ಇಂದು 2026ರ ಜುಲೈ 28, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸದ ಶುಕ್ಲ ಪಕ್ಷದ ಚತುರ್ದಶಿ, ಪೂರ್ವಾಷಾಢ ನಕ್ಷತ್ರ ಆಗಿದ್ದು, ರಾಹುಕಾಲವು ಮಧ್ಯಾಹ್ನ 3:35 ರಿಂದ ಸಂಜೆ 5:10 ರವರೆಗೆ ಇರುತ್ತದೆ. ಶುಭಕಾಲವು ಬೆಳಿಗ್ಗೆ 10:50 ರಿಂದ ಮಧ್ಯಾಹ್ನ 12:26 ರವರೆಗೆ ಇರುತ್ತದೆ. ಈ ದಿನ ಸುಬ್ರಮಣ್ಯ ಮತ್ತು ಹನುಮನ ಆರಾಧನೆಗೆ ವಿಶೇಷ ಮಹತ್ವವಿದೆ. ಕುಜ ದೋಷ, ಸಂತಾನ ಸಮಸ್ಯೆಗಳು, ಕಣ್ಣು ಮತ್ತು ಚರ್ಮದ ಸಮಸ್ಯೆಗಳಿಗೆ ಈ ದಿನದ ಆರಾಧನೆ ಪರಿಹಾರ ನೀಡುತ್ತದೆ. ನಾಳೆ ಗುರು ಪೌರ್ಣಿಮಾ ಇರುವ ಕಾರಣ, ಇಂದು ಸಂಕಲ್ಪ ಕೈಗೊಳ್ಳಲು ಉತ್ತಮ ದಿನವಾಗಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ತಿಳಿಸಿದ್ದು, ಮೇಷಾದಿ 12 ರಾಶಿಗಳ ದಿನ ಭವಿಷ್ಯವನ್ನು ವಿವರಿಸಿದ್ದಾರೆ.