Headlines

ಮೀನಾಕ್ಷಿ ನಟರಾಜನ್ ನಾಮಪತ್ರ ರದ್ದು; ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ, ನಾಳೆ ಉಪವಾಸ ಸತ್ಯಾಗ್ರಹ – Kannada News

ನವದೆಹಲಿ, ಜೂನ್ 9: ಮಧ್ಯಪ್ರದೇಶದಿಂದ ರಾಜ್ಯಸಭೆಯ ಮೂರನೇ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಹಿರಿಯ ನಾಯಕಿ ಮೀನಾಕ್ಷಿ ನಟರಾಜನ್ (Meenakshi Natarajan) ಅವರ ನಾಮಪತ್ರವನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದಾರೆ. ತಮ್ಮ ಅಫಿಡವಿಟ್‌ನಲ್ಲಿ ಹೈದರಾಬಾದ್ ನ್ಯಾಯಾಲಯದಲ್ಲಿ ಬಾಕಿ ಇರುವ ಕ್ರಿಮಿನಲ್ ಪ್ರಕರಣದ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ನಾಮಪತ್ರ ಸಲ್ಲಿಕೆಗೆ ಜೂನ್ 8 ಕೊನೆಯ ದಿನವಾಗಿದ್ದರಿಂದ, ಕಾಂಗ್ರೆಸ್‌ಗೆ ಈಗ ಮತ್ತೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಾಧ್ಯವಾಗದೆ ಆ ಸ್ಥಾನವನ್ನು ಕಳೆದುಕೊಂಡಿದೆ. ಇದರಿಂದಾಗಿ ಬಿಜೆಪಿಯ ಮೂರನೇ ಅಭ್ಯರ್ಥಿ…

Read More

ಮಾದರಿ ದಂಪತಿಯಾಗಿದ್ದ ದಿಲೀಪ್-ಶ್ರೀವಿದ್ಯಾ; ಕಾಂಬಿನೇಷನ್​​ನಲ್ಲಿ ಬಂದಿತ್ತು ಹಿಟ್ ಸೀರಿಯಲ್ – Kannada News | Dileep Raj and Srividya: A Beautiful Love Story and a Successful Production Journey

ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ದಿಲೀಪ್ ರಾಜ್ ಅವರ ಅಕಾಲಿಕ ನಿಧನವು ಅವರ ಪತ್ನಿ ಶ್ರೀವಿದ್ಯಾ ಮತ್ತು ಅಭಿಮಾನಿಗಳನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಇವರಿಬ್ಬರದು ಕೇವಲ ದಾಂಪತ್ಯವಲ್ಲ, ಅದೊಂದು ಸುಂದರ ಸೃಜನಶೀಲ ಜರ್ನಿ. ಇಬ್ಬರೂ ಪ್ರೀತಿಸಿ ವಿವಾಹವಾಗಿದ್ದರು. ಕಾಲೇಜು ದಿನಗಳಿಂದಲೇ ಪರಿಚಿತರಾಗಿದ್ದ ಇವರು, ಪರಸ್ಪರರ ಕನಸುಗಳಿಗೆ ಬೆನ್ನೆಲುಬಾಗಿ ನಿಂತವರು. ದಿಲೀಪ್ ರಾಜ್ ನಟನೆಯಲ್ಲಿ ತೊಡಗಿಸಿಕೊಂಡರೆ, ಶ್ರೀವಿದ್ಯಾ ಅವರು ಅವರಿಗೆ ಪ್ರತಿಯೊಂದು ಹಂತದಲ್ಲೂ ಶಕ್ತಿಯಾಗಿ ನಿಂತರು. ನಟನೆಯ ಜೊತೆಗೆ ನಿರ್ಮಾಣದಲ್ಲೂ ತೊಡಗಿಸಿಕೊಳ್ಳಬೇಕೆಂಬ ಹಂಬಲದಿಂದ ದಿಲೀಪ್ ರಾಜ್ ಮತ್ತು ಶ್ರೀವಿದ್ಯಾ ಜಂಟಿಯಾಗಿ…

Read More

ಒಪ್ಪಿಗೆ ಇಲ್ಲದೆ ಪತ್ನಿಯ ಗರ್ಭಕೋಶ ತೆಗೆಸಿದ ಗಾಯಕ; ದಾಖಲಾಯ್ತು ದೂರು – Kannada News | Udit Narayan’s First Wife Alleges Uterus Removal Fraud: Shocking Accusations Emerge

ಖ್ಯಾತ ಗಾಯಕ ಉದಿತ್ ನಾರಾಯಣ್ (Udit Narayana) ಈಗ ಸುದ್ದಿಯಲ್ಲಿದ್ದಾರೆ. ಅವರು ಈ ಮೊದಲು ಕಾನ್ಸರ್ಟ್ ವೇಳೆ ಅಭಿಮಾನಿಗೆ ಕಿಸ್ ಮಾಡಿ ವಿವಾದ ಮಾಡಿಕೊಂಡಿದ್ದರು. ಈ ಬಾರಿ ಅವರು ಮೊದಲ ಪತ್ನಿಯಿಂದಲೇ ಗಂಭೀರ ಆರೋಪ ಎದುರಿಸಬೇಕಾದ ಪರಿಸ್ಥಿತಿ ಬಂದಿದೆ. ಉದಿತ್ ಹಾಗೂ ಅವರ ಇಬ್ಬರು ಸಹೋದರರು ಸೇರಿ ಮೋಸದಿಂದ ತಮ್ಮ ಗರ್ಭಕೋಶ ತೆಗೆಸಿದ್ದಾರೆ ಎಂದು ಉದಿತ್ ಮೊದಲ ಪತ್ನಿ ರಂಜನಾ ಆರೋಪಿಸಿದ್ದಾರೆ. ರಂಜನಾ ಅವರು ಬಿಹಾರದ ಸುಪೌಲ್​​ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಫೆಬ್ರವರಿ 10ರಂದು…

Read More

100, 200, 500 ರೂ.ನಲ್ಲಿ ಈ ಮಾರ್ಕ್​ ಇರುವುದೇಕೆ ಗೊತ್ತಾ? ಇಲ್ಲಿದೆ ರಹಸ್ಯ ಮಾಹಿತಿ – Kannada News | RBI Currency Notes: Bleed Marks Guide for Blind Financial Inclusion by Design

ಡಿಜಿಟಲ್​​​ ಯುಗದಲ್ಲೂ ಭಾರತದಲ್ಲಿ ಇಂದಿಗೂ ನೋಟು ಬಳಕೆ ಮಾಡಲಾಗುತ್ತದೆ. ಆದರೆ ಈ ನೋಟುಗಳಲ್ಲಿ ಇರುವ ಕೆಲವೊಂದು ವಿಶೇಷ ಮಾಹಿತಿಯ ಬಗ್ಗೆ ತಿಳಿದುಕೊಳ್ಳಲೇಬೇಕು. ಇಂದಿಗೂ ನೀರಿನಂತೆ ಖರ್ಚು ಮಾಡುವ ಅದೆಷ್ಟೋ ಜನರಿಗೆ ನೋಟುಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಇಂದಿನ ದಿನಗಳಲ್ಲಿ ನಾವು ಯುಪಿಐ (UPI) ಮೂಲಕ ಹಣ ಪಾವತಿಸುವುದು ಹೆಚ್ಚಾಗಿರಬಹುದು, ಆದರೆ ನೂರಾರು ವರ್ಷಗಳಿಂದ ಚಲಾವಣೆಯಲ್ಲಿರುವ ನೋಟುಗಳ ವಿನ್ಯಾಸದ ಹಿಂದೆ ಒಂದು ವಿಶೇಷ ಉದ್ದೇಶವಿದೆ. ನೋಟುಗಳ ಅಂಚಿನಲ್ಲಿರುವ ಆ ಸಣ್ಣ ಕಪ್ಪು ಗೆರೆಗಳನ್ನು ‘ಬ್ಲೀಡ್ ಮಾರ್ಕ್ಸ್’ (Bleed…

Read More

ಗಂಗೂಲಿಯಿಂದ ಅಮೀರ್​ ಖಾನ್​ವರೆಗೆ; ನಾಳೆ ‘ಡ್ಯುಯೊಲಾಗ್ ವಿತ್ ಬರುಣ್ ದಾಸ್’ 4ನೇ ಸೀಸನ್ ಆರಂಭ – Kannada News | Duologue with Barun Das returns with season 4 featuring legends including sourav ganguly aamir khan

ನವದೆಹಲಿ, ಫೆಬ್ರವರಿ 27: ‘ಡ್ಯುಯೊಲಾಗ್ ವಿತ್ ಬರುಣ್ ದಾಸ್’ (Duologue with Barun Das) 4ನೇ ಸೀಸನ್‌ ನಾಳೆ ಪ್ರೇಕ್ಷಕರ ಮುಂದೆ ಬರಲಿದೆ. ಈ ಹೊಸ ಸೀಸನ್ ಫೆಬ್ರವರಿ 28ರಂದು ಪ್ರದರ್ಶನಗೊಳ್ಳಲಿದೆ. ಮೊದಲ 3 ಸೀಸನ್‌ಗಳ ಯಶಸ್ಸಿನ ನಂತರ, ಈ ಬಾರಿ ಈ ಕಾರ್ಯಕ್ರಮವನ್ನು ಇನ್ನೂ ದೊಡ್ಡ ಪ್ರಮಾಣದಲ್ಲಿ ಪ್ರಸ್ತುತಪಡಿಸಲಾಗುತ್ತಿದೆ. ಈ ಬಾರಿ ಇದು ಮನರಂಜನೆ ನೀಡುವುದಲ್ಲದೆ, ನಿಮ್ಮನ್ನು ಚಿಂತಿಸುವಂತೆ ಮಾಡುವ ಸಂಭಾಷಣೆಗಳನ್ನು ಈ ಶೋ ಒಳಗೊಂಡಿರುತ್ತದೆ. ಈ ಕಾರ್ಯಕ್ರಮವು ಬೇರೆ ಟಾಕ್ ಶೋಗಳಿಗಿಂತ ಭಿನ್ನವಾಗಿದೆ. ಏಕೆಂದರೆ…

Read More

ಬಾಗೇಪಲ್ಲಿಯಲ್ಲಿ ಅಕ್ರಮವಾಗಿ ನೆಲಸಿದ್ದ ಪಾಕಿಸ್ತಾನೀ ನಾಗರಿಕರು; ಒಬ್ಬ ಮಹಿಳೆ ಸೇರಿ ಇಬ್ಬರ ಬಂಧನ – Kannada News | Police arrest 2 Pakistani nationals living illegally in Chikkaballapura district, Karnataka

