Headlines

ಅಡ್ಡಬಂದ ಕಾರು ತಪ್ಪಿಸಲು ಹೋಗಿ ಮರಕ್ಕೆ ಗುದ್ದಿದ ಬಸ್​​: ಆಸ್ಪತ್ರೆ ಮುಂದೆಯೇ ಅಪಘಾತ!

ಬೆಳಗಾವಿ, ಮಾರ್ಚ್​​ 15: ಅಡ್ಡಬಂದ ಕಾರು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಸರ್ಕಾರಿ ಬಸ್ ಮರಕ್ಕೆ ಡಿಕ್ಕಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದಿದೆ. ಅಪಘಾತದಲ್ಲಿ ಬಸ್​ನಲ್ಲಿದ್ದ 11 ಪ್ರಯಾಣಿಕರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಕಾರು ಚಾಲಕನ ನಿರ್ಲಕ್ಷ್ಯದಿಂದಾಗಿ ಸರ್ಕಾರಿ ಆಸ್ಪತ್ರೆಯ ಮುಂಭಾಗವೇ ಬಸ್​​ ಅಪಘಾತಕ್ಕೀಡಾಗಿದ್ದು, ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ. Source link

Read More

ಹೋಟೆಲ್‌ ಗ್ರಾಹಕರಿಗೆ ಮತ್ತೊಂದು ಶಾಕ್: ಇನ್ಮುಂದೆ ಊಟ-ತಿಂಡಿಗೆ ಹೆಚ್ಚು ಹೊತ್ತು ಕಾದು ಕುಳಿತುಕೊಳ್ಳುವುದು ಅನಿವಾರ್ಯ!

ಬೆಂಗಳೂರು, ಏಪ್ರಿಲ್ 13: ಹೋಟೆಲ್‌ಗೆ (Hotels) ಹೋದ ತಕ್ಷಣ ಬಿಸಿ ಬಿಸಿ ತಿಂಡಿ ಅಥವಾ ಊಟ ಸಿಗುತ್ತದೆ ಎಂಬ ಕಾಲ ಈಗ ಬದಲಾಗುತ್ತಿದೆ! ಇರಾನ್, ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮದಿಂದಾಗಿ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವ ಎದುರಾಗಿದ್ದು, ಬೆಂಗಳೂರಿನ (Bengaluru) ಹೋಟೆಲ್‌ಗಳಲ್ಲಿ ಸರ್ವೀಸ್ ಸಮಯವನ್ನು ಹೆಚ್ಚಿಸಲಾಗಿದೆ. ಇನ್ಮುಂದೆ ನೀವು ಆರ್ಡರ್ ಮಾಡಿದ ತಿಂಡಿ ನಿಮ್ಮ ಕೈ ಸೇರಲು ಕನಿಷ್ಠ 15 ರಿಂದ 20 ನಿಮಿಷ ಕಾಯುವುದು ಅನಿವಾರ್ಯವಾಗಲಿದೆ. ಸಿಲಿಂಡರ್ ಅಭಾವಕ್ಕೆ ಸೌದೆ ಒಲೆ ಪರ್ಯಾಯ ಕೆಲ ದಿನಗಳ ಹಿಂದಷ್ಟೇ ಸಿಲಿಂಡರ್…

Read More

ಸರ್ಕಾರದ ವಿರುದ್ಧ ಸಿಡಿದೆದ್ದ ಬೆಂಗಳೂರಿನ ಬೀದಿಬದಿ ವ್ಯಾಪಾರಿಗಳು: ಇವರ ಹಕ್ಕೊತ್ತಾಯಗಳೇನು? – Kannada News | Street Vendor Protest Against Eviction: Vendors Demand Fair Trading Spaces

ಬೀದಿಬದಿ ವ್ಯಾಪಾರಿಗಳಿಂದ ಪ್ರತಿಭಟನೆImage Credit source: tv9 kannada ಬೆಂಗಳೂರು, ಜುಲೈ 08: ನಗರದಲ್ಲಿ ಫುಟ್​​ಪಾತ್ ಒತ್ತುವರಿ ತೆರವು (Footpath Encroachment) ಕಾರ್ಯಚರಣೆ ಮುಂದುವರೆದಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಈ ಆಪರೇಷನ್​ ಬೀದಿಬದಿ ವ್ಯಾಪಾರಿಗಳ ನಿದ್ದೆಗೆಡಿಸಿದೆ. ಹೀಗಾಗಿ  ವ್ಯಾಪಾರ, ವಹಿವಾಟು ಬಂದ್ ಮಾಡಿ ನೂರಾರು ಬೀದಿಬದಿ ವ್ಯಾಪಾರಿಗಳು ಇಂದು ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟಿಸಿದರು. ಒಕ್ಕಲೆಬ್ಬಿಸಿದ ಬೀದಿಬದಿ ವ್ಯಾಪಾರಿಗಳಿಗೆ ಮತ್ತೆ ಅದೇ ಸ್ಥಳವನ್ನು ನೀಡಬೇಕು ಎಂದು ಒತ್ತಾಯಿಸಿದ್ದು ಜೊತೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ್ದಾರೆ. ಬೀದಿಬದಿ ವ್ಯಾಪಾರಿಗಳಿಂದ ವಿವಿಧ…

Read More

ಜನವರಿ 30-31ರಂದು ಹೈದರಾಬಾದ್​ನಲ್ಲಿ ಅಪೋಲೋ ಹಾಸ್ಪಿಟಲ್ಸ್​ನಿಂದ ‘ಇಂಟರ್ನ್ಯಾಷನಲ್ ಹೆಲ್ತ್ ಡೈಲೋಗ್’ – Kannada News | Apollo Hospitals organizing International Health Dialogue 2026 on Jan 30 31 at Hyderabad

ಹಿಂದಿನ ವರ್ಷದ ಐಎಚ್​ಡಿ ಸಮಾವೇಶದ ಒಂದು ಚಿತ್ರ ಹೈದರಾಬಾದ್, ಜನವರಿ 9: ಇದೇ ತಿಂಗಳ ಕೊನೆಯ ಎರಡು ದಿನಗಳಂದು ಅಂತಾರಾಷ್ಟ್ರೀಯ ಆರೋಗ್ಯ ಸಂವಾದ ಕಾರ್ಯಕ್ರಮ ನಡೆಯಲಿದೆ. ಅಪೋಲೋ ಹಾಸ್ಪಿಟಲ್ಸ್ ಆಯೋಜಿಸುತ್ತಿರುವ ಇಂಟರ್ನ್ಯಾಷನಲ್ ಹೆಲ್ತ್ ಡೈಲೋಗ್​ನ 13ನೇ ಆವೃತ್ತಿ (IHD- International Health Dialogue) ಜನವರಿ 30-31ರಂದು ನಡೆಯಲಿದೆ. ಹೈದರಾಬಾದ್​ನಲ್ಲಿ ನಡೆಯುವ 2026ರ ಆವೃತ್ತಿಯ ಈ ಕಾರ್ಯಕ್ರಮದ ಥೀಮ್ ‘ಗ್ಲೋಬಲ್ ವಾಯ್ಸಸ್, ಒನ್ ವಿಶನ್’ (ಜಾಗತಿಕ ಧ್ವನಿಗಳು, ಒಂದೇ ದೃಷ್ಟಿ). ಜಾಗತಿಕ ಹೊರಹೊಮ್ಮುವ ಹೊಸ ಐಡಿಯಾಗಳು, ಇನ್ನೋವೇಶನ್​ಗಳು ಮತ್ತು…

Read More

‘ಜನ ನಾಯಗನ್’ ಪ್ರಕರಣ ಕೋರ್ಟ್​​ನಲ್ಲಿರುವಾಗ ವಿಜಯ್​ಗೆ ಸಿಬಿಐನಿಂದ ಸಂಕಷ್ಟ – Kannada News | Actor Vijay Faces CBI Inquiry for Karur Incident Amid Jana Nayagan Film in SC

ಟಿವಿಕೆ ಮುಖ್ಯಸ್ಥ ಹಾಗೂ ನಟ ದಳಪತಿ ವಿಜಯ್​ಗೆ (Thalapathy Vijya) ಒಂದಾದ ಮೇಲೆ ಒಂದರಂತೆ ಕಷ್ಟ ಎದುರಾಗುತ್ತಿದೆ. ಅವರ ನಟನೆಯ ‘ಜನ ನಾಯಗನ್’ ರಿಲೀಸ್ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆ ಸಿಗುತ್ತಿಲ್ಲ. ಹೀಗಿರುವಾಗಲೇ ಅವರು ಸಿಬಿಐ ವಿಚಾರಣೆ ಎದುರಿಸಬೇಕಾಗಿದೆ. ದೆಹಲಿಯ ಸಿಬಿಐ ಕಚೇರಿಗೆ ತೆರಳಿ ಅವರು ವಿಚಾರಣೆ ಎದುರಿಸಿದ್ದಾರೆ. ಇದಕ್ಕೆ ಕಾರಣ ಕರೂರು ಕಾಲ್ತುಳಿತದ ಘಟನೆ. ಈ ಪ್ರಕರಣದಲ್ಲಿ ಅವರಿಗೆ ಮುಂದಿನ ದಿನಗಳಲ್ಲಿ ಸಂಕಷ್ಟ ಹೆಚ್ಚೋ ಸಾಧ್ಯತೆ ಇದೆ. ಕಳೆದ ವರ್ಷ ಸೆಪ್ಟೆಂಬರ್ 27ರಂದು ವಿಜಯ್ ಅವರು…

Read More

ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ

ಬೆಂಗಳೂರು, ಮೇ 29: ರಾಜಗುರು ದ್ವಾರಕಾನಾಥ್ ಗುರೂಜಿ ಅವರು ಡಿಕೆ ಶಿವಕುಮಾರ್ ಅವರ ರಾಜಕೀಯ ಜೀವನದ ಬಗ್ಗೆ ಮಹತ್ವದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಗುರೂಜಿ ಪ್ರಕಾರ, ಡಿಕೆ ಶಿವಕುಮಾರ್ ಅವರ ಜಾತಕದಲ್ಲಿ ಬುಧಾದಿತ್ಯ ಯೋಗವಿದ್ದು, ಇದು ಅವರಿಗೆ ಉನ್ನತ ಸ್ಥಾನಗಳನ್ನು ತಂದುಕೊಡುತ್ತದೆ. ಬಂಗಾರಪ್ಪನವರ ಕಾಲದಿಂದಲೂ ಶಿವಕುಮಾರ್ ಅವರೊಂದಿಗೆ ಸಂಪರ್ಕದಲ್ಲಿರುವ ಗುರೂಜಿ, 40 ವರ್ಷಗಳ ಹಿಂದೆಯೇ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾಗಿ ತಿಳಿಸಿದ್ದಾರೆ. ಡಿಕೆ ಶಿವಕುಮಾರ್​ಗೆ ಅಧಿಕಾರ ಸ್ವಲ್ಪ ತಡವಾಗಿ ಸಿಕ್ಕಿದ್ದು, ಈ ಹಾದಿಯು ಸವಾಲುಗಳಿಂದ ಕೂಡಿದೆ ಎಂದು…

Read More

ಮದುವೆ ಮನೆಗೆ ಬಂದು ವೇದಿಕೆಯಲ್ಲಿದ್ದ ವಧುವಿನ ಹೊಟ್ಟೆಗೆ ಗುಂಡು ಹಾರಿಸಿದ ಮಾಜಿ ಪ್ರಿಯಕರ – Kannada News | Bihar: Wedding Celebration Turns Violent as Bride Shot During Ceremony

ಬಕ್ಸಾರ್, ಫೆಬ್ರವರಿ 25: ಮದುವೆ(Marriage) ಮನೆಗೆ ಬಂದು ವೇದಿಕೆಯಲ್ಲಿದ್ದ ಮಾಜಿ ಪ್ರೇಯಸಿಯ ಹೊಟ್ಟೆಗೆ ವ್ಯಕ್ತಿ ಗುಂಡು ಹಾರಿಸಿರುವ ಘಟನೆ ಬಿಹಾರದ ಬಕ್ಸಾರ್​​ನಲ್ಲಿ ನಡೆಯಲಿದೆ. ಗುಂಡು ಹಾರಿಸಿದಾಗ ಆರತಿ ಕುಮಾರಿ ವರನ ಜೊತೆಗೆ ವೇದಿಕೆಯಲ್ಲಿದ್ದರು. ವಧು-ವರರ ಪಕ್ಕದಲ್ಲಿ ಅವರ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಇದ್ದರು. ಆರತಿಯ ಸಂಬಂಧಿಕರೊಬ್ಬರು ವೇದಿಕೆಯಲ್ಲಿ ವರನ ಹಣೆಗೆ ಸಿಂಧೂರ ಹಚ್ಚುವ ಆಚರಣೆಯನ್ನು ಮಾಡುತ್ತಿದ್ದರು. ವೇದಿಕೆಯ ಮುಂದೆ ನಿಂತಿದ್ದ ಅತಿಥಿಗಳಲ್ಲಿ ಒಬ್ಬ ವ್ಯಕ್ತಿ ವಧುವಿನ ಮೇಲೆ ಗುಂಡು ಹಾರಿಸಿದ್ದಾನೆ. ಆರತಿಯ ಹೊಟ್ಟೆಗೆ ಗುಂಡು ತಗುಲಿತ್ತು,…

Read More

ಕಾರು ಮಾರಾಟ ಮಾಡಿ ಕೇವಲ 24 ಗಂಟೆಯೊಳಗೆ ಅದೇ ಕಾರು ಕದ್ದು ಮತ್ತೆ ಮಾರಾಟ ಮಾಡುತ್ತಿದ್ದ ವ್ಯಕ್ತಿ ಸೆರೆ – Kannada News | Facebook Marketplace Car Theft: Kansas Man Caught Reselling Stolen Vehicles

ಕಾನ್ಸಾಸ್, ಜನವರಿ 23: ವ್ಯಕ್ತಿಯೊಬ್ಬ ಫೇಸ್​ಬುಕ್​ನಲ್ಲಿ ಕಾರು(Car) ಮಾರಾಟ ಮಾಡಿ ಅದೇ ದಿನ ಆ ಕಾರನ್ನು ಕದಿಯುತ್ತಿದ್ದ ಕಳ್ಳನನ್ನು ಕಾನ್ಸಾಸ್ ನಗರದ ಸೆರೆಹಿಡಿಯಲಾಗಿದೆ. ಆ ವ್ಯಕ್ತಿ ಇಲ್ಲಿಯವರೆಗೆ ಒಂದೇ ಕಾರನ್ನು 8 ಬಾರಿ ಮಾರಾಟ ಮಾಡಿದ್ದಾನೆ. ಈ ಹಗರಣದಲ್ಲಿ ವಾಹನಗಳನ್ನು ಬಹು ಖರೀದಿದಾರರಿಗೆ ಮಾರಾಟ ಮಾಡಿ ಒಂದು ದಿನದೊಳಗೆ ಕದಿಯಲಾಗುತ್ತಿತ್ತು. ಒಪ್ಪಂದಗಳನ್ನು ಕಾನೂನುಬದ್ಧವಾಗಿ ಕಾಣುವಂತೆ ಮಾಡಲು ನಕಲಿ ದಾಖಲೆಗಳನ್ನು ಬಳಸಿದ್ದ. ಮಮಡೌ ಡಿಯಲ್ಲೋ ಎಂಬಾತನೇ ಹೀಗೆ ಕಾರುಗಳನ್ನು ಮಾರಾಟ ಮಾಡಿ ಕದಿಯುತ್ತಿದ್ದ ವ್ಯಕ್ತಿ. ಕಾರನ್ನು ಕೊಡುವ ಮೊದಲು…

Read More

Video: ಬಾವಿ ಕಟ್ಟೆ ಹತ್ತಿ ಎರಡೂ ಕೈಗಳಲ್ಲೂ ಮಕ್ಕಳನ್ನು ಹಿಡಿದು ಮಹಿಳೆಯ ಡ್ಯಾನ್ಸ್​ – Kannada News | Chasing Likes and Views, Woman Risks Children’s Lives Internet Outrage Follows

ಛೇ ಇದೇನಿದು ಹುಚ್ಚಾಟ, ರೀಲ್ಸ್​ ಹುಚ್ಚಿಗಾಗಿ ಮಹಿಳೆ ತನ್ನ ಮಕ್ಕಳನ್ನೇ ಕಳೆದುಕೊಳ್ಳಬಹುದಿತ್ತು, ಲೈಕ್ಸ್​, ಕಮೆಂಟ್​ಗಾಗಿ ಜೀವವನ್ನೇ ಪಣಕ್ಕಿಟ್ಟು ಅಪಾಯಕಾರಿ ಸಾಹಸ ಮಾಡುವುದು ಎಷ್ಟು ಸರಿ. ರೀಲ್ಸ್​ಗಾಗಿ ಮಹಿಳೆ ಬಾವಿಯ ಮೇಲೆ ಮಕ್ಕಳನ್ನು ನಿಲ್ಲಿಸಿಕೊಂಡು ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಸೀರೆ ಉಟ್ಟ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಬಾವಿಯ ಅಂಚಿನಲ್ಲಿ ನಿಂತಿರುವುದನ್ನು ನೀವು ನೋಡಬಹುದು. ಭೋಜ್‌ಪುರಿ ಹಾಡು ಪ್ಲೇ ಆಗುತ್ತಿದ್ದಂತೆ, ಅವರು ನೃತ್ಯ ಮಾಡಲು ಪ್ರಾರಂಭಿಸುತ್ತಾರೆ. ಮಕ್ಕಳ ಕೈಗಳನ್ನು ಬಿಡದಿರುವುದು ಆ ಮಕ್ಕಳ ಅದೃಷ್ಟವೇ ಸರಿ….

Read More

ಕಡಿಮೆ ಆಗಿಲ್ಲ ಶ್ರೀನಾಥ್ ಎನರ್ಜಿ; ‘ನೀನೆ ಸಾಕಿದ ಗಿಣಿ’ ಹಾಡಿಗೆ ಡ್ಯಾನ್ಸ್ – Kannada News | Actor Srinath Dance For Neene sakida Gini Song

ನಟ ಶ್ರೀನಾಥ್ ಅವರಿಗೆ ಈಗ 82 ವರ್ಷ ವಯಸ್ಸು. ಅವರಿಗೆ ಇನ್ನೂ ಎನರ್ಜಿ ಕಡಿಮೆ ಆಗಿಲ್ಲ. ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ನಾಲವಾರದ ಮಠದಲ್ಲಿ ನಡೆದ ಕೋರಿ ಸಿದ್ದೇಶ್ವರ ಜಾತ್ರೆಗೆ ನಟ ಶ್ರೀನಾಥ್ ಬಂದಿದ್ದರು. ಈ ವೇಳೆ ‘ಮಾನಸ ಸರೋವರ’ ಚಿತ್ರದ ‘ನೀನೆ ಸಾಕಿದ ಗಿಣಿ’ ಹಾಡಿಗೆ ಶ್ರೀನಾಥ್ ಮಕ್ಕಳೊಂದಿಗೆ ಹೆಜ್ಜೆ ಹಾಕಿದ್ದಾರೆ. ನಂತರ ಸಿದ್ದ ತೋಟೆಂದ್ರ ಶಿವಾಚಾರ್ಯರಿಂದ ನಾಲವಾರ ರತ್ನ ಪ್ರಶಸ್ತಿ ಸ್ವೀಕರಿಸಿದರು. ಶ್ರೀನಾಥ್ ಅವರ ಎನರ್ಜಿ ನೋಡಿ ಎಲ್ಲರಿಗೂ ಖುಷಿ ಆಗಿದೆ. ಆ ಸಂಧರ್ಭದ…

Read More