ಕಾಡ್ಗಿಚ್ಚಿನಿಂದ ನಾಶವಾಯ್ತು ಉತ್ತರಾಖಂಡದ ನಂದಾ ದೇವಿ ಅರಣ್ಯದ ಅಪರೂಪದ ಸಸ್ಯ ಸಂಪತ್ತು – Kannada News | Fire breaks out in the Nanda Devi Reserve Forest Helicopter deployed to control Fire
ಉತ್ತರಾಖಂಡ, ಜನವರಿ 15: ಉತ್ತರಾಖಂಡದ ನಂದಾ ದೇವಿ ರಾಷ್ಟ್ರೀಯ ಅಭಯಾರಣ್ಯದಲ್ಲಿ ಸತತ 5ನೇ ದಿನವೂ ಬೆಂಕಿ (Fire Accident) ಹೊತ್ತಿ ಉರಿಯುತ್ತಿದೆ. ಅತ್ಯಮೂಲ್ಯವಾದ ಸಸ್ಯ ಸಂಪತ್ತು, ಔಷಧೀಯ ಸಸ್ಯಗಳು ಸುಟ್ಟು ಬೂದಿಯಾಗಿದೆ. ಇಂದು ಇಲ್ಲಿನ ಪರಿಸ್ಥಿತಿಯನ್ನು ನಿರ್ಣಯಿಸಲು ವೈಮಾನಿಕ ಸಮೀಕ್ಷೆಯನ್ನು ನಡೆಸಲಾಯಿತು. ಈ ಕಣಿವೆಯು ಅಪರೂಪದ ಹೂವುಗಳಿಗೆ ಹೆಸರುವಾಸಿಯಾಗಿದೆ. ಲಕ್ಷ್ಮಣ ಗಂಗಾ ಮತ್ತು ಅಲಕನಂದಾ ನದಿಗಳ ನಡುವೆ ಇರುವ, 3500-4200 ಮೀಟರ್ ಎತ್ತರದಲ್ಲಿರುವ UNESCO ವಿಶ್ವ ಪರಂಪರೆಯ ತಾಣ ಇದಾಗಿದೆ. ಚಳಿಗಾಲದ ಹಿಮಪಾತದ ಕೊರತೆ ಮತ್ತು ಮಳೆಯ…