Hindu Traditions: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

Hindu Traditions: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಮುಯ್ಯಿ ನೀಡುವಾಗ ಸಾಮಾನ್ಯವಾಗಿ ಕೊಡುವ ದುಡ್ಡಿಗೆ ಒಂದು ರೂಪಾಯಿಯನ್ನು ಸೇರಿಸಿ ನೀಡುವ ಪದ್ಧತಿ ಇದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಹಿಂದಿನ ಕಾಲದಲ್ಲಿ ಮುಯ್ಯಿ ಪುಸ್ತಕಗಳನ್ನು ನಿರ್ವಹಿಸುವ ಪದ್ಧತಿಯಿತ್ತು. ಕೆಲವು ವಿವಾಹಗಳಲ್ಲಿ ಮುಯ್ಯಿ ಬರೆಯಲುಂದೇ ವ್ಯಕ್ತಿಗಳಿರುತ್ತಿದ್ದರು. ಈ ಪುಸ್ತಕಗಳನ್ನು ವಂಶಪಾರಂಪರ್ಯವಾಗಿ ಸಂರಕ್ಷಿಸಿ, ಸಂಬಂಧಗಳ ಇತಿಹಾಸ ಮತ್ತು ಸಹಕಾರದ ಸ್ಮರಣೆಯಾಗಿ ಬಳಸಲಾಗುತ್ತಿತ್ತು.

ಗುರೂಜಿಯವರು ಹೇಳುವಂತೆ, ಮುಯ್ಯಿ ನೀಡುವಾಗ ಸಾಮಾನ್ಯವಾಗಿ ಒಂದು ರೂಪಾಯಿಯನ್ನು ಸೇರಿಸಿ (ಉದಾಹರಣೆಗೆ 101, 501, 1001) ನೀಡುವ ಪದ್ಧತಿ ಇದೆ. ಇದಕ್ಕೆ ಒಂದು ವಿಶಿಷ್ಟ ಅರ್ಥವಿದೆ. ಸೊನ್ನೆಯು ಅಂತ್ಯದ ಸಂಕೇತವಲ್ಲ, ಅದು ಪರಿಪೂರ್ಣತೆ ಅಥವಾ ಬೆಳವಣಿಗೆಯ ಕೊರತೆಯನ್ನು ಸೂಚಿಸಬಹುದು ಎಂಬ ಭಾವನೆ ಇದೆ. ಆದರೆ “ಒಂದು” ಪ್ರಾರಂಭ, ಅಭಿವೃದ್ಧಿ, ಸೂರ್ಯನ ಸಂಕೇತವಾಗಿದೆ. “ನೀವು ನೂರು ಮುಗಿಸಿ ಒಂದಕ್ಕೆ ಹೋಗುತ್ತಿದ್ದೀರಿ, ನಿಮ್ಮ ಜೀವನದಲ್ಲಿ ಶುಭವಾಗಲಿ, ಮುನ್ನಡೆಯಿರಿ” ಎಂಬ ಆಶಯವನ್ನು ಈ ಒಂದು ರೂಪಾಯಿ ಸೂಚಿಸುತ್ತದೆ. ಇದು ಶುಭ ಹಾರೈಕೆಯ ಒಂದು ಸಂಕೇತವಾಗಿದೆ.

ಇದನ್ನೂ ಓದಿ: ಈ ವರ್ಷ ಯುಗಾದಿ ಹಬ್ಬ ಯಾವಾಗ ? ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು?

ಆದ್ದರಿಂದ ‘ಸೊನ್ನೆ’ ಅಪೂರ್ಣತೆಯನ್ನು ಸೂಚಿಸುತ್ತದೆ. ಈ ಒಂದು ರೂಪಾಯಿ ನಿಮ್ಮ ಜೀವನದಲ್ಲಿ ಶುಭವಾಗಲಿ, ಮುನ್ನಡೆಯಿರಿ ಎಂಬ ಆಶಯವನ್ನು ಬಿಂಬಿಸುತ್ತದೆ. ಇದು ಸಂಪ್ರದಾಯದ ಆರ್ಥಿಕ ಸಹಕಾರ ಮತ್ತು ಶುಭ ಹಾರೈಕೆಯ ಸಂಕೇತವಾಗಿದೆ. ಹೀಗೆ, ಮುಯ್ಯಿ ಪದ್ಧತಿಯು ನಮ್ಮ ಸಂಪ್ರದಾಯದಲ್ಲಿ ಆರ್ಥಿಕ ಸಹಕಾರ, ಸಂಬಂಧಗಳ ಬಲವರ್ಧನೆ ಮತ್ತು ಶುಭ ಹಾರೈಕೆಗಳ ಆಳವಾದ ಅರ್ಥವನ್ನು ಒಳಗೊಂಡಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *