Headlines

Daily Devotional: ಅಳಿಲು ಮನೆಯೊಳಗೆ ಬಂದರೆ ಏನರ್ಥ? ಇದು ಅಶುಭ ಸೂಚನೆಯೇ? – Kannada News | Squirrels in Your Abode: Exploring the Sacred Significance in Hindu Traditions

ಅಳಿಲು ಮನೆಯೊಳಗೆ ಪ್ರವೇಶಿಸಿದರೆ ಏನಾಗುತ್ತದೆ, ಹಿಂದೂ ನಂಬಿಕೆಗಳಲ್ಲಿ ಇದರ ಮಹತ್ವದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ಅಳಿಲು ಮನೆ ಒಳಗೆ, ಕಚೇರಿಯ ಒಳಗೆ, ದೇವಸ್ಥಾನದ ಒಳಗೆ, ಅಥವಾ ಯಾವುದೇ ಕಟ್ಟಡದ ಒಳಗೆ ಬಂದರೆ ಅದು ಶುಭವೋ ಅಶುಭವೋ ಎಂಬ ಪ್ರಶ್ನೆಗೆ ಗುರೂಜಿ ಉತ್ತರ ನೀಡಿದ್ದಾರೆ.

ಹಿಂದೂ ನಂಬಿಕೆಗಳು ಮತ್ತು ಸಂಪ್ರದಾಯಗಳ ಪ್ರಕಾರ, ಅಳಿಲು ಎಂದರೆ ನಮ್ಮ ಮನಸ್ಸಿಗೆ ತಕ್ಷಣವೇ ಬರುವುದು ಶ್ರೀರಾಮಚಂದ್ರನ ಒಡನಾಡಿ ಎಂಬ ಭಾವನೆ. ಶ್ರೀರಾಮಚಂದ್ರರಿಗೆ ಸೇವೆ ಸಲ್ಲಿಸಿದ ಒಂದು ವಿಶೇಷವಾದ ಪವಿತ್ರ ಪ್ರಾಣಿ ಅಳಿಲು. ಅದೇ ರೀತಿ, ಅಳಿಲು ಲಕ್ಷ್ಮಿಯ ಸಂಕೇತವೂ ಆಗಿದೆ. ಅಳಿಲನ್ನು ನೋಡುವುದೇ ಶುಭಕರ (“ದರ್ಶನಂ ಪುಣ್ಯಂ”). ಆದರೆ ಅದನ್ನು ಸ್ಪರ್ಶಿಸಲು ಪ್ರಯತ್ನಿಸಬಾರದು. ಅಳಿಲು ಅತ್ಯಂತ ಸಾಧು ಮತ್ತು ಸೌಮ್ಯ ಪ್ರಾಣಿಯಾಗಿದ್ದರೂ, ಅದಕ್ಕೆ ಹಿಂಸೆ ಅಥವಾ ತೊಂದರೆ ನೀಡಲು ಹೋಗಬಾರದು. ಅದು ತನ್ನಷ್ಟಕ್ಕೆ ತಾನೇ ನಿಮ್ಮ ಭುಜದ ಮೇಲೆ ಕುಳಿತರೆ ಅದು ಶುಭಕರ.

ಹಾಗಾಗಿ, ಅಳಿಲು ಮನೆ ಒಳಕ್ಕೆ ಬಂದರೆ ಅದನ್ನು ಮಹಾ ಶುಭ ಎಂದು ಪರಿಗಣಿಸಲಾಗುತ್ತದೆ. ಬಂದ ದಿನ, ಸಮಯ, ತಿಥಿ, ನಕ್ಷತ್ರಗಳನ್ನು ಗಮನಿಸಿದರೆ ಇನ್ನೂ ಹೆಚ್ಚಿನ ಶುಭ ಫಲಗಳು ದೊರೆಯುತ್ತವೆ. ಮನೆಗೆ ಬಾಗಿಲು ಅಥವಾ ಕಿಟಕಿಯ ಮೂಲಕ ಅಳಿಲು ಪ್ರವೇಶಿಸುವುದು ಮಹಾ ಶುಭ ಸೂಚಕವಾಗಿದೆ. ಇಂತಹ ಸಂದರ್ಭದಲ್ಲಿ ದೊರೆಯುವ ಫಲಗಳು ಹೀಗಿವೆ: ಸಂಪತ್ತು ವೃದ್ಧಿಯಾಗುತ್ತದೆ, ದುಷ್ಟ ಜನರ ಸಹವಾಸ ಅಥವಾ ದೃಷ್ಟಿಯಿಂದ ದೂರವಿರಲು ಸಹಾಯವಾಗುತ್ತದೆ, ಆರ್ಥಿಕವಾಗಿ ಸುಧಾರಣೆಯಾಗುತ್ತದೆ ಮತ್ತು ಕೆಲಸ ಕಾರ್ಯಗಳಲ್ಲಿ ಯಶಸ್ಸು ಪ್ರಾಪ್ತವಾಗುತ್ತದೆ. ಕೆಲವೇ ದಿನಗಳಲ್ಲಿ ಅಧಿಕಾರ ಯೋಗ ಪ್ರಾಪ್ತಿಯಾಗುವ ಸಾಧ್ಯತೆಗಳೂ ಇರುತ್ತವೆ. ಅಳಿಲಿನ ಸೇವೆಯಿಂದಲೇ ಶ್ರೀರಾಮಚಂದ್ರನಿಗೆ ಪಟ್ಟಾಭಿಷೇಕ ಯೋಗ ಪ್ರಾಪ್ತವಾಯಿತು ಮತ್ತು ಅವರ ಸೇವಾ ಫಲವಾಗಿ ಶ್ರೀರಾಮಚಂದ್ರರಿಗೆ ಜಯವೂ ದೊರೆಯಿತು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ

ಅಳಿಲ ದರ್ಶನವು ಜಯ ಮತ್ತು ಅದೃಷ್ಟವನ್ನು ತರುತ್ತದೆ. ಪ್ರಕೃತಿಯ ಸುಂದರ ಪ್ರಾಣಿಗಳಲ್ಲಿ ಇದೂ ಒಂದು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಅಳಿಲನ್ನು ಇಷ್ಟಪಡುತ್ತಾರೆ. ಇದು ಭಕ್ತಿಪೂರ್ವಕವಾಗಿ ಶ್ರೀರಾಮಚಂದ್ರರಿಗೆ ಸಹಾಯ ಮಾಡಿದ ಪ್ರಾಣಿ. ಆದ್ದರಿಂದ ಅಳಿಲಿಂದ ಕೀರ್ತಿ, ಪ್ರತಿಷ್ಠೆ, ಆರ್ಥಿಕ ಲಾಭ ಮತ್ತು ಮಕ್ಕಳಿಂದ ಶುಭವಾಗುತ್ತದೆ. ಅದರಲ್ಲೂ ಬೆಳಗಿನ ಜಾವ ಅಳಿಲ ದರ್ಶನವಾದರೆ ಸಂಜೆಯವರೆಗಿನ ಎಲ್ಲಾ ಕೆಲಸ ಕಾರ್ಯಗಳು ಯಶಸ್ವಿಯಾಗಿ ನೆರವೇರುತ್ತವೆ. ಅಳಿಲು ಮೈ ಮೇಲೆ ಬಿದ್ದರೂ ಸಹ ಅದನ್ನು ಒಳ್ಳೆಯದೆಂದು ಪರಿಗಣಿಸಲಾಗುತ್ತದೆ. ಅಳಿಲು ಕನಸಿನಲ್ಲಿ ಕಂಡರೆ ಅದು ಇನ್ನೂ ಉತ್ತಮ.

ಆದರೆ, ಸಾಮಾನ್ಯವಾಗಿ ಎಲ್ಲರಿಗೂ ಎದುರಾಗುವ ಒಂದು ಪ್ರಶ್ನೆಯೆಂದರೆ, ನಾವು ವಾಹನ ಚಲಾಯಿಸುವಾಗ ಅಚಾತುರ್ಯದಿಂದ ಅಳಿಲಿಗೆ ಹಾನಿಯಾದರೆ ಏನು ಮಾಡಬೇಕು? ಅಂತಹ ಸಂದರ್ಭದಲ್ಲಿ ನೀವು ಪ್ರಾಯಶ್ಚಿತ್ತ ಮಾಡಿಕೊಳ್ಳಲೇಬೇಕು. ಇದಕ್ಕಾಗಿ ಶ್ರೀರಾಮಚಂದ್ರನ ಮೆರವಣಿಗೆಯಲ್ಲಿ ಭಾಗವಹಿಸುವುದು, ರಾಮಚಂದ್ರ ಅಥವಾ ಹನುಮಾನ್ ಭಜನೆಗಳನ್ನು ಮಾಡುವುದು, ಮತ್ತು ಜನರಿಗೆ ಅನ್ನದಾನ ಮಾಡುವುದು ಬಹಳ ಶುಭಕರವಾದ ಪ್ರಾಯಶ್ಚಿತ್ತಗಳು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *