Headlines

nagaraj11081993

ಅರಿಜಿತ್ ಸಿಂಗ್ ನಿವೃತ್ತಿ ಬೆನ್ನಲ್ಲೇ ಶಾಕಿಂಗ್ ಹೇಳಿಕೆ ನೀಡಿದ ಶ್ರೇಯಾ ಘೋಷಾಲ್

ಜನಪ್ರಿಯ ಗಾಯಕಿ ಶ್ರೇಯಾ ಘೋಷಾಲ್ (Shreya Ghoshal) ಅವರು ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಿಂದ ಅಭಿಮಾನಿಗಳಿಗೆ ಚಿಂತೆ ಶುರುವಾಗಿದೆ. ಖ್ಯಾತ ಗಾಯಕ ಅರಿಜಿತ್ ಸಿಂಗ್ (Arijit Singh) ಅವರು ಹಿನ್ನೆಲೆ ಗಾಯನಕ್ಕೆ ವಿದಾಯ ಹೇಳಿರುವ ನಿರ್ಧಾರವನ್ನು ಶ್ರೇಯಾ ಬೆಂಬಲಿಸಿದ್ದಾರೆ. ಅಲ್ಲದೇ, ತಮಗೂ ಅಂತಹ ಆಲೋಚನೆ ಬಂದಿದೆ ಎಂದು ಹೇಳುವ ಮೂಲಕ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ್ದಾರೆ. ‘ಎಬಿಪಿ ನ್ಯೂಸ್’ ಜೊತೆ ಮಾತನಾಡಿದ ಶ್ರೇಯಾ ಘೋಷಾಲ್ ಅವರು ಈ ವಿಷಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ‘ಕೆಲವೊಮ್ಮೆ ನನಗೂ ಸಂಗೀತದಿಂದ ವಿರಾಮ ಪಡೆಯಬೇಕು…

Read More

ಪಿಎನ್​ಜಿ ಗ್ಯಾಸ್​ಗೂ ಎಲ್​ಪಿಜಿಗೂ ಏನು ವ್ಯತ್ಯಾಸ? ನೀವು ಪಿಎನ್​ಜಿ ಕನೆಕ್ಷನ್ ಪಡೆಯುವುದು ಹೇಗೆ?

ನವದೆಹಲಿ, ಮಾರ್ಚ್ 16: ಭಾರತದಲ್ಲಿ ಎಲ್​ಪಿಜಿಗೆ (LPG) ತುಸು ಹಾಹಾಕಾರ ನಡೆಯುತ್ತಿದೆ. ಸರ್ಕಾರ ಎಲ್​ಪಿಜಿ ಪೂರೈಕೆ ಸರಿಯಾಗಿ ಇದೆ ಎಂದು ಹೇಳಿದರೂ ಸಿಲಿಂಡರ್ ಬುಕಿಂಗ್ ಆಗದೇ ಇರುವುದು, ಡೆಲಿವರಿ ವಿಳಂಬ ಆಗುತ್ತಿರುವುದು ಇತ್ಯಾದಿ ಸಮಸ್ಯೆ ಇದೆ. ಇದೇ ವೇಳೆ, ಪೈಪ್ಡ್ ಗ್ಯಾಸ್ ಅಥವಾ ಪಿಎನ್​ಜಿ ಬಳಕೆದಾರರಿಗೆ (PNG users) ಗ್ಯಾಸ್ ಪೂರೈಕೆ ನಿಂತಿಲ್ಲ. ಪ್ರಧಾನಿಗಳು ಇತ್ತೀಚೆಗೆ, ಪಿಎನ್​ಜಿ ಬಳಕೆ ಮಾಡುವಂತೆ ಜನರಿಗೆ ಕರೆ ಕೂಡ ಮಾಡಿದ್ದಾರೆ. ಹಾಗಾದರೆ, ಪಿಎನ್​ಜಿ ಗ್ಯಾಸ್ ಮತ್ತು ಎಲ್​ಪಿಜಿ ನಡುವೆ ವ್ಯತ್ಯಾಸವೇನು? ಎಲ್​ಪಿಜಿ…

Read More

ಇಂಡಿಯಾ ಪೋಸ್ಟ್‌ನಿಂದ ನೆಕ್ಸ್ಟ್-ಡೇ ಡೆಲಿವರಿ ಸೇವೆ: ಬೆಂಗಳೂರು ಸೇರಿ ಲಿಸ್ಟ್​​ನಲ್ಲಿರುವ ನಗರಗಳ ಪಟ್ಟಿ ಇಲ್ಲಿದೆ

ಬೆಂಗಳೂರು, ಮಾರ್ಚ್​​ 16: ಪಾರ್ಸೆಲ್‌ಗಳು, ಕಾನ್ಸೈನ್‌ಮೆಂಟ್‌ಗಳು ಮತ್ತು ಇತರ ಅಂಚೆ ವಸ್ತುಗಳನ್ನು 24 ಗಂಟೆಗಳೊಳಗೆ ತಲುಪಿಸುವ ಹೊಸ ಎಕ್ಸ್‌ಪ್ರೆಸ್ ಸೇವೆಯನ್ನು ಆರಂಭಿಸಲು ಇಂಡಿಯಾ ಪೋಸ್ಟ್ ಸಿದ್ಧವಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸರ್ಕಾರ, ’24 ಸ್ಪೀಡ್ ಪೋಸ್ಟ್’ ಎಂಬ ಈ ಹೊಸ ಸೇವೆಯನ್ನು ಮಾರ್ಚ್ 17ರಿಂದ (ನಾಳೆ) ಆರಂಭಿಸಲಾಗುತ್ತಿದ್ದು, ತುರ್ತು ಹಾಗೂ ಸಮಯಕ್ಕೆ ತಲುಪಬೇಕಾದ ಪಾರ್ಸೆಲ್‌ಗಳಿಗೆ ಮರುದಿನವೇ ಗ್ಯಾರಂಟಿ ಡೆಲಿವರಿ ನೀಡಲಾಗುತ್ತದೆ ಎಂದು ತಿಳಿಸಿದೆ. ಈ ಸೇವೆಯನ್ನು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಎಂ. ಸಿಂಧಿಯಾ…

Read More

ಕೋಮಾದಿಂದ ಹೊರಬರುವ ಸಮಯ ಪ್ರತಿಯೊಬ್ಬರಲ್ಲಿಯೂ ಭಿನ್ನವಾಗಿರುವುದಕ್ಕೆ ಕಾರಣವೇನು?

ಕೋಮಾ ಒಂದು ಗಂಭೀರ ವೈದ್ಯಕೀಯ ಸ್ಥಿತಿ ಆಗಿದ್ದು, ಇದು ವ್ಯಕ್ತಿಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ನಿಮಗೆ ತಿಳಿದಿರಬಹುದು ಕೋಮಾ (Coma) ಎಂದರೆ ವ್ಯಕ್ತಿ ದೀರ್ಘಕಾಲದ ವರೆಗೆ ಅಚೇತನ ಸ್ಥಿತಿಯಲ್ಲಿ ಇರುವ ಗಂಭೀರ ಆರೋಗ್ಯ ಪರಿಸ್ಥಿತಿ. ಈ ಸಂದರ್ಭದಲ್ಲಿ ವ್ಯಕ್ತಿ ಸುತ್ತಮುತ್ತ ನಡೆಯುತ್ತಿರುವ ಘಟನೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ವ್ಯಕ್ತಿ ಎಚ್ಚರಗೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ಸಾಮಾನ್ಯವಾಗಿ ಮಾತನಾಡಲು ಅಥವಾ ಚಲಿಸಲು ಸಾಧ್ಯವಾಗುವುದಿಲ್ಲ. ಆದರೆ ನೀವು ಎಂದಾದರೂ ಗಮನಿಸಿದ್ದೀರಾ, ಕೋಮಾದಿಂದ ಹೊರಬರುವ ಸಮಯ ಏಕೆ…

Read More

ಬಾವಿಗೆ ಬಿದ್ದರೂ ಪವಾಡ ಸದೃಶ್ಯವಾಗಿ ಬದುಕುಳಿದ 2 ವರ್ಷದ ಮಗು

ಕಾರವಾರ, (ಮಾರ್ಚ್ 16): ಬಾವಿಗೆ ಬಿದ್ದಿದ್ದ ಎರಡು ವರ್ಷದ ಮಗು ಪವಾಡ ಸದೃಶ್ಯವಾಗಿ ಬದುಕುಳಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕಸ್ತೂರ ಬಾ ನಗರದಲ್ಲಿ ನಡೆದಿದೆ. ಕಸ್ತೂರ ಬಾ ನಗರದ ಬಾಲೆ ಭುವಿ(2) ಬದಕುಳಿದ ಮಗು. ಆಟವಾಡುತ್ತ ಭುವಿ ಏಕಾಏಕಿ ನಾಪತ್ತೆಯಾಗಿದ್ದ. ಇದರಿಂದ ಆತಂಕಗೊಂಡು ಮನೆ ಸುತ್ತಮುತ್ತ ಹುಡುಕಿದರೂ ಪತ್ತೆಯಾಗಿಲ್ಲ. ಕೊನೆಗೆ ಮನೆಯ ಮುಂದಿನ ಬಾವಿಯಲ್ಲಿ ನೋಡಿದಾಗ ಮಗು ಅಳುವ ಶಬ್ದ ಕೇಳಿದೆ. ಕೂಡಲೇ ಬ್ಯಾಟರಿ ಬಿಟ್ಟು ನೋಡಿದಾಗ ಮಗು ಬಾವಿಯೊಳಗೆ ಪೈಪ್​​​ಗೆ ಸಿಲುಕಿರುವುದು ಕಂಡುಬಂದಿದ್ದು,…

Read More

ಹಿಂದೆ ನಿಂತಿದ್ದ ನಟನ ಕಂಡು ಶ್ರೀಲೀಲಾ ಗರಂ? ವೈರಲ್ ವಿಡಿಯೋದ ಅಸಲಿ ಕಥೆ ಇಲ್ಲಿದೆ

ನಟ ಪವನ್ ಕಲ್ಯಾಣ್ ಅಭಿನಯದ ಬಹುನಿರೀಕ್ಷಿತ ‘ಉಸ್ತಾದ್ ಭಗತ್ ಸಿಂಗ್’ (Ustaad Bhagat Singh) ಸಿನಿಮಾದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಹರೀಶ್ ಶಂಕರ್ ನಿರ್ದೇಶನದ ಈ ಸಿನಿಮಾ ಮಾರ್ಚ್ 19ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ತೆರೆಗೆ ಬರಲಿದೆ. ಈ ಸಿನಿಮಾದ ಪ್ರಿ-ರಿಲೀಸ್ ಇವೆಂಟ್ ಇತ್ತೀಚೆಗೆ ಹೈದರಾಬಾದ್‌ನಲ್ಲಿ ಬಹಳ ವೈಭವದಿಂದ ನಡೆಯಿತು. ಅದರಲ್ಲಿ ನಟಿ ಶ್ರೀಲೀಲಾ ಕೂಡ ಭಾಗಿ ಆಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಶ್ರೀಲೀಲಾ (Sreeleela) ಅವರ ವಿಡಿಯೋವೊಂದು ಸಖತ್ ವೈರಲ್ ಆಗಿದೆ. ಅದರ ಅಸಲಿ ವಿಷಯ ಏನು ಎಂಬುದು…

Read More

ಯುದ್ಧದ ನಡುವೆಯೂ ಅರ್ಮೇನಿಯಾ ಮೂಲಕ ಇರಾನ್​ನಿಂದ 550 ಭಾರತೀಯರ ಸ್ಥಳಾಂತರ

ನವದೆಹಲಿ, ಮಾರ್ಚ್ 16: ಇರಾನ್​ನಲ್ಲಿ ಸಿಲುಕಿಕೊಂಡಿದ್ದ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಭಾರತ ಸಾಕಷ್ಟು ಪ್ರಯತ್ನಗಳನ್ನು ನಡೆಸಿತ್ತು. ಅದಕ್ಕಾಗಿ ಅಲ್ಲಿನ ರಾಯಭಾರ ಕಚೇರಿ ಸಹಾಯವಾಣಿ, ನಿಯಂತ್ರಣ ಕೊಠಡಿಯನ್ನು ಕೂಡ ತೆರೆದಿತ್ತು. ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್​ನ ದಾಳಿ ಮುಂದುವರೆದಿರುವುದರಿಂದ ಅರ್ಮೇನಿಯಾ ಮೂಲಕ 550 ಭಾರತೀಯರು ಇರಾನ್​ನ ಗಡಿ ದಾಟಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಭೂ ಗಡಿಯ ಮೂಲಕ ಭಾರತೀಯರ ಸ್ಥಳಾಂತರಕ್ಕೆ ಅವಕಾಶ ನೀಡಿದ ಅರ್ಮೇನಿಯಾ ಸರ್ಕಾರಕ್ಕೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ಧನ್ಯವಾದ…

Read More

ಅಮೆರಿಕದೊಂದಿಗೆ ಭಾರತದ ಟ್ರೇಡ್ ಡೀಲ್ ಯಾವಾಗ? ಹೊಸ ಟ್ಯಾರಿಫ್ ಫ್ರೇಮ್​ವರ್ಕ್​ಗೆ ಕಾಯುತ್ತಿದೆ ಭಾರತ

ನವದೆಹಲಿ, ಮಾರ್ಚ್ 16: ಅಮೆರಿಕದಿಂದ ಹೊಸ ಟ್ಯಾರಿಫ್ ಫ್ರೇಮ್​ವರ್ಕ್ (Tariffs framework) ಸ್ಪಷ್ಟವಾದ ಬಳಿಕವಷ್ಟೇ ಭಾರತದಿಂದ ಟ್ರೇಡ್ ಡೀಲ್​ಗೆ ಸಹಿ ಹಾಕಲಾಗುತ್ತದೆ ಎಂದು ಸರ್ಕಾರದಿಂದ ಸ್ಪಷ್ಟನೆ ಬಂದಿದೆ. ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಅವರು ಎರಡೂ ದೇಶಗಳ ಮಧ್ಯೆ ವ್ಯಾಪಾರ ಒಪ್ಪಂದಕ್ಕೆ ಮಾತುಕತೆಗಳು ಇನ್ನೂ ಚಾಲನೆಯಲ್ಲಿರುವ ಸಂಗತಿಯನ್ನು ತಿಳಿಸಿದ್ದಾರೆ. ಅಮೆರಿಕದೊಂದಿಗೆ ಒಪ್ಪಂದದ ವಿವರಗಳ ಬಗ್ಗೆ ಮಾತನಾಡುತ್ತಿದ್ದೇವೆ. ಹೊಸ ಟ್ಯಾರಿಫ್ ಚೌಕಟ್ಟು ಜಾರಿಗೆ ಬಂದ ಬಳಿಕ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ ಎಂದು ರಾಜೇಶ್ ಅಗರ್ವಾಲ್ ತಿಳಿಸಿದ್ದಾರೆ. ವಾಣಿಜ್ಯ…

Read More

ಯುವಕನ ಪ್ರಾಣವನ್ನೇ ಬಲಿ ಪಡೆದ ಸ್ನೇಹಿತನ ಸಹೋದರಿ ಜೊತೆಗಿನ ಅಕ್ರಮ ಸಂಬಂಧ: ಗೆಳೆಯನಿಂದಲೇ ನಡೀತು ಭೀಕರ ಹತ್ಯೆ

ಚಾಮರಾಜನಗರ, ಮಾರ್ಚ್​​ 16: ಗುಂಡ್ಲುಪೇಟೆ ಪಟ್ಟಣಕ್ಕೆ ಹೊಂದಿಕೊಂಡಂತಿರುವ ದೊಡ್ಡಕೆರೆ ಏರಿ ಬಳಿ ನಡೆದ ಯುವಕನ ಕೊಲೆ ಪ್ರಕರಣಕ್ಕೆ ಭಾರಿ ಟ್ವಿಸ್ಟ್​​ ಸಿಕ್ಕಿದೆ. ಸ್ನೇಹಿತನ ಸಹೋದರಿಯ ಜೊತೆಗಿನ ಅಕ್ರಮ ಸಂಬಂಧವೇ ಮೂಖಹಳ್ಳಿ ಗ್ರಾಮದ ನಂಜುಂಡಸ್ವಾಮಿ (23) ಕೊಲೆಗೆ ಕಾರಣ ಎಂಬ ಸತ್ಯ ಬಯಲಾಗಿದೆ. ಗೆಳೆಯನ ಜೊತೆ ಬೈಕ್​​ ಏರಿ ಪಾರ್ಟಿಗೆ ಹೋಗಿದ್ದ ನಂಜುಂಡಸ್ವಾಮಿಯ ಶವ ಕತ್ತು ಸೀಳಿ ಕೊಲೆ ಮಾಡಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಜಯ್​ ಎಂಬಾತನ ಜೊತೆಗೆ ಈತ ತೆರಳಿದ್ದ ಎನ್ನಲಾಗಿದ್ದು, ಆತನೇ ಕೊಲೆ ಆರೋಪಿ ಎಂಬುದೀಗ ಬಹಿರಂಗಗೊಂಡಿದೆ….

Read More

ಬೆಂಡೆಕಾಯಿ ಜೊತೆಗೆ ಈ ತರಕಾರಿಗಳನ್ನು ತಿನ್ನಲೇಬಾರದಂತೆ

ತರಕಾರಿ (vegetable) ಸೇವನೆ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ ನಿಜ.  ಆದರೆ ಕೆಲವು ತರಕಾರಿಗಳನ್ನು ಬೇರೆ ಕೆಲವೊಂದಿಷ್ಟು ತರಕಾರಿಯೊಂದಿಗೆ ಸೇವಿಸಿದರೆ ಅದು ಪ್ರಯೋಜನಕಾರಿಯಾಗುವ ಬದಲು ಆರೋಗ್ಯದ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಅಂತಹ ತರಾರಿಗಳಲ್ಲಿ ಬೆಂಡೆಕಾಯಿ ಕೂಡ ಒಂದು. ಬೇಸಿಗೆಯಲ್ಲಿ ಹೇರಳವಾಗಿ ಲಭ್ಯವಿರುವ ಬೆಂಡೆಕಾಯಿ ಫೈಬರ್, ವಿಟಮಿನ್ ಸಿ, ವಿಟಮಿನ್ ಕೆ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ತರಕಾರಿಯಾಗಿದ್ದು, ಇದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಆದ್ರೆ ಈ ಬೆಂಡೆಕಾಯಿ ಜೊತೆಗೆ ಈ ಒಂದಷ್ಟು ತರಕಾರಿಗಳನ್ನು ಸೇವಿಸಿದರೆ ಆರೋಗ್ಯದ ಮೇಲೆ…

Read More