Headlines

ದಿನ ಭವಿಷ್ಯ: ಇಂದು ಈ ರಾಶಿಯವರು ಸಾಮರ್ಥ್ಯವನ್ನು ತೋರಿಸಬೇಕಾದಲ್ಲಿ ತೋರಸರು – Kannada News | Horoscope 14 February 2026; Dina Rashi Bhavishya Today, Checkout the details here

ಮೇಷ ರಾಶಿ: ನೀವು ನೆಟ್ಟ ಗಿಡಕ್ಕೆ ಎಲ್ಲ ರೀತಿಯ ಆರೈಕೆ ಬೇಕು. ಸಹಜವಾಗಿ ಇರುವುದುದಕ್ಕೆ ಅದು ಬೇಡ. ಹಳೆಯ ಹಣಕಾಸಿನ ವ್ಯವಹಾರವನ್ನು ನೀವು ತೀರಿಸಿಕೊಳ್ಳುವಿರಿ. ನಿಮ್ಮ ಆಸೆಗಳನ್ನು ಆಪ್ತರಲ್ಲಿ ಹೇಳಿಕೊಳ್ಳಬಹುದು. ಕಛೇರಿಯ ಕೆಲಸಗಳನ್ನು ಮುಗಿಸಲು ಹೆಚ್ಚು ಸಮಯವನ್ನು ತೆಗದುಕೊಳ್ಳುವಿರಿ. ಮನೆಯನ್ನು ಬದಲಿಸಬೇಕಾಗುವುದು. ಕೆಲವನ್ನು ನೀವು ಮನಃಪೂರ್ವಕವಾಗಿಯೇ ಕಡೆಗಣಿಸುವಿರಿ. ನೀವು ಸ್ಥಾನಕ್ಕಾಗಿ ಯಾರ ಮೇಲೂ ಅಪವಾದ ಹಾಕಬಹುದು. ಬೋಧಕರಿಗೆ ಉತ್ತಮ ಪ್ರಶಂಸೆಯು ಸಿಗುವುದು. ವೃಷಭ ರಾಶಿ: ಬೇಸರವನ್ನು ಕೆಲಸದಲ್ಲಿ ಗಮನಕೊಡುವ ಮೂಲಕ ಪರಿಹರಿಸಿಕೊಳ್ಳುವಿರಿ. ಸಮುದ್ರದಲ್ಲಿ ಅಲೆ ನಿಂತಮೇಲೆ ಸ್ನಾನವೆಂದರೆ…

Read More

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 14ರ ದಿನಭವಿಷ್ಯ

ಹಿರಿಯರಿಗೆ ಅಗತ್ಯ ಇರುವಂಥ ಕೆಲಸ ಮಾಡಿಕೊಡುವುದರಿಂದ, ಅವರ ಆಶೀರ್ವಾದ ದೊರೆಯಲಿದ್ದು ಅದರ ಮೂಲಕವಾಗಿ ನಿಮ್ಮನ್ನು ಕಾಡುತ್ತಿರುವ ಸಂಬಂಧಗಳಲ್ಲಿನ ಗೊಂದಲ ದೂರವಾಗಲಿದೆ. ಇನ್ನು ಹೊಸ ಆರ್ಡರ್, ಪ್ರಾಜೆಕ್ಟ್ ಗಳು ದೊರೆಯಲಿವೆ. ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1) ಒಂದು ಸಮಯಕ್ಕೆ ಒಂದೇ ವಿಷಯದ ಮೇಲೆ ಗಮನ ಕೇಂದ್ರೀಕರಿಸಿ. ಉದ್ಯೋಗ ಸ್ಥಳದಲ್ಲಿ ಹೊಸ ಜವಾಬ್ದಾರಿಗಳು ನಿಮಗೆ ದೊರೆಯುತ್ತವೆ, ಪರಿಶ್ರಮಕ್ಕೆ ಮೇಲಧಿಕಾರಿಗಳ ಮೆಚ್ಚುಗೆ ಸಹ ಸಿಗಲಿದೆ. ಕುಟುಂಬದ ಅಗತ್ಯಗಳನ್ನು ಪ್ರತ್ಯೇಕವಾಗಿ ನೋಡಿದರೆ…

