Headlines

WPL 2026: ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ; ತಂಡದಲ್ಲಿ 1 ಬದಲಾವಣೆ – Kannada News | WPL 2026 Match 18: RCB vs UP Warriors – Playoff Showdown for Direct Final Spot

ಮಹಿಳಾ ಪ್ರೀಮಿಯರ್ ಲೀಗ್ 2026 ರ 18 ನೇ ಪಂದ್ಯ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು UP ವಾರಿಯರ್ಸ್ ನಡುವೆ ನಡೆಯಲಿದೆ. ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ಪ್ರಾರಂಭವಾಗಿರುವ ಈ ಪಂದ್ಯದಲ್ಲಿ ಆರ್​ಸಿಬಿ ಗೆದ್ದರೆ ಸುಲಭವಾಗಿ ಫೈನಲ್​ಗೇರಲಿದೆ, ಸೋತರೆ ಇತರ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗಬೇಕಾಗುತ್ತದೆ. ಇತ್ತ ಯುಪಿ ತಂಡಕ್ಕೆ ಪ್ಲೇಆಫ್‌ಗೇರಲು ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಯುಪಿ ತಂಡ ಸೋತರೆ ಪ್ಲೇಆಫ್‌ ರೇಸ್​ನಿಂದ ಹೊರಬೀಳಲಿದೆ. ಆರ್‌ಸಿಬಿ ತಂಡ ತನ್ನ ಮೊದಲ…

Read More

ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ದಿಢೀರ್ ವಿಧಾನಸೌಧದಲ್ಲಿ ಪ್ರತ್ಯಕ್ಷ – Kannada News | Sidlaghatta Civic Official Threat Case: accused Rajeev Gowda Wife In Vidhana Soudha

ಬೆಂಗಳೂರು, (ಜನವರಿ 29): ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಜೀವ್ ಗೌಡನ ಬಂಧನವಾಗಿದ್ದು, ಸದ್ಯ ಪೊಲೀಸರು, ರಾಜೀವ್ ಗೌಡನನ್ನು ವಶಕ್ಕೆ ಮಂಗಳೂರಿನಲ್ಲಿ ಸ್ಥಳ ಮಹಜರು ನಡೆಸಿದ್ದಾರೆ. ಆದ್ರೆ, ಇತ್ತ ರಾಜೀವ್ ಗೌಡನ ಪತ್ನಿ ಸಹನಾ ಅವರು ವಿಧಾನಸವಧದಲ್ಲಿ ಪ್ರತ್ಯಕ್ಷವಾಗಿದ್ದಾರೆ. ಹೌದು..ಇಂದು (ಜನವರಿ 29) ವಿಧಾನಸಭೆ ಮೊಗಸಾಲೆಯಲ್ಲಿ ಕುಳಿತ್ತಿದ್ದಾರೆ. ರಾಜೀವ್ ಗೌಡ ಬಂಧನ ಬೆನ್ನಲ್ಲೇ ಪತ್ನಿ ಸಹನಾ ವಿಧಾನಸೌಧದಲ್ಲಿ ಪ್ರತ್ಯಕ್ಷರಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. Source link

Read More

ಒತ್ತಡ, ಆಯಾಸವಿಲ್ಲದೆ ನೆಮ್ಮದಿಯಿಂದ ನಿದ್ರೆ ಮಾಡಲು ರಾತ್ರಿ ವೇಳೆ ಈ ಅಭ್ಯಾಸಗಳನ್ನು ಪಾಲಿಸಿ – Kannada News | These nighttime habits help you sleep better, relieve stress

