಕ್ತಿಯಿಂದ ಸ್ವೀಕರಿಸುವುದು ಧರ್ಮದ ದೃಷ್ಟಿಯಿಂದ ಅತ್ಯಗತ್ಯವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:30 am, Wed, 15 July 26

Source link

Leave a Reply

Your email address will not be published. Required fields are marked *