Read More

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 14ರ ದಿನಭವಿಷ್ಯ

ಈ ದಿನ ಗಣಪತಿ ದೇವಸ್ಥಾನಕ್ಕೆ ದೂರ್ವಾ ಅಂದರೆ ಗರಿಕೆಯನ್ನು ಸಮರ್ಪಿಸುವುದರಿಂದ ಒತ್ತಡ, ಜಗಳ- ಕಲಹದಿಂದ ದೂರ ಇರುವುದಕ್ಕೆ ಅನುಗ್ರಹ ಆಗುತ್ತದೆ. ಇದು ಸಾಧ್ಯವಾದಲ್ಲಿ ಮನೆಯಲ್ಲಿ ಸಹ ಮಾಡಬಹುದು. ದೇವರ ಮನೆಯಲ್ಲಿ ಗಣಪತಿ ಚಿತ್ರದ ಎದುರು ಇಡಿ. ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7) ಸ್ವತಂತ್ರ ಆಲೋಚನೆಗಳು ನಿಮ್ಮ ಸಹೋದ್ಯೋಗಿಗಳಿಗಿಂತ ಪ್ರತ್ಯೇಕವಾಗಿ ನಿಲ್ಲುವಂತೆ ಮಾಡುತ್ತವೆ. ಪ್ರಾಡಕ್ಟ್ ಅಥವಾ ಪ್ರಾಜೆಕ್ಟ್ ಗಳನ್ನು ನೀವು ನೋಡುವ ರೀತಿ, ಪ್ಲಾನಿಂಗ್ ನಲ್ಲಿ ಅದನ್ನು ಕಟ್ಟುತ್ತಾ…

Read More

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 14ರ ದಿನಭವಿಷ್ಯ

ಈ ದಿನ ತಾಮ್ರದ ತಂಬಿಗೆಯಲ್ಲಿ ನೀರು ಹಾಗೂ ಅದರೊಳಗೆ ನಾಣ್ಯವೊಂದನ್ನು ಹಾಕಿ, ದಾನ ಮಾಡಿ. ಅಥವಾ ಒಂದು ಲೋಟದಲ್ಲಿ ಹಾಲನ್ನು ಹಾಕಿ, ಅದನ್ನು ದಾನ ಮಾಡುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಜೊತೆಗೆ ಆಸ್ತಿ ವ್ಯಾಜ್ಯಗಳು ದೂರವಾಗುತ್ತವೆ. ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4) ನಿಮ್ಮ ಪರಿಶ್ರಮಕ್ಕೆ ಮೇಲಧಿಕಾರಿಗಳ ಮೆಚ್ಚುಗೆ ಸಿಗುತ್ತದೆ. ಸಹೋದ್ಯೋಗಿಗಳ ಸಹಕಾರದಿಂದ ಕೆಲಸ ಸುಗಮವಾಗುತ್ತದೆ. ಸಂಬಂಧಗಳಲ್ಲಿ ಮಾತಿನಲ್ಲಿ ಮೃದುತ್ವ ಮುಖ್ಯ; ಸಂಗಾತಿಯ ಭಾವನೆಗಳನ್ನು ಗೌರವಿಸಿದರೆ ಸಣ್ಣ…

Read More

ಆರೋಗ್ಯ ಇಲಾಖೆ ಅಧಿಕಾರಿ ಅಬಕಾರಿ ಇಲಾಖೆಗೆ ವರ್ಗಾವಣೆ: ಸುಳ್ಳು ಆದೇಶ ಪ್ರತಿ ಹರಿಬಿಟ್ಟವರ ವಿರುದ್ಧ ಸಿದ್ದರಾಮಯ್ಯ ಗರಂ – Kannada News | Siddaramaiah Slams Fake Transfer Letter Scandal: Police Probe Karnataka Misinformation

ಬೆಂಗಳೂರು, ಫೆಬ್ರವರಿ 13: ಆರೋಗ್ಯ ಇಲಾಖೆ ಅಧಿಕಾರಿಯನ್ನ ಅಬಕಾರಿ ಇಲಾಖೆಗೆ ವರ್ಗಾವಣೆ (transfer) ಮಾಡ್ಬೇಕೆಂಬ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾದ ಪತ್ರ ಸದ್ಯ ರಾಜ್ಯದಲ್ಲಿ ಸಾಕಷ್ಟು ಹಲ್ ಚಲ್ ಎಬ್ಬಿಸಿದೆ. ಮೊದಲೇ ವರ್ಗಾವಣೆ ದಂಧೆಯ ಆರೋಪ ಮಾಡುತ್ತಿದ್ದ ಬಿಜೆಪಿಗೆ ಹೊಸ ಅಸ್ತ್ರವೇ ಸಿಕ್ಕಂತಾಗಿತ್ತು. ಸದ್ಯ ಈ ವಿಚಾರವಾಗಿ ಖದ್ದು ಸಿಎಂ ಸಿದ್ದರಾಮಯ್ಯ (Siddaramaiah) ಸುಳ್ಳು ಆದೇಶ ಪ್ರತಿ ಹರಿಬಿಟ್ಟವರ ವಿರುದ್ಧ ಕಿಡಿಕಾರಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ‘ಯಾರೋ ಕೆಲವು ಕಿಡಿಗೇಡಿಗಳು ನನ್ನ ಕಚೇರಿಯ…

Read More

ವೈದ್ಯೆಯಾದ ಶ್ರೀಲೀಲಾ: ಸಹಪಾಠಿಗಳೊಟ್ಟಿಗೆ ಚಿತ್ರಗಳ ಹಂಚಿಕೊಂಡ ನಟಿ

ನಟಿ ಶ್ರೀಲೀಲಾ ಈಗ ಪ್ಯಾನ್ ಇಂಡಿಯಾ ನಟಿಯಾಗಿದ್ದಾರೆ. ತೆಲುಗು, ಹಿಂದಿ ಮತ್ತು ಬಾಲಿವುಡ್​​ನಲ್ಲಿ ಬಲು ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಶ್ರೀಲೀಲಾ ಕೇವಲ ನಟಿ ಮಾತ್ರವಲ್ಲ ಅವರು ಇನ್ನು ಮುಂದೆ ವೈದ್ಯೆ ಸಹ. ಓದುತ್ತಲೇ ಸಿನಿಮಾ ರಂಗದಲ್ಲಿಯೂ ತೊಡಗಿಸಿಕೊಂಡಿದ್ದ ಶ್ರೀಲೀಲಾ ಎಂಬಿಬಿಎಸ್ ಮುಗಿಸಿದ್ದಾರೆ. ಮುಂಬೈನ ಡಿವೈ ಯುನಿವರ್ಸಿಟಿಯ ವೈದ್ಯಕೀಯ ವಿದ್ಯಾರ್ಥಿನಿ ಆಗಿದ್ದ ಶ್ರೀಲೀಲಾ, ವೈದ್ಯಕೀಯ ಪದವಿ ಮುಗಿಸಿದ್ದು, ಇದೀಗ ಅಧಿಕೃತವಾಗಿ ವೈದ್ಯೆ. 2020ರಲ್ಲಿ ಎಂಬಿಬಿಎಸ್ ಪದವಿ ಆರಂಭಿಸಿದ ನಟಿ ಶ್ರೀಲೀಲಾ ಇದೀಗ ಪದವಿ ಮುಗಿಸಿದ್ದು, ಘಟಿಕೋತ್ಸವದ ಚಿತ್ರಗಳನ್ನು ಸಾಮಾಜಿಕ…

Read More

ಹಂಪಿ ಉತ್ಸವ 2026: ನಗಾರಿ ಬಾರಿಸಿ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ 

ವಿಜಯನಗರ, ಫೆ.13: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಐತಿಹಾಸಿಕ ಹಂಪಿಯಲ್ಲಿ ಮೂರು ದಿನಗಳ ಹಂಪಿ ಉತ್ಸವ 2026ಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಸಾಂಪ್ರದಾಯಿಕ ಡೊಳ್ಳು ಮತ್ತು ನಗಾರಿ ಬಾರಿಸುವ ಮೂಲಕ ಈ ಭವ್ಯ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ಸಹ ಮುಖ್ಯಮಂತ್ರಿಗಳು ಮತ್ತು ಗಣ್ಯರು ಉದ್ಘಾಟಿಸಿದರು. ಈ ಧ್ವನಿ ಮತ್ತು ಬೆಳಕು ಕಾರ್ಯಕ್ರಮವು ಅಂತರರಾಷ್ಟ್ರೀಯ ಮಟ್ಟದ ಒಲಿಂಪಿಕ್ ಟಾರ್ಚ್ ಮಾದರಿಯಲ್ಲಿ ಹಂಪಿಯ ವಿಶಿಷ್ಟ…

Read More

ದೋಸ್ತಿ ಜತೆ ಎಣ್ಣೆ ಪಾರ್ಟಿ ಮಾಡುವಾಗ ಎಚ್ಚರ: ಕುಡಿದ ಮತ್ತಿನಲ್ಲಿ ಗೆಳಯನನ್ನೇ ಕಲ್ಲು ಎತ್ತಿ ಹಾಕಿ ಕೊಂದ ಸ್ನೇಹಿತರು – Kannada News | Gajanoor Horror: Man Stripped, Stoned to Death by Friends in Shivamogga

