Headlines

nagaraj11081993

ಕಿಚ್ಚನ ಕಿಚಾಯಿಸಿದ ಡಾಗ್ ಸತೀಶ್​​ಗೆ ವಿನಯ್-ರಜತ್ ಖಡಕ್ ವಾರ್ನಿಂಗ್ – Kannada News | Bigg Boss Vinay Gowda and Rajath warning to Dog Satish

ಡಾಗ್ ಸತೀಶ್, ಬಿಗ್​​ಬಾಸ್ (Bigg Boss) ಬಂದ ಮೇಲೆ ಹೆಚ್ಚು ಜನಪ್ರಿಯರಾಗಿದ್ದಾರೆ. ಬಿಗ್​​ಬಾಸ್ ಇಂದ ಹೊರಬಂದ ಬಳಿಕ ಡಾಗ್ ಸತೀಶ್ ಒಳ್ಳೆಯ ಟ್ರೋಲ್ ಸರಕಾಗಿದ್ದಾರೆ. ಅವರ ಸುಳ್ಳುಗಳು, ಅವರ ಒಣಪ್ರತಿಷ್ಟೆ, ತೋರಿಕೆಯ ಸಿರಿವಂತಿಕೆ, ಸ್ವಹೊಗಳಿಕೆ ಎಲ್ಲವೂ ಟ್ರೋಲರ್​​ಗಳಿಗೆ ವಸ್ತುವಾಗಿದೆ. ಆದರೆ ಸತೀಶ್ ಮಾತ್ರ, ತಮ್ಮ ಶ್ರೇಷ್ಠತೆಯ ವ್ಯಸನವನ್ನು ಮುಂದುವರೆಸಿರುವುದು ಮಾತ್ರವೇ ಅಲ್ಲದೆ, ಇತರರನ್ನು ಕ್ಷುಲ್ಲಕವಾಗಿ ಕಂಡು ಹೇಳಿಕೆಗಳನ್ನು ನೀಡುವುದು ಮುಂದುವರೆಸಿದ್ದಾರೆ. ಇದೀಗ ಡಾಗ್ ಸತೀಶ್ ಅವರು ಸುದೀಪ್ ಅವರನ್ನು ಕಿಚಾಯಿಸುವ ಪ್ರಯತ್ನ ಮಾಡಿದ್ದು, ಸುದೀಪ್ ಆಪ್ತರುಗಳಾದ ವಿನಯ್…

Read More

ಪ್ರಯಾಣಿಕರ ಗಮನಕ್ಕೆ! ಇಸ್ರೇಲ್​​-ಇರಾನ್ ಯುದ್ಧ ಹಿನ್ನೆಲೆ ಕೆಂಪೇಗೌಡ ಏರ್‌ಪೋರ್ಟ್‌ನಿಂದ ವಿಮಾನ ಹಾರಾಟ ರದ್ದು – Kannada News | Israel Iran war: Some Flights cancelled from bangaluru Kempegowda Airport

ಕೆಂಪೇಗೌಡ ಏರ್‌ಪೋರ್ಟ್‌Image Credit source: Airport Technology ದೇವನಹಳ್ಳಿ, ಫೆಬ್ರವರಿ 28: ಅಮೆರಿಕ ಮತ್ತು ಇಸ್ರೇಲ್, ಇರಾನ್ ಮೇಲೆ ದಾಳಿ (Israel-Iran Conflict) ಶುರು ಮಾಡಿವೆ. ಇರಾನ್​ ಸಹ ಅಮೆರಿಕ, ಇಸ್ರೇಲ್ ದಾಳಿಗೆ ಪ್ರತ್ಯುತ್ತರ ಕೊಡುತ್ತಿದೆ. ಅಮೆರಿಕ ಸೇನಾ ನೆಲೆಗಳಿದ್ದ ಅರಬ್​ ರಾಷ್ಟ್ರಗಳ ಮೇಲೆ ಮಿಸೈಲ್ ದಾಳಿ ನಡೆಸಿದೆ. ಅಲ್ಲಿಗೆ ಮಧ್ಯ ಪ್ರಾಚ್ಯದಲ್ಲಿ ಯುದ್ಧ ಶುರುವಾಗಿದೆ. ಸದ್ಯ ಈ ಯುದ್ಧ ಆತಂಕಕ್ಕೆ ಕಾರಣವಾಗಿದೆ. ಎಲ್ಲೆಡೆ ವಿಮಾನಗಳ ಹಾರಾಟ ರದ್ದು (Flight Cancel) ಮಾಡಲಾಗಿದೆ. ಇತ್ತ ಕೆಂಪೇಗೌಡ ಏರ್‌ಪೋರ್ಟ್‌ನಿಂದ…

