Headlines

ಇವ್ನೆಂಥಾ ಮಗ, ಹೆತ್ತ ತಂದೆ ತಾಯಿಯನ್ನು ಹೊಡೆದು ಕೊಂದು, ದೇಹಗಳನ್ನು ಕತ್ತರಿಸಿ ನದಿಗೆಸೆದ ಮಗ – Kannada News | Jaunpur: Engineer Son Kills Parents, Chops Bodies Over Muslim Wife and Alimony

ಮಗ ಹಾಗೂ ಕೊಲೆಯಾದ ಪೋಷಕರು Image Credit source: NDTV

ಜೌನ್​ಪುರ, ಡಿಸೆಂಬರ್ 18: ಮಗನೊಬ್ಬ ಹೆತ್ತ ತಂದೆ-ತಾಯಿಯನ್ನೇ ಕೊಲೆ (Murder)ಮಾಡಿ ದೇಹಗಳನ್ನು ಕತ್ತರಿಸಿ ನದಿಗೆ ಎಸೆದಿರುವ ಭಯಾನಕ ಘಟನೆ ಉತ್ತರ ಪ್ರದೇಶದ ಜೌನ್ಪುರದಲ್ಲಿ ನಡೆದಿದೆ. ಕಾಣೆಯಾದ ದಂಪತಿಯ ಹುಡುಕಾಟವು ಪೊಲೀಸರನ್ನು ಅವಳಿ ಕೊಲೆವರೆಗೆ ಕೊಂಡೊಯ್ದಿತ್ತು. ತಂದೆಯ ಹಠಮಾರಿತನ ಹಾಗೂ ಮಗನ ಕೋಪ ಹೇಗೆ ಒಂದು ದುರಂತಕ್ಕೆ ಕಾರಣಯಿತು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ. ಎಂಜಿನಿಯರ್ ಆಗಿರುವ ಅಂಬೇಶ್ ತನ್ನ ತಂದೆ ಶ್ಯಾಮ್ ಬಹದ್ದೂರ್(62), ತಾಯಿ ಬಬಿತಾ(60) ಅವರನ್ನು ಕೊಲೆ ಮಾಡಿ, ಗರಗಸದಿಂದ ದೇಹಗಳನ್ನು ಕತ್ತರಿಸಿ ನದಿಗೆ ಎಸೆದ ಆರೋಪದ ಮೇಲೆ ಬಂಧಿಸಿದ್ದಾರೆ.

ಅಂಬೇಷ್ ಮತ್ತು ಆತನ ಹೆತ್ತವರ ನಡುವೆ ಮುಸ್ಲಿಂ ಪತ್ನಿಯ ವಿಷಯವಾಗಿ ಜಗಳ ನಡೆಯುತ್ತಿತ್ತು, ಅವರು ಆಕೆಯನ್ನು ಮನೆಯೊಳಗೆ ಸೇರಿಸಲು ನಿರಾಕರಿಸಿದ್ದರು. ಅಂಬೇಷ್ ಮತ್ತು ಆತನ ಪತ್ನಿ ಅಂತಿಮವಾಗಿ ಬೇರೆಯಾಗಲು ನಿರ್ಧರಿಸಿದ್ದರು. ಮತ್ತು ಜೀವನಾಂಶ ಪಾವತಿಸಲು ಅವರಿಗೆ ಹಣದ ಅಗತ್ಯವಿತ್ತು. ಆತ ತನ್ನ ತಂದೆಯನ್ನು ಕೇಳಿದ್ದ, ಆದರೆ ಅವರು ನಿರಾಕರಿಸಿದ್ದಾಗಿ ಹೇಳಲಾಗಿದೆ. ಇದು ಅವರ ಕೊನೆಯ ಜಗಳಕ್ಕೆ ಕಾರಣವಾಯಿತು, ಅದು ಎರಡು ಸಾವುಗಳಲ್ಲಿ ಕೊನೆಗೊಂಡಿತು.

