Headlines

ಡಿಸೆಂಬರ್ ತ್ರೈಮಾಸಿಕ ವರದಿ ಬಿಡುಗಡೆ ನಂತರ ಪತಂಜಲಿ ಷೇರುಗಳಿಗೆ ಬೇಡಿಕೆ; ಹೂಡಿಕೆದಾರರಿಗೆ ಭರ್ಜರಿ ಲಾಭ – Kannada News | Patajali Foods investors gain a lot after company’s December end quarterly report release

ಪತಂಜಲಿ ಫುಡ್ಸ್ ಲಿಮಿಟೆಡ್‌ನ (Patanjali Foods) ಮೂರನೇ ತ್ರೈಮಾಸಿಕದ ಫಲಿತಾಂಶ ಪ್ರಕಟಗೊಂಡ ಬಳಿಕ ಅದರ ಷೇರುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದೆ. ಇವತ್ತು ಸೋಮವಾರ ಅದರ ಷೇರುಬೆಲೆ 3 ರೂ ಕಡಿಮೆಗೊಂಡು 531 ರೂಗೆ ಇಳಿದಿದೆ. ಆದರೆ, ಅದಕ್ಕೂ ಹಿಂದಿನ ಏಳು ಟ್ರೇಡಿಂಗ್ ದಿನಗಳಲ್ಲಿ ಷೇರುಬೆಲೆಯಲ್ಲಿ ಶೇ. 2.50ರಷ್ಟು ಏರಿಕೆ ಇತ್ತು. ಇದರಿಂದಾಗಿ ಅದರ ಮಾರುಕಟ್ಟೆ ಬಂಡವಾಳ 58,000 ಕೋಟಿ ರೂ ಗಡಿ ದಾಟಿತ್ತು. ಹೂಡಿಕೆದಾರರಿಗೆ 1,500 ಕೋಟಿ ರೂ ಲಾಭ ತಂದುಕೊಟ್ಟಿದೆ. ಕಂಪನಿಯ ತ್ರೈಮಾಸಿಕ ವರದಿ (Quarterly…

Read More

ಜೂ ಎನ್​​ಟಿಆರ್ ಸಿನಿಮಾಕ್ಕೆ ಬಾಲಿವುಡ್​​ ನಟನ ಕರೆತಂದ ಪ್ರಶಾಂತ್ ನೀಲ್: ಯಾರದು? – Kannada News | Anil Kapoor joined Jr NTR starrer Dragon movie

‘ಕೆಜಿಎಫ್’ (KGF) ಸಿನಿಮಾ ಸರಣಿಯಿಂದಾಗಿ ಪ್ಯಾನ್ ಇಂಡಿಯಾ ಸ್ಟಾರ್ ನಿರ್ದೇಶಕ ಎನಿಸಿಕೊಂಡಿರುವ ಪ್ರಶಾಂತ್ ನೀಲ್, ‘ಸಲಾರ್’ ಸಿನಿಮಾ ಮೂಲಕ, ‘ಕೆಜಿಎಫ್’ ಗೆಲುವು ಅದೃಷ್ಟವಲ್ಲ ಎಂದು ಸಾಭೀತುಪಡಿಸಿದ್ದಾರೆ. ಇದೀಗ ಪ್ರಶಾಂತ್ ನೀಲ್, ಜೂ ಎನ್​​ಟಿಆರ್ ನಟನೆಯ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ‘ಡ್ರ್ಯಾಗನ್’ ಎಂದು ಹೆಸರಿಡಲಾಗಿದೆ. ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದು, ಕೆಲವು ಕನ್ನಡದ ನಟರೂ ಸಹ ಸಿನಿಮಾನಲ್ಲಿದ್ದಾರೆ. ಇದೀಗ ಪ್ರಶಾಂತ್ ನೀಲ್ ಅವರು ‘ಡ್ರ್ಯಾಗನ್’ ಸಿನಿಮಾಕ್ಕಾಗಿ ಬಾಲಿವುಡ್​ನ ಸ್ಟಾರ್ ನಟರೊಬ್ಬರನ್ನು ಕರೆ ತಂದದ್ದಾರೆ. ಜೂ…

Read More

ಲಕ್ಕುಂಡಿ ನಿಧಿಗೆ ಸರ್ಪ ಕಾವಲು? ಮೈಸೂರಿನಿಂದ ಬಂದ ಉರಗ ರಕ್ಷಕರು ಹೇಳಿದ್ದೇನು? – Kannada News | Gold Treasure : snake catchers Came to Lakkundi From Mysuru For serpent found during excavation

ಗದಗ, (ಜನವರಿ 21): ಜಿಲ್ಲೆಯ ಐತಿಹಾಸಿಕ ಗ್ರಾಮ ಲಕ್ಕುಂಡಿಯಲ್ಲಿ ಮನೆ ಪಾಯ ಅಗೆಯುವಾಗ ಚಿನ್ನದ ನಿಧಿ (Lakkundi Gold Treasure) ಸಿಕ್ಕಿದ್ದು, ಅಂದಿನಿಂದ ಲಕ್ಕುಂಡಿ  ಗ್ರಾಮ ಭಾರೀ ಸದ್ದು ಮಾಡಿದೆ. ಇನ್ನು ಇನ್ನಷ್ಟು ನಿಧಿ ಸಿಗಬಹುದು ಎಂದು ಪುರಾತತ್ವ ಇಲಾಖೆಯು ಗ್ರಾಮದಲ್ಲಿ ಉತ್ಖನನ ನಡೆಸಿದೆ. ಈ ವೇಳೆ ದಿನದಲ್ಲಿ ಒಂದಲ್ಲ ಒಂದು ವಸ್ತು ದೊರೆಯುತ್ತಿದೆ. ಇದರ ನಡುವೆ ಇದೀಗ ಗ್ರಾಮದಲ್ಲಿ ಸರ್ಪದ (snake) ಆತಂಕ ಮನೆ ಮಾಡಿದೆ. ಹೌದು..ಪುರಾತತ್ವ ಇಲಾಖೆ ಸಿಬ್ಬಂದಿ ನಡೆಸುತ್ತಿದ್ದ ಕಾರ್ಯಾಚರಣೆಯಲ್ಲಿ ಪುರಾತನ ಶಿವಲಿಂಗ…

Read More

17 ವರ್ಷಗಳ ಬಳಿಕ ಒಂದೇ ಗ್ರೂಪ್ ಮತ್ತು ಟೀಮ್ ಇಂಡಿಯಾದ ಕಹಿ ನೆನಪು! – Kannada News | T20 World Cup 2026: India, South Africa and West Indies in the same group after 17 years

ಬರೋಬ್ಬರಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ನ ಸೂಪರ್-8 ಸುತ್ತಿನಲ್ಲಿ ಭಾರತ, ಸೌತ್ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಒಂದೇ ಗ್ರೂಪ್​ನಲ್ಲಿ ಕಾಣಿಸಿಕೊಂಡಿದೆ. ಈ ಹಿಂದೆ 2009ರ ಟಿ20 ವಿಶ್ವಕಪ್​ನಲ್ಲಿ ಈ ಮೂರು ತಂಡಗಳು ಸೇಮ್ ಗ್ರೂಪ್​ನಲ್ಲಿ ಸ್ಥಾನ ಪಡೆದಿದ್ದವು. ಇದೀಗ ಹದಿನೇಳು ವರ್ಷಗಳ ಬಳಿಕ ಮತ್ತೊಮ್ಮೆ ಬಲಿಷ್ಠ ಮೂರು ತಂಡಗಳು ಒಂದೇ ಗ್ರೂಪ್​ನಲ್ಲಿ ಕಾಣಿಸಿಕೊಂಡಿದೆ. ಟೀಮ್ ಇಂಡಿಯಾದ ಕಹಿ ನೆನಪು: 2007ರ ಟಿ20 ವಿಶ್ವಕಪ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಟೀಮ್ ಇಂಡಿಯಾ 2009 ರಲ್ಲಿ…

Read More

ಕಡಿಮೆ ಆಗಿಲ್ಲ ಶ್ರೀನಾಥ್ ಎನರ್ಜಿ; ‘ನೀನೆ ಸಾಕಿದ ಗಿಣಿ’ ಹಾಡಿಗೆ ಡ್ಯಾನ್ಸ್ – Kannada News | Actor Srinath Dance For Neene sakida Gini Song

ನಟ ಶ್ರೀನಾಥ್ ಅವರಿಗೆ ಈಗ 82 ವರ್ಷ ವಯಸ್ಸು. ಅವರಿಗೆ ಇನ್ನೂ ಎನರ್ಜಿ ಕಡಿಮೆ ಆಗಿಲ್ಲ. ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ನಾಲವಾರದ ಮಠದಲ್ಲಿ ನಡೆದ ಕೋರಿ ಸಿದ್ದೇಶ್ವರ ಜಾತ್ರೆಗೆ ನಟ ಶ್ರೀನಾಥ್ ಬಂದಿದ್ದರು. ಈ ವೇಳೆ ‘ಮಾನಸ ಸರೋವರ’ ಚಿತ್ರದ ‘ನೀನೆ ಸಾಕಿದ ಗಿಣಿ’ ಹಾಡಿಗೆ ಶ್ರೀನಾಥ್ ಮಕ್ಕಳೊಂದಿಗೆ ಹೆಜ್ಜೆ ಹಾಕಿದ್ದಾರೆ. ನಂತರ ಸಿದ್ದ ತೋಟೆಂದ್ರ ಶಿವಾಚಾರ್ಯರಿಂದ ನಾಲವಾರ ರತ್ನ ಪ್ರಶಸ್ತಿ ಸ್ವೀಕರಿಸಿದರು. ಶ್ರೀನಾಥ್ ಅವರ ಎನರ್ಜಿ ನೋಡಿ ಎಲ್ಲರಿಗೂ ಖುಷಿ ಆಗಿದೆ. ಆ ಸಂಧರ್ಭದ…

Read More

ಬೆಂಗಳೂರಿಗರಿಗೆ ಮೆಟ್ರೋ ದರ ಏರಿಕೆ ಬಿಸಿ: ಎಲ್ಲಿಂದ ಎಲ್ಲಿಗೆ ಎಷ್ಟಾಯ್ತು ಟಿಕೆಟ್ ಬೆಲೆ? – Kannada News | Namma Metro Fare Hike: Bengaluru Commuters Face Another 5% Price Rise

ಬೆಂಗಳೂರು, ಫೆ.5: ಬೆಂಗಳೂರಿನ ನಮ್ಮ ಮೆಟ್ರೋ (Bengaluru Metro) ಪ್ರಯಾಣಿಕರಿಗೆ ದರ ಹೆಚ್ಚಳದ ಶಾಕ್ ನೀಡಲಿದೆ. ಮೆಟ್ರೋ ಟಿಕೆಟ್ ದರವನ್ನು 5% ರಷ್ಟು ಏರಿಕೆ ಮಾಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಮೆಟ್ರೋ ನಿಗಮವು ಈ ಬಗ್ಗೆ ಸಿದ್ಧತೆ ನಡೆಸಿದೆ. ಕಳೆದ ವರ್ಷ ಫೆಬ್ರವರಿ 9 ರಂದು ದಾಖಲೆಯ 101.5% ರಷ್ಟು ದರ ಏರಿಕೆ ಮಾಡಲಾಗಿತ್ತು. ಈ ನಿರ್ಧಾರವು ಪ್ರಯಾಣಿಕರು ಮತ್ತು ಸಾರ್ವಜನಿಕರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ವ್ಯಾಪಕ ವಿರೋಧ ವ್ಯಕ್ತವಾದ ನಂತರ, ಮೆಟ್ರೋ ನಿಗಮವು ದರವನ್ನು…

Read More

ಧುರಂಧರ್ ಕಥೆ ಕದ್ದ ಆರೋಪ: ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಹೈಕೋರ್ಟ್ ಸೂಚನೆ – Kannada News | Bombay High Court suggests amicable resolution in Dhurandhar 2 script Plagiarism case

‘ಧುರಂಧರ್ 2’ ಸಿನಿಮಾದ ನಿರ್ದೇಶಕ ಆದಿತ್ಯ ಧರ್ ಮೇಲೆ ಕೃತಿಚೌರ್ಯದ (Plagiarism) ಆರೋಪ ಎದುರಾಗಿತ್ತು. ನಿರ್ದೇಶಕ ಸಂತೋಷ್ ಕುಮಾರ್ ಅವರು ಈ ಆರೋಪ ಮಾಡಿದ್ದರು. ಈ ವಿಷಯ ಹೈಕೋರ್ಟ್ ಮೆಟ್ಟಿಲೇರಿತ್ತು. ಸಂತೋಷ್ ಕುಮಾರ್ ಮೇಲೆ ಆದಿತ್ಯ ಧರ್ (Aditya Dhar) ಅವರು ಮಾನನಷ್ಟ ಮೊಕದ್ದಮೆ ಹಾಕಿದ್ದರು. ಈ ವಿಷಯಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆದಿದೆ. ಪರಸ್ಪರ ಮಾತುಕತೆಯ ಮೂಲಕ ಈ ವಿವಾದ ಬಗೆಹರಿಸಿಕೊಳ್ಳುವಂತೆ ಬಾಂಬೆ ಹೈಕೋರ್ಟ್ ಸೂಚಿಸಿದೆ. ಆದಿತ್ಯ ಧರ್ ಅವರು ‘ಧುರಂಧರ್ 2’ ಚಿತ್ರದ ಕಥೆಯನ್ನು ತಮ್ಮ…

Read More

ಹೀಗಿತ್ತು ಸ್ಯಾಂಡಲ್​​ವುಡ್ ಸೆಲೆಬ್ರಿಟಿಗಳ ಯುಗಾದಿ: ಚಿತ್ರಗಳ ನೋಡಿ

ನಟ ಸುದೀಪ್ ಅವರು ಪತ್ನಿ ಪ್ರಿಯಾ ಅವರೊಟ್ಟಿಗೆ ಯುಗಾದಿ ಹಬ್ಬದ ಪ್ರಯುಕ್ತ ತಿರುಪತಿ ತಿರುಮಲ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಸುದೀಪ್ ಅವರು ದೇವಾಲಯಕ್ಕೆ ಭೇಟಿ ನೀಡಿದ್ದ ಚಿತ್ರ ಇಲ್ಲಿದೆ. ಯಶ್ ಪತ್ನಿ ರಾಧಿಕಾ ಪಂಡಿತ್ ಅವರು ಮಕ್ಕಳ ಜೊತೆಗೆ ಯುಗಾದಿ ಹಬ್ಬ ಆಚರಣೆ ಮಾಡಿದ್ದಾರೆ. ಮಕ್ಕಳೊಂದಿಗೆ ದೇವಾಲಯಕ್ಕೆ ತೆರಳಿದ್ದು, ಚಿತ್ರಗಳನ್ನು ಸಹ ಅವರು ಹಂಚಿಕೊಂಡಿದ್ದಾರೆ. ನಟ ಶ್ರೀಮುರಳಿ ಅವರು ಕುಟುಂಬದೊಟ್ಟಿಗೆ ಯುಗಾದಿ ಆಚರಿಸಿದ್ದಾರೆ. ಮನೆಯಲ್ಲಿ ಯುಗಾದಿ ವಿಶೇಷವಾದ ಹೋಳಿಕೆ ಮಾಡಲು ನೆರವಾಗಿದ್ದಾರೆ. ಹಬ್ಬದ…

Read More

ಹಿಂದಿ ಗೊಂದಲ: SSLC ಫಲಿತಾಂಶ ವಿಳಂಬ, ಸಚಿವ ಮಧು ಬಂಗಾರಪ್ಪ ಹೇಳಿದ್ದೇನು? – Kannada News | SSLC Hindi Language Row: Madhu Bangarappa Reacts Over Karnataka High Court Halting Midway Grading Shift

ಬೆಂಗಳೂರು, (ಏಪ್ರಿಲ್ 21): ಎಸ್‌ಎಸ್‌ಎಲ್‌ಸಿ ಹಿಂದಿ (SSLC Hindi) ವಿಷಯಕ್ಕೆ ಗ್ರೇಡ್ ಬದಲಿಗೆ ಅಂಕ ನೀಡುವಂತೆ ಆದೇಶ ಸಂಬಂಧ ರಾಜ್ಯ ಸರ್ಕಾರದ ಮರುಪರಿಶೀಲನಾ ಅರ್ಜಿಯನ್ನು ಹೈಕೋರ್ಟ್​​ (Karnataka High Court) ಇತ್ಯರ್ಥಪಡಿಸಿದೆ. 2025-26ರಿಂದ ಹಿಂದಿ ವಿಷಯಕ್ಕೆ ಅಂಕ ನೀಡಬೇಕೆಂದು ಪೀಠ ಸ್ಪಷ್ಟಪಡಿಸಿದ್ದು, ನೀವು ಎಲ್ಲರನ್ನೂ ಪಾಸ್ ಮಾಡಬೇಕೆಂದಿದ್ದರೆ ಪರೀಕ್ಷೆಯನ್ನೇ ರದ್ದು ಮಾಡಿ. ನಿಯಮ ರೂಪಿಸುವ ಮುನ್ನ ಪರೀಕ್ಷಾ ಪದ್ಧತಿ ಬದಲಾವಣೆ ಸೂಕ್ತವಲ್ಲ ಎಂದು ತಿಳಿಸಿದೆ. ಇನ್ನು ಈ ಹೈಕೋರ್ಟ್ ಆದೇಶದ ಬಗ್ಗೆ ಸಿಎಂ ಜತೆ ಮಾತನಾಡುವುದಾಗಿ ಸಚಿವ…

Read More

IPL 2026: ರಾಜಸ್ಥಾನ್ ವಿರುದ್ಧ ಆಡ್ತಾರಾ ಹಾರ್ದಿಕ್ ಪಾಂಡ್ಯ?

ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದ ಮುಂಬೈ ಇಂಡಿಯನ್ಸ್, 2012 ರ ನಂತರ ಮೊದಲ ಬಾರಿಗೆ 19 ನೇ ಐಪಿಎಲ್ (IPL) ಸೀಸನ್‌ನಲ್ಲಿ ತಮ್ಮ ಅಭಿಯಾನವನ್ನು ಗೆಲುವಿನ ಆರಂಭವನ್ನು ಮಾಡಿತು. ಮಾರ್ಚ್ 29 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸುವ ಮೂಲಕ ಮುಂಬೈ ತನ್ನ ಅಭಿಯಾನವನ್ನು ಗೆಲುವಿನೊಂದಿಗೆ ಪ್ರಾರಂಭಿಸಿತು. ಆದರೆ, ಆ ನಂತರ ಮುಂಬೈ ತನ್ನ ಗೆಲುವಿನ ಓಟವನ್ನು ಕಾಯ್ದುಕೊಳ್ಳಲು ವಿಫಲವಾಯಿತು. ಶನಿವಾರ ನಡೆದ ತನ್ನ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಡೆಲ್ಲಿ…

Read More