Read More

ಇರಾನ್ ಮೇಲಿನ ವೈಮಾನಿಕ ದಾಳಿಯ ಮೊದಲ ವಿಡಿಯೋ ರಿಲೀಸ್ ಮಾಡಿದ ಇಸ್ರೇಲ್ – Kannada News | Israel releases first video of Airstrikes on Iran as part of Operation Roaring Lion

ಜೆರುಸಲೇಂ, ಫೆಬ್ರವರಿ 28: ಇಸ್ರೇಲಿ ರಕ್ಷಣಾ ಪಡೆಗಳು (IDF) ಇರಾನ್ (Iran) ಮೇಲೆ ವೈಮಾನಿಕ ದಾಳಿ ನಡೆಸಿದ ಮೊದಲ ವಿಡಿಯೋವನ್ನು ಬಿಡುಗಡೆ ಮಾಡಿದೆ. ಈ ಹೊಸ ವಿಡಿಯೋ ಯುನೈಟೆಡ್ ಸ್ಟೇಟ್ಸ್ (US) ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ ಕ್ಷಣವನ್ನು ತೋರಿಸಿದೆ. ಆದರೆ, ಈ ವಿಡಿಯೋದಲ್ಲಿ ಈ ದಾಳಿಯನ್ನು ಎಲ್ಲಿ ನಡೆಸಲಾಯಿತು ಎಂಬುದು ಸ್ಪಷ್ಟವಾಗಿಲ್ಲ. ಇಸ್ರೇಲ್ ಆರಂಭಿಸಿದ ‘ಆಪರೇಷನ್ ರೋರಿಂಗ್ ಲಯನ್‌’ನ ಭಾಗವಾಗಿ ನಡೆದ ವೈಮಾನಿಕ ದಾಳಿಯ ಕಾರ್ಯಾಚರಣೆ ಇದಾಗಿದೆ. ಈ ದಾಳಿಗಳಲ್ಲಿ ಇರಾನ್‌ನ…

Read More

ಪ್ರೆಗ್ನೆನ್ಸಿಯಲ್ಲಿ ಚಹಾ ಕುಡಿಯುವುದು ಸುರಕ್ಷಿತವೇ? ಇದು ಅಸಿಡಿಟಿ ಹೆಚ್ಚಿಸುತ್ತದೆಯೇ ತಿಳಿದುಕೊಳ್ಳಿ – Kannada News | Is Tea Safe in Pregnancy?

ಗರ್ಭಾವಸ್ಥೆಯ (Pregnancy) ಸಮಯದಲ್ಲಿ ಆಹಾರ ಪದ್ಧತಿಗೆ ವಿಶೇಷ ಗಮನ ನೀಡುವುದು ಅತ್ಯಂತ ಅಗತ್ಯ. ಏಕೆಂದರೆ ಈ ಅವಧಿಯಲ್ಲಿ ಮಹಿಳೆಯ ದೇಹವು ತನ್ನಿಗಷ್ಟೇ ಅಲ್ಲದೆ ಗರ್ಭದಲ್ಲಿರುವ ಶಿಶುವಿಗೂ ಪೋಷಣೆಯನ್ನು ಒದಗಿಸಬೇಕಾಗುತ್ತದೆ. ಅಸಮತೋಲಿತ ಆಹಾರದಿಂದ ದೌರ್ಬಲ್ಯ, ದಣಿವು, ತಲೆ ಸುತ್ತು, ಅನೀಮಿಯಾ, ಅಸಿಡಿಟಿ ಹಾಗೂ ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆಗಳು ಕಂಡುಬರಬಹುದು. ಪೋಷಕಾಂಶಗಳ ಕೊರತೆ ಶಿಶುವಿನ ಬೆಳವಣಿಗೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಗರ್ಭಾವಸ್ಥೆಯಲ್ಲಿ ಏನು ತಿನ್ನಬೇಕು, ಏನು ತಪ್ಪಿಸಬೇಕು ಎಂಬ ಅರಿವು ಬಹಳ ಮುಖ್ಯ. ಅದರಲ್ಲಿಯೂ ಬಹುತೇಕ…

Read More

ಈ ವಾರ ಒಟಿಟಿಗೆ ಬಂದಿವೆ ಹಲವಾರು ಸಿನಿಮಾಗಳು: ಆಯ್ಕೆ ನಿಮ್ಮದು – Kannada News | OTT Release this week from February 25 to February 30

ಅಮಿತಾಬ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದ, ಜಯದೀಪ್ ಅಲಾವತ್ ಮತ್ತು ದಿವಂಗತ ಧರ್ಮೇಂದ್ರ ಅವರು ನಟಿಸಿರುವ ಯುದ್ಧದ ಕುರಿತಾದ ಸಿನಿಮಾ ‘ಇಕ್ಕೀಸ್’ ಚಿತ್ರಮಂದಿರಗಳಲ್ಲಿ ಸಖತ್ ಹಿಟ್ ಆಗಿತ್ತು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದ್ದು ಅಮೆಜಾನ್ ಪ್ರೈಂನಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ. ಈ ಹಿಂದೆ ರೆಂಟ್​​ಗೆ ಮಾತ್ರವೇ ಲಭ್ಯವಿತ್ತು. ಕನ್ನಡದ ಪ್ರತಿಭಾವಂತ ನಟ ನವೀನ್ ಶಂಕರ್ ನಟನೆಯ ‘ಕ್ಷೇತ್ರಪತಿ’ ಸಿನಿಮಾ ಕೊನೆಗೂ ಒಟಿಟಿಗೆ ಬಂದಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆದಾಗ ಸಾಕಷ್ಟು ಮೆಚ್ಚುಗೆ ಗಳಿಸಿದ್ದ ಈ ರೈತಪರ ಸಿನಿಮಾ, ಮೂರು…

Read More

T20 World Cup: ಶ್ರೀಲಂಕಾ ವಿರುದ್ಧದ ನಿರ್ಣಾಯಕ ಪಂದ್ಯದಿಂದ ಬಾಬರ್ ಆಝಂ ಔಟ್ – Kannada News | T20 World Cup: Pakistan’s Semi Final Quest Against Sri Lanka; Babar Azam Dropped in Crucial Super 8 Clash

ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳ ನಡುವೆ ಟಿ20 ವಿಶ್ವಕಪ್‌ನ ಸೂಪರ್ 8 ಸುತ್ತಿನ ನಿರ್ಣಾಯಕ ಪಂದ್ಯ ನಡೆಯುತ್ತಿದೆ. ಪಲ್ಲೆಕೆಲೆಯಲ್ಲಿ ನಡೆಯುತ್ತಿರುವ ಈ ಪಂದ್ಯ ಶ್ರೀಲಂಕಾಗೆ ಕೇವಲ ಔಪಚಾರಿಕವಾಗಿದೆ. ಏಕೆಂದರೆ ಈ ಸುತ್ತಿನಲ್ಲಿ ಸತತ ಎರಡು ಪಂದ್ಯಗಳನ್ನು ಸೋತಿರುವ ಶ್ರೀಲಂಕಾ ತಂಡ ಸೆಮಿಫೈನಲ್ ರೇಸ್​ನಿಂದ ಹೊರಬಿದ್ದಿದೆ. ಆದರೆ ಪಾಕಿಸ್ತಾನಕ್ಕೆ ಸೆಮಿಫೈನಲ್​ಗೇರುವ ಅವಕಾಶವಿರುವುದರಿಂದ ಅರ್ಹತೆ ಪಡೆಯಲು ಹೋರಾಟ ನಡೆಸಲಿದೆ. ಹೀಗಾಗಿ ಗೆಲ್ಲುವ ಇರಾದೆಯೊಂದಿಗೆ ಕಣಕ್ಕಿಳಿದಿರುವ ಪಾಕ್ ತಂಡದ ಪ್ಲೇಯಿಂಗ್​ 11ನಲ್ಲಿ ಬದಲಾವಣೆಗಳಾಗಿವೆ. ಪ್ರಮುಖವಾಗಿ ಮಾಜಿ ನಾಯಕ ಬಾಬರ್ ಆಝಂರನ್ನು ಈ…

Read More

ಇಸ್ರೇಲ್​​-ಇರಾನ್ ಮಧ್ಯೆ ಯುದ್ಧ: ದುಬೈ ಏರ್​ಪೋರ್ಟ್​​​ನಲ್ಲಿ ಕುಟುಂಬ ಸಮೇತ ಸಿಲುಕಿದ ​​ಭೋಜೇಗೌಡ – Kannada News | Iran Israel War: JDS MLC Bhoje Gowda and Family Stranded at Dubai Airport

ದುಬೈ, ಫೆಬ್ರವರಿ 28: ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಅತಿದೊಡ್ಡ ಕಾರ್ಯಾಚರಣೆಯನ್ನೇ ಆರಂಭಿಸಿದೆ. ಅಮೆರಿಕದ-ಇಸ್ರೇಲ್ ಸೇನೆ ಹಾರಿಸಿದ ಕ್ಷಿಪಣಿ, ಇರಾನ್ ರಾಜಧಾನಿ ಟೆಹರಾನ್​ಗೆ ಅಪ್ಪಳಿಸುತ್ತಲೇ ಮಧ್ಯಪ್ರಾಚ್ಯ ತಲ್ಲಣಗೊಂಡಿದೆ. ಸದ್ಯ ಈ ಯುದ್ಧದ ಕನ್ನಡಿಗರಿಗೂ ತಟ್ಟಿದೆ. ಯುದ್ಧ ಹಿನ್ನಲೆ ದುಬೈ ಏರ್​​​ಪೋರ್ಟ್​ನಲ್ಲಿ ವಿಮಾನ ಪ್ರಯಾಣ ಸ್ಥಗಿತವಾಗಿದೆ. ಹೀಗಾಗಿ ಕುಟುಂಬ ಸಮೇತರಾಗಿ ಜೆಡಿಎಸ್ ಪರಿಷತ್ ಸದಸ್ಯ ಭೋಜೇಗೌಡ ದುಬೈ ಏರ್​​​ಪೋರ್ಟ್​ನಲ್ಲಿ ಸಿಲುಕಿಕೊಂಡಿದ್ದಾರೆ. ದುಬೈನಿಂದ ಬೆಂಗಳೂರಿಗೆ ಹೊರಟಿದ್ದರು. ಈ ವೇಳೆ ವಿಮಾನ ಪ್ರಯಾಣ ಸ್ಥಗಿತವಾಗಿವೆ. ಈ ಬಗ್ಗೆ ಭೋಜೇಗೌಡ…

Read More

‘ವಾರಣಾಸಿ’: ಇನ್ನೂ ಎಷ್ಟು ತಿಂಗಳ ಚಿತ್ರೀಕರಣ ಬಾಕಿ ಇದೆ? – Kannada News | Priyanka Chopra talks about how much months of Varanasi movie shoot left

ಪ್ರಿಯಾಂಕಾ ಚೋಪ್ರಾ (Priyanka Chopra) ನಟಿಸಿರುವ ಹಾಲಿವುಡ್ ಆಕ್ಷನ್ ಸಿನಿಮಾ ‘ದಿ ಬ್ಲಫ್’ ಇದೀಗ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ. ಕಳೆದ ಕೆಲ ವರ್ಷಗಳಿಂದ ಭಾರತೀಯ ಚಿತ್ರರಂಗದಿಂದ ದೂರವೇ ಉಳಿದಿದ್ದ ಪ್ರಿಯಾಂಕ ಸುಮಾರು 7 ವರ್ಷಗಳ ಸುದೀರ್ಘ ಬಿಡುವಿನ ನಂತರ ಭಾರತೀಯ ಚಿತ್ರರಂಗಕ್ಕೆ ಭರ್ಜರಿಯಾಗಿ ಮರಳುತ್ತಿದ್ದಾರೆ. ಅದು ಕೂಡ ಪ್ರಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಬಹುನಿರೀಕ್ಷಿತ ಆಕ್ಷನ್-ಅಡ್ವೆಂಚರ್ ಚಿತ್ರ ‘ವಾರಣಾಸಿ’ ಮೂಲಕ ಎನ್ನುವುದು ವಿಶೇಷ. ಇತ್ತೀಚೆಗೆ ಅಮೆರಿಕದ ಖ್ಯಾತ ಜಿಮ್ಮಿ ಫಾಲನ್ ಟಾಕ್ ಶೋನಲ್ಲಿ ಭಾಗವಹಿಸಿದ್ದ…

Read More

T20 World Cup: ವಿಂಡೀಸ್ ವಿರುದ್ಧ ಭಾರತ ಗೆದ್ದರೆ ಸೆಮಿಫೈನಲ್‌ ಎದುರಾಳಿ ಇಂಗ್ಲೆಂಡ್‌ – Kannada News | India vs England T20 WC Semi Final Showdown Looms; Pakistan’s Crucial Match Explained

ಅಲ್ಲದೆ, ಇಂಗ್ಲೆಂಡ್ ಗೆಲುವಿನಿಂದಾಗಿ, ಸೆಮಿಫೈನಲ್‌ನಲ್ಲಿ ಯಾವ 2 ತಂಡಗಳು ಪರಸ್ಪರ ಎದುರಾಗಲಿವೆ? ಎಂಬುದು ಕೂಡ ಭಾಗಶಃ ಖಚಿತವಾಗಿದೆ. ಸೆಮಿಫೈನಲ್ ತಲುಪಲು ಟೀಂ ಇಂಡಿಯಾ ಮಾರ್ಚ್ 1 ರ ಭಾನುವಾರ ವೆಸ್ಟ್ ಇಂಡೀಸ್ ವಿರುದ್ಧ ಸೂಪರ್ 8 ನಲ್ಲಿ ತನ್ನ ಮೂರನೇ ಮತ್ತು ಅಂತಿಮ ಪಂದ್ಯವನ್ನು ಆಡಬೇಕಾಗಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಸೂಪರ್ 8 ನಲ್ಲಿ ನಿರ್ಣಾಯಕ ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. Source link

Read More

HPV Vaccination Drive: ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು 14 ವರ್ಷದ ಬಾಲಕಿಯರಿಗೆ HPV ಲಸಿಕೆ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ – Kannada News | PM Modi launches HPV Vaccination drive for 14 year old girls to combat cervical cancer

ನವದೆಹಲಿ, ಫೆಬ್ರವರಿ 28: ಕೇಂದ್ರ ಸರ್ಕಾರ ರಾಷ್ಟ್ರವ್ಯಾಪಿ 14 ವರ್ಷದ ಎಲ್ಲಾ ಬಾಲಕಿಯರಿಗೆ HPV (ಹ್ಯೂಮನ್ ಪ್ಯಾಪಿಲೋಮವೈರಸ್) ಲಸಿಕೆ ಅಭಿಯಾನವನ್ನು ಆರಂಭಿಸಿದೆ. ಗರ್ಭಕಂಠದ ಕ್ಯಾನ್ಸರ್ (cervical cancer) ನಿಯಂತ್ರಣಕ್ಕೆ ಈ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು. ಇಂದು ಈ ಹೆಚ್​ಪಿವಿ (HPV) ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಮಹಿಳೆಯರು ಆರೋಗ್ಯವಾಗಿದ್ದಾಗ ಮಾತ್ರ ಕುಟುಂಬವು ಚೆನ್ನಾಗಿರುತ್ತದೆ ಎಂದು ಹೇಳಿದರು. “ಹಿಂದಿನ ಸರ್ಕಾರವು ಮಹಿಳೆಯರ ಸೌಲಭ್ಯಗಳು ಮತ್ತು ಆರೋಗ್ಯವನ್ನು ಮುಖ್ಯವಲ್ಲ ಎಂದು ಪರಿಗಣಿಸಿತ್ತು. ಸಾರ್ವಜನಿಕ ಶೌಚಾಲಯಗಳ ಕೊರತೆಯಿಂದಾಗಿ…

Read More