Headlines

ಕಟ್ ಆದ ಬಾಯ್ಕಾಟ್: ಭಾರತ vs ಪಾಕಿಸ್ತಾನ್ ಪಂದ್ಯ ಕನ್ಫರ್ಮ್​ – Kannada News | T20 World Cup 2026: Pakistan to play against India

ಫೆಬ್ರವರಿ 15 ಕ್ಕೆ ನಿಗದಿಯಾಗಿರುವ ಟಿ20 ವಿಶ್ವಕಪ್​ನ 27ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗುಬುದು ಖಚಿತವಾಗಿದೆ. ಇದಕ್ಕೂ ಮುನ್ನ ಈ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಹೇಳಿಕೊಂಡಿತ್ತು. ಇದೀಗ ಪಿಸಿಬಿಯ ಮನವೊಲಿಸುವಲ್ಲಿ ಐಸಿಸಿ ಯಶಸ್ವಿಯಾಗಿದ್ದು, ಅದರಂತೆ ಫೆ.15 ರಂದು ಉಭಯ ತಂಡಗಳು ಕಣಕ್ಕಿಳಿಯಲಿವೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ತಿಳಿಸಿದೆ. ಟಿ20 ವಿಶ್ವಕಪ್​ನಿಂದ ಬಾಂಗ್ಲಾದೇಶ್ ತಂಡವನ್ನು ಕೈ ಬಿಟ್ಟಿರುವುದನ್ನು ಖಂಡಿಸಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ತಿಳಿಸಿತ್ತು. ಆಟಗಾರರ ಸುರಕ್ಷತೆಯ…

Read More

42 ವರ್ಷ ವಯಸ್ಸಿನ ಧನುಷ್​ಗೆ 20ರ ಪ್ರಾಯದ ಸಾರಾ ಅರ್ಜುನ್ ಜೋಡಿ – Kannada News | Sara Arjun Dhanush D56 movie casting age gap controversy details

ಬಾಲನಟಿಯಾಗಿ ಭಾರತೀಯ ಚಿತ್ರರಂಗಕ್ಕೆ ಪರಿಚಿತರಾಗಿ ಈಗ ನಾಯಕಿಯಾಗಿ ಯಶಸ್ಸು ಕಂಡಿರುವ ಸಾರಾ ಅರ್ಜುನ್ (Sara Arjun) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಹಾಗೂ ‘ಧುರಂಧರ್ 2’ ಸಿನಿಮಾದಲ್ಲಿ ಅವರ ನಟನೆ ಗಮನ ಸೆಳೆಯಿತು. ಈಗ ಕಾಲಿವುಡ್ ಸ್ಟಾರ್ ನಟ ಧನುಷ್ ಅಭಿನಯದ ಮುಂದಿನ ಚಿತ್ರಕ್ಕೆ (D56) ನಾಯಕಿಯಾಗಿ ಸಾರಾ ಅರ್ಜುನ್ ಆಯ್ಕೆಯಾಗಿದ್ದಾರೆ ಎಂಬ ಮಾಹಿತಿ ಹರದಾಡುತ್ತಿದೆ. ಧನುಷ್ (Dhanush) ಮತ್ತು ಸಾರಾ ಅರ್ಜುನ್ ನಡುವೆ ಇರುವ ವಯಸ್ಸಿನ ಅಂತರದ ಕಾರಣದಿಂದ ಈ ವಿಷಯ ಚರ್ಚೆ…

Read More

ಆಲಿಯಾ ಭಟ್‌ಗೆ ಮನೆ ಮಾರಿ 10 ವರ್ಷದಿಂದ ಬಾಡಿಗೆ ಮನೆಯಲ್ಲಿ ವಾಸವಿರುವ ಬಾಲಿವುಡ್ ನಟ – Kannada News | Anupam Kher sold house to Alia Bhatt and living in rented house

ಒಂದು ಸಿನಿಮಾ (Cinema) ಹಿಟ್ ಆದರೂ ಸಾಕು, ನಟ-ನಟಿಯರ ಜೀವನ ಶೈಲಿಯೇ ಬದಲಾಗುತ್ತದೆ. ಎರಡನೇ ಸಿನಿಮಾಕ್ಕೆ ಕೋಟಿಗಳಲ್ಲಿ ಸಂಭಾವನೆ ಪಡೆಯುತ್ತಾರೆ. ಐಶಾರಾಮಿ ಕಾರು, ಮನೆಗಳನ್ನು ಖರೀದಿಸುತ್ತಾರೆ. ಆದರೆ ದಶಕಗಳಿಂದಲೂ ಚಿತ್ರರಂಗದಲ್ಲಿರುವ ಮತ್ತು ಸ್ಟಾರ್ ನಟರುಗಳಿಗೆ ಸಮಾನವಾದ ಸಂಭಾವನೆ ಪಡೆಯುವ ಸ್ಟಾರ್ ನಟರೊಬ್ಬರು ಕಳೆದ ಹತ್ತು ವರ್ಷದಿಂದಲೂ ಮುಂಬೈನಲ್ಲಿ ಬಾಡಿಗೆ ಮನೆಯಲ್ಲಿದ್ದಾರೆ. ಇದ್ದ ಮನೆಯನ್ನೂ ಸಹ ಆಲಿಯಾ ಭಟ್ ಅವರಿಗೆ ಮಾರಾಟ ಮಾಡಿದ್ದಾರೆ. ಈ ಸರಳ ಜೀವಿಯ ಹೆಸರು ಅನುಪಮ್ ಖೇರ್. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಯಶಸ್ವಿ…

Read More

Karnataka Budget 2026: ಸಿದ್ದರಾಮಯ್ಯ ದಾಖಲೆ ಬಜೆಟ್ ಎಷ್ಟು ಗಂಟೆಗೆ? ಲೈವ್ ನೋಡುವುದ್ಹೇಗೆ? – Kannada News | Karnataka Budget 2026: Siddaramaiah 17th Budget Date, Time, When and Where to Watch Live? here Is details

ಬೆಂಗಳೂರು, (ಮಾರ್ಚ್ 05) : 2026-27ನೇ ಸಾಲಿನ ರಾಜ್ಯ ಬಜೆಟ್ (Karnataka Budget 2026) ಮಂಡನೆಗೆ ಕ್ಷಣಗಣನೆ ಶುರುವಾಗಿದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮ್ಯನವರು (Siddaramaiah) ಮಾರ್ಚ್ 6ರಂದು ಬೆಳಗ್ಗೆ 10.15ಕ್ಕೆ  ಬಜೆಟ್ ಮಂಡಿಸಲಿದ್ದು, ಈ ಬಾರಿಯ ಆಯವ್ಯಯದ ಮೇಲೆ ರಾಜ್ಯದ ಜನತೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕೇವಲ ಗ್ಯಾರಂಟಿ ಯೋಜನೆಗಳಿಗಷ್ಟೇ ಸೀಮಿತವಾಗದೆ, ಶಿಕ್ಷಣ, ಕೃಷಿ, ಕೈಗಾರಿಕೆ, ಸಾರಿಗೆ ಹಾಗೂ ಆರೋಗ್ಯ ಸೇರಿದಂತೆ ಪ್ರಮುಖ ವಲಯಗಳಿಗೆ ಬಂಪರ್ ಕೊಡುಗೆಗಳು ಸಿಗುವ ವಿಶ್ವಾಸವಿದೆ. ಹಣಕಾಸು ಇಲಾಖೆ ಸಿದ್ದಪಡಿಸಿದ…