ಡಿಸೆಂಬರ್ 13 ರಂದು, ಅಂಬೇಷ್ ಅವರ ಸಹೋದರಿ ವಂದನಾ, ಜೌನ್‌ಪುರದ ಜಫರಾಬಾದ್ ಪೊಲೀಸ್ ಠಾಣೆಯಲ್ಲಿ ಪೋಷಕರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಅವರ ಪೋಷಕರು ಮತ್ತು ಸಹೋದರ ಕಾಣೆಯಾಗಿದ್ದಾರೆ ಎಂದು ಅವರು ಹೇಳಿದ್ದರು.

ನಿವೃತ್ತ ರೈಲ್ವೆ ಉದ್ಯೋಗಿ ಶ್ಯಾಮ್ ಬಹದ್ದೂರ್ ಮತ್ತು ಅವರ ಪತ್ನಿ ಬಬಿತಾ ಅವರಿಗೆ ಮೂವರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ . ಮಗ ಅಂಬೇಶ್ ಸುಮಾರು ಐದು ವರ್ಷಗಳ ಹಿಂದೆ ಮುಸ್ಲಿಂ ಮಹಿಳೆಯನ್ನು ವಿವಾಹವಾಗಿದ್ದ. ಅವರ ಪೋಷಕರು ಈ ವಿವಾಹವನ್ನು ಒಪ್ಪಲಿಲ್ಲ ಮತ್ತು ತಮ್ಮ ಮುಸ್ಲಿಂ ಸೊಸೆಯನ್ನು ತಮ್ಮ ಮನೆ ಒಳಗೆ ಬರಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ತಂದೆ ಶ್ಯಾಮ್ ಬಹದ್ದೂರ್ ಹೆಂಡತಿಯಿಂದ ದೂರಾಗುವಂತೆ ಕೇಳುತ್ತಲೇ ಇದ್ದರು ಎಂದು ಅಂಬೇಶ್ ಹೇಳಿದ್ದಾರೆ. ಕೊನೆಗೆ, ಆಕೆ ಒಪ್ಪಿಕೊಂಡು 5 ಲಕ್ಷ ರೂಪಾಯಿ ಜೀವನಾಂಶ ಕೇಳಿದ್ದಳು.

ಮತ್ತಷ್ಟು ಓದಿ: ದೆಹಲಿ: 48 ಸುತ್ತು ಗುಂಡು ಹಾರಿಸಿ ಇಬ್ಬರು ಸಹೋದರರ ಹತ್ಯೆ, ಬೈಕ್​ನಲ್ಲಿ ಬಂದ ದುಷ್ಕರ್ಮಿಗಳಿಂದ ಕೃತ್ಯ

