Headlines

OTD: ಭಯೋತ್ಪಾದಕರ ದಾಳಿ: ಕ್ರಿಕೆಟ್ ಇತಿಹಾಸದ ಕರಾಳ ದಿನ – Kannada News | OTD: Sri Lanka’s cricket team attacked in Pakista

ಮಾರ್ಚ್ 3 ಅನ್ನು ಕ್ರಿಕೆಟ್ ಇತಿಹಾಸದ ಅತ್ಯಂತ ಕರಾಳ ದಿನ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ 2009 ರಲ್ಲಿ ಕ್ರಿಕೆಟಿಗರ ಮೇಲೆ ನಡೆದ ಭಯೋತ್ಪಾದಕರ ದಾಳಿ.  ಮಾರ್ಚ್ 3, 2009 ರಂದು ಪಾಕಿಸ್ತಾನದ ಲಾಹೋರ್‌ನಲ್ಲಿ ಶ್ರೀಲಂಕಾ ತಂಡದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ಭೀಕರ ದಾಳಿ ನಡೆದು ಇಂದಿಗೆ ಬರೋಬ್ಬರಿ 17 ವರ್ಷಗಳಾಗಿವೆ.

ಲಾಹೋರ್​ನಲ್ಲಿ ನಡೆಯುತ್ತಿದ್ದ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟಕ್ಕಾಗಿ ಗಡಾಫಿ ಕ್ರೀಡಾಂಗಣಕ್ಕೆ ಬಸ್‌ನಲ್ಲಿ ತೆರಳುತ್ತಿದ್ದಾಗ ಲಿಬರ್ಟಿ ಚೌಕದ ಬಳಿಕ ಸುಮಾರು 12 ಶಸ್ತ್ರಸಜ್ಜಿತ ಭಯೋತ್ಪಾದಕರು ರಾಕೆಟ್ ಲಾಂಚರ್ ಬಳಸಿ ದಾಳಿ ನಡೆಸಿದರು. ಈ ದಾಳಿಯಲ್ಲಿ 6 ಪಾಕಿಸ್ತಾನಿ ಪೊಲೀಸ್ ಅಧಿಕಾರಿಗಳು ಮತ್ತು ಇಬ್ಬರು ನಾಗರಿಕರು ಮೃತಪಟ್ಟಿದ್ದರು.

ಹಾಗೆಯೇ ಶ್ರೀಲಂಕಾ ತಂಡದ ನಾಯಕ ಮಹೇಲ ಜಯವರ್ಧನೆ, ಕುಮಾರ್ ಸಂಗಕ್ಕಾರ, ತಿಲಾನ್ ಸಮರವೀರ, ತರಂಗ ಪರನವಿತಾನ, ಅಜಂತ ಮೆಂಡಿಸ್, ಚಾಮಿಂದ ವಾಸ್ ಮತ್ತು ಸುರಂಗ ಲಕ್ಮಲ್ ಸೇರಿದಂತೆ ಒಟ್ಟು 6-7 ಆಟಗಾರರು ಗಾಯಗೊಂಡಿದ್ದರು.

ಈ ಘಟನೆಯ ನಂತರ ಅಂತರರಾಷ್ಟ್ರೀಯ ತಂಡಗಳು ಪಾಕಿಸ್ತಾನಕ್ಕೆ ಭೇಟಿ ನೀಡಲು ನಿರಾಕರಿಸಿದವು. ಇದರಿಂದಾಗಿ ಸುಮಾರು 10 ವರ್ಷಗಳ ಕಾಲ ಪಾಕಿಸ್ತಾನದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಥಗಿತಗೊಂಡಿತು. ಇದಾದ 6 ವರ್ಷಗಳ ಬಳಿಕ, ಅಂದರೆ 2015 ರಲ್ಲಿ ಝಿಂಬಾಬ್ವೆ ತಂಡವು ಪಾಕ್​ಗೆ ಭೇಟಿ ನೀಡಿತು.

ಆ ಬಳಿಕ 2017 ರಲ್ಲಿ ಶ್ರೀಲಂಕಾ ತಂಡವು ಪಾಕಿಸ್ತಾನಕ್ಕೆ ಭೇಟಿ ನೀಡುವುದರೊಂದಿಗೆ ಪಾಕ್​ನಲ್ಲಿ ಮತ್ತೆ ಅಂತಾರಾಷ್ಟ್ರೀಯ ಸರಣಿಗಳು ಶುರುವಾದವು.

 

Source link

Leave a Reply

Your email address will not be published. Required fields are marked *