Read More

‘ಕಾವು, ಕಾವು’ ಎಂದವರಿಗೆ ಟಾಂಗ್ ಕೊಟ್ಟ ಗಿಲ್ಲಿ: ವಿಡಿಯೋ – Kannada News | Bigg Boss Kannada winner Gilli reply to people who shouted Kavya’s name

ದಿನಸಿ ಮಾರ್ಟ್ ಮುಂದೆ ರೌಡಿಸಂ: ಡೆಲಿವರಿ ಬಾಯ್ಸ್​ಗೆ ಹೆಲ್ಮೆಟ್​ನಲ್ಲಿಯೇ ಹಿಗ್ಗಾಮುಗ್ಗಾ ಥಳಿಸಿದ ಕಿಡಿಗೇಡಿಗಳು! Source link

Read More

ಹುಬ್ಬಳ್ಳಿ ವೇದಿಕೆಯಲ್ಲಿ ಪೈರಸಿ ಪದ ಯಾಕೆ ಬಳಸಿಲ್ಲ: ಉತ್ತರ ನೀಡಿದ ಕಿಚ್ಚ ಸುದೀಪ್ – Kannada News | Mark Movie actor Kichcha Sudeep interview about Darshan fans controversy

ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ‘ಮಾರ್ಕ್’ ಚಿತ್ರದ (Mark Kannada Movie) ಪ್ರೀ-ರಿಲೀಸ್ ಇವೆಂಟ್ ನಡೆಯಿತು. ಆ ವೇದಿಕೆಯಲ್ಲಿ ಸುದೀಪ್ ಅವರು ಮಾತನಾಡಿದ ನಂತರ ದರ್ಶನ್ ಅಭಿಮಾನಿಗಳು ರೊಚ್ಚಿಗೆದ್ದರು. ‘ಮಾತಿಗೆ ಬದ್ಧ, ಯುದ್ಧಕ್ಕೆ ಸಿದ್ಧ’ ಎಂದು ಸುದೀಪ್ ಹೇಳಿದ್ದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ಆಗುತ್ತಿದೆ. ತಾವು ಮಾತನಾಡಿದ್ದು ಪೈರಸಿ ಬಗ್ಗೆ ಎಂದು ಸುದೀಪ್ (Kichcha Sudeep) ಹೇಳಿದ್ದಾರೆ. ಹಾಗಾದ್ರೆ ಆ ವೇದಿಕೆಯಲ್ಲಿ ಪೈರಸಿ ಎಂಬ ಪದವನ್ನು ಸುದೀಪ್ ಯಾಕೆ ಬಳಸಲಿಲ್ಲ ಎಂಬ ಪ್ರಶ್ನೆ ಕೂಡ ಉದ್ಘವ ಆಗಿದೆ….

Read More

ಆಧಾರ್​​ ಕಾರ್ಡ್​​ನಲ್ಲಿ ಹೆಸರು ಬದಲಾಯಿಸಬೇಕೆ? ಹಾಗಿದ್ರೆ ನೀವು ಈ ನಿಯಮ ಪಾಲಿಸಲೇ ಬೇಕು – Kannada News | Aadhaar Name Change: Online, Offline, Gazette Process Details​​

