Headlines

ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ! ಎಲ್ಲವೂ ಸುಟ್ಟು ಭಸ್ಮ – Kannada News | Karnataka Village Fury: Enraged Father in Law Burns Son in Law’s Home Over Love Marriage

ಮಂಡ್ಯ, ಫೆ.21: ಪ್ರೀತಿಸಿ ಮದುವೆಯಾದ ಅಳಿಯನ ಮೇಲೆ ಕೋಪಗೊಂಡ ಮಾವನೊಬ್ಬ ಅಳಿಯನ ಮನೆಗೇ ಬೆಂಕಿ ಹಚ್ಚಿರುವ ಘಟನೆ ಮದ್ದೂರು ತಾಲೂಕಿನ ಚುಂಚಗಹಳ್ಳಿ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿದ್ದ ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯ ತಪ್ಪಿದೆ. ಚುಂಚಗಹಳ್ಳಿ ಗ್ರಾಮದ ವಿನೋದ್ ಮತ್ತು ಕಾವ್ಯಾ ಎಂಬುವರು ಕಳೆದ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿಗೆ ಕಾವ್ಯಾ ಮನೆಯಲ್ಲಿ ತೀವ್ರ ವಿರೋಧವಿತ್ತು. ಮನೆಯವರ ವಿರೋಧದ ನಡುವೆಯೂ ಈ ಜೋಡಿ ಕಳೆದ ಗುರುವಾರ ಮದುವೆಯಾಗಿತ್ತು. ತನ್ನ ಮಗಳು ವಿರೋಧದ ನಡುವೆ ಮದುವೆಯಾಗಿದ್ದರಿಂದ…

Read More

ಕರ್ನಾಟಕ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಬಿಜೆಪಿ ವಿರುದ್ಧ ಒಬಿಸಿ ದಾಳ – Kannada News

ಬೆಂಗಳೂರು, (ಜೂನ್ 03): ಕರ್ನಾಟಕದ ಏಳು ಸ್ಥಾನಗಳಿಗೆ ನಡೆಯುವ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಕಾಂಗ್ರೆಸ್ ತನ್ನ ಪಾಲಿನ ನಾಲ್ಕು ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ. ಬಿ.ಕೆ.ಹರಿಪ್ರಸಾದ್, ಪಿ.ವಿ.ಮೋಹನ್, ಶಿವಣ್ಣ ಮಳವಳ್ಳಿ ಹಾಗೂ ತಿಪ್ಪಣ್ಣಪ್ಪ ಕಮಕನೂರು ಹೆಸರುಗಳು ಎಐಸಿಸಿ ಪ್ರಕಟಿಸಿದೆ. ಈ ಮೂಲಕ ಬಿ.ಕೆ.ಹರಿಪ್ರಸಾದ್ ಹಾಗೂ ತಿಪ್ಪಣ್ಣಪ್ಪ ಕಮಕನೂರು ಅವರನ್ನು ಮತ್ತೊಂದು ಅವಧಿಗೆ ಮುಂದುವರೆಸಿದ್ದು, ಇನ್ನುಳಿದ ಎರಡು ಸ್ಥಾನಗಳಿಗೆ ಹೊಸ ಮುಖಕ್ಕೆ ಮಣೆ ಹಾಕಲಾಗಿದೆ. ಇನ್ನು ನಾಲ್ಕು ಸ್ಥಾನಕ್ಕೂ ಒಬಿಸಿ ಸಮುದಾಯದವರಿಗೆ ಮಣೆ ಹಾಕಿರುವುದು…

Read More

ವೈಭವ್ ಸೂರ್ಯವಂಶಿ ‘A’ ಸೆಲೆಬ್ರೇಷನ್ ರಹಸ್ಯ ಬಯಲು! – Kannada News | Vaibhav sooryavanshi celebration meaning

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿ ಇಡೀ ವಿಶ್ವ ಕ್ರಿಕೆಟ್ ಗಮನ ಸೆಳೆದಿರುವ ರಾಜಸ್ಥಾನ್ ರಾಯಲ್ಸ್‌ನ ಯುವ ಆಟಗಾರ ವೈಭವ್ ಸೂರ್ಯವಂಶಿ, ಈಗ ತಮ್ಮ ವಿಭಿನ್ನ ಆಟದ ಶೈಲಿ ಮತ್ತು ವಿಶಿಷ್ಟ ಬ್ಯಾಟಿಂಗ್ ಸಂಭ್ರಮಾಚರಣೆಗಳಿಂದಲೇ ಭಾರಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಅರ್ಧಶತಕ ಬಾರಿಸಿದ ನಂತರ, ಎರಡೂ ಕೈಗಳನ್ನು ಎತ್ತಿ ‘A’ ಆಕಾರದ ಸೈನ್ ತೋರಿಸುವ ಮೂಲಕ ಸಂಭ್ರಮಿಸಿದ್ದರು. ಈ ಆಚರಣೆ ಸಾಮಾಜಿಕ…

Read More

RCBಯ 5ನೇ ವಿದೇಶಿ ಆಟಗಾರ… ವಿರಾಟ್ ಕೊಹ್ಲಿಯ ಕಾಲೆಳೆದ ಮಿಸ್ಟರ್ ನಾಗ್ಸ್​..!

ಐಪಿಎಲ್ 2026ರ ಸೀಸನ್ ಆರಂಭವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಚಿತ್ರ ಸುದ್ದಿ ವೈರಲ್ ಆಗಿತ್ತು. ಅದೇನೆಂದರೆ, “ಈ ಬಾರಿ ಆರ್‌ಸಿಬಿ ತಂಡದಲ್ಲಿ 5 ವಿದೇಶಿ ಆಟಗಾರರು ಆಡುತ್ತಿದ್ದಾರೆ” ಎಂಬುದು. ಐಪಿಎಲ್ ನಿಯಮದ ಪ್ರಕಾರ ಪ್ಲೇಯಿಂಗ್ ಇಲೆವೆನ್​ನಲ್ಲಿ ಕೇವಲ ನಾಲ್ವರು ವಿದೇಶಿಯರಿಗೆ ಮಾತ್ರ ಅವಕಾಶವಿದೆ, ಹಾಗಿದ್ದ ಮೇಲೆ ಇದು ಹೇಗೆ ಸಾಧ್ಯ? ಎಂಬ ಪ್ರಶ್ನೆ ನಿಮ್ಮಲ್ಲೂ ಮೂಡಿಬರಬಹುದು. ಆದರೆ ಅಸಲಿ ವಿಷಯ ಎಂದರೆ, ಇಲ್ಲಿ 5ನೇ ವಿದೇಶಿ ಆಟಗಾರ ಬೇರೆ ಯಾರೂ ಅಲ್ಲ, ಅದು ನಮ್ಮ ವಿರಾಟ್ ಕೊಹ್ಲಿ!…

Read More

Vastu for Office Bag: ಆಫೀಸ್ ಬ್ಯಾಗ್​​ನಲ್ಲಿ ಈ ವಸ್ತು ಇಡಲೇಬೇಡಿ; ವೃತ್ತಿಜೀವನದ ಅಡೆತಡೆಗೆ ಇದೇ ಮುಖ್ಯ ಕಾರಣ! – Kannada News | Vastu for Office Bag: Keep These to Boost Career and Success | Avoid Negative Energy

ಪ್ರತಿದಿನ ಮನೆಯಿಂದ ಕಚೇರಿಗೆ ಹೋಗುವಾಗ ತೆಗೆದುಕೊಂಡು ಹೋಗುವ ಬ್ಯಾಗ್​ ಕೇವಲ ವಸ್ತುಗಳನ್ನು ಸಾಗಿಸುವ ಸಾಧನವಲ್ಲ, ಅದು ನಿಮ್ಮ ವೃತ್ತಿಪರ ಶಕ್ತಿ, ಮನೋಭಾವ ಮತ್ತು ಕಾರ್ಯಶೈಲಿಯ ಪ್ರತಿಬಿಂಬವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ದಿಕ್ಕುಗಳು ಎಷ್ಟು ಮುಖ್ಯವೋ, ಅಷ್ಟೇ ಮಹತ್ವವು ನಾವು ದಿನನಿತ್ಯ ಬಳಸುವ ವಸ್ತುಗಳ ಸ್ಥಿತಿಗೂ ಇದೆ. ವಿಶೇಷವಾಗಿ ಕಚೇರಿಗೆ ತೆಗೆದುಕೊಂಡು ಹೋಗುವ ಬ್ಯಾಗ್​ನಲ್ಲಿ ಇಡುವ ವಸ್ತುಗಳು ನಮ್ಮ ಕೆಲಸದ ಮೇಲೆ ನೇರ ಪರಿಣಾಮ ಬೀರುತ್ತವೆ. ಅನೇಕ ಬಾರಿ ಅದರಲ್ಲಿ ತಿಳಿಯದೆ ಇಡುವ ಕೆಲವು ವಸ್ತುಗಳು ನಮ್ಮ…

Read More

ಸಾರ್ವಜನಿಕವಾಗಿ ಮಚ್ಚು ಹಿಡಿದ ಪ್ರಕರಣ: ನಟ ಪ್ರಖ್ಯಾತ್ ಹೇಳಿದ್ದೇನು? – Kannada News | JC Movie hero Prakhyat talks about police notice

ಜೆಸಿ ಸಿನಿಮಾದ ನಾಯಕ ಪ್ರಖ್ಯಾತ್ ಇತ್ತೀಚೆಗೆ ಸಾರ್ವಜನಿಕವಾಗಿ ಮಚ್ಚು ಹಿಡಿದಿದ್ದ ವಿಡಿಯೋ ವೈರಲ್ ಆಗಿತ್ತು. ಯಾರೋ ಅಭಿಮಾನಿ ಕೊಟ್ಟ ಮಚ್ಚನ್ನು ನಟ ಪ್ರಖ್ಯಾತ್ ಹಿಡಿದುಕೊಂಡಿದ್ದರು. ಈ ಘಟನೆಯ ಬಗ್ಗೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಪ್ರಕರಣ ಕುರಿತಾಗಿ ವಿಚಾರಣೆಗೆಂದು ಪ್ರಖ್ಯಾತ್ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಬಳಿಕ ಮಾಧ್ಯಮಗಳ ಬಳಿ ಮಾತನಾಡಿದ ಪ್ರಖ್ಯಾತ್, ‘ಅಂದು ಅಚಾನಕ್ಕಾಗಿ ಯಾರೋ ಬಂದು ಮಚ್ಚು ಕೊಟ್ಟ, ನಾನು ಅದನ್ನು ತೆಗೆದುಕೊಂಡು ಎಸೆದುಬಿಟ್ಟೆ. ನಮ್ಮ ಸಿನಿಮಾ ಹೇಳುತ್ತಿರುವುದೇ ಮಚ್ಚು ಹಿಡೀಬಾರದು ಎಂದು. ನಾನು…

Read More

ಶುಕ್ರನ ದೆಸೆಯಿಂದ ಸಂಗಾತಿಯೊಂದಿಗೆ ರೋಮ್ಯಾಂಟಿಕ್ ಕ್ಷಣ ಕಳೆಯಬಹುದು, ಆದರೆ ಈ ತಪ್ಪು ಮಾಡಬೇಡಿ

ಮಾರ್ಚ್ 22ರಿಂದ ಮಾರ್ಚ್ 28ರವರೆಗೆ ನಾಲ್ಕನೇ ವಾರವಾಗಿದ್ದು ಶುಕ್ರನು ಮೇಷ ರಾಶಿಯನ್ನು ಪ್ರವೇಶಿಸುವನು.‌ ಮಿತ್ರನ ರಾಶಿಯಾದ ಕಾರಣ ಸ್ತ್ರೀ-ಪುರುಷರ ವ್ಯವಹಾರ ದಾರಿ ತಪ್ಪಬಹುದು. ಕುಜನ ಮೇಲೆ ಗುರು ದೃಷ್ಟಿ ಇದ್ದರೂ ಅವಗಡ ಸಾಧ್ಯತೆವಿದೆ. ದಾಂಪತ್ಯದಲ್ಲಿ ಸುಖಮಯ ವಾತಾವರಣ ವೃದ್ಧಿಯಾಗುವುದು. ಮೇಷ: ಈ ವಾರ ಪ್ರೇಮ ಜೀವನದಲ್ಲಿ ಉತ್ಸಾಹ ಹೆಚ್ಚಲಿದೆ. ಸಂಗಾತಿಯೊಂದಿಗೆ ಸಣ್ಣ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಅವಿವಾಹಿತರಿಗೆ ಹೊಸ ಸಂಬಂಧಗಳು ಕೂಡಿಬರಲಿವೆ. ಹಳೆಯ ಭಿನ್ನಾಭಿಪ್ರಾಯಗಳು ದೂರವಾಗಿ ಬಾಂಧವ್ಯ ಗಟ್ಟಿಯಾಗುವುದು. ​ವೃಷಭ: ನಿಮಗೆ ಶುಕ್ರನ ಕೃಪೆಯಿಂದ ಪ್ರೇಮ…

Read More

ಅಕ್ಷಯ್ ಖನ್ನಾ ಬದಲಿಗೆ ‘ಪಾತಾಳ್ ಲೋಕ್’ ನಟನಿಗೆ ‘ದೃಶ್ಯಂ 3’ ಅವಕಾಶ – Kannada News | Patal Lok actor Jaideep Ahlawat replaces Akshaye Khanna in Drishyam 3

ಬಾಲಿವುಡ್ ನಟ ಅಕ್ಷಯ್ ಖನ್ನಾ (Akshaye Khanna) ಅವರಿಗೆ ‘ಧುರಂಧರ್’ ಸಿನಿಮಾದಿಂದ ಏಕಾಏಕಿ ಅವಕಾಶ ಹೆಚ್ಚಾಯಿತು. ಒಮ್ಮೆಲೇ ಅವರ ಜನಪ್ರಿಯತೆ ಮುಗಿಲು ಮುಟ್ಟಿತು. ಇದರಿಂದಾಗಿ ಅವರ ಡಿಮ್ಯಾಂಡ್ ಜಾಸ್ತಿ ಆಗಿದೆ. 2ರಿಂದ 3 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದ ಅವರು ಈಗ ಏಕಾಏಕಿ 20 ಕೋಟಿ ರೂಪಾಯಿಗೂ ಅಧಿಕ ಸಂಭಾವನೆ ಬೇಕು ಎಂದು ಕೇಳುತ್ತಿದ್ದಾರೆ. ಇದರಿಂದಾಗಿ ‘ದೃಶ್ಯಂ 3’ (Drishyam 3) ಸಿನಿಮಾದ ನಿರ್ಮಾಪಕರಿಗೆ ಕೋಪ ಬಂದಿದೆ. ಹಾಗಾಗಿ ಅಕ್ಷಯ್ ಖನ್ನಾ ಬದಲಿಗೆ ಜೈದೀಪ್ ಅಹಲಾವತ್ (Jaideep…

Read More

ದಿಗಂಬರ ಜೈನ ಸನ್ಯಾಸಿಗಳು ಬಟ್ಟೆಗಳನ್ನೇಕೆ ಧರಿಸುವುದಿಲ್ಲ? ಇದರ ಹಿಂದಿನ ಕಾರಣವೇನು ಗೊತ್ತೇ? – Kannada News | Why don’t Jain monks wear clothes? What is the reason behind this?

ಸಾಮಾನ್ಯವಾಗಿ ಸಾಧು, ಸಂತರು, ಸನ್ಯಾಸಿಗಳು (monks) ಕೇಸರಿ ಮತ್ತು ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ. ಆದರೆ ಜೈನ ಧರ್ಮದಲ್ಲಿನ ದಿಗಂಬರ ಸನ್ಯಾಸಿಗಳು ಬಟ್ಟೆಗಳನ್ನು ಧರಿಸುವುದೇ ಇಲ್ಲ. ಶಾಂತಿ ಮತ್ತು ಅಹಿಂಸೆಯ ತತ್ವವನ್ನು ಪಾಲಿಸುವ ಮೂಲಕ ಕಠಿಣ ನಿಯಮದ, ಶಿಸ್ತಿನ ಜೀವನ ನಡೆಸುವ ದಿಗಂಬರ ಸನ್ಯಾಸಿಗಳು ಮೈ ಮೇಲೆ ಬಟ್ಟೆಗಳನ್ನು ಧರಿಸುವುದಿಲ್ಲ. ಶ್ವೇತಾಂಬರ ಪಂಥದ ಸನ್ಯಾಸಿಗಳು ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಿದರೆ, ದಿಗಂಬರ ಜೈನ ಸನ್ಯಾಸಿಗಳು ತುಂಡು ಬಟ್ಟೆಯನ್ನು ಸಹ ಧರಿಸುವುದಿಲ್ಲ. ಇದು ಕೇವಲ ಸಂಪ್ರದಾಯದ ಒಂದು ಭಾಗವೇ?…

Read More

Vastu Tips: ಮನೆಯಲ್ಲಿ ಹಂಸಗಳ ಫೋಟೋ ಇಡುವುದು ಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು? – Kannada News | Vastu Tips: Swan Images for Home Prosperity and Harmony; Vastu Benefits

ವಾಸ್ತು ಶಾಸ್ತ್ರವು ಮನೆಯಲ್ಲಿ ಯಾವ ರೀತಿಯ ವಸ್ತುಗಳನ್ನು ಇಡಬೇಕು? ಯಾವ ರೀತಿಯ ವಸ್ತುಗಳನ್ನು ಇಡಬಾರದು ಎಂಬುದನ್ನು ಹೇಳುತ್ತದೆ. ಅವುಗಳನ್ನು ಎಲ್ಲಿ ಇಡಬೇಕು ಎಂಬುದನ್ನು ಸಹ ಇದು ವಿವರಿಸುತ್ತದೆ. ಅನೇಕ ಜನರು ತಮ್ಮ ಮನೆ ನಿರ್ಮಾಣ ಮತ್ತು ಮನೆಯಲ್ಲಿರುವ ವಸ್ತುಗಳನ್ನು ವಾಸ್ತು ಪ್ರಕಾರ ಆಯಾ ದಿಕ್ಕಿನಲ್ಲಿ ಜೋಡಿಸುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕೆಲವು ಚಿತ್ರಗಳು ಅಥವಾ ಪ್ರತಿಮೆಗಳನ್ನು ಹೊಂದಿರುವುದು ಒಳ್ಳೆಯದು. ಇವುಗಳನ್ನು ಮನೆಯಲ್ಲಿ ಇಡುವುದು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಪೂರ್ವ ದಿಕ್ಕಿನಲ್ಲಿ ಹಂಸಗಳ ಚಿತ್ರ ಇದ್ದರೆ ಶುಭ: ವಾಸ್ತು…

Read More