ಇಂದಿನ ಕಾರ್ಯನಿರತ ಜೀವನದಲ್ಲಿ, ದೇಹಕ್ಕೆ ಸಾಕಷ್ಟು ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತಿಲ್ಲ. ನಿದ್ರೆಯ (sleep) ಕೊರತೆಯು ಆಯಾಸಕ್ಕೆ ಕಾರಣವಾಗುತ್ತದೆ. ಇಂತಹ ಸಂದರ್ಭಗಳಲ್ಲಿ, ಜೀವನಶೈಲಿಯಲ್ಲಿ ಕೊಂಚ ಬದಲಾವಣೆಗಳನ್ನು ಮಾಡುವ ಮೂಲಕ ಮತ್ತು ಕೆಲವು ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ, ಒತ್ತಡ ಮತ್ತು ಆಯಾಸವನ್ನು ನಿವಾರಿಸಬಹುದು ಜೊತೆಗೆ ರಾತ್ರಿಯ ವೇಳೆ ಈ ಈ ಕೆಲವು ಅಭ್ಯಾಸಗಳನ್ನು ಪಾಲಿಸುವ ಮೂಲಕ ಉತ್ತಮ ನಿದ್ರೆಯನ್ನು ಪಡೆಯಬಹುದು. ಆ ಆರೋಗ್ಯಕರ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ. ಉತ್ತಮ ನಿದ್ರೆಗಾಗಿ ರಾತ್ರಿ ವೇಳೆ  ನೀವು ಪಾಲಿಸಬೇಕಾದ…

Read More

ಇತಿಹಾಸ ಬರೆದ ‘ಬ್ರಮಯುಗಂ’ ಆಸ್ಕರ್​​ನಿಂದ ವಿಶೇಷ ಗೌರವ – Kannada News | Mammootty starrer Bramayugam movie to premier in Oscars special screening

ಭಾರತೀಯ ಚಿತ್ರರಂಗದಲ್ಲಿಯೇ ಅತ್ಯಂತ ಭಿನ್ನವಾದ ಚಿತ್ರರಂಗವೆಂದರೆ ಅದು ಮಲಯಾಳಂ (Malayalam) ಚಿತ್ರರಂಗ. ಇತರೆ ಕೆಲ ಜನಪ್ರಿಯ ಮತ್ತು ದೊಡ್ಡ ಚಿತ್ರರಂಗಗಳು ಕಮರ್ಶಿಯಲ್, ಮಾಸ್ ಸಿನಿಮಾಗಳು, ಪ್ಯಾನ್ ಇಂಡಿಯಾ ರೀಚ್, ಭರ್ಜರಿ ಮಾರ್ಕೆಟಿಂಗ್​​ಗಳ ಕಡೆ ಗಮನ ವಹಿಸಿದ್ದರೆ ಮಲಯಾಳಂ ಸಿನಿಮಾಗಳು ಇದೆಲ್ಲವನ್ನೂ ಬದಿಗೆ ಸರಿಸಿ ಕೇವಲ ಭಿನ್ನ ಕತೆ, ಮಾನವೀಯ ಮೌಲ್ಯಗಳು, ಸ್ವಚ್ಛ ಮನರಂಜನೆಗೆ ಒತ್ತು ನೀಡಿ ಸಿನಿಮಾಗಳನ್ನು ನಿರ್ಮಿಸುತ್ತಿದೆ. ಹಲವು ಅತ್ಯದ್ಭುತ ಸಿನಿಮಾಗಳನ್ನು ಮಲಯಾಳಂ ಚಿತ್ರರಂಗ ನೀಡುತ್ತಾ ಬಂದಿದೆ. ಅವುಗಳಲ್ಲಿ ಇತ್ತೀಚೆಗಿನ ‘ಬ್ರಮಯುಗಂ’ ಸಹ ಒಂದು. ಇದೀಗ…

Read More

ಕರ್ನಾಟಕ ಪೊಲೀಸರಿಗೆ ಭರ್ಜರಿ ಗಿಫ್ಟ್, ಕುಟುಂಬಸ್ಥರ ಜತೆ ಕಾಲ ಕಳೆಯಲು ರಜೆ ಭಾಗ್ಯ – Kannada News | Karnataka DG IGP Saleem Orders Leave to Police Staff for anniversary and birthday

ಬೆಂಗಳೂರು, (ಜನವರಿ 29):  ಕರ್ನಾಟಕ ಪೊಲೀಸ್  (Police) ಸಿಬ್ಬಂದಿಯ ಹುಟ್ಟುಹಬ್ಬ (Birthday) ಹಾಗೂ ವಿವಾಹ ವಾರ್ಷಿಕೋತ್ಸವಕ್ಕೆ (Wedding Anniversary) ಸಾಂದರ್ಭಿಕ ರಜೆ ನೀಡುವಂತೆ ಆದೇಶ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ತಮ್ಮ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದ ದಿನದಂದು ಕುಟುಂಬದವರ ಜೊತೆ ಕಾಲ ಕಳೆಯಲು ಅನುಕೂಲವಾಗುವಂತೆ ಆ ದಿನ ಕಡ್ಡಾಯ ರಜೆ ನೀಡಿ. ಇದರಿಂದ ಒತ್ತಡದ ಕೆಲಸ ಹಾಗೂ ವ್ಯಯಕ್ತಿಕ ಜೀವನ ಸಮತೋಲನಗೆ ರಜೆ…

Read More

ಮ್ಯಾಚ್ ಫಿಕ್ಸಿಂಗ್: ಬಾಂಗ್ಲಾದೇಶದ ತಮೀಮ್ ರೆಹಮಾನ್​ಗೆ ಶ್ರೀಲಂಕಾದಲ್ಲಿ ಜೈಲು, ಭಾರಿ ದಂಡ – Kannada News | LPL Match Fixing Scandal: Tamim Rahman Jailed 4 Years, Banned 5. Sri Lanka’s tough stance

ಶ್ರೀಲಂಕಾದ ಟಿ20 ಲೀಗ್‌ನಲ್ಲಿ ( Sri Lanka cricket) ನಡೆದ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಶ್ರೀಲಂಕಾ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಕೊಲಂಬೊ ಹೈಕೋರ್ಟ್ ಬಾಂಗ್ಲಾದೇಶದ ತಮೀಮ್ ರೆಹಮಾನ್ (Tamim Rahman) ಅವರನ್ನು ತಪ್ಪಿತಸ್ಥ ಎಂದು ಘೋಷಿಸಿದ್ದು, ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ ಅವರನ್ನು ಐದು ವರ್ಷಗಳ ಕಾಲ ಅಮಾನತುಗೊಳಿಸಲಾಗಿದ್ದು, 24 ಮಿಲಿಯನ್ ಶ್ರೀಲಂಕಾ ರೂಪಾಯಿ (ಸುಮಾರು 80 ಸಾವಿರ ಅಮೆರಿಕನ್ ಡಾಲರ್) ದಂಡ ವಿಧಿಸಲಾಗಿದೆ. ತಮೀಮ್ ರೆಹಮಾನ್ ಒಂದೆಡೆ ಬಾಂಗ್ಲಾದೇಶ ಮೂಲದವರಾಗಿದ್ದರೆ, ಮತ್ತೊಂದೆಡೆ…

Read More

ಬೆಂಗಳೂರು ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವ 2026: ಉಚಿತ ಪ್ರವೇಶಾವಕಾಶ – Kannada News | BISFF 2026 Free Submissions Open for Karnataka Short Films Oscar Qualifying Festival

