Headlines

ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್: ಎಚ್ಚರಿಕೆ ನೀಡಿ ಎಸಿಪಿ, ಇನ್ಸ್​​​​​ಪೆಕ್ಟರ್ ವಿರುದ್ಧದ​​​​​​ ತನಿಖೆ ಕ್ಲೋಸ್ – Kannada News | Bengaluru Chinnaswamy Stadium Stampede Case: department enquiry Stopped Agaunst ACP And inspector

ಬೆಂಗಳೂರು, (ಆಗಸ್ಟ್ 14): ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸರ ವಿರುದ್ಧ ಜಂಟಿ ಇಲಾಖಾ ವಿಚಾರಣೆ ಪೂರ್ಣಗೊಂಡಿದ್ದು, ಎಚ್ಚರಿಕೆ ನೀಡಿ ಜಂಟಿ ಇಲಾಖೆ ವಿಚಾರಣೆ ಮುಕ್ತಾಯಗೊಳಿಸಲಾಗಿದೆ. ಎಸಿಪಿ ಬಾಲಕೃಷ್ಣ, ಇನ್ಸ್ಪೆಕ್ಟರ್ ಗಿರೀಶ್ ವಿರುದ್ಧದ ಇಲಾಖೆ ವಿಚಾರಣೆ ಅಂತ್ಯವಾಗಿದ್ದು, ಇಬ್ಬರು ಪೊಲೀಸರ ಲಿಖಿತ ಸಮಜಾಯಿಷಿಗೆ ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಸಮಜಾಯಿಷಿ ಒಪ್ಪಿ ಎಚ್ಚರಿಕೆ ನೀಡಿ ವಿಚಾರಣೆ ಮುಕ್ತಾಯಗೊಳಿಸಲಾಗಿದೆ.

ಸೇವಾವಧಿಯಲ್ಲಿ ಮತ್ತೆ ಇಂತ ಘಟನೆ ಮರುಕಳಿಸದಂತೆ ಎಚ್ಚರಿಕೆ ಜೊತೆಗೆ ನಿವೃತ್ತ ನ್ಯಾಯಾಧೀಶ ಜಾನ್ ಮೈಕಲ್ ಖುನ್ಹಾ ಮತ್ತು ಬೆಂಗಳೂರು ಡಿಸಿ ಮ್ಯಾಜಿಸ್ಟೇರಿಯಲ್ ತನಿಖೆ ವರದಿ ಹಾಗೂ ಡಿಜಿ & ಐಜಿಪಿ ಅಭಿಪ್ರಾಯ ಆಧರಿಸಿ ವಿಚಾರಣೆ ಮುಕ್ತಾಯ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *