ಸೋಮನಾಥಪುರದಲ್ಲಿ ಪ್ರಧಾನಿ ಮೋದಿ ಶೌರ್ಯಯಾತ್ರೆ; 13ನೇ ಶತಮಾನದ ಹುತಾತ್ಮಕರಿಗೆ ಗೌರವ; ಡೋಲು ಡಮರುಗ ಸದ್ದು
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಗುಜರಾತ್ ಭೇಟಿಯ ಎರಡನೇ ದಿನವಾದ ಭಾನುವಾರ “ಶೌರ್ಯ ಯಾತ್ರೆ”ಯ ನೇತೃತ್ವ ವಹಿಸಿದ್ದರು. ಸೋಮನಾಥ ಸ್ವಾಭಿಮಾನ್ ಪರ್ವ್ನ ಭಾಗವಾಗಿ ಆಯೋಜಿಸಲಾದ ಈ ಮೆರವಣಿಗೆಯಲ್ಲಿ ಶೌರ್ಯ ಮತ್ತು ತ್ಯಾಗವನ್ನು ಸಂಕೇತಿಸುವ 108 ಕುದುರೆಗಳ ಮೆರವಣಿಗೆ ಇತ್ತು. ಕ್ರಿ.ಶ. 1299 ರಲ್ಲಿ ದೆಹಲಿ ಸುಲ್ತಾನರ ಸೈನ್ಯದ ದಾಳಿಯ ವಿರುದ್ಧ ಸೋಮನಾಥ ದೇವಾಲಯವನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದ ಹಮೀರ್ಜಿ ಗೋಹಿಲ್ ಮತ್ತು ವೇಗಡ್ಜಿ ಭಿಲ್ ಅವರಿಗೆ ಪ್ರಧಾನ ಮಂತ್ರಿಯವರು ಈ ಸಂದರ್ಭದಲ್ಲಿ ಗೌರವ ಸಲ್ಲಿಸಿದರು….