ಬೆಂಗಳೂರು, ಫೆಬ್ರವರಿ 23: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಪರ್ಸ್ನಲ್ಲಿ ಏನೇನು ಇರಬೇಕು ಯಾವ ವಸ್ತುಗಳು ಇರಬಾರದುಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಪ್ರತಿಯೊಬ್ಬರ ಜೀವನದಲ್ಲಿ ಪರ್ಸ್ ಅಥವಾ ವಾಲೆಟ್ ಒಂದು ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಕೇವಲ ಹಣ ಸಂಗ್ರಹಿಸುವ ಸಾಧನವಾಗಿ ನೋಡದೆ, ನಮ್ಮ ಆರ್ಥಿಕ ಸ್ಥಿತಿ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಪರ್ಸ್ ಇಟ್ಟುಕೊಳ್ಳುವುದು ಸಮೃದ್ಧಿ ಮತ್ತು ಲಕ್ಷ್ಮಿಯ ಸಂಕೇತ ಎಂದಿದ್ದಾರೆ.
ಪರ್ಸ್ನ ಮಹತ್ವವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಹರಿದಿರುವ ಅಥವಾ ತೂತಾಗಿರುವ ಪರ್ಸ್ ಅನ್ನು ಎಂದಿಗೂ ಬಳಸಬಾರದು. ಇದು ಧನಾಕರ್ಷಣೆಯನ್ನು ಕುಗ್ಗಿಸುತ್ತದೆ. ಅಲ್ಲದೆ, ಪರ್ಸ್ನಲ್ಲಿ ಔಷಧಗಳು, ಹೋಟೆಲ್ ಬಿಲ್ಗಳು, ಸಾಲದ ಪಟ್ಟಿಗಳು ಅಥವಾ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ಯಾವುದೇ ಕಾಗದಪತ್ರಗಳನ್ನು ಇಡಬಾರದು. ಹಣವನ್ನು ಮಡಚದೆ ನೇರವಾಗಿ ಇಡುವುದು ಸೂಕ್ತ. ಒಂದು ಅಥವಾ ಎರಡು ನಾಣ್ಯಗಳು ಮತ್ತು ಉಪಯೋಗಿಸದ ನೂರು ರೂಪಾಯಿ ನೋಟನ್ನು ಪರ್ಸ್ನಲ್ಲಿ ಕಡ್ಡಾಯವಾಗಿ ಇಡುವುದು ಶುಭಕರ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.