ಬಲು ಸುಲಭವಾಗಿ ಬೆಳ್ಳುಳ್ಳಿ ಸಿಪ್ಪೆ ಸುಳಿಯಲು ಈ ಸಿಂಪಲ್‌ ಟ್ರಿಕ್ಸ್‌ ಅನುಸರಿಸಿ – Kannada News | Just use these tricks to peel garlic skin very easily

ಅಡುಗೆಯ ರುಚಿ ಮತ್ತು ಘಮ ಹೆಚ್ಚಿಸುವಲ್ಲಿ ಬೆಳ್ಳುಳ್ಳಿಯು (garlic) ಪ್ರಮುಖ ಪಾತ್ರ ವಹಿಸುತ್ತದೆ. ರುಚಿ ಹೆಚ್ಚಿಸುವುದಷ್ಟೇ ಅಲ್ಲ ಬೆಳ್ಳುಳ್ಳಿ ಹಲವಾರು ಆರೋಗ್ಯ ಪ್ರಯೋಜನಗಳನ್ನೂ ಹೊಂದಿದೆ. ಹಾಗಾಗಿ ಹೆಚ್ಚಿನ ಅಡುಗೆಗಳಲ್ಲಿ ಬೆಳ್ಳುಳ್ಳಿಯನ್ನು ಬಳಸಲಾಗುತ್ತದೆ. ಅದರಲ್ಲೂ ಮಾಂಸಹಾರ ಭಕ್ಷ್ಯಗಳಿಗೆ ಬೆಳ್ಳುಳ್ಳಿ ಬೇಕೇ ಬೇಕು.  ಆದ್ರೆ ಬೆಳ್ಳುಳ್ಳಿ ಸಿಪ್ಪೆಯನ್ನು ತೆಗೆಯುವುದು ಮಾತ್ರ ಹಲವರಿಗೆ ಸವಾಲಿನ ಕೆಲಸ. ಬೆಳ್ಳುಳ್ಳಿ ಎಸಳುಗಳು ತೀರಾ ಚಿಕ್ಕದಾಗಿರುವ ಹಾಗೂ ತೆಳುವಾಗಿರುವ ಕಾರಣ ಸಿಪ್ಪೆಯನ್ನು ತೆಗೆಯುವುದು ಸ್ವಲ್ಪ ಕಷ್ಟ. ನೀವು ಸಹ ಬೆಳ್ಳುಳ್ಳಿ ಸಿಪ್ಪೆ ತೆಗೆಯಲು ಸಿಕ್ಕಾಪಟ್ಟೆ ಪರದಾಟ…

Read More

ಹೊಸ ವರ್ಷಕ್ಕೆ ಭರ್ಜರಿ ಕಿಕ್​​ ಕೊಟ್ಟ ಮದ್ಯ: ಅಬಕಾರಿ ಇಲಾಖೆಗೆ ಕೋಟ್ಯಂತರ ರೂ ಆದಾಯ – Kannada News | Karnataka New Year Liquor Sales Soar: 587 Cr Excise Revenue Boost

ಬೆಂಗಳೂರು, ಜನವರಿ 01: ರಾಜ್ಯಾದ್ಯಂತ ಹೊಸ ವರ್ಷಾಚರಣೆ (New Year 2026) ಸಂಭ್ರಮ ಜೋರಾಗಿತ್ತು. ಪಬ್‌, ಬಾರ್‌, ರೆಸ್ಟೋರೆಂಟ್​​ಗಳು ಝಗಮಗಿಸಿದ್ದವು. ಕುಡಿದು ಟೈಟಾದ ಯುವಕ, ಯುವತಿಯರು ಡಿಜೆ ಸದ್ದಿಗೆ ಹುಚ್ಚೆದ್ದು ಕುಣಿದರು. ಇನ್ನು ಮದ್ಯ (Liquor) ಮಾರಾಟದ ಅವಧಿಯನ್ನು ವಿಸ್ತರಿಸಲಾಗಿತ್ತು. ಹೀಗಾಗಿ ಹೊಸ ವರ್ಷದಂದು ಮದ್ಯ ಮಾರಾಟದಿಂದ ರಾಜ್ಯ ಸರ್ಕಾರಕ್ಕೆ ಭರ್ಜರಿ ಆದಾಯವಾಗಿದೆ. ಈ ವರ್ಷ ಅಬಕಾರಿ ಇಲಾಖೆ ಒಟ್ಟು 587.51 ಕೋಟಿ ರೂ. ಆದಾಯ ಗಳಿಸಿದೆ. ಈ ವರ್ಷ ಹೆಚ್ಚಿನ ಮದ್ಯ ಮಾರಾಟ: 587.51 ಕೋಟಿ…

Read More

RRB Recruitment: ರೈಲ್ವೆ ನೇಮಕಾತಿ; 312 ಪ್ರತ್ಯೇಕ ವರ್ಗದ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | RRB Recruitment 2025: 312 Specialist Posts – Apply Online!

ರೈಲ್ವೆ ನೇಮಕಾತಿ ಮಂಡಳಿ (RRB) ದೇಶಾದ್ಯಂತ ರೈಲ್ವೆ ಪ್ರದೇಶಗಳಲ್ಲಿ ಪ್ರತ್ಯೇಕ ವರ್ಗದ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಯಡಿಯಲ್ಲಿ, ಮುಖ್ಯ ಕಾನೂನು ಸಹಾಯಕ, ಸಾರ್ವಜನಿಕ ಅಭಿಯೋಜಕ, ಜೂನಿಯರ್ ಅನುವಾದಕ, ಹಿರಿಯ ಪ್ರಚಾರ ನಿರೀಕ್ಷಕ, ಸಿಬ್ಬಂದಿ ಮತ್ತು ಕಲ್ಯಾಣ ನಿರೀಕ್ಷಕ, ವೈಜ್ಞಾನಿಕ ಸಹಾಯಕ ತರಬೇತಿ ಇತ್ಯಾದಿ ಒಟ್ಟು 312 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳನ್ನು ಬೆಂಗಳೂರು, ಅಹಮದಾಬಾದ್, ಅಜ್ಮೀರ್, ಭೋಪಾಲ್, ಭುವನೇಶ್ವರ, ಬಿಲಾಸ್ಪುರ್,…

Read More

VHT 2025-26: ವರ್ಷದ ಕೊನೆಯ ದಿನ ಸಿಡಿದವು ಬರೋಬ್ಬರಿ 13 ಶತಕಗಳು

ದೇಶಿ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಬ್ಯಾಟ್ಸ್‌ಮನ್‌ಗಳ ಅಬ್ಬರ ಮುಂದುವರೆದಿದೆ. ಟೂರ್ನಿಯ ಮೊದಲ ಪಂದ್ಯದಿಂದಲೂ ಶತಕಗಳ ಸರಮಾಲೆ ಸೃಷ್ಟಿಯಾಗಿದೆ. ಇದೀಗ ಈ ಟೂರ್ನಿಯ ನಾಲ್ಕನೇ ಸುತ್ತಿನಲ್ಲೂ ಬ್ಯಾಟ್ಸ್‌ಮನ್​ಗಳಿಂದ ಸ್ಫೋಟಕ ಶತಕಗಳು ಸಿಡಿದಿವೆ. ಡಿಸೆಂಬರ್ 31 ರಂದು ನಡೆದ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ಒಟ್ಟು 13 ಬ್ಯಾಟ್ಸ್‌ಮನ್‌ಗಳು ಶತಕಗಳಬ ಬಾರಿಸಿದ್ದಾರೆ. ಇದರಲ್ಲಿ ಇಬ್ಬರು ಆಟಗಾರರು 150 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ವಿಜಯ್ ಹಜಾರೆ ಟ್ರೋಫಿಯ ನಾಲ್ಕನೇ ಸುತ್ತಿನಲ್ಲಿ ಮುಂಬೈ ಪರ ಆಡುತ್ತಿರುವ ಅನುಭವಿ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್…

Read More

ಆಸ್ತಿಗಾಗಿ ಅಣ್ಣನಿಂದಲೇ ತಮ್ಮನ ಕೊಲೆ: ಮರ್ಡರ್​​ ರಹಸ್ಯ ಬಿಚ್ಚಿಟ್ಟಿದ್ದು ಹೆತ್ತಮ್ಮ! – Kannada News | Property Dispute Between Brothers: Mother Reveals Son’s Murder in Chikkodi

ಚಿಕ್ಕೋಡಿ, ಜನವರಿ 01: ಆಸ್ತಿ ವಿಚಾರಕ್ಕೆ ಒಡ ಹುಟ್ಟಿದವನನ್ನೇ ಕೊಂದಿದ್ದಲ್ಲದೆ ಆತ ಮೃತಪಟ್ಟಿರೋದು ಆಕಸ್ಮಿಕ ಸಾವಿನಿಂದ ಎಂದು ಬಿಂಬಿಸಿದ್ದ ಖತರ್ನಾಕ್​​ ವ್ಯಕ್ತಿಯನ್ನು ಸಿನಿಮೀಯ ಮಾದರಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಸಲಿಂಗ ರಾಮಾಪುರೆ (38) ಕೊಲೆಯಾದ ವ್ಯಕ್ತಿಯಾಗಿದ್ದು, ಆತನ ಸಹೋದರ ಸಿದ್ದಪ್ಪ ರಾಮಾಪುರೆಯೇ ಆರೋಪಿ ಎಂಬುದು ತನಿಖೆ ವೇಳೆ ಪೊಲೀಸರು ಬಯಲು ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ಸಾಪುರ ಗ್ರಾಮದಲ್ಲಿ ಡಿ.18ರಂದು ಬಸಲಿಂಗ ರಾಮಾಪುರೆ ಮೃತಪಟ್ಟಿದ್ದ. ಹಂಚು ಹಾಕುವಾಗ ಬಿದ್ದು ಆತ ಮೃತಪಟ್ಟಿರೋದಾಗಿ ಕುಟುಂಬಸ್ಥರು ತಿಳಿಸಿದ್ದರು. ಆದರೆ ಸ್ಥಳಕ್ಕೆ…

Read More

Himachal Pradesh Blast: ಹಿಮಾಚಲ ಪ್ರದೇಶದ ಪೊಲೀಸ್ ಸ್ಟೇಷನ್ ಬಳಿ ಭಾರೀ ಸ್ಫೋಟ – Kannada News | Blast near Himachal Pradesh police station near by windows cracked

ಶಿಮ್ಲಾ, ಜನವರಿ 1: ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ನಲಗಢದ ಪೊಲೀಸ್ ಠಾಣೆ ಬಳಿ ಇಂದು ಭಾರೀ ಸ್ಫೋಟ (Blast) ಸಂಭವಿಸಿದೆ. ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಮತ್ತು ಸ್ಫೋಟದ ಕಾರಣವನ್ನು ಗುರುತಿಸಲು ತನಿಖೆ ಆರಂಭಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ನಲಗಢ ಪೊಲೀಸ್ ಠಾಣೆ ಬಳಿಯ ಲೇನ್‌ನಲ್ಲಿ ಸಂಭವಿಸಿದ ಸ್ಫೋಟದ ಪರಿಣಾಮವು ಎಷ್ಟು ಬಲವಾಗಿತ್ತು ಎಂದರೆ ಈ ಸ್ಥಳದಿಂದ ನೂರಾರು ಮೀಟರ್ ದೂರದಲ್ಲಿರುವ ಸೇನಾ ಕ್ಯಾಂಟೀನ್ ಸೇರಿದಂತೆ ಹತ್ತಿರದ ಕಟ್ಟಡಗಳ ಕಿಟಕಿಗಳು ಬಿರುಕು ಬಿಟ್ಟಿವೆ. ಸ್ಥಳೀಯರು…

Read More

Guddattu Vinayaka Temple: ಪ್ರಪಂಚದ ಏಕೈಕ ಜಲಾಧಿವಾಸ ಗಣಪ; ಗುಡ್ಡಟ್ಟು ವಿನಾಯಕ ದೇವಸ್ಥಾನದ ಇಂಟರೆಸ್ಟಿಂಗ್​ ಸಂಗತಿ ಇಲ್ಲಿದೆ – Kannada News | Guddattus Jalahivasa Ganapathi: The Worlds Only Water Immersed Deity

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಡಿಭಾಗದಲ್ಲಿರುವ ಗುಡ್ಡಟ್ಟು ಗ್ರಾಮವು ಶ್ರೀ ವಿನಾಯಕ ದೇವಸ್ಥಾನದಿಂದಾಗಿ ಪ್ರಪಂಚದಾದ್ಯಂತ ಗಮನ ಸೆಳೆದಿದೆ. ಈ ದೇವಸ್ಥಾನವು ಹಲವು ಅಪರೂಪದ ವೈಶಿಷ್ಟ್ಯಗಳನ್ನು ಹೊಂದಿದ್ದು, ಗಣಪತಿ ಭಕ್ತರಿಗೆ ಒಂದು ವಿಶಿಷ್ಟ ಅನುಭವವನ್ನು ನೀಡುತ್ತದೆ. ದೇವಸ್ಥಾನವು ಶಿರಿಹಾರ-ಗುಡ್ಡಟ್ಟು ರಸ್ತೆಯಲ್ಲಿದೆ. ಇಲ್ಲಿನ ವಿನಾಯಕ ದೇವರ ಮೂರ್ತಿಯು ಸ್ವಯಂಭೂ ರೂಪವಾಗಿದೆ. ಅಂದರೆ, ಇದನ್ನು ಯಾವುದೇ ಶಿಲ್ಪಿಯು ಕೆತ್ತದೆ, ಸಾವಿರಾರು ವರ್ಷಗಳ ಹಿಂದೆ ತಾನಾಗಿಯೇ ಕಲ್ಲಿನಿಂದ ಉದ್ಭವಿಸಿದೆ. ಇತರ ಸ್ವಯಂಭೂ ವಿಗ್ರಹಗಳಂತೆ ಇದು ಕೇವಲ ಬಂಡೆಯ ಆಕಾರದಲ್ಲಿಲ್ಲ, ಬದಲಾಗಿ ಸ್ಪಷ್ಟವಾದ ಗಣಪತಿಯ…

Read More

Name Change: ಗೆಜೆಟ್ ಮೂಲಕ ಹೆಸರು ಬದಲಾಯಿಸುವುದು ಹೇಗೆ?; ಇಲ್ಲಿದೆ 3 ಹಂತಗಳ ನಾಮ ಬದಲಾವಣೆ ಪ್ರಕ್ರಿಯೆ – Kannada News | Easy steps to officially change a person’s name and get published in e Gazette

ನಾನಾ ಕಾರಣಗಳಿಂದ ಹೆಸರು ಬದಲಾವಣೆ (Name Change) ಮಾಡಬೇಕಾಗಬಹುದು. ನಾವೇ ಹೆಸರು ಬದಲಾಯಿಸಿಕೊಳ್ಳಲು ಆಗುವುದಿಲ್ಲ. ಗೆಜೆಟ್​ನಲ್ಲಿ ನಿಮ್ಮ ಹೊಸ ಹೆಸರು ಮುದ್ರಿತವಾಗಬೇಕು. ಆಗ ಮಾತ್ರ ಅಧಿಕೃತವಾಗಿ ಹೆಸರು ಬದಲಾದಂತೆ. ಇದಕ್ಕೆ ಮೂರ್ನಾಲ್ಕು ಹಂತಗಳಿವೆ. ಅಫಿಡವಿಟ್ ಮಾಡುವುದು, ಜಾಹೀರಾತು ಕೊಡುವುದು, ಗೆಜೆಟ್​ನಲ್ಲಿ ಮುದ್ರಿಸುವುದು ಅತ್ಯಗತ್ಯ. ಇದನ್ನು ಹೇಗೆ ಮಾಡುವುದು, ಈ ಕ್ರಮಗಳನ್ನು ಇಲ್ಲಿ ವಿವರಿಸಲಾಗಿದೆ. ಹೆಸರು ಬದಲಾವಣೆಯ ಅಫಿಡವಿಟ್ ಮೊದಲ ಹಂತ ಎಂದರೆ ಅಫಿಡವಿಟ್ ರಚಿಸುವುದು. ಸ್ಟ್ಯಾಂಪ್ ಪೇಪರ್​ನಲ್ಲಿ ನಿಮ್ಮ ಈಗಿನ ಹೆಸರು, ಹೊಸ ಹೆಸರು, ತಂದೆ ಅಥವಾ…

Read More

2026 ರ ಕ್ರೀಡಾ ಕ್ಯಾಲೆಂಡರ್; ಯಾವೆಲ್ಲಾ ಪ್ರಮುಖ ಕ್ರೀಡಾಕೂಟಗಳು ನಡೆಯಲಿವೆ ಗೊತ್ತಾ? – Kannada News | Global Sports Calendar 2026: FIFA WC, Cricket, Chess and India’s Hope

2025 ಕ್ಕೆ ಅದ್ಧೂರಿಯಾಗಿ ವಿದಾಯ ಹೇಳಿರುವ ಕ್ರೀಡಾಲೋಕ ಇದೀಗ 2026 ರಲ್ಲಿ (Sports Calendar 2026) ಪ್ರಮುಖ ಘಟನೆಗಳಿಗೆ ಸಾಕ್ಷಿಯಾಗಲು ಸಜ್ಜಾಗುತ್ತಿದೆ. ಈ ವರ್ಷ ಕ್ರೀಡಾ ಅಭಿಮಾನಿಗಳಿಗೆ ರಸದೌತಣವನ್ನೇ ಉಣಬಡಿಸಲಿದೆ. ಕ್ರಿಕೆಟ್‌ನಲ್ಲಿ ಮಾತ್ರವಲ್ಲದೆ ಬೇರೆ ಬೇರೆ ಪ್ರಮುಖ ಕ್ರೀಡಾಕೂಟಗಳು ಈ ವರ್ಷ ಜರುಗಲಿವೆ. ಕ್ರಿಕೆಟ್‌ನಲ್ಲಿ ಐಸಿಸಿ (ICC) ಈವೆಂಟ್​ಗಳು ನಡೆಯಲಿದ್ದರೆ, 2028 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಪ್ರಯಾಣವೂ ಪ್ರಾರಂಭವಾಗಲಿದೆ. ಕ್ರಿಕೆಟ್‌ನಿಂದ ಚೆಸ್, ಬ್ಯಾಡ್ಮಿಂಟನ್ ಮತ್ತು ಅಥ್ಲೆಟಿಕ್ಸ್‌ವರೆಗೆ, ಪ್ರತಿಯೊಂದು ಕ್ಷೇತ್ರವು ವರ್ಷದ ಮೊದಲ ತಿಂಗಳಿನಿಂದಲೇ…

Read More

ಸಿಗರೇಟ್, ಗುಟ್ಕಾ ಬಳಸುತ್ತೀರಾ? ಮುಂದಿನ ತಿಂಗಳಿಂದ ನಿಮ್ಮ ಜೇಬಿಗೆ ಕತ್ತರಿ ಗ್ಯಾರಂಟಿ – Kannada News | Cigarette, Pan Masala and tobacco products To get Costlier From Feb 1 With New Tax

ನವದೆಹಲಿ, ಜನವರಿ 1: ಫೆಬ್ರವರಿ 1ರಿಂದ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಹೊಸ ಸೆಸ್ ಲೆವಿಗಳನ್ನು ಜಾರಿ ಮಾಡಲಾಗುತ್ತಿದೆ. ಹೀಗಾಗಿ, ಸಿಗರೇಟ್ (cigarettes), ಬೀಡಿ, ಪಾನ್ ಮಸಾಲಾ ಮತ್ತು ಇತರ ತಂಬಾಕು ಉತ್ಪನ್ನಗಳ ಬೆಲೆ ಹೆಚ್ಚು ದುಬಾರಿಯಾಗುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರವು ಸೂಚಿಸಿದ ಹೊಸ ತೆರಿಗೆ ನೀತಿ ಫೆಬ್ರವರಿ 1ರಿಂದ ಜಾರಿಗೆ ಬರಲಿದೆ. ಇದು ಆಯ್ದ ಉತ್ಪನ್ನಗಳಿಗೆ ಬೆಲೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದೀಗ ಅಸ್ತಿತ್ವದಲ್ಲಿರುವ ಜಿಎಸ್‌ಟಿ ಜೊತೆಗೆ ನಿರ್ದಿಷ್ಟ ಅಬಕಾರಿ ಸುಂಕವನ್ನು ಪರಿಚಯಿಸುವುದರಿಂದ ಸಿಗರೇಟ್‌ಗಳು ಹೆಚ್ಚಿನ ತೆರಿಗೆ…

Read More