ಹಣಕ್ಕಾಗಿ ಜಗಳ ಮತ್ತು 2 ಕೊಲೆ

ತನ್ನ ಹೆತ್ತವರ ಒತ್ತಾಯದ ಮೇರೆಗೆ ಅಂಬೇಶ್ ತನ್ನ ಮದುವೆಯನ್ನು ಕೊನೆಗೊಳಿಸಲು ಒಪ್ಪಿಕೊಂಡಿದ್ದ. ಜೀವನಾಂಶಕ್ಕಾಗಿ 5 ಲಕ್ಷ ರೂ. ಬೇಕಾಗಿತ್ತು. ಎರಡು ತಿಂಗಳಿನಿಂದ ಜೌನ್‌ಪುರದಲ್ಲಿ ವಾಸಿಸುತ್ತಿದ್ದ ಆತ ಡಿಸೆಂಬರ್ 8 ರಂದು ತನ್ನ ತಂದೆಯ ಬಳಿ ಸಹಾಯ ಮಾಡುವಂತೆ ಕೇಳಿಕೊಂಡಿದ್ದ. ಶ್ಯಾಮ್ ಬಹದ್ದೂರ್ ನಿರಾಕರಿಸಿದ್ದರು ಮತ್ತು ಇದು ಅಂಬೇಶ್ ಮತ್ತು ಅವನ ಹೆತ್ತವರ ನಡುವೆ ಜಗಳಕ್ಕೆ ಕಾರಣವಾಯಿತು. ಒಂದು ಹಂತದಲ್ಲಿ, ಅಂಬೇಶ್ ತನ್ನ ತಾಯಿ ಬಬಿತಾಳಿಗೆ ರುಬ್ಬುವ ಕಲ್ಲಿನಿಂದ ಹೊಡೆದಿದ್ದ, ಇದನ್ನು ನೋಡಿ ಶ್ಯಾಮ್ ಕೂಗಿಕೊಂಡಾಗ ಅವರ ತಲೆಗೂ ಹೊಡೆದಿದ್ದಾನೆ. ಸ್ವಲ್ಪ ಸಮಯದ ನಂತರ ಇಬ್ಬರೂ ಸಾವನ್ನಪ್ಪಿದ್ದಾರೆ.

ತನ್ನ ಹೆತ್ತವರನ್ನು ಕೊಂದ ನಂತರ, ಅಂಬೇಶ್ ಸಾಕ್ಷ್ಯಗಳನ್ನು ನಾಶಮಾಡಲು ಮುಂದಾಗಿದ್ದ. ಶವಗಳನ್ನು ವಿಲೇವಾರಿ ಮಾಡಲು ಅವನು ದೊಡ್ಡ ಚೀಲವನ್ನು ಹುಡುಕಲು ಪ್ರಾರಂಭಿಸಿದ್ದ, ಆದರೆ ಅದು ಸಿಗಲಿಲ್ಲ. ಗ್ಯಾರೇಜ್‌ನಲ್ಲಿ ಕೆಲವು ಸಣ್ಣ ಚೀಲಗಳು ಇದ್ದವು, ಇದಕ್ಕಾಗಿ ಆತ ಶವಗಳನ್ನು ತುಂಡುಗಳಾಗಿ ಕತ್ತರಿಸಿ ಚೀಲಕ್ಕೆ ತುಂಬಿ  ಮುಂಜಾನೆ ನದಿಗೆ ಎಸೆದಿದ್ದ.

ನಂತರ ಅವನು ತನ್ನ ಸಹೋದರಿ ವಂದನ್ ಗೆ ಕರೆ ಮಾಡಿ, ಅವರ ಹೆತ್ತವರು ಜಗಳವಾಡಿ ಮನೆಯಿಂದ ಹೊರಗೆ ಹೋಗಿದ್ದಾರೆ ಮತ್ತು ಅವರನ್ನು ಹುಡುಕಲು ಹೋಗುತ್ತಿರುವುದಾಗಿ ತಿಳಿಸಿ, ನಂತರ ತನ್ನ ಫೋನ್ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದ. ವಂದನಾಗೆ ಕರೆ ಮಾಡಿದ ಆರು ದಿನಗಳ ನಂತರ ಅಂಬೇಶ್ ಕಾಣೆಯಾಗಿದ್ದ. ಈ ಸಮಯದಲ್ಲಿ, ಅವನು ಎಲ್ಲೆಡೆ ಸುತ್ತಾಡುತ್ತಾ ತನ್ನ ಫೋನ್ ಅನ್ನು ಆಫ್ ಮಾಡಿಕೊಂಡಿದ್ದ. ಡಿಸೆಂಬರ್ 14 ರಂದು, ಅವನು ಇದ್ದಕ್ಕಿದ್ದಂತೆ ಜಾನ್‌ಪುರಕ್ಕೆ ಹಿಂತಿರುಗಿದ್ದ.ಬಳಿಕ ಪೊಲೀಸರ ತನಿಖೆ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Source link

Leave a Reply

Your email address will not be published. Required fields are marked *