ಗೆಳೆಯನ್ನು ಕೊಲೆ ಮಾಡಿದ ಸ್ನೇಹಿತರು ಶಿವಮೊಗ್ಗ, ಫೆ.13: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ (Shivamogga) ಭೀಕರ ಕೊಲೆಯೊಂದು ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರೇ ಸೇರಿ ತನ್ನವನನ್ನೇ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ ಮಾಡಿರುವ ಘಟನೆ ಶಿವಮೊಗ್ಗ ತಾಲೂಕಿನ ಗಾಜನೂರಿನಲ್ಲಿ ನಡೆದಿದೆ. ಶ್ರೀನಿವಾಸ (36) ಎಂಬುವವರೇ ಕೊಲೆಯಾದ ದುರ್ದೈವಿ. ಶಿವಮೊಗ್ಗ ನಗರದ ಹೊಸಮನೆ ನಿವಾಸಿಯಾಗಿದ್ದ ಶ್ರೀನಿವಾಸ್ ಕಳೆದ ಒಂದು ವರ್ಷದಿಂದ ಗಾಜನೂರಿನಲ್ಲಿ ನೆಲೆಸಿದ್ದು, ಗಾರೆ ಕೆಲಸ ಮಾಡಿಕೊಂಡಿದ್ದರು. ನಿನ್ನೆ ರಾತ್ರಿ ಸ್ನೇಹ ಬಾರ್ ಎದುರಿಗಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ…

Read More

ಪಂದ್ಯದ ದಿನ ಗುಡುಗು ಸಹಿತ ಮಳೆ.! ಭಾರತ-ಪಾಕ್ ಪಂದ್ಯ ನಡೆಯುವುದು ಅನುಮಾನ – Kannada News | India vs Pakistan T20 WC 2026 Colombo: Rain Threatens Super 8 Decider and Pitch Challenge

ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಟಿ20 ವಿಶ್ವಕಪ್ 2026 (T20 World Cup 2026) ಪಂದ್ಯವು ಫೆಬ್ರವರಿ 15 ರ ಭಾನುವಾರದಂದು ಕೊಲಂಬೊದಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳ ಮೂರನೇ ಪಂದ್ಯ ಇದಾಗಿದೆ. ಎರಡೂ ತಂಡಗಳು ಈ ಹಿಂದೆ ಆಡಿದ ಎರಡೂ ಪಂದ್ಯಗಳನ್ನು ಗೆದ್ದಿವೆ. ಆದ್ದರಿಂದ, ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಸೂಪರ್ 8 ಸುತ್ತಿನಲ್ಲಿ ಸ್ಥಾನ ಪಡೆಯುತ್ತವೆ. ಇದರ ಜೊತೆಗೆ ಕ್ರಿಕೆಟ್​ನಲ್ಲಿ ಉಭಯ ತಂಡಗಳ ನಡುವಿನ…

Read More

ಬಾಯ್​ಫ್ರೆಂಡ್ ಜೊತೆ ಜಗಳವಾಡಿ 4ನೇ ಮಹಡಿಯಿಂದ ಹಾರಿದ ಯುವತಿ! – Kannada News | 20 year old Girl jumped from the 4th floor of Hotel in Delhi after argument with Boyfriend

ನವದೆಹಲಿ, ಫೆಬ್ರವರಿ 13: ದೆಹಲಿಯ ಫಾರ್ಶ್ ಬಜಾರ್ ಪ್ರದೇಶದಲ್ಲಿರುವ ಹೋಟೆಲ್ ಒಂದರ 4ನೇ ಮಹಡಿಯ ಕಿಟಕಿಯಿಂದ 20 ವರ್ಷದ ಹುಡುಗಿಯೊಬ್ಬಳು ಕೆಳಗೆ ಹಾರಿದ್ದಾಳೆ. ಆಕೆ ಬಾಯ್​ ಫ್ರೆಂಡ್ (Boyfriend) ಜೊತೆಗೆ ಆ ಹೋಟೆಲ್ ರೂಂಗೆ ಹೋಗಿದ್ದಳು. ಆತನ ಜೊತೆ ಜಗಳವಾದ ನಂತರ ಕೋಪದಿಂದ ಆತ್ಮಹತ್ಯೆ ಮಾಡಿಕೊಳ್ಳಲು ಆಕೆ ಕಿಟಕಿಯಿಂದ ಹಾರಿದ್ದಾಳೆ. ಆಕೆ ಹಾರಲು ಯತ್ನಿಸುತ್ತಿರುವುದನ್ನು ನೋಡಿದ ಜನರು ಕೆಳಗೆ ನಿಂತು ಆಕೆಯನ್ನು ಕಾಪಾಡಿದ್ದಾರೆ. ಹೀಗಾಗಿ, ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್…

Read More