ಸಿನಿಮಾ ನಿರ್ಮಾಣ, ನಿರ್ದೇಶನದಲ್ಲಿ ಆಸಕ್ತಿ ಇರುವವರಿಗೆ ಚಿತ್ರೋತ್ಸವಗಳು (Film Festival) ಅತ್ಯುತ್ತಮ ವೇದಿಕೆ. ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಸಿನಿಮಾ ಪ್ರದರ್ಶನಗೊಂಡರೆ ಅದರ ಹಿರಿಮೆಯೇ ಬೇರೆ. ಬರೀ ಪೂರ್ಣಾವಧಿ ಸಿನಿಮಾಗಳಿಗೆ ಮಾತ್ರವಲ್ಲ, ಕಿರುಚಿತ್ರಗಳಿಗೂ ಈ ಮಾತು ಅನ್ವಯ. ಎಷ್ಟೋ ನಿರ್ದೇಶಕರು ಮೊದಲ ಹೆಜ್ಜೆ ಇಡುವುದೇ ಕಿರುಚಿತ್ರಗಳ ಮೂಲಕ. ಕಿರುಚಿತ್ರಗಳ ಫೆಸ್ಟಿವಲ್ (Short Film Festival) ಕೂಡ ಸಿನಿಮಾಸಕ್ತರಿಗೆ ಹಲವು ಅವಕಾಶಗಳನ್ನು ಒದಗಿಸಿಕೊಡುತ್ತವೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ, ಬೆಂಗಳೂರು ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವ (BISFF). ಈ ಚಿತ್ರೋತ್ಸವದ 2026ನೇ ವರ್ಷದ ಆವೃತ್ತಿಗೆ…

Read More

ಹಿಮಪಾತದಿಂದ ಉತ್ತರಾಖಂಡದ 77 ಗ್ರಾಮಗಳಿಗೆ ಸಂಕಷ್ಟ, ರಸ್ತೆಗಳು ಬಂದ್, ಪ್ರವಾಸಿಗರು ಕಂಗಾಲು – Kannada News | Snowfall in Uttarakhand 77 villages affected roads blocked in Chamoli

ಡೆಹ್ರಾಡೂನ್, ಜನವರಿ 29: ಉತ್ತರಾಖಂಡದಲ್ಲಿ ಹಿಮಪಾತದ (Snowfall) ಪರಿಣಾಮದಿಂದ ಅನೇಕ ಪ್ರವಾಸಿಗರು ಮಧ್ಯದಲ್ಲೇ ಸಿಲುಕಿಕೊಂಡಿದ್ದಾರೆ. ಚಮೋಲಿಯಲ್ಲಿ 77 ಗ್ರಾಮಗಳು ಹಿಮಪಾತದಿಂದ ತೊಂದರೆಗೆ ಸಿಲುಕಿವೆ, ರಸ್ತೆಗಳ ಸಂಪರ್ಕ ಸ್ಥಗಿತಗೊಂಡಿದೆ, ಪ್ರವಾಸಿಗರು ತಮ್ಮ ಊರನ್ನು ತಲುಪಿದರೆ ಸಾಕಪ್ಪ ಎಂದು ಚಡಪಡಿಸುತ್ತಿದ್ದಾರೆ. ಭಾರೀ ಹಿಮಪಾತವಾಗುತ್ತಿರುವುದರಿಂದ ಪ್ರವಾಸಿಗರು ಹೆಚ್ಚು ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾಡಳಿತ ಸೂಚಿಸಿದೆ. ಕಳೆದ 4 ದಿನಗಳಿಂದ ಉತ್ತರಾಖಂಡದಲ್ಲಿ ಹವಾಮಾನ ಅಸ್ಥಿರವಾಗಿದ್ದು, ತಡರಾತ್ರಿಯ ಮಳೆ, ಆಲಿಕಲ್ಲು ಮಳೆ ಮತ್ತು ಭಾರೀ ಹಿಮಪಾತವು ಹಲವಾರು ಜಿಲ್ಲೆಗಳಲ್ಲಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಅವುಗಳಲ್ಲಿ ಚಮೋಲಿ ಅತ್ಯಂತ…

Read More

ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಅದರಲ್ಲಿರುವುದು ಯಾವ ಮ್ಯಾಟರ್ ಗೊತ್ತಾ?

ಬೆಂಗಳೂರು, ಜನವರಿ 29: ವಿಧಾನಸಭೆಯಲ್ಲಿ ಬಳ್ಳಾರಿ ಬ್ಯಾನರ್​ ಗಲಾಟೆ ಬಗ್ಗೆ ಪ್ರಸ್ತಾಪಿಸಿದ ವಿಪಕ್ಷ ನಾಯಕ ಅಶೋಕ್,​​ ಶಾಸಕರೊಬ್ಬರ ಗಂಭೀರ ಹೇಳಿಕೆಯನ್ನು ಉಲ್ಲೇಖಿಸಿದರು. ಅಷ್ಟೇ ಅಲ್ಲದೆ ಆ ಕುರಿತ ಆಡಿಯೋ, ವಿಡಿಯೋ ಸಾಕ್ಷಿಗಳಿರುವ ಪೆನ್​ ಡ್ರೈವ್​ ತೋರಿಸಿದರು. “ಕೊಲ್ಲಲು ಸಾವಿರಾರು ದಾರಿಗಳಿವೆ, ನಾನು ಅಂದುಕೊಂಡರೆ ಐದು ನಿಮಿಷದಲ್ಲಿ ಬಳ್ಳಾರಿಯನ್ನು ಭಸ್ಮ ಮಾಡಬಲ್ಲೆ” ಎಂದು ಆ ಶಾಸಕರು ಹೇಳಿರುವ ಹೇಳಿಕ ಉಲ್ಲೇಸಿದರು. ಈ ವಿಚಾರದಲ್ಲಿ ಗೃಹಸಚಿವರು ಸುಳ್ಳು ಎಂದು ಸಾಬೀತುಪಡಿಸಿದರೆ ಕ್ಷಮಾಪಣೆ ಕೇಳಲು ಸಿದ್ಧ ಎಂದು ಆರ್​​. ಅಶೋಕ್ ಹೇಳಿದ್ದಾರೆ….

Read More

ಕಿವಿಯಲ್ಲಿನ ವಾಕ್ಸ್ ತೆಗೆಯಲು ಸರಿಯಾದ ವಿಧಾನ ಯಾವುದು? ಆರೋಗ್ಯ ತಜ್ಞರು ಈ ಬಗ್ಗೆ ಏನ್ ಹೇಳ್ತಾರೆ ನೋಡಿ – Kannada News | Why Earwax Builds Up & How to Clean Safely

ಕಿವಿಯಲ್ಲಿ (Ear) ಕೊಳಕು ಅಥವಾ ಮೇಣ (Earwax) ಸಂಗ್ರಹವಾದರೆ, ಅದನ್ನು ಬೆರಳಿನಿಂದ ಅಥವಾ ಇಯರ್ ಬಡ್ ಸಹಾಯದಿಂದ ಅದನ್ನು ತೆಗೆಯಲು ಪ್ರಯತ್ನಿಸುತ್ತೇವೆ. ಹಾಗಾದರೆ ಇದು ಕಿವಿಯನ್ನು ಸ್ವಚ್ಛಗೊಳಿಸುತ್ತದೆಯೇ, ಈ ವಿಧಾನ ಒಳ್ಳೆಯದೇ ಎಂದು ಎಂದಾದರೂ ಯೋಚಿಸಿದ್ದೀರಾ… ಆರೋಗ್ಯ ತಜ್ಞರು ಇದು ಸರಿಯಾದ ಮಾರ್ಗವಲ್ಲ ಎಂದು ಹೇಳುತ್ತಾರೆ. ಹಾಗದರೆ ಕಿವಿಯಲ್ಲಿ ಕೊಳಕು ಅಥವಾ ಮೇಣ ಸಂಗ್ರಹವಾಗುವುದಕ್ಕೆ ಕಾರಣವೇನು, ಅದನ್ನು ತೆಗೆಯಲು ಸರಿಯಾದ ವಿಧಾನ ಯಾವುದು ಎಂಬುದನ್ನು ತಿಳಿದುಕೊಳ್ಳಿ. ಈ ಬಗ್ಗೆ ದೆಹಲಿಯ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನ ಇಎನ್‌ಟಿ…

Read More