ಆಧಾರ್​​ ಕಾರ್ಡ್​​ನಲ್ಲಿ ಹೆಸರು ಬದಲಾವಣೆ. ಬೆಂಗಳೂರು, ಜನವರಿ 01: ಅಕ್ಷರ ದೋಷ, ಮದುವೆಯಾದ ಬಳಿಕ ಅಥವಾ ಇನ್ಯಾವುದೋ ಕಾರಣಕ್ಕೆ ಇಂದು ಬಹುತೇಕ ಎಲ್ಲ ವ್ಯವಹಾರಗಳಿಗೆ ಅಗತ್ಯವಾದ ಆಧಾರ್​​ ಕಾರ್ಡ್​​ನಲ್ಲಿ ಹೆಸರು ಬದಲಾವಣೆ ಮಾಡಲೇ ಬೇಕಾಗುತ್ತದೆ. ಸಣ್ಣಪುಟ್ಟ ಬದಲಾವಣೆಯನ್ನು ಆನ್​​ಲೈನ್​​ ಮತ್ತು ಆಫ್​​ಲೈನ್​​ ಮೂಲಕ ಮಾಡಬಹುದಾಗಿದ್ದರೆ, ದೊಡ್ಡ ಬದಲಾವಣೆಗಳಿಗೆ ಗೆಜೆಟ್​​ ನೋಟಿಫಿಕೇಶನ್​​ ಪ್ರಕ್ರಿಯೆ ಪಾಲಿಸಲೇ ಬೇಕಾಗುತ್ತದೆ. ಆಧಾರ್​​ನಲ್ಲಿ ಹೆಸರು ಬದಲಾವಣೆ ಮಾಡಲು ಇರುವ ಪ್ರಮುಖ 3 ವಿಧಾನಗಳ ಬಗ್ಗೆ ಹಂತಗಳ ಸಮೇತವಾಗಿ ವಿವರಣೆ ಇಲ್ಲಿದೆ. 1. ಆನ್‌ಲೈನ್ ಮೂಲಕ…

Read More

ಮಾರುಕಟ್ಟೆಯನ್ನು ಪ್ರಭಾವಿಸುವ ಗ್ರಾಹಕ ಅಭ್ಯಾಸಗಳು; ಒಂದು ಅವಲೋಕನ – Kannada News | The Impact of Fluctuations: How Consumer Habits Influence Market Movements

ಬಜಾಜ್ ಫಿನ್​ಸರ್ವ್ ಎಎಂಸಿಯ ಸೌರಭ್ ಗುಪ್ತಾ ಭಾರತದ ಬೆಳವಣಿಗೆಯ ಕಥೆಯಲ್ಲಿ ಗ್ರಾಹಕ ಅಥವಾ ಅನುಭೋಗಿಯೇ ಸೂತ್ರಧಾರ. ತುಂಬಿತುಳುಕುತ್ತಿರುವ ಮಾಲ್​ಗಳಿಂದ ಹಿಡಿದು, ಗಿಜಿಗಿಜಿಗುಡುತ್ತಿರುವ ಇ-ಕಾಮರ್ಸ್​ವರೆಗೆ ಈ ಅನುಭೋಗ ಅಥವಾ ಕನ್ಸಮ್ಷನ್ ಸೆಕ್ಟರ್ ಉತ್ತಮವಾಗಿ ಬೆಳೆಯುತ್ತಿದೆ. ಜನರ ಆದಾಯದಲ್ಲಿ ಹೆಚ್ಚಳ ಆಗುತ್ತಿರುವುದು, ವೇಗವಾಗಿ ನಗರೀಕರಣ ಆಗುತ್ತಿರುವುದು, ಜೀವನಶೈಲಿಯಲ್ಲಿ ಬದಲಾವಣೆ ಆಗುತ್ತಿರುವುದು ರಚನಾತ್ಮಕವಾಗಿ ಪುಷ್ಟಿ ಕೊಡುತ್ತಿದೆ. ಭಾರತೀಯ ಆರ್ಥಿಕತೆಯಲ್ಲಿ ಅನುಭೋಗಕ್ಕೆ ಪ್ರಾಧಾನ್ಯ ಸ್ಥಾನ ಸಿಗುವಂತೆ ಮಾಡಿದೆ. ಅನುಭೋಗ ಶಕ್ತಿಯಿಂದ ನಡೆಯುವ ಬ್ಯುಸಿನೆಸ್​ಗಳು ಈ ಒಂದು ಟ್ರೆಂಡ್​ನ ಲಾಭ ಪಡೆಯುತ್ತಿವೆ. ಇಲ್ಲಿ ಒಂದು…

Read More

ಇಂಧನ ದತ್ತಾಂಶವನ್ನು ರಾಷ್ಟ್ರೀಯ ಭದ್ರತಾ ವಿಚಾರವೆಂದು ವರ್ಗೀಕರಿಸಿದ ಸರ್ಕಾರ; ತೈಲ, ಅನಿಲ ಕ್ಷೇತ್ರದ ಸಂಸ್ಥೆಗಳಿಗೆ ಹೊಸ ಜವಾಬ್ದಾರಿ

ನವದೆಹಲಿ, ಮಾರ್ಚ್ 19: ಇರಾನ್ ಯುದ್ಧದ ಪರಿಣಾಮ ದೇಶದಲ್ಲಿ ಎಲ್​ಪಿಜಿ ಬಿಕ್ಕಟ್ಟು ಉದ್ಭವಿಸಿರುವ ಬೆನ್ನಲ್ಲೇ ಸರ್ಕಾರ ಇಂಧನ ಕ್ಷೇತ್ರವನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ಇಂಧನ ದತ್ತಾಂಶ ಅಥವಾ ಎನರ್ಜಿ ಡಾಟಾವನ್ನು ರಾಷ್ಟ್ರೀಯ ಭದ್ರತೆಯ ವಿಚಾರವೆಂದು ಸರ್ಕಾರ ವರ್ಗೀಕರಿಸಿದೆ. ತೈಲ ಮತ್ತು ಅನಿಲ ಕ್ಷೇತ್ರದಲ್ಲಿ ನಿರತವಾಗಿರುವ ಎಲ್ಲಾ ಸಂಸ್ಥೆಗಳೂ ಕೂಡ ತಮ್ಮ ಕಾರ್ಯಾಚರಣೆಯ ಪೂರ್ಣ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸುವುದನ್ನು ಕಡ್ಡಾಯಪಡಿಸಲಾಗಿದೆ. ತೈಲ ಸಚಿವಾಲಯವು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮಾಹಿತಿ ಸಲ್ಲಿಕೆ ಆದೇಶ 2026ರ -Petroleum and Natural…

Read More

ಲಂಚ ಕೇಸ್: ಬಿಜೆಪಿ ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ? ಸ್ವಾಮೀಜಿ ಆಡಿಯೋ ವೈರಲ್ – Kannada News | BJP MLA Chandru Lamani Arrested In Bribe Case: Swamiji Audio Goes Viral

ಗದಗ, (ಫೆಬ್ರವರಿ 22): ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಶಿರಹಟ್ಟಿ ಶಾಸಕ ಡಾ ಚಂದ್ರು ಲಮಾಣಿ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರನ್ನು ಯಾವುದಾದರೊಂದು ಪ್ರಕರಣದಲ್ಲಿ ಸಿಲುಕಿಸುವ ಬಗ್ಗೆ ಸ್ವಾಮೀಜಿಯೊಬ್ಬರ ಕೈವಾಡ ಇರುವ ಆರೋಪ ಕೇಳಿಬಂದಿದೆ. ಶಿರಹಟ್ಟಿ ತಾಲೂಕಿನ ಅದರಹಳ್ಳಿ ಕುಮಾರ ಮಹಾರಾಜರ ಸ್ವಾಮೀಜಿ ಹಾಗೂ ಬಿಜೆಪಿ ಕಾರ್ತಕರ್ತರೊಬ್ಬರು 2.36 ನಿಮಿಷಗಳ ಕಾಲ ಮಾತನಾಡಿರುವ ಆಡಿಯೋವೊಂದು ವೈರಲ್ ಆಗಿದೆ. ತಮ್ಮದೇ ಸಮುದಾಯದ ಶಾಸಕರ ವಿರುದ್ಧ ಬಂಜಾರ ಸಮಾಜದ ಸ್ವಾಮೀಜಿ ಮಸಲತ್ತು ಮಾಡಿದ್ದಾರೆ…

Read More