Headlines

IND vs ENG: ಭಾರತ- ಇಂಗ್ಲೆಂಡ್‌ ನಡುವೆ ಟಿ20 ಸರಣಿ; ಮೊದಲ ಪಂದ್ಯ ಎಷ್ಟು ಗಂಟೆಗೆ ಆರಂಭ?

ಮಹಿಳಾ ಟಿ20 ವಿಶ್ವಕಪ್ (Women’s T20 World Cup) ಇದೇ ಜೂನ್ 12 ರಿಂದ ಆರಂಭವಾಗಲಿದೆ. ಆದರೆ ಅದಕ್ಕೂ ಮುನ್ನ ಭಾರತ ವನಿತಾ ಪಡೆ ಇಂಗ್ಲೆಂಡ್‌ ವಿರುದ್ಧ ಟಿ20 ಸರಣಿಯನ್ನು (India vs England T20 series) ಆಡಲಿದೆ. ಟಿ20 ವಿಶ್ವಕಪ್‌ಗೆ ತಯಾರಿ ದೃಷ್ಟಿಯಿಂದ ಈ ಸರಣಿ ಉಭಯ ತಂಡಗಳಿಗೂ ಅತ್ಯಂತ ಮಹತ್ವದ್ದಾಗಿದೆ. ಅದರಲ್ಲೂ ಏಕದಿನ ಕ್ರಿಕೆಟ್​ನಲ್ಲಿ ಹಾಲಿ ಚಾಂಪಿಯನ್ ಆಗಿರುವ ಹರ್ಮನ್​ಪ್ರೀತ್ ಕೌರ್ ಪಡೆ, ಇದೀಗ ಟಿ20 ವಿಶ್ವಕಪ್​ನಲ್ಲೂ ಟ್ರೋಫಿ ಎತ್ತಿಹಿಡಿಯುವ ಇರಾದೆಯಲ್ಲಿದೆ. ಅದು ಸಾಧ್ಯವಾಗಬೇಕಾದರೆ…

Read More

ಸಿಎಂ ಸ್ಥಾನಕ್ಕೆ ರಾಜೀನಾಮೆ ಬಳಿಕ ಸಿದ್ದರಾಮಯ್ಯ ಫಸ್ಟ್​​ ರಿಯಾಕ್ಷನ್; ಇಲ್ಲಿದೆ ಮಾಹಿತಿ

ಬೆಂಗಳೂರು, ಮೇ 28: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಸಿದ್ದರಾಮಯ್ಯ ಮಾಹಿತಿ ಹಂಚಿಕೊಂಡಿದ್ದಾರೆ. ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಲೋಕಭವನಕ್ಕೆ ತೆರಳಿ ರಾಜೀನಾಮೆ ಪತ್ರ ನೀಡಿದ್ದೇನೆ. ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ಬೆಂಗಳೂರಿನಲ್ಲಿ ಇಲ್ಲ. ಹಾಗಾಗಿ ಅವರ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ಮೊನ್ನೆ ಹೈಕಮಾಂಡ್​ನವರು ರಾಜೀನಾಮೆ ಕೊಡಿ ಎಂದು ಹೇಳಿದ್ದರು. ಹೈಕಮಾಂಡ್​ ಸೂಚಿಸಿದಾಗ ಅದಕ್ಕೆ ಸಮ್ಮತಿ ಸೂಚಿಸಿದ್ದೆ. ನಾಡಿದ್ದು ರಾಜೀನಾಮೆ ಕೊಡುತ್ತೇನೆ ಎಂದು ಅವರಿಗೆ ತಿಳಿಸಿದ್ದೆ. ಹಾಗಾಗಿ…

Read More

ನಿರ್ದೇಶಕನಾದ ಹಿರಿಯ ನಟ ಮೂಗು ಸುರೇಶ್; ‘ಕ್ಷಮೆಯಿರಲಿ ತಂದೆ’ ಬಿಡುಗಡೆಗೆ ಸಿದ್ಧ

ಹಿರಿಯ ನಟ ಮೂಗು ಸುರೇಶ್ (ಎಂ.ಎನ್. ಸುರೇಶ್) ಅವರು ಹಲವು ವರ್ಷಗಳಿಂದ  ಕನ್ನಡ ಚಿತ್ರರಂಗದಲ್ಲಿ (Kannada Film Industry) ಸಕ್ರಿಯರಾಗಿದ್ದಾರೆ. ಹಾಸ್ಯನಟನಾಗಿ ಅವರು ಅಭಿಮಾನಿಗಳನ್ನು ರಂಜಿಸಿದ್ದಾರೆ. ಇಷ್ಟು ವರ್ಷಗಳ ಅನುಭವದಿಂದ ಅವರು ಈಗ ಹೊಸ ಹೆಜ್ಜೆ ಇಟ್ಟಿದ್ದಾರೆ. ಹೌದು, ಇದೇ ಮೊದಲ ಬಾರಿಗೆ ಅವರು ನಿರ್ದೇಶಕನಾಗಿ, ನಿರ್ಮಾಪಕನಾಗಿ ಬಡ್ತಿ ಪಡೆದಿದ್ದಾರೆ. ‘ಕ್ಷಮೆಯಿರಲಿ ತಂದೆ’ ಸಿನಿಮಾಗೆ ಮೂಗು ಸುರೇಶ್ (Moogu Suresh) ಅವರು ನಿರ್ದೇಶನ ಮಾಡುವುದರ ಜೊತೆಗೆ ಬಂಡವಾಳ ಹೂಡಿದ್ದಾರೆ. ಈ ಸಿನಿಮಾದ ಶೀರ್ಷಿಕೆಯೇ ಗಮನ ಸೆಳೆಯುತ್ತಿದೆ. ಎಂ.ಎನ್….

Read More

IAS Vandana Meena: ಕೋಚಿಂಗ್ ಸೆಂಟರ್ ಮುಖವೇ ನೋಡದೇ, ಕೇವಲ ಯೂಟ್ಯೂಬ್ ನೋಡಿ ಓದಿದ ಹಳ್ಳಿ ಹುಡುಗಿ ಇಂದು IAS ಆಫೀಸರ್!

ಹಳ್ಳಿ ಹುಡುಗಿ ಇಂದು IAS ಆಫೀಸರ್Image Credit source: Instagram/ias_vandanameen ದೇಶದ ಲಕ್ಷಾಂತರ ಯುವ ಜನತೆ ‘ಯುಪಿಎಸ್‌ಸಿ’ (UPSC) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ IAS ಅಥವಾ IPS ಅಧಿಕಾರಿಗಳಾಗಬೇಕೆಂದು ಕನಸು ಕಾಣುತ್ತಾರೆ. ಆದರೆ, ಈ ಪರೀಕ್ಷೆಯು ದೇಶದಲ್ಲೇ ಅತ್ಯಂತ ಕಠಿಣ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಅತ್ಯಂತ ದುಬಾರಿ ಕೋಚಿಂಗ್ ಸೆಂಟರ್‌ಗಳು, ದೊಡ್ಡ ದೊಡ್ಡ ಇನ್‌ಸ್ಟಿಟ್ಯೂಟ್‌ಗಳಿಗೆ ಹೋದರೆ ಮಾತ್ರ ಯುಪಿಎಸ್‌ಸಿ ಪಾಸ್ ಆಗಲು ಸಾಧ್ಯ ಎಂದು ಹೇಳಲಾಗುತ್ತದೆ. ಆದರೆ, ಯಾವುದೇ ಕೋಚಿಂಗ್ ಇಲ್ಲದೆ, ಕೇವಲ ಸ್ವಯಂ ಅಧ್ಯಯನ (Self Study)…

Read More

ಸಿಎಂ ಹುದ್ದೆ ತೊರೆದ ಸಿದ್ದರಾಮಯ್ಯ: ರಾಜ್ಯಪಾಲರ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಕೆ

ಬೆಂಗಳೂರು, ಮೇ 28: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ತಮ್ಮ ರಾಜೀನಾಮೆ ಪತ್ರವನ್ನು ಅಧಿಕೃತವಾಗಿ ಸಲ್ಲಿಸಿದ್ದಾರೆ. ರಾಜ್ಯಪಾಲರು ಪ್ರಸ್ತುತ ಅಲಭ್ಯವಾಗಿರುವುದರಿಂದ, ರಾಜೀನಾಮೆ ಪತ್ರವನ್ನು ರಾಜ್ಯಪಾಲರ ಕಾರ್ಯದರ್ಶಿಗೆ ಸಲ್ಲಿಕೆ ಮಾಡಲಾಗಿದೆ. ಈ ಕಾರಣದಿಂದಾಗಿ ರಾಜೀನಾಮೆ ತಕ್ಷಣಕ್ಕೆ ಅಂಗೀಕಾರವಾಗುವುದಿಲ್ಲವಾದರೂ, ಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಸಿದ್ದರಾಮಯ್ಯ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ 2902 ದಿನಗಳ ಸುದೀರ್ಘ ಅವಧಿಗೆ ಆಡಳಿತ ನಡೆಸಿದ್ದು, ಈ ಮೂಲಕ ದೇವರಾಜ ಅರಸರ (2792 ದಿನಗಳು) ದಾಖಲೆಯನ್ನು ಮೀರಿ ರಾಜ್ಯ ಕಂಡ ಏಕೈಕ ಅತಿ ಹೆಚ್ಚು…

Read More

10ನೇ ಕ್ಲಾಸ್ ಓದಿದ್ರೆ ಸಾಕು, ಹೆಣ್ಮಕ್ಕಳಿಗೆ ಎಲ್​ಐಸಿ ಬಿಮಾ ಸಖಿ ಯೋಜನೆಯಿಂದ ಮಾಸಿಕ ಆದಾಯ ಮತ್ತು ವೃತ್ತಿಜೀವನ

ಭಾರತದ ಅತಿದೊಡ್ಡ ಜನರಲ್ ಇನ್ಷೂರೆನ್ಸ್ ಕಂಪನಿಯಾದ ಭಾರತೀಯ ಜೀವ ವಿಮಾ ನಿಗಮ (LIC) ಕೋಟ್ಯಂತರ ಜನರಿಗೆ ಜೀವ ವಿಮೆ ರಕ್ಷಣೆ ಕೊಟ್ಟಿದೆ. ಲಕ್ಷಾಂತರ ಕುಟುಂಬಗಳಿಗೆ ಉದ್ಯೋಗ ಮತ್ತು ರೆಗ್ಯುಲರ್ ಇನ್ಕಮ್ ಕೊಟ್ಟಿದೆ. ಸಾಕಷ್ಟು ಸಂಖ್ಯೆಯ ಏಜೆಂಟ್​ಗಳ ಬಲ ಎಲ್​ಐಸಿಗೆ ಇದೆ. ಇದೇ ವೇಳೆ, ಎಲ್​ಐಸಿಯಲ್ಲಿ ಬಿಮಾ ಸಖಿ ಯೋಜನೆ (LIC Bima Sakhi Yojana) ಮೂಲಕ ಆರ್ಥಿಕ ಅನನುಕೂಲದ ಮಹಿಳೆಯರಿಗೆ ನಿಯಮಿತ ಆದಾಯ ಕೊಡುತ್ತಿದೆ ಮತ್ತು ವೃತ್ತಿ ಆಯ್ಕೆ ಒದಗಿಸಿದೆ. ಏನಿದು ಎಲ್​ಐಸಿ ಬಿಮಾ ಸಖಿ ಯೋಜನೆ?…

Read More

ಎನ್​​ಟಿಆರ್ ಸಮಾಧಿಗೆ ಜೂ ಎನ್​​ಟಿಆರ್ ಭೇಟಿ, ಕಾಲಿಗೆ ಬಿದ್ದ ಅಭಿಮಾನಿಯ ಸಂತೈಸಿದ ನಟ

ತೆಲುಗು ಚಿತ್ರರಂಗದ ದಿಗ್ಗಜ ನಟ, ಮಾಜಿ ಸಿಎಂ ದಿವಂಗತ ಎನ್​ಟಿಆರ್ (NTR) (ನಂದಮೂರಿ ತಾರಕರಾಮಾ ರಾವ್) ಅವರ 104ನೇ ಜಯಂತಿ. ಹಲವಾರು ಗಣ್ಯರು, ಸಿನಿಮಾ ತಾರೆಯರು ಎನ್​​ಟಿಆರ್ ಅವರ ಪುಣ್ಯಭೂಮಿಗೆ ಭೇಟಿ ನೀಡಿದ್ದಾರೆ. ಇದೇ ದಿನ ಎನ್​​ಟಿಆರ್ ಅವರ ಮೊಮ್ಮಗ, ಸ್ಟಾರ್ ನಟ ಜೂ ಎನ್​​ಟಿಆರ್ ಅವರು ತಾತನ ಸಮಾಧಿಗೆ ಭೇಟಿ ನೀಡಿದ್ದು, ಹೂಮಾಲೆ ಅರ್ಪಿಸಿ ಕೈಮುಗಿದರು. ಕೆಲ ಸಮಯ ಸಮಾಧಿ ಆವರಣದಲ್ಲಿ ಕೂತಿದ್ದು ತೆರಳಿದರು. ಜೂ ಎನ್​​ಟಿಆರ್ ಭೇಟಿ ವೇಳೆ ಅಭಿಮಾನಿಗಳಿಂದ ಸಾಕಷ್ಟು ನೂಕು ನುಗ್ಗಲು…

Read More

Siddaramaiah Political Life: ಪಕ್ಷೇತರ ಶಾಸಕನಿಂದ ಎರಡು ಬಾರಿ ಸಿಎಂ ಹುದ್ದೆಯವರೆಗೆ; ಸಿದ್ದರಾಮಯ್ಯನವರ ಸುದೀರ್ಘ ರಾಜಕಾರಣದ ಹಾದಿ ಇಲ್ಲಿದೆ

ಬೆಂಗಳೂರು, ಮೇ 28: ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಎರಡನೇ ಅವಧಿಗೆ ಸಿಎಂ ಆಗಿದ್ದ ಸಿದದ್ದರಾಮಯ್ಯ ಒಟ್ಟು 8 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿರುವ ದಾಖಲೆ ಬರೆದಿದ್ದಾರೆ. 1983ರಲ್ಲಿ ವಿಧಾನಸಭೆಗೆ ಪ್ರವೇಶಿಸಿದ್ದ ಇವರು, ಎರಡು ಬಾರಿ ಉಪಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಸಮಾಜವಾದಿ ಹಿನ್ನೆಲೆಯಿಂದ ಬಂದ ಸಿದ್ದರಾಮಯ್ಯ ‘ಅಹಿಂದ’ ವರ್ಗಗಳ ಪ್ರಮುಖ ನಾಯಕರಾಗಿ ಗುರುತಿಸಿಕೊಂಡವರು. ಸಿದ್ದರಾಮಯ್ಯ ರಾಜಕೀಯದ ಹಾದಿ ಮೈಸೂರಿನ ಸಿದ್ದರಾಮನಹುಂಡಿಯವರಾದ ಸಿದ್ದರಾಮಯ್ಯನವರು, 1983ರಲ್ಲಿ ಮೊದಲ ಬಾರಿಗೆ…

Read More

RR vs GT: ರಾಜಸ್ಥಾನ್- ಗುಜರಾತ್ ನಡುವೆ ಕ್ವಾಲಿಫೈಯರ್ 2 ಫೈಟ್; ಪಂದ್ಯ ಎಷ್ಟು ಗಂಟೆಗೆ ಆರಂಭ?

ರಾಜಸ್ಥಾನ ರಾಯಲ್ಸ್ ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಬಲಿಷ್ಠ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ 2026 ರ ಐಪಿಎಲ್‌ನ ಕ್ವಾಲಿಫೈಯರ್ 2 (IPL Qualifier 2) ಪ್ರವೇಶಿಸುವ ಮೂಲಕ ಟ್ರೋಫಿಯತ್ತ ಹೆಜ್ಜೆ ಇಟ್ಟಿದೆ. ವೈಭವ್ ಸೂರ್ಯವಂಶಿ ಮತ್ತು ಧ್ರುವ್ ಜುರೆಲ್ ಅವರ ಸ್ಫೋಟಕ ಇನ್ನಿಂಗ್ಸ್‌ನ ಬಲದಿಂದ ರಾಜಸ್ಥಾನ ರಾಯಲ್ಸ್ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್​ಗೆ 244 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಹೈದರಾಬಾದ್ 20 ಓವರ್‌ಗಳನ್ನು ಸಹ ಆಡಲು ಸಾಧ್ಯವಾಗದೆ 19.2 ಓವರ್‌ಗಳಲ್ಲಿ 196 ರನ್‌ಗಳಿಗೆ…

Read More

‘ಕಬ್ಜ 2’ ಅಲ್ಲ, ಶಿವಣ್ಣ ಜೊತೆ ಹೊಸ ಸಿನಿಮಾ ಘೋಷಿಸಲಿದ್ದಾರೆ ಆರ್​. ಚಂದ್ರು

ಶಿವರಾಜ್​ಕುಮಾರ್ ಅವರು (Shivarajkumar) ಕನ್ನಡದ ಬ್ಯುಸಿ ಹೀರೋಗಳಲ್ಲಿ ಒಬ್ಬರು. ಅವರು ಕನ್ನಡ ಮಾತ್ರವಲ್ಲದೆ, ಪರಭಾಷೆಯಲ್ಲೂ ಬ್ಯುಸಿ ಆಗಿದ್ದಾರೆ. ಈಗ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಇದಕ್ಕೆ ಈಗ ಹೊಸ ಸೇರ್ಪಡೆಯೊಂದು ಆಗುತ್ತಿದೆ. ಆರ್​. ಚಂದ್ರು ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ ಎಂದು ವರದಿ ಆಗಿದೆ. ಈ ವಿಷಯ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಶಿವರಾಜ್​​ಕುಮಾರ್ ಹಾಗೂ ಆರ್​​. ಚಂದ್ರು ಬಾಂಧವ್ಯ ಹಳೆಯದು. 2010ರಲ್ಲಿ ರಿಲೀಸ್ ಆದ ಶಿವರಾಜ್​​ಕುಮಾರ್ ನಟನೆಯ ‘ಮೈಲಾರಿ’ ಚಿತ್ರವನ್ನು ಚಂದ್ರು ಅವರೇ ನಿರ್ದೇಶನ ಮಾಡಿದ್ದರು….

Read More