Headlines

ಗಿಲ್ಲಿ ಬಡವನಾ ಶ್ರೀಮಂತನಾ? ಮುತ್ತಿನಂಥ ಮಾತು ಹೇಳಿದ ಸೂರಜ್ – Kannada News | Bigg Boss Kannada 12: Sooraj talks about criticism against Gilli

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಮುಗಿದಿದೆ. ಗಿಲ್ಲಿ ಶೋ ಗೆದ್ದು ವಿನ್ನರ್ ಎನಿಸಿಕೊಂಡಿದ್ದಾರೆ. ಆದರೆ ಗಿಲ್ಲಿ ಗೆದ್ದಿರುವುದು ಕೆಲವರಿಗೆ ಅರಗಿಸಿಕೊಳ್ಳಲಾಗಿಲ್ಲ. ಶೋ ಮುಗಿದ ಬಳಿಕ ಅಶ್ವಿನಿ ಅವರು ಗಿಲ್ಲಿಯ ಗೆಲುವನ್ನೇ ಪ್ರಶ್ನೆ ಮಾಡಿದ್ದಾರೆ. ಗಿಲ್ಲಿ ತಾನು ಬಡವನಂತೆ ನಾಟಕ ಮಾಡಿದ್ದಾನೆ, ಆದರೆ ಆತ ಬಡವ ಅಲ್ಲ ಎಂಬಿತ್ಯಾದಿ ಟೀಕೆಗಳನ್ನು ಮಾಡಿದ್ದಾರೆ. ಇದೀಗ ಅದೇ ಸೀಸನ್​​ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಹೋಗಿ ಚೆನ್ನಾಗಿಯೇ ಆಟ ಆಡಿದ ಸೂರಜ್ ಅವರು ಈ ವಿವಾದದ ಬಗ್ಗೆ ಟಿವಿ9 ಜೊತೆಗೆ ಮಾತನಾಡಿದ್ದು, ಗಿಲ್ಲಿಯ ಬಗ್ಗೆ, ಆತನ ಹಿನ್ನೆಲೆ ಬಗ್ಗೆ ಬರುತ್ತಿರುವ ಟೀಕೆ, ಮೂದಲಿಕೆಗಳಿಗೆ ಸರಿಯಾದ ಉತ್ತರವನ್ನೇ ನೀಡಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

Leave a Reply

Your email address will not be published. Required fields are marked *