ಬೆಂಗಳೂರು, ಫೆ.12: ನಮ್ಮ ಸನಾತನ ಹಿಂದೂ ಸಂಪ್ರದಾಯದಲ್ಲಿ ಪುಟ್ಟ ಮಕ್ಕಳಿಗೆ ಕಾಲು ಚೈನುಗಳನ್ನು ಹಾಕುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ. ಮಕ್ಕಳನ್ನು ದೈವಸ್ವರೂಪರೆಂದು ಭಾವಿಸುವ ನಮ್ಮ ಸಂಸ್ಕೃತಿಯಲ್ಲಿ, ಈ ಆಭರಣಗಳು ಕೇವಲ ಅಲಂಕಾರಿಕವಲ್ಲದೆ, ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಮಹತ್ವವನ್ನೂ ಹೊಂದಿವೆ. ವೈಜ್ಞಾನಿಕವಾಗಿ, ಕಾಲ್ಗೆಜ್ಜೆಗಳು, ವಿಶೇಷವಾಗಿ ಬೆಳ್ಳಿಯವು, ಮಗುವಿನ ದೇಹಕ್ಕೆ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ ಎಂದು ಹೇಳಲಾಗುತ್ತದೆ. ಇವು ನಕಾರಾತ್ಮಕ ಶಕ್ತಿಗಳನ್ನು ದೂರವಿಡಲು ಸಹಕಾರಿ. ಅಷ್ಟೇ ಅಲ್ಲದೆ, ಸಣ್ಣ ಬ್ಯಾಕ್ಟೀರಿಯಾಗಳು ಮತ್ತು ಕ್ರಿಮಿಕೀಟಗಳಿಂದ ಮಗುವನ್ನು ರಕ್ಷಿಸುವಲ್ಲಿ ಸಹಕಾರಿಯಾಗಿವೆ. ಬೆಳ್ಳಿ ಚಂದ್ರನ ಲೋಹವಾಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಚರ್ಮದ ಕಾಂತಿಯನ್ನು ವೃದ್ಧಿಸುತ್ತದೆ ಮತ್ತು ಮಗುವಿನ ಅಳು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆಯುರ್ವೇದದಲ್ಲೂ ಬೆಳ್ಳಿಯ ಬಳಕೆಗೆ ಮಹತ್ವವಿದೆ. ಧಾರ್ಮಿಕವಾಗಿ, ಕಾಲ್ಗೆಜ್ಜೆಗಳು ಶುಭ ವಾತಾವರಣವನ್ನು ಸೃಷ್ಟಿಸುತ್ತವೆ. ಇದರ ಸದ್ದು ಮಗುವಿನ ಶ್ರವಣ ಶಕ್ತಿಯನ್ನು ವೃದ್ಧಿಸುತ್ತದೆ. ತಾಯಿ ಅಡುಗೆ ಮಾಡುವಾಗ ಮಗುವಿನ ಚಲನೆಯನ್ನು ತಿಳಿಸಲು ಸಹಾಯಕ. ಒಟ್ಟಾರೆ, ಮಕ್ಕಳ ಚೈತನ್ಯ ಮತ್ತು ಆರೋಗ್ಯಕ್ಕೆ ಪೂರಕವಾದ ನಂಬಿಕೆಯ ಆಧಾರದ ಮೇಲೆ ಈ ಸಂಪ್ರದಾಯ ಬೆಳೆದುಬಂದಿದೆ ಎಂದು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