ಭಾರತ, ಪಾಕಿಸ್ತಾನದ ಬಾವುಟಗಳುImage Credit source: Tuomas A. Lehtinen/Moment/Getty Images ಚಿಕ್ಕಬಳ್ಳಾಪುರ, ಜುಲೈ 12: ಬಾಗೇಪಲ್ಲಿ ತಾಲೂಕಿನಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿದ್ದ ಹಾಗೂ ಭಾರತೀಯ ಗುರುತಿನ ಚೀಟಿಗಳನ್ನು ಹೊಂದಿದ್ದ ಇಬ್ಬರು ಪಾಕಿಸ್ತಾನಿ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪಾಕಿಸ್ತಾನ ಮೂಲದ ಮಹಿಳೆ ಫರ್ಹಾನಾಜ್ ಮತ್ತು ಆಕೆಯ ಮಗ ಮೊಹಮ್ಮದ್ ಫರ್ದಿನ್ ಖಾನ್ ಎಂದು ಗುರುತಿಸಲಾಗಿದೆ. ಇವರು ಬಾಗೇಪಲ್ಲಿಯ ಸ್ಥಳೀಯ ನಿವಾಸಿ ಅಯೂಬ್ ಖಾನ್ ಎಂಬಾತನನ್ನು ವಿವಾಹವಾಗಿದ್ದರು. ಅಯೂಬ್ ಖಾನ್ ಪ್ರಸ್ತುತ ಗಲ್ಫ್ (ಅರಬ್) ದೇಶವೊಂದರಲ್ಲಿ ಬಸ್ ಚಾಲಕನಾಗಿ…

Read More

ಕ್ಯಾಲಿಫೋರ್ನಿಯಾದಲ್ಲಿ 6 ದಿನಗಳ ಹಿಂದೆ ನಾಪತ್ತೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಸಾಕೇತ್ ಶವವಾಗಿ ಪತ್ತೆ – Kannada News | Saketh Srinivasayya: Missing Karnataka Student Found Dead in California, Indian Student Safety Concerns

ಕ್ಯಾಲಿಫೋರ್ನಿಯಾ, ಫೆಬ್ರವರಿ 15: ಅಮೆರಿಕದಲ್ಲಿ ಓದುವ ಕನಸು ಕಾಣುತ್ತಿರುವ ಭಾರತೀಯ ವಿದ್ಯಾರ್ಥಿ(Student)ಗಳಿಗೆ ಮತ್ತೊಮ್ಮೆ ಆತಂಕಕಾರಿ ಸುದ್ದಿ ಹೊರಬಿದ್ದಿದೆ.ಕ್ಯಾಲಿಫೋರ್ನಿಯಾದಲ್ಲಿ ಆರು ದಿನಗಳಿಂದ ನಾಪತ್ತೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಶವವಾಗಿ ಪತ್ತೆಯಾಗಿದ್ದಾರೆ. ಭಾರತೀಯ ವಿದ್ಯಾರ್ಥಿಯ ಶವ ಪತ್ತೆಯಾಗಿರುವುದು ಅವರ ಕುಟುಂಬವನ್ನು ಮಾತ್ರವಲ್ಲದೆ ಇಡೀ ಭಾರತೀಯ ವಿದ್ಯಾರ್ಥಿ ಸಮುದಾಯವನ್ನು ಆಘಾತಗೊಳಿಸಿದೆ. ಕರ್ನಾಟಕದ 22 ವರ್ಷದ ಸಾಕೇತ್ ಶ್ರೀನಿವಾಸಯ್ಯ, ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ರಾಸಾಯನಿಕ ಮತ್ತು ಜೈವಿಕ ಅಣು ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದರು. ಫೆಬ್ರವರಿ 9 ರಂದು ಕ್ಯಾಂಪಸ್‌ನಿಂದ ಸುಮಾರು…

Read More

ಕ್ವಾಡ್ ಸಭೆ: ಇಂಡೋ-ಪೆಸಿಫಿಕ್ ಇಂಧನ ಭದ್ರತೆ, ಸಮುದ್ರ ಮಾರ್ಗ ಸಂರಕ್ಷಣೆಗೆ ನಿರ್ಧಾರ – Kannada News | Quad Summit: Indo Pacific Energy Security & Sea Route Protection Decisions

ನವದೆಹಲಿ, ಮೇ 26: ಇಂದು ಮಂಗಳವಾರ ಇಲ್ಲಿ ನಡೆದ ಅಮೆರಿಕ, ಜಪಾನ್, ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳನ್ನೊಳಗೊಂಡ ‘ಕ್ವಾಡ್’ (Quad) ಒಕ್ಕೂಟದ ವಿದೇಶಾಂಗ ಸಚಿವರ ಉನ್ನತ ಮಟ್ಟದ ಸಭೆಯಲ್ಲಿ ಹಿಂದೂ-ಮಹಾಸಾಗರ ಮತ್ತು ಪೆಸಿಫಿಕ್ (Indo-Pacific) ವಲಯದಲ್ಲಿ ಮುಕ್ತ ವ್ಯಾಪಾರ, ಇಂಧನ ಭದ್ರತೆ ಹಾಗೂ ಸಮುದ್ರ ಮಾರ್ಗಗಳ ರಕ್ಷಣೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ, ಆಸ್ಟ್ರೇಲಿಯಾದ ವಿದೇಶಾಂಗ…

Read More

‘ಈ ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ’ ಎಂದಿದ್ದ ಉಪ್ಪಿ; ಶಿವಣ್ಣನ ರಿಯಾಕ್ಷನ್ ಹೇಗಿತ್ತು?

ಶಿವರಾಜ್​ಕುಮಾರ್ ಅವರು ‘ಓಂ’ ಸಿನಿಮಾದಲ್ಲಿ ನಟಿಸಿದ್ದಾರೆ. ಉಪೇಂದ್ರ ಈ ಚಿತ್ರಕ್ಕೆ ಡೈರೆಕ್ಟರ್. ಸಿನಿಮಾ ಶೂಟ್ ವೇಳೆ ನಡೆದ ಘಟನೆ ಬಗ್ಗೆ ಉಪೇಂದ್ರ ಅವರು ಮಾತನಾಡಿದ್ದಾರೆ. ‘45’ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಉಪ್ಪಿ ಈ ಘಟನೆ ನೆನಪಿಸಿಕೊಂಡರು. ಒಂದು ದೃಶ್ಯದ ಬಗ್ಗೆ ಶಿವಣ್ಣಗೆ ಅಸಮಾಧಾನ ಇತ್ತು. ಈ ಬಗ್ಗೆ ಉಪೇಂದ್ರ ಬಳಿ ನಿರಂತರವಾಗಿ ಕೇಳಿದ್ದರಂತೆ. ಆದರೆ, ದೃಶ್ಯ ತೆಗೆಯಲು ಉಪೇಂದ್ರ ಒಪ್ಪಲೇ ಇಲ್ಲ. ಕೊನೆಗೆ ಶಿವಣ್ಣ ಅವರು ಯಾರದ್ದೋ ಬಳಿ ಹೇಳಿ ಕಳುಹಿಸಿದರಂತೆ. ಅವರು ಬಂದು ಹೇಳಿದಾಗ, ‘ಈ…

Read More

IND-W vs SL-W: ಶ್ರೀಲಂಕಾ ವಿರುದ್ಧ ಸತತ 4ನೇ ಟಿ20 ಪಂದ್ಯ ಗೆದ್ದ ಭಾರತ – Kannada News | India Women Beat SL by 30 Runs in 4th T20; Secure 4 0 Series Lead!

ತಿರುವನಂತಪುರಂನಲ್ಲಿ ನಡೆದ ಶ್ರೀಲಂಕಾ ಮಹಿಳಾ ತಂಡದ ವಿರುದ್ಧದ ನಾಲ್ಕನೇ ಟಿ20ಪಂದ್ಯವನ್ನು ಆತಿಥೇಯ ಭಾರತ ತಂಡ 30 ರನ್​ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ 4-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಇಬ್ಬರ ಅರ್ಧಶತಕದ ನೆರವಿನಿಂದ 221 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ 191 ರನ್ ಕಲೆಹಾಕಲಷ್ಟೇ ಶಕ್ತವಾಗಿ ಸತತ 4ನೇ ಸೋಲಿಗೆ ಕೊರಳೊಡ್ಡಿತು